<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-8114402468197807042</id><updated>2011-07-08T19:45:17.960+05:30</updated><category term='ನೆನಪು'/><category term='ಪ್ರೇಮದ ತೀವ್ರತೆ'/><category term='ಹೆಣ್ಣು'/><category term='ತಾಯಿ'/><category term='ಮಮತೆ'/><category term='ರಕ್ಷಾಬಂಧನ'/><category term='ಸೋದರ ವಾತ್ಸಲ್ಯ'/><category term='ಅನುಭವ'/><category term='ರಾಮಾಯಣ'/><category term='ಓತಿ'/><category term='ಮಗಳ ನೆನಪಿನಲೋಕ'/><category term='ಭೀಷ್ಮ'/><category term='ತಿಳಿಹಾಸ್ಯ'/><category term='ಹೃದಯದ ಭಾವ'/><category term='ಕತೆ'/><category term='ಮಹಾಭಾರತ'/><title type='text'>ಬತ್ತದ ತೊರೆ</title><subtitle type='html'>"ಈ ಭೂಮಿ ಮಾನವನ ಪಿತ್ರಾರ್ಜಿತ ಆಸ್ತಿಯಲ್ಲ.
ಇತರ ಅಸಂಖ್ಯ ಜೀವಿಗಳಂತೆ ಮಾನವ ಕೂಡ ಒಂದು ಜೀವಿ
ಜೀವಿಗಳ ಈ ಸಂಕೀರ್ಣ ಜಾಲವನ್ನು ಮಾನವ ನೇಯ್ದದ್ದಲ್ಲ.
ಆತ ಈ ಜಾಲದ ಒಂದು ಎಳೆ ಅಷ್ಟೆ!ಈ ಭೂಮಿಗೆ ದುರ್ಗತಿ ಬಂತೆಂದರೆ ಮಾನವನಿಗೂ ಅದೇ ಗತಿ ಬಂತೆಂದು ಅರ್ಥ."-- " ಇರುವುದೊಂದೇ ಭೂಮಿ "</subtitle><link rel='http://schemas.google.com/g/2005#feed' type='application/atom+xml' href='http://battadatore.blogspot.com/feeds/posts/default'/><link rel='self' type='application/atom+xml' href='http://www.blogger.com/feeds/8114402468197807042/posts/default?max-results=100'/><link rel='alternate' type='text/html' href='http://battadatore.blogspot.com/'/><link rel='hub' href='http://pubsubhubbub.appspot.com/'/><author><name>ಚಂದ್ರಕಾಂತ ಎಸ್</name><uri>http://www.blogger.com/profile/00490264860537389455</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='25' src='http://3.bp.blogspot.com/_4wQW2-q8XsA/SVIw-U299dI/AAAAAAAAADY/T9mtUHgBZhU/S220/blogfile12.jpg'/></author><generator version='7.00' uri='http://www.blogger.com'>Blogger</generator><openSearch:totalResults>25</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-8114402468197807042.post-8242376319850953861</id><published>2009-09-04T17:53:00.009+05:30</published><updated>2009-09-05T18:32:45.120+05:30</updated><title type='text'>ಶಿಕ್ಷಕರ ದಿನಾಚರಣೆಯಂದು ನನ್ನ ಶಿಕ್ಷಕರನ್ನು ಸ್ಮರಿಸುತ್ತಾ....</title><content type='html'>&lt;table class="Bs nH iY" cellpadding="0"&gt;&lt;tbody&gt;&lt;tr&gt;&lt;td class="Bu"&gt;&lt;br /&gt;&lt;/td&gt;&lt;td class="Bu"&gt;&lt;br /&gt;&lt;/td&gt;&lt;td class="Bu"&gt;&lt;div style="width: 189px;" class="nH"&gt;&lt;div class="nH"&gt;&lt;div class="nH"&gt;&lt;div class="hj"&gt;&lt;div class="hk"&gt;&lt;span id=":1e7" idlink=""&gt;&lt;img class="gZ" src="http://mail.google.com/mail/images/cleardot.gif" alt="" /&gt;&lt;/span&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;/td&gt;&lt;/tr&gt;&lt;/tbody&gt;&lt;/table&gt; &lt;span style="color: rgb(255, 0, 0);font-size:130%;" &gt;ಶಿಕ್ಷಕರ ದಿನಾಚರಣೆಯಂದು ನನ್ನ ಶಿಕ್ಷಕರನ್ನು ಸ್ಮರಿಸುತ್ತಾ....&lt;br /&gt;&lt;/span&gt;&lt;br /&gt;&lt;br /&gt;ಬದುಕಿನ ಅರ್ಧಶತಮಾನ ಪೂರೈಸಿದ ಸಂದರ್ಭದಲ್ಲಿ ನನ್ನ  ಬಾಲ್ಯದ ದಿನಗಳನ್ನು ಒಮ್ಮೆ ಹಿಂದಿರುಗಿನೋಡಿದರೆ  ಅಲ್ಲಿ ನನಗೆ ಸಂತೋಷ ಕೊಡುವುದು ನನ್ನ ಶಾಲಾದಿನಗಳೆ. ನನ್ನ ಮಾಧ್ಯಮಿಕ ಹಾಗೂ ಪ್ರೌಢಶಾಲಾದಿನಗಳು ಮತ್ತೆ ಮರಳಿ ಬಾರವೇ ಎಂಬ ವಿಷಾದವೂ ಮನಸ್ಸನ್ನು ತುಂಬುತ್ತದೆ. ಸಾಮಾನ್ಯವಾಗಿ ಎಲ್ಲರೂ ಕಾಲೇಜಿನ ದಿನಗಳನ್ನು ಬಂಗಾರದ ದಿನಗಳು ಎನ್ನುತ್ತಾರೆ. ನನಗೆ ಮಾತ್ರ ನನ್ನ ಹೈಸ್ಕೂಲ್ ದಿನಗಳೆ ಬಂಗಾರದ ದಿನಗಳು. ಒಬ್ಬ ಶಿಕ್ಷಕಿಯ  ಮಾತಿನಿಂದ ಟೀಚರ್ ಅಗಲೇ  ಬಾರದೆಂದು  ನಿರ್ಧರಿಸಿದ್ದ ನಾನು  ಅದೇ  ಶಾಲೆಯ ಮತ್ತೊಬ್ಬ ಶಿಕ್ಷಕರ ಪಾಠದಿಂದ ಶಿಕ್ಷಕ ವೃತ್ತಿಯನ್ನು ಮನದಾಳದಲ್ಲೇ ಇಷ್ಟಪಟ್ಟಿದ್ದೆನೇನೋ. ಆದರೆ ಅದು ನನಗೆ ಅರ್ಥವಾಗಿದ್ದು ಎಷ್ಟೋ ವರ್ಷಗಳ ನಂತರ.&lt;br /&gt;&lt;br /&gt;ನನ್ನ ಶಿಕ್ಷಕರನ್ನು ನೆನೆದುಕೊಳ್ಳುವಾಗ ಮೊದಲು ಹೇಳಬೇಕಾದ ಹೆಸರು  ದಾವಣಗೆರೆಯ ಸೆಂಟ್ ಪಾಲ್ಸ್ ಕಾನ್ವೆಂಟಿನ  ಕನ್ನಡ ಪಾಠ  ಮಾಡುತ್ತಿದ್ದ ಕನ್ನಡ ಪಂಡಿತರು. ಅವರ ಹೆಸರು ನಂಜಪ್ಪ ಮಾಸ್ತರು. ನಾನು ಕನ್ನಡ ಆನರ್ಸ್  ಓದಿ ಎಂ.ಎ. ಮುಗಿಸಿ ಕನ್ನಡ ಉಪನ್ಯಾಸಕಿ  ಆಗಲು ಅವರೇ ಪರೋಕ್ಷ ಕಾರಣ ಎಂದು ಈಗ ಅನಿಸುತ್ತದೆ. ಅವರು ಪಾಠ ಮಾಡುತ್ತಿದ್ದ  ರೀತಿ ಅನನ್ಯ.ಅವರು ಪಾಠ ಮಾಡಿದ "&lt;span style="font-weight: bold; color: rgb(0, 153, 0);font-size:100%;" &gt; ಜಾಬಾಲಿ ಋಷಿ ಹೇಳಿದ ಕತೆ "&lt;/span&gt; ಮತ್ತು "&lt;span style="font-weight: bold; color: rgb(102, 0, 0);"&gt; ಚಂದನದಾಸನ ಕತೆ "&lt;/span&gt;ಈಗಲೂ ನನ್ನ  ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಹಾಗೆ ಉಳಿದಿರುವುದಕ್ಕೆ ಕಾರಣ ಆ ಮಾಸ್ತರೇ.&lt;br /&gt;&lt;br /&gt;ನಾಗವರ್ಮನ ಕಾದಂಬರಿ ಕಾವ್ಯದಿಂದ ಆರಿಸಿದ " ಜಾಬಾಲಿ ಋಷಿ ಹೇಳಿದ ಕತೆ" ನಮ್ಮ  ಪಠ್ಯಪುಸ್ತಕದಲ್ಲಿತ್ತು. ಜಾಬಾಲಿ ಋಷಿಗಳ ಆಶ್ರಮಕ್ಕೆ ಅವರ ಶಿಷ್ಯರಿಬ್ಬರು ಒಮ್ಮೆ ಒಂದು ಪುಟ್ಟಗಿಳಿಯನ್ನು ತರುತ್ತಾರೆ. ಆಗ ಜಾಬಾಲಿ ಹೇಳಿದ್ದು " ಈ ಗಿಳಿ ತಾನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದೆ". ಶಿಷ್ಯರು " ಗುರುಗಳೇ ಈ ಗಿಳಿಯ ಕತೆ ಹೇಳಿ ? ಎನ್ನುತ್ತಾರೆ. ಆಗ ಆ ಋಷಿ "ನಾಳೆ ಕತೆ ಹೇಳುತ್ತೇನೆ."ಎನ್ನುತ್ತಾನೆ. ಕುತೂಹಲದಿಂದ ಪಾಠ ಕೇಳುತ್ತಿದ್ದ ನಮಗೆ ಪಾತಾಳಕ್ಕೆ ತಳ್ಳಿದಂತಾಯಿತು. ಕಾರಣ ನಮ್ಮ ಪಾಠದಲ್ಲಿ ಅದೇ ಕಡೆಯ ವಾಕ್ಯವಾಗಿತ್ತು!! ನಾವೆಲ್ಲಾ ನಮ್ಮ ಮಾಸ್ತರರನ್ನು ಆ ಗಿಳಿಯ ಕತೆ ಏನು? ಎಂದು ಪೀಡಿಸಿದಾಗ ಅವರು ನಮಗೆ ಇಡೀ ಕಾದಂಬರಿ ಕಾವ್ಯದ ಕತೆಯನ್ನು ಸರಳವಾಗಿ ಸಂಕ್ಷಿಪ್ತವಾಗಿ ಹೇಳಿ ಮನತಣಿಸಿದ್ದರು.&lt;br /&gt;&lt;br /&gt;ಅದೇ ರೀತಿ " ಚಂದನದಾಸನ ಕತೆ" ಹೇಳುವಾಗ ಚಾಣಕ್ಯ ಮತ್ತು ಚಂದ್ರಗುಪ್ತರ ಇಡೀ ಕತೆಯನ್ನು ಹೇಳಿ ಸ್ನೇಹಿತರೆಂದರೆ ಹೀಗಿರಬೇಕು ಎಂದಿದ್ದರು. ಇರುವಷ್ಟು  ಮಾತ್ರ ಹೇಳದೆ  ನಾಗವರ್ಮನ ಕಾದಂಬರಿ ಕಾವ್ಯದ ಕತೆಯನ್ನು, ಮತ್ತು  " ಮುದ್ರಾರಾಕ್ಷಸ "ನ ಕತೆಯನ್ನು ಸರಳವಾಗಿ ಆದರೆ ಮನಮುಟ್ಟುವಂತೆ ಹೇಳಿದ್ದು ಆಗ ವಿಶೇಷ ಅನ್ನಿಸಲಿಲ್ಲ. ಆದರೆ ದೊಡ್ಡವರಾಗುತ್ತಾ  ಅವರ ಪಾಠದ ವಿಶೇಷತೆಯ ಅರಿವು ನನಗಾಯಿತು.   &lt;div&gt; &lt;/div&gt;&lt;br /&gt;ಈ ಮಾಸ್ತರರ  ಜೊತೆ ಸ್ಮರಿಸಲೇ ಬೇಕಾದವರು ನಮ್ಮ ಲೆಕ್ಕದ ಸುಶೀಲಾ ಮೇಡಮ್ ಮತ್ತು ಇತಿಹಾಸ ಬೋಧಿಸುತ್ತಿದ್ದ  ಬಾಲಾಮಣಿ  ಮೇಡಮ್.ಆದರೆ ಬೇರೆ ಬೇರೆ ಕಾರಣಗಳಿಗಾಗಿ.  ಸುಶೀಲಾ ಮೇಡಮ್  ದಾವಣಗೆರೆಯಲ್ಲಿ ಬಹುಮಟ್ಟಿಗೆ ಎಲ್ಲರಿಗೂ ಅತ್ಯಂತ ಮೃದು ಹೃದಯಿ ಎಂದೇ ಚಿರಪರಿಚಿತರು.ಕೇವಲ ಪಾಠ ಮಾಡುವುದಲ್ಲದೆ ಎಲ್ಲ ವಿದ್ಯಾರ್ಥಿಗಳಿಗೂ ತಾಯಿಯ ಸ್ಥಾನದಲ್ಲಿ ಇದ್ದವರು.ಆದರೆ ಬಾಲಾಮಣಿ  ಮೇಡಮ್ ಬಗ್ಗೆ ಹಾಗೆ ಹೇಳಲಾಗದು.ಶಾಲೆಯ ಎಲ್ಲ ವಿದ್ಯಾರ್ಥಿಗಳೂ ಅವರ ಹೆಸರು  ಕೇಳಿದರೂ ಹೆದರುತ್ತಿದ್ದರು.ಆ ಹೆದರಿಕೆಯನ್ನು ಮೀರಿ  ಕೆಲವೊಮ್ಮೆ  ಗಲಾಟೆ  ಮಾಡಿದರೆ ಅವರ ಕೆಂಗಣ್ಣಿಗೆ ಗುರಿಯಾಗಬೇಕಿತ್ತು. ಒಮ್ಮೆ ಅವರು ತರಗತಿಯಿಂದ ಹೊರಗೆ  ಹೋಗಿದ್ದಾಗ ಯಥಾಪ್ರಕಾರ  ಮಕ್ಕಳೆಲ್ಲಾ ಬಾಲವಿಲ್ಲದ ಕಪಿಗಳಂತಾಗಿದ್ದರು.ನನ್ನ ಗ್ರಹಚಾರಕ್ಕೆ ಅವರು ಕೋಣೆಯೊಳಗೆ  ಬಂದಾಗ ಗಟ್ಟಿಯಾಗಿ  ಮಾತನಾಡುತ್ತಿದ್ದ  ನಾನು ಅವರ ಕಣ್ಣಿಗೆ ಬಿದ್ದೆ. ಸರಿ ಎಣಿಸಿದ್ದಂತೇ   ಸಹಸ್ರ  ನಾಮಾರ್ಚನೆಯಾಯಿತು.  ಆಗ  ಅವರು  ಹೇಳಿದ  ಒಂದು  ಮಾತು  ನನ್ನನ್ನು  ಅನೇಕ  ದಿನಗಳವರೆಗೆ  ಕಾಡಿದ್ದುಂಟು.&lt;br /&gt;&lt;br /&gt;"ನೀನು  ದೊಡ್ಡವಳಾದ  ಮೇಲೆ  ಟೀಚರ್  ಆಗ್ತೀಯಲ್ಲ,  ಆಗ ನನ್ನನ್ನು  ನೆನಸಿಕೊಳ್ಳದಿದ್ದರೆ  ಕೇಳು " ಎಂದು ಗುಡುಗಿದರು.&lt;br /&gt;&lt;br /&gt; ಕೆಲವು ದಿನಗಳ ಹಿಂದೆ  ನಡೆದ ಭಾಷಣ ಸ್ಪರ್ಧೆಗೆ  ಬಾಲಾಮಣಿ ಮೇಡಮ್  ಜಡ್ಜ್  ಆಗಿದ್ದರು  ಹಾಗು  ನಾನೆ ಪ್ರಥಮ ಬಹುಮಾನ ಪಡೆದಿದ್ದೆ. ಆ  ದಿನದ  ಭಾಷಣದ   ವಿಷಯ &lt;span style="font-weight: bold; color: rgb(102, 0, 204);font-size:130%;" &gt;"ನಾನು ಶಿಕ್ಷಕಿಯಾಗಲು  ಏಕೆ ಬಯಸುವೆ? "&lt;/span&gt; . ಶಿಕ್ಷಕರ ದಿನಾಚರಣೆಯ ಅಂಗವಾಗಿ  ನಡೆದ ಸ್ಪರ್ಧೆ  ಅದಾಗಿತ್ತು ! ಆ  ಬಾಲ್ಯದ  ದಿನಗಳಲ್ಲಿ  ಅವರ ಬಯ್ಗಳಿಂದ  ನನಗೆಷ್ಟು  ಭಯವಾಗಿತ್ತೆಂದರೆ ಮುಂದೆ  ಶಿಕ್ಷಕಿಯಾಗಲೇಬಾರದೆಂದು ಅಂದೇ  ಗುಟ್ಟಾಗಿ ನಿರ್ಧರಿಸಿದ್ದೆ. ಆಶ್ಚರ್ಯವೆಂದರೆ  ಮುಂದೆ  ನಾನು ಅಧ್ಯಾಪಕಿಯಾಗಬೇಕಾಯಿತು. ಅದು  ನನ್ನ   ಮೆಚ್ಚಿನ  ವೃತ್ತಿಯೂ ಹೌದು.  ಅವರನ್ನು  ಅನೇಕ  ಬಾರಿ  ನೆನಪಿಸಿಕೊಳ್ಳುತ್ತೇನೆ. ಅವರ  ಶಾಪ  ವರವಾದ  ಬಗೆಯನ್ನು  ಅಚ್ಚರಿಯಿಂದ  ಮೆಲುಕುಹಾಕುತ್ತೇನೆ.        &lt;div&gt;&lt;br /&gt;ಈ  ಅಧ್ಯಾಪಕರೊಂದಿಗೆ ಇತರ ವಿಷಯಗಳನ್ನು  ಬೋಧಿಸುತ್ತಿದ್ದ  ಲೀಲಾ ಮೇಡಮ್, ಸಿಸ್ಟರ್ ಮೇರಿ ,ಸಿಸ್ಟರ್ Anne, ಸಿಸ್ಟರ್ ಜೆಸ್ಸಿಕ  ಇವರೆಲ್ಲರೂ ಸ್ಮರಣೀಯರು.ನನ್ನ ತಂದೆ ಸರಕಾರಿ ನೌಕರರಾಗಿದ್ದರಿಂದ  ಮುಂದೆ ಪದವಿಪೂರ್ವ ತರಗತಿ ತುಮಕೂರಿನಲ್ಲಾಯಿತು.ಕೇವಲ ಬಾಲಕಿಯರ ಪ್ರೌಢಶಾಲೆಯಲ್ಲಿ ಓದಿದ್ದ ನನಗೆ ತುಮಕೂರಿನ ಸರಕಾರಿ ಕಾಲೇಜು ಬಹಳ ಭಯ ಉಂಟುಮಾಡಿತು. ಆಗ ಅದು ಪದವಿ,ಪದವಿಪೂರ್ವ ,ವಿಜ್ಞಾನ, ಕಲಾವಿಭಾಗ ಎಲ್ಲವನ್ನೂ ಒಳಗೊಂಡ ಬಹು ದೊಡ್ಡ ಕಾಲೇಜಾಗಿತ್ತು.ಆ ಕಾಲೇಜನ್ನು ನೋಡಿಯೇ ನಾನು ಭಯ ಪಟ್ಟಿದ್ದೆ. ಅದಕ್ಕೆ ಸರಿಯಾಗಿ ನಾನು ಓದುತ್ತಿದ್ದ ವಿಜ್ಞಾನದ ವಿಭಾಗದಲ್ಲಿ ಅರವತ್ತು ಜನ ಬಾಲಕರ ತರಗತಿಯಲ್ಲಿ ನಾವು ಕೇವಲ ನಾಲ್ಕು ಹುಡುಗಿಯರಿದ್ದೆವು. ಹೆದರಿಕೆಯಿಂದ ಗುಬ್ಬಚ್ಚಿಗಳಂತೆ ಮುದುರಿಕೊಂಡಿರುತ್ತಿದ್ದ ನಮಗೆ ಇಂಗ್ಲೀಷ್ ಮತ್ತು ಕನ್ನಡ ಅಧ್ಯಾಪಕರ ಪಾಠ  ಹೊಸ ಚೇತನ ಕೊಡುತ್ತಿತ್ತು. ಇಂಗ್ಲೀಷ್ ಅಧ್ಯಾಪಕರಾದ ಸುಭಾನ್ ಸರ್ ಅದೆಷ್ಟು ಚೆನ್ನಾಗಿ ಪಾಠ ಮಾಡುತ್ತಿದ್ದರೆಂದರೆ ಇದ್ದಕ್ಕಿದ್ದಂತೆ ನನಗೆ ಇಂಗ್ಲೀಷ್ ಸಾಹಿತ್ಯದ ಬಗ್ಗೆ ವಿಶೇಷ ಆಸಕ್ತಿ ಮೂಡಿತು. ರವೀಂದ್ರನಾಥ ಟಾಗೋರ್ ನನ್ನ ಮೆಚ್ಚಿನ ಲೇಖಕರಾಗಿದ್ದಕ್ಕೆ ಪರೋಕ್ಷ ಕಾರಣ ಆ ಮಾಸ್ತರೇ. ನಮ್ಮ ಪಠ್ಯದಲ್ಲಿದ್ದ &lt;span style="font-weight: bold; color: rgb(153, 0, 0);"&gt;" ಸುಭಾ"&lt;/span&gt; ಎಂಬ ಪಾಠವನ್ನು ಅದೆಷ್ಟು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದರೆಂದರೆ ನಾವೆಲ್ಲಾ ಆ ಸುಭಾಳ ದುಃಖದಲ್ಲಿ ಪಾಲುದಾರರಾಗಿದ್ದೆವು. ಮುಂದೆ ಪದವಿ ತರಗತಿಯಲ್ಲಿದ್ದಾಗ ಅಹೋಬಲ ಶಂಕರರ ರವೀಂದ್ರಕಥಾಮಂಜರಿಯ ಮೂರು ಭಾಗಗಳನ್ನೂ ಓದಿ ಮುಗಿಸಿದೆ. ಬಂಗಾಳ ಭಾಷೆಗೆ ಬಹು ಹತ್ತಿರವಾದ ಅನುವಾದಗಳಿವು. ಅದರಲ್ಲಿ ಸುಭಾಷಿಣಿಯ ಕತೆ ಓದಿದಾಗ  ತಿಳಿಯಿತು , ಇದರ ಮುಂದೆ ಇಂಗ್ಲೀಷ್ ಅನುವಾದದ ಆ ಕಥೆ ಎಷ್ಟು ಸಪ್ಪೆಯಾಗಿತ್ತೆಂದು. ಅಂತಹ ಸಪ್ಪೆ ಪಾಠವನ್ನೇ ಆ ಮಾಸ್ತರು ರಸಭರಿತ ಕಥೆಯನ್ನಾಗಿಸಿದ್ದರು.ಅದೇ ರೀತಿ ಕನ್ನಡ ವಿಭಾಗದ ಮಾಸ್ತರುಗಳೂ ಮರೆಯಲಾಗದ ಪಾಠಗಳನ್ನು ಮಾಡಿದ್ದರು.&lt;br /&gt;&lt;br /&gt;ಬಹುಶಃ ನನಗೇ ಅರಿವಿಲ್ಲದಂತೆ ಬಾಲ್ಯದಿಂದ ನನಗೆ ಸಾಹಿತ್ಯ ಮೆಚ್ಚುಗೆಯ ವಿಷಯವಾಗಿತ್ತೆನಿಸುತ್ತದೆ.  ಹತ್ತನೆಯ ತರಗತಿಯಲ್ಲಿ ಒಳ್ಳೆಯ ಅಂಕಗಳು ಬಂದಿತ್ತೆಂದು ಮುಂದೆ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡೆ. ಆದರೆ ಈಗ ಅದರ ಒಂದು ಪಾಠವೂ ನೆನಪಿಲ್ಲ. ಮುಂದೆ ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳನ್ನು ಓದುವಾಗ  ರಂ.ಶ್ರೀ. ಮುಗಳಿ, ಡಾ. ಜಿ.ಎಸ್.ಶಿವರುದ್ರಪ್ಪ , ಚಂದ್ರಶೇಖರ ಕಂಬಾರ, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು, ಚಿದಾನಂದಮೂರ್ತಿ, ಮುಂತಾದವರ  ಪಾಠ ಕೇಳುವ ಅವಕಾಶ ಒದಗಿತು.&lt;br /&gt;&lt;br /&gt;ನನ್ನ ಎಲ್ಲ ಶಿಕ್ಷಕರಿಗೂ ಈ ಮೂಲಕ ಕೃತಜ್ಞತೆಗಳನ್ನು ಮತ್ತು ಶಿಕ್ಷಕರ ದಿನದ ಶುಭಾಶಯಗಳನ್ನು ಅರ್ಪಿಸುವೆ. ಇವರೆಲ್ಲರ ಜೊತೆ ಮತ್ತೊಬ್ಬರನ್ನು ನಾನು ನೆನೆಯಲೇ ಬೇಕು. ಕವನ ಓದುವುದು ಹೇಗೆ? ಅದನ್ನು ವಿಶ್ಲೇಷಿಸುವುದು ಹೇಗೆ?  ಮುಂತಾದ ಅನೇಕ ಸೂಕ್ಷ್ಮಗಳನ್ನು ನನಗೆ ಮನದಟ್ಟು ಮಾಡಿ ನಾನು ಅಧ್ಯಾಪಕಿಯಾಗಲೊಲ್ಲೆ ಎಂದಾಗ ಅದು ನನ್ನಿಂದ ಸಾಧ್ಯ ಎಂಬ ಆತ್ಮವಿಶ್ವಾಸ ಮೂಡಿಸಿದ , ಕನ್ನಡ ಪ್ರಾಧ್ಯಾಪಕರಾದ ನನ್ನವರಿಗೆ  ಈ ಶಿಕ್ಷಕರ ದಿನದಂದು ಶುಭ ಹಾರೈಕೆ.&lt;br /&gt;&lt;/div&gt;&lt;table class="Bs nH iY" cellpadding="0"&gt;&lt;tbody&gt;&lt;tr&gt;&lt;td class="Bu"&gt;&lt;br /&gt;&lt;/td&gt;&lt;td class="Bu"&gt;&lt;br /&gt;&lt;/td&gt;&lt;td class="Bu"&gt;&lt;div style="width: 189px;" class="nH"&gt;&lt;div class="nH"&gt;&lt;div class="nH"&gt;&lt;div class="hj"&gt;&lt;div class="hk"&gt;&lt;span id=":1e7" idlink=""&gt;&lt;img class="gZ" src="http://mail.google.com/mail/images/cleardot.gif" alt="" /&gt; &lt;/span&gt;&lt;/div&gt;&lt;/div&gt;&lt;/div&gt;&lt;div class="nH"&gt;&lt;div style="width: 189px;" class="u5 wr"&gt;&lt;div class="oM"&gt;&lt;div id=":1hy"&gt;&lt;div class="vb" itemposition="1"&gt;&lt;a target="_blank" class="u6" style="font-size: 110%; font-weight: bold;" href="http://pagead2.googlesyndication.com/aclk?sa=l&amp;amp;ai=BBWFuhgahSveBEoLWzQXU5MVrkrTHkgG2jo7fDcCNtwHQtEcQAhgCIIaPgAIoAjgAUKue78f-_____wFg5crlg7QOoAG03ervA7IBD21haWwuZ29vZ2xlLmNvbboBCGdtYWlsLWN2yAEB2gE2aHR0cDovL21haWwuZ29vZ2xlLmNvbS8xd280NHdvdmgwN2ZkbzlqYXgycGp6OTcxcHFsOW51qQLIfcqJPf5VPsgC5NiuC6gDAegDmAPoA-gC6APpBvUDAAAABA&amp;amp;num=2&amp;amp;sig=AGiWqtz7fA3OAxCsPv5WvmElejwVjyskKA&amp;amp;adurl=http://search.kannadamatrimony.com/campaign/matrimony.php%3Fcampaignid%3DLanguage%2B2009%2BContent%26adgroupid%3DKannada%26googleaccountid%3D974-249-9880%26searchcontent%3Dcontent%26themeid%3D8%26variantid%3D1%26CON%3DRI%26NET%3DCT%26PUB%3Dgoogle%26MODE%3DCPC%26creative%3D3591523070%26match%3DBroad%26A%3DKannada%26keyword%3Dkannada"&gt;&lt;br /&gt;&lt;/a&gt;&lt;/div&gt;&lt;div id=":1hz" class="u4"&gt;&lt;br /&gt;&lt;br /&gt;&lt;div class="vb" itemposition="4"&gt;&lt;br /&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;div class="nH u8"&gt;&lt;span class="u7"&gt;&lt;/span&gt;&lt;/div&gt;&lt;/div&gt;&lt;/div&gt;&lt;/td&gt;&lt;/tr&gt;&lt;/tbody&gt;&lt;/table&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8114402468197807042-8242376319850953861?l=battadatore.blogspot.com' alt='' /&gt;&lt;/div&gt;</content><link rel='replies' type='application/atom+xml' href='http://battadatore.blogspot.com/feeds/8242376319850953861/comments/default' title='Post Comments'/><link rel='replies' type='text/html' href='http://battadatore.blogspot.com/2009/09/blog-post.html#comment-form' title='27 Comments'/><link rel='edit' type='application/atom+xml' href='http://www.blogger.com/feeds/8114402468197807042/posts/default/8242376319850953861'/><link rel='self' type='application/atom+xml' href='http://www.blogger.com/feeds/8114402468197807042/posts/default/8242376319850953861'/><link rel='alternate' type='text/html' href='http://battadatore.blogspot.com/2009/09/blog-post.html' title='ಶಿಕ್ಷಕರ ದಿನಾಚರಣೆಯಂದು ನನ್ನ ಶಿಕ್ಷಕರನ್ನು ಸ್ಮರಿಸುತ್ತಾ....'/><author><name>ಚಂದ್ರಕಾಂತ ಎಸ್</name><uri>http://www.blogger.com/profile/00490264860537389455</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='25' src='http://3.bp.blogspot.com/_4wQW2-q8XsA/SVIw-U299dI/AAAAAAAAADY/T9mtUHgBZhU/S220/blogfile12.jpg'/></author><thr:total>27</thr:total></entry><entry><id>tag:blogger.com,1999:blog-8114402468197807042.post-2435273434119579431</id><published>2009-08-09T16:03:00.002+05:30</published><updated>2009-08-09T16:43:49.226+05:30</updated><title type='text'>ರಕ್ಷಾಬಂಧನ</title><content type='html'>&lt;span style="color: rgb(255, 0, 0);font-size:130%;" &gt;&lt;u&gt;&lt;b&gt;ರಕ್ಷಾಬಂಧನ - ಒಂದು ನೆನಪು&lt;br /&gt;&lt;br /&gt;&lt;/b&gt;&lt;/u&gt;&lt;/span&gt;ಶ್ರಾವಣ ಮಾಸದ ಹುಣ್ಣಿಮೆಯನ್ನು ಉಪಾಕರ್ಮ ಎಂದು ಹಿಂದಿನಿಂದ ಆಚರಿಸುತ್ತಿರುವುದು ಸರಿಯಷ್ಟೆ.ಈ ದಿನಕ್ಕೆ ಮತ್ತೊಂದು ವಿಶೇಷವಿದೆ.. ಮುಂಚೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತವಿದ್ದ 'ರಕ್ಷಾಬಂಧನ'  ಅಥವಾ 'ರಾಖಿ' ಹಬ್ಬವನ್ನು ಇತ್ತೀಚಿನ ವರ್ಷಗಳಲ್ಲಿ ಭಾರತದಾದ್ಯಂತ ಎಲ್ಲರೂ ಆಚರಿಸುತ್ತಾರೆ.ಆ ರೀತಿ ಆಚರಿಸುವುದರ ಹಿಂದೆ ವಾಣಿಜ್ಯ ಕಾರಣಗಳೂ ಇವೆ! ಆದರೆ ಅಣ್ಣ ತಂಗಿಯರ ಬಾಂಧವ್ಯವನ್ನು ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ಈ ದಿನ ಬಾಲ್ಯದ  ಅನೇಕ ಸಿಹಿ ಕಹಿ ನೆನಪುಗಳನ್ನು ನನ್ನ ಮನದಲ್ಲಿ ಮೂಡಿಸುತ್ತದೆ.&lt;br /&gt;&lt;br /&gt;ನಾವು ಏಳು ಜನ ಅಣ್ಣ ತಂಗಿಯರಲ್ಲಿ ಶ್ರಾವಣಮಾಸದ ಪೌರ್ಣಮಿಗೆ ಒಂದೆರಡು ದಿನ ಮೊದಲು ಹುಟ್ಟಿದವನು ನನ್ನ ಮೂರನೆಯ ಅಣ್ಣ. ಅವನು ಯಾವಾಗಲೂ &lt;span style="font-weight: bold;"&gt;"ನಾನು ಹುಟ್ಟಿದ ತಿಂಗಳಲ್ಲಿ ಹಬ್ಬಗಳು ಜಾಸ್ತಿ. ಸಿಹಿ ತಿಂಡಿಗಳೂ ಹೆಚ್ಚು, ಆಗಲೇ ನನ್ನ ಹುಟ್ಟುಹಬ್ಬ ಬರುತ್ತದೆ "&lt;/span&gt; ಎಂದು ಹೆಮ್ಮೆ ಪಡುತ್ತಿದ್ದ. ಬಾಲ್ಯದಿಂದಲೂ  ಮಕ್ಕಳಿಗೆಲ್ಲಾ ಲೀಡರ್ ಆಗಿದ್ದವನು ಈ ಅಣ್ಣ. ಪ್ರತಿಯೊಂದು ಕೆಲಸದಲ್ಲೂ ಅಚ್ಚುಕಟ್ಟು. ಅವನಿಗಿದ್ದ ಹವ್ಯಾಸಗಳು ಲೆಕ್ಕವಿಲ್ಲದಷ್ಟು. ಆ ಕಾಲದಲ್ಲಿಯೇ ಸ್ಟ್ಯಾಂಪ್ ಗಳನ್ನು ಸಂಗ್ರಹಿಸುವ ಅವನ ಬಳಿ ಅತ್ಯಂತ ಅಪರೂಪದ ಸ್ಟ್ಯಾಂಪುಗಳಿದ್ದವು. ಸಿನಿಮಾ ಪ್ರಿಯನಾದ ಅವನ ಬಳಿ ಸಿನಿಮಾಚಿತ್ರಗೀತೆಗಳ ಹಾಡುಗಳ ಪುಸ್ತಕಗಳು ಹೇರಳವಾಗಿದ್ದವು. ನಮ್ಮ ಬಾಲ್ಯದಲ್ಲಿ ಸಿನಿಮಾ ನೋಡಲು ಹೋದಾಗ ಹತ್ತು ಪೈಸೆಗೆ ಹಾಡಿನ ಪುಸ್ತಕ ಟಾಕೀಸಿನಲ್ಲಿ ಸಿಗುತ್ತಿತ್ತು. ಕಡೆ ಕಡೆಗೆ ಅದರ ಬೆಲೆ ಇಪ್ಪತ್ತೈದು ಪೈಸೆಯಾಯಿತು!  ತನ್ನ ವಸ್ತುಗಳನ್ನು- ಪುಸ್ತಕ ಬಟ್ಟೆ ಇತ್ಯಾದಿಗಳನ್ನು. ನೀಟಾಗಿ ಜೋಡಿಸಿಟ್ಟುಕೊಳ್ಳುವುದಲ್ಲದೆ ಇತರರೂ ಅಷ್ಟೆ ಚೆನ್ನಾಗಿ ಜೋಡಿಸಿಟ್ಟುಕೊಳ್ಳಬೇಕೆಂದು ಅವನು ಬಯಸುತ್ತಿದ್ದ ಅಲ್ಲಲ್ಲ ಕಡ್ಡಾಯ ಮಾಡುತ್ತಿದ್ದ. ಇಲ್ಲದಿದ್ದರೆ ಅವನ ಕಣ್ಣೋಟಕ್ಕೇ ನಾವು ಹೆದರಬೇಕಿತ್ತು.&lt;br /&gt;&lt;br /&gt;ಒಮ್ಮೆ ನನ್ನ ಲೆಕ್ಕದ ನೋಟ್ ಪುಸ್ತಕ ಕಾಣೆಯಾಯಿತು. ಒಂದೇ ಒಂದು ಪುಸ್ತಕ ಕಾಣೆಯಾದರೂ ಅವನ ಕಣ್ತಪ್ಪಿಸಲಾಗುತ್ತಿರಲಿಲ್ಲ. ಕಾರಣ ಅವನು ಆ ಚಿಕ್ಕ ವಯಸ್ಸಿಗೇ( ಹೈಸ್ಕೂಲ್‍ನಲ್ಲಿದ್ದಾಗಲೇ )ಬಹಳ ಸೊಗಸಾಗಿ ಎಲ್ಲರ ಎಲ್ಲ ಪುಸ್ತಕಗಳಿಗೆ ಸೊಗಸಾಗಿ ಬೈಂಡ್ ಮಾಡಿಕೊಡುತ್ತಿದ್ದ.ಆ ಬೈಂಡಿನ ಮೇಲೆ ಚೆನ್ನಾಗಿ ಕಾಣುವಂತೆ ಕ್ಯಾಲೆಂಡರ್‍ನಲ್ಲಿ ಕತ್ತರಿಸಿದ ಸಂಖ್ಯೆಗಳನ್ನು ಪೇಸ್ಟ್ ಮಾಡಿರುತ್ತಿದ್ದ. ಬೇರೆ ಎಲ್ಲಾ ಮಕ್ಕಳಿಗಿಂತ ಭಿನ್ನವಾದ ರೀತಿಯಲ್ಲಿ ನಮ್ಮ ಪುಸ್ತಕಗಳಿರಬೇಕೆಂಬುದು ಅವನಿಚ್ಚೆಯಾಗಿತ್ತು. ಆದ್ದರಿಂದ  ನಮಗೆ ಯಾವತ್ತೂ ಅಂಗಡಿಯಲ್ಲಿ ಸಿಕ್ಕುವ ನೋಟ್ ಪುಸ್ತಕಗಳನ್ನು ನಮ್ಮ ಅಪ್ಪ ನಮಗೆ ಕೊಡಿಸುತ್ತಿರಲಿಲ್ಲ.ನಮ್ಮ ಅಣ್ಣನೇ ಅಂಗಡಿಯಿಂದ ಹಾಳೆಗಳನ್ನು ತಂದು ಇತರ ನೋಟ್ ಪುಸ್ತಕಕ್ಕಿಂತ ದೊಡ್ಡ ಸೈಝಿನ ಪುಸ್ತಕ ಸಿದ್ಧಗೊಳಿಸುತ್ತಿದ್ದ. ಪುಸ್ತಕವನ್ನು ಸೊಗಸಾಗಿ ಬೈಂಡ್ ಮಾಡುವುದೆಂದರೆ ಅವನಿಗೆ ಒಂದು ಪ್ಯಾಷನ್ ಆಗಿತ್ತು.   ಪ್ರತಿ ದಿನ ಶಾಲೆಯಿಂದ ಬಂದ ಮೇಲೆ ಬ್ಯಾಗ್‍ನಿಂದ ಎಲ್ಲಾ ಪುಸ್ತಕಗಳನ್ನೂ ಕಡ್ಡಾಯವಾಗಿ ಹೊರ ತೆಗೆದು , ನಮಗಾಗಿ ನಿಗದಿಯಾಗಿದ್ದ ಪುಸ್ತಕಗಳ ರ್‍ಯಾಕ್‍‍ನಲ್ಲಿ ಪುಸ್ತಕದ ಮೇಲಿನ ಸಂಖ್ಯೆಗನುಗುಣವಾಗಿ ನೀಟಾಗಿ ಜೋಡಿಸಿಟ್ಟುಕೊಳ್ಳಬೇಕಿತ್ತು. ಯಾವುದೇ ಒಂದು ನಂಬರ್ ಕಾಣೆಯಾಗಿದ್ದರೂ ಅವನಿಗೆ ತಕ್ಷಣ ತಿಳಿದುಬಿಡುತ್ತಿತ್ತು. ನಾವು ಪುಸ್ತಕ  ಕಳೆದಕೊಂಡರೆ  ಅಪ್ಪ ಬೈಯುತ್ತಾರೆ ಎಂಬ ಭಯಕ್ಕಿಂತ ಅಣ್ಣ ನ ಭಯವೇ ಹೆಚ್ಚಾಗಿತ್ತು.  ನನ್ನ ಲೆಕ್ಕದ ನೋಟ್ ಪುಸ್ತಕ ಕಾಣೆಯಾಗಿದ್ದರಿಂದ  ಆ ಪುಸ್ತಕದ ಬಗ್ಗೆ ವಿಚಾರಿಸಿದ  ಅಣ್ಣನಿಗೆ ಮೂರು ನಾಲ್ಕು ದಿನ ಅದೂ ಇದೂ ಕಾರಣ ಹೇಳಿ ತಪ್ಪಿಸಿಕೊಂಡೆ.ಆದರೂ ಕಡೆಗೊಮ್ಮೆ ನಿಜ ಹೇಳಲೇ ಬೇಕಾಯಿತು.ನನ್ನ ಪುಸ್ತಕ ಕಳೆದರೆ ಅವನಿಗೇಕೆ ಸಿಟ್ಟು ? ಎಂಬ ಧೂರ್ತ ಪ್ರಶ್ನೆ ಸಿಡಿಮಿಡಿಗೊಂಡ ಮನದಲ್ಲಿ ಮೂಡುತ್ತಿತ್ತು &lt;span style="font-weight: bold;"&gt;" ಅಷ್ಟು ಚೆನ್ನಾಗಿ ಬೈಂಡ್ ಹಾಕಿದ ಪುಸ್ತಕ ಕಳೆದುಕೊಂಡೆಯಲ್ಲಾ? ನಾನೆಷ್ಟು ಕಷ್ಟಪಟ್ಟು ಅದನ್ನು ಸಿದ್ಧಗೊಳಿಸಿದ್ದೆ ಗೊತ್ತಾ ? "&lt;/span&gt;ಎಂದು ಬೈಯುತ್ತಿದ್ದುದರ ಅರ್ಥ ಈಗ ಹೊಳೆಯುತ್ತದೆ!!.ಅವನಿಗೆ ತಾನೇ ಕೈಯ್ಯಾರೆ ಸುಂದರಗೊಳಿಸಿದ ಪುಸ್ತಕಗಳನ್ನು ಯಾರಾದರೂ ಹಾಳು ಮಾಡಿದರೆ ಪ್ರಚಂಡ ಕೋಪ ಬರುತ್ತಿತ್ತು.&lt;br /&gt;&lt;br /&gt;ನಾವು ದೊಡ್ಡವರಾಗುತ್ತಾಹೋದಂತೆ ಏಳು ಜನ ಮಕ್ಕಳೂ ತಮತಮಗೆ ಇಷ್ಟವಾದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಓದಲು ಅಪ್ಪ ನೆರವಾದರು. ಅದರಂತೆ ನನ್ನಣ್ಣ ಪ್ರಿಂಟಿಂಗ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ ಪಡೆದು ಬಹು ಬೇಗ ಅದರಲ್ಲಿ ಪ್ರಾವೀಣ್ಯತೆ ಸಾಧಿಸಿದ.ಮುಂದೆ ವರುಷಗಳು ಉರುಳಿದವು. ಒಬ್ಬೊಬ್ಬರೂ ಒಂದೊಂದು ಊರಿನಲ್ಲಿ ಹಂಚಿಹೋದೆವು. ಮುಂಬಯ್ ನಲ್ಲಿ ಉನ್ನತ ಹುದ್ದೆಯಲ್ಲಿದ್ದ  ನನ್ನಣ್ಣ ಇತ್ತೀಚೆಗಷ್ಟೆ ಬೆಂಗಳೂರಿಗೆ ಬಂದಾಗ ರಕ್ಷಾಬಂಧನದ ದಿನ ಎಲ್ಲಾ ಅಣ್ಣಂದಿರೂ ( ನನಗೆ ನಾಲ್ಕು ಜನ ಅಣ್ಣಂದಿರು )  ಈ ತಂಗಿಯ ಮನೆಯಲ್ಲಿ ಸೇರಿ  ಹಿಂದಿನ ದಿನಗಳನ್ನು ನೆನೆದು ಖುಷಿ ಪಟ್ಟೆವು.ಆ  ದಿನ ಮರೆಯಲಾಗದ ದಿನ. ಹೀಗೆ ಪ್ರತಿವರ್ಷ ಈ ದಿನದಂದು ಎಲ್ಲರೂ ಒಟ್ಟಾಗಿ ಸೇರಿ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾ ಕಾಲಕಳೆಯಬೇಕೆಂದು ಒಮ್ಮನಸ್ಸಿನಿಂದ ನಿರ್ಧರಿಸಿದೆವು.ಆದರೆ ಅದೇ ಮೊದಲ ಹಾಗೂ ಕಡೆಯ ವರ್ಷವಾಗುತ್ತದೆಂದು  ಯಾರೂ ಭಾವಿಸಿರಲಿಲ್ಲ. ಮರುವರ್ಷ ಅದೇ ದಿನ ನನ್ನಣ್ಣನ ಬದುಕಿನ ಕಡೆಯ ದಿನವಾಯಿತು.... ಇದೆಲ್ಲಾ ನಡೆದು ಆಗಲೇ ದಶಕ ಸಮೀಪಿಸುತ್ತಿದೆ. ಆದರೂ ಆ ದಿನಗಳನ್ನು ಮರೆಯಲು ಸಾಧ್ಯವಿಲ್ಲ.ನನ್ನಣ್ಣ ದೂರನಿಂತು &lt;span style="font-weight: bold;"&gt;" ನೋಡಿದಿರಾ !! ನನ್ನ ಸ್ಪೆಷಾಲಿಟಿ. ನನ್ನ ಹುಟ್ಟು ಸಾವು ಒಂದೇ ತಿಂಗಳು ಬಂದಿದೆ &lt;/span&gt;" ಎಂದು ನಗುತ್ತಾ ಹೇಳುತ್ತಿರುವಂತೆ ಭಾಸವಾಗುತ್ತದೆ.&lt;br /&gt;&lt;div class="nH"&gt;&lt;div class="iE D E"&gt;&lt;div class="iH"&gt;&lt;div&gt;&lt;br /&gt;&lt;br /&gt;&lt;div class="eeCDlc goog-inline-block"&gt;&lt;div id=":6a" class="goog-imageless-button goog-inline-block goog-imageless-button-collapse-left ipG21e" act="undefined" tabindex="0"&gt;&lt;div class="goog-inline-block goog-imageless-button-outer-box"&gt;&lt;div class="goog-inline-block goog-imageless-button-inner-box"&gt;&lt;div class="goog-imageless-button-pos"&gt;&lt;div class="goog-imageless-button-content"&gt;{ಪ್ರತಿ ಶ್ರಾವಣ ಮಾಸ ಸಮೀಪಿಸಿದಾಗಲೂ ಈ ನೆನಪುಗಳು ನನ್ನನ್ನು ಕಾಡುತ್ತವೆ. ಹೀಗಾಗಿ ಈ ರಕ್ಷಾಬಂಧನದಂದು ನನ್ನ ಈ ನೆನಪುಗಳಿಗೆ ಭಾಷೆಯ ರೂಪ ಕೊಡುವುದೆಂದು ಕುಳಿತಾಗ ಅದು ಸುಲಭದ ಕೆಲಸವಲ್ಲವೆನಿಸಿತು. ಆದರೂ ತಡವಾಗಿಯಾದರೂ ಅದನ್ನಿಲ್ಲಿ ಪ್ರಕಟಿಸುತ್ತಿರುವೆ.}&lt;br /&gt;&lt;div class="AZ goog-inline-block"&gt; &lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;div class="eeCDlc goog-inline-block"&gt;&lt;div id=":69" class="goog-imageless-button goog-inline-block ipG21e" act="undefined" tabindex="0"&gt;&lt;div class="goog-inline-block goog-imageless-button-outer-box"&gt;&lt;div class="goog-inline-block goog-imageless-button-inner-box"&gt;&lt;div class="goog-imageless-button-pos"&gt;&lt;div class="goog-imageless-button-top-shadow"&gt; &lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;div style="" class="nH"&gt;&lt;div class="nH l2 ov"&gt;&lt;br /&gt;&lt;div class="nH"&gt;&lt;div class="ma"&gt;&lt;span class="l3"&gt;&lt;span dir="ltr"&gt;&lt;/span&gt;&lt;/span&gt;&lt;br /&gt;&lt;/div&gt;&lt;/div&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8114402468197807042-2435273434119579431?l=battadatore.blogspot.com' alt='' /&gt;&lt;/div&gt;</content><link rel='replies' type='application/atom+xml' href='http://battadatore.blogspot.com/feeds/2435273434119579431/comments/default' title='Post Comments'/><link rel='replies' type='text/html' href='http://battadatore.blogspot.com/2009/08/blog-post.html#comment-form' title='16 Comments'/><link rel='edit' type='application/atom+xml' href='http://www.blogger.com/feeds/8114402468197807042/posts/default/2435273434119579431'/><link rel='self' type='application/atom+xml' href='http://www.blogger.com/feeds/8114402468197807042/posts/default/2435273434119579431'/><link rel='alternate' type='text/html' href='http://battadatore.blogspot.com/2009/08/blog-post.html' title='ರಕ್ಷಾಬಂಧನ'/><author><name>ಚಂದ್ರಕಾಂತ ಎಸ್</name><uri>http://www.blogger.com/profile/00490264860537389455</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='25' src='http://3.bp.blogspot.com/_4wQW2-q8XsA/SVIw-U299dI/AAAAAAAAADY/T9mtUHgBZhU/S220/blogfile12.jpg'/></author><thr:total>16</thr:total></entry><entry><id>tag:blogger.com,1999:blog-8114402468197807042.post-6802582902419375828</id><published>2009-06-21T06:45:00.000+05:30</published><updated>2009-06-21T06:50:42.283+05:30</updated><title type='text'>ಅಪ್ಪನಿಗೊಂದು ನೆನಪಿನ ಶ್ರದ್ಧಾಂಜಲಿ</title><content type='html'>&lt;div&gt;ನನ್ನ ತಂದೆ  ರೈಲ್ವೆ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ದರು. ಮನೆಯಲ್ಲಿ  ಹದಿನೈದು  ಜನ. (ಅಜ್ಜಿ, ತಾತ, ಅಮ್ಮ, ಚಿಕ್ಕಪ್ಪ, ಅತ್ತೆ,  ಅಣ್ಣಂದಿರು,ಅಕ್ಕ, ತಂಗಿ  ಇತ್ಯಾದಿ...) ದುಡಿವ  ಕೈ  ಅಪ್ಪನದೊಂದೆ.ಅಪ್ಪನ  ಕೈಕೆಳಗೆ  ಸುಮಾರು  ಮುನ್ನೂರು   ಜನ  ಗ್ಯಾಂಗ್ಮನ್  ಗಳು. ತಂಗಿಯನ್ನು  ಬಿಟ್ಟರೆ  ನಾನೇ  ಮನೆಯಲ್ಲಿ  ಚಿಕ್ಕವಳು.ಈಗ ನೆನೆಸಿಕೊಂಡರೆ ಇಷ್ಟು ದೊಡ್ಡ ಸಂಸಾರದಲ್ಲಿ ನನ್ನ ಅಪ್ಪನ ಜೊತೆ ಬಾಲ್ಯದಲ್ಲಿ ನನಗಿದ್ದ ನೇರ ಸಂಪರ್ಕ ತುಂಬಾ ಕಡಿಮೆ ಎಂಬುದು ಗಮನಕ್ಕೆ ಬರುತ್ತದೆ.. ಶಿಸ್ತು, ಸದಾ ಚಟುವಟಿಕೆ,  ಕೋಪ,   ಸ್ವಾಭಿಮಾನ ಅಪ್ಪನ  ವ್ಯಕ್ತಿತ್ವದ  ಕೆಲವು  ಎಳೆಗಳು.  ಆದರೂ  ಅವರು  ಮಕ್ಕಳನ್ನು  ಹುರಿದುಂಬಿಸುತ್ತಿದ್ದ  ರೀತಿ  ವಿಶಿಷ್ಟವಾಗಿತ್ತು. . ಮಕ್ಕಳಿಗೆಲ್ಲಾ ( ನಾವು  7 ಜನ )ಸಂಗೀತ, ಹಿಂದಿ, ಟೈಲರಿಂಗ್, ಟೈಪಿಂಗ್ ..  ಎಲ್ಲವನ್ನೂ  ಕಲಿಸಿದ್ದರು. " &lt;span&gt;ವಿದ್ಯೆಯೇ&lt;/span&gt;  &lt;span&gt;ನಾನು&lt;/span&gt; ನಿಮ&lt;span&gt;ಗೆ&lt;/span&gt;  ಕೊಡುವ  ಆಸ್ತಿ "  ಎಂದು  ಹೇಳಿ  ಎಲ್ಲರಿಗೂ  ಒಳ್ಲೆಯ  ವಿದ್ಯಾಭ್ಯಾಸ ಕೊಡಿಸಿದ ಅಪ್ಪ , ಕಡೆಯವರೆಗೂ ಅವರು ಒಂದು ಮನೆಯನ್ನೂ ಮಾಡಿಕೊಳ್ಳಲಿಲ್ಲ. ಅಪ್ಪನಿಗೆ  ಎಲ್ಲ  ಕೆಲಸಗಳೂ  ಅಚ್ಚುಕಟ್ಟಾಗಿ  ಆಗಬೇಕಿತ್ತು.ಕಾಟಾಚಾರದ  ಕೆಲಸವೆಂದರೆ  ಅವರಿಗಾಗುತ್ತಿರಲಿಲ್ಲ..ಅದಕ್ಕೆ  ನಮಗೆ  ಸೈಕಲ್  ಕಲಿಸಿದ  ಪ್ರಸಂಗ  ಒಂದು  ನಿದರ್ಶನ. ಈ  ಕೆಲಸಕ್ಕಾಗಿಯೇ  ಸುಬ್ಬಣ್ಣ  ಎಂಬುವವನನ್ನು  ನೇಮಿಸಿದ್ದರು.ಅವನಿಗೆ ಸೈಕಲ್ ಸುಬ್ಬಣ್ಣ ಎಂಬುದೇ ಅಡ್ಡ ಹೆಸರಾಗಿತ್ತು. ಸೈಕಲ್ ಕಲಿಯುವುದು ಒಂದು  ರೀತಿಯ  ಕೋರ್ಸ್  ತರಹ  ಇತ್ತು.ಅನೇಕರು ಕಲಿಯುವ ಹಾಗೆ ಸೈಕಲ್ ಬಾರ್ ನಿಂದ  ಅತ್ತೊಂದು ಕಾಲು, ಇತ್ತೊಂದು ಕಾಲು ಹಾಕಿ ಕಲಿಯುವುದು ಅವರ ಪ್ರಕಾರ ಅಡ್ಡನಾಡಿ ವಿದ್ಯೆ.  ಬರೀ  ಪೆಡಲ್  ಮಾಡುವುದಕ್ಕೇ  ನಾವು ಅಂದರೆ ನನ್ನ ಅಣ್ಣ , ನಾನು, ನನ್ನ ತಂಗಿ  ತೆಗೆದುಕೊಂಡ  ಸಮಯ ಒಂದು  ತಿಂಗಳು !&lt;br /&gt;&lt;br /&gt;ಪ್ರತಿದಿನ ಬೆಳಿಗ್ಗೆ ಏಳು ಗಂಟೆಗೆ ಬಾಡಿಗೆ ಸೈಕಲ್ ಅಂಗಡಿಗೆ ಹೋಗಿ ಹೊಚ್ಚ ಹೊಸ ಮೂರು ಸೈಕಲ್ ಗಳನ್ನು ಬಾಡಿಗೆಗೆ  ತೆಗೆದುಕೊಂಡು ಮೈದಾನದ ಬಳಿ ಹೋಗಿ ಒಂದು ಗಂಟೆ ಅಭ್ಯಾಸ ಮಾಡುತ್ತಿದ್ದೆವು.ವಾರಕ್ಕೊಮ್ಮೆ ನಮ್ಮ ಪಾಠದ ಪ್ರಗತಿಯನ್ನು ಸುಬ್ಬಣ್ಣನ ಬಳಿ ವಿಚಾರಿಸುತ್ತಿದ್ದರು. ಅಂತೂ ಎರಡು ತಿಂಗಳಿಗೆ ನಮಗೆ ಈ ಸೈಕಲ್ ಸವಾರಿ ವಿದ್ಯೆ ಪೂರ್ಣ ಕರಗತವಾಗಿದೆಯೆಂದು ಸುಬ್ಬಣ್ಣ ರಿಪೋರ್ಟ್ ಕೊಟ್ಟ ಮೇಲೆ ಒಂದು ಶುಭ ಭಾನುವಾರ ನಮಗೆ ಪರೀಕ್ಷೆ ಇತ್ತು.! ನಮ್ಮ ಮನೆಯ ಹಿರಿಯರೆಲ್ಲಾ ಅಪ್ಪನ ನೇತೃತ್ವದಲ್ಲಿ ಮೈದಾನಕ್ಕೆ ಬಂದರು. ಅಲ್ಲಿ ಒಂದು ಕಲ್ಲು ಬೆಂಚಿನ ಮೇಲೆ ಅವರೆಲ್ಲಾ ಸುಖಾಸೀನರಾದಮೇಲೆ ನಮ್ಮ ಪರೀಕ್ಷೆ ಪ್ರಾರಂಭವಾಯಿತು. ಅಪ್ಪ ಹೇಳಿದ್ದನ್ನು ನಾವು ಮಾಡಿ ತೋರಿಸಬೇಕಿತ್ತು.&lt;span style="font-weight: bold; color: rgb(153, 0, 0);"&gt; ಪೆಡ್ಲಿಂಗ್ &lt;/span&gt;ಎಂದರೆ ಅವರು ಹೇಳುವಷ್ಟು ಹೊತ್ತೂ ನಿಧಾನವಾಗಿ ಪೆಡಲ್ ಮಾಡುವುದು,&lt;span style="font-weight: bold; color: rgb(153, 0, 0);"&gt; ಎಡಕ್ಕೆ ತಿರುಗಿ &lt;/span&gt;ಎಂದರೆ ಎಡಕ್ಕೆ, &lt;span style="font-weight: bold; color: rgb(153, 0, 0);"&gt;ಬಲಕ್ಕೆ &lt;/span&gt;ಎಂದರೆ ಬಲಕ್ಕೆ, ಹೀಗೆ ಅವರು ಹೇಳಿದ್ದನ್ನೆಲ್ಲಾ ಚಾಚೂ ತಪ್ಪದೆ ಮಾಡಿದೆವು. ನಮಗಿಂತ ಸುಬ್ಬಣ್ಣನಿಗೇ ಟೆನ್ಶನ್ ಜಾಸ್ತಿ ಇತ್ತು. ಅಂತೂ  ಒಂದು, ಒಂದೂವರೆ ಗಂಟೆಯಲ್ಲಿ ಪರೀಕ್ಷಿಸಿ, ಕಾತರದಿಂದ ನೋಡುತ್ತಿದ್ದ ಸುಬ್ಬಣ್ಣನಿಗೆ ಅಪ್ಪ ಒಳ್ಳೆಯ ಮೇಷ್ಟ್ರು ಎಂದು ಶಹಬ್ಬಾಸ್ಗಿರಿ ಕೊಟ್ಟರು.ಅದು ಅವನ ಪಾಲಿಗೆ  ಚಿನ್ನದ ಪದಕ ಪಡೆದ ಸಂಭ್ರಮ ಕೊಟ್ಟಿತು. ಮಹಾಭಾರತದಲ್ಲಿ ಪಾಂಡವ ಕೌರವರ ಶಸ್ತ್ರಾಭ್ಯಾಸ ಕೌಶಲವನ್ನು ಭೀಷ್ಮರು ಹೀಗೇ ಪರೀಕ್ಷಿಸಿದ್ದರೇನೋ? ಆಗ ದ್ರೋಣರಿಗೂ ಇಂತಹುದೇ ಸಂತೋಷ ಸಿಕ್ಕಿರಬಹುದು.!!&lt;br /&gt;&lt;br /&gt;ಶಿಸ್ತಿನ ಸಾಕಾರಮೂರ್ತಿಯಾಗಿದ್ದ ನಮ್ಮ ಅಪ್ಪ ಅತ್ಯಂತ ಸ್ವಾಭಿಮಾನಿ.ಅವರು ಕೆಲಸದಿಂದ ನಿವೃತ್ತಿ ಆದ ಮೇಲೆ ಯಾವ ಮಕ್ಕಳ ಮನೆಯಲ್ಲಿಯೂ ಇರಲು ಅವರು ಇಚ್ಛಿಸಲಿಲ್ಲ.ನನ್ನ ಅಪ್ಪ ಅವರು ನಿವೃತ್ತಿಯಾಗುವಷ್ಟರಲ್ಲಿ ಏಳು ಮಕ್ಕಳ ವಿವಾಹವನ್ನೂ ಮಾಡಿ ಮುಗಿಸಿದ್ದರು. ಮಕ್ಕಳಿಗೆ ತೊಂದರೆ ಕೊಡಬಾರದೆಂಬುದೇ ಅವರ ಮುಖ್ಯ ಉದ್ದೇಶವಾಗಿತ್ತು. ಹೀಗಾಗಿ  ನಮ್ಮ ಅಪ್ಪ ಅಮ್ಮ ಇಬ್ಬರೇ ಒಂದು ಬಾಡಿಗೆ ಮನೆಯಲ್ಲಿದ್ದರು. ಹೆಣ್ಣುಮಕ್ಕಳು ಮನೆಗೆ ಬಂದಾಗ ಅವರಿಗೆ ಪೂರ್ಣ ಸ್ವಾತಂತ್ರ್ಯವಿರಬೇಕೆಂಬ ಭಾವನೆಯೂ ಇದರ ಹಿಂದೆ ಅಡಗಿತ್ತು. ಅಂತೂ ಅರವತ್ತನೆಯ ವಯಸ್ಸಿನಿಂದ ಸುಮಾರುಎಪ್ಪತ್ತೈದನೆಯ ವಯಸ್ಸಿನವರೆಗೂ ಅಪ್ಪ ಅಮ್ಮ ಇಬ್ಬರೇ ಮನೆ ಮಾಡಿಕೊಂಡಿದ್ದರು.ನಂತರ ಎಲ್ಲ ಮಕ್ಕಳ ಒತ್ತಾಯದ ಮೇರೆಗೆ ಮಕ್ಕಳ ಮನೆಯಲ್ಲಿ ಇರಲಾರಂಭಿಸಿದರು.&lt;br /&gt;&lt;br /&gt;ಇಂತಹ ಅಪ್ಪ ಸಹ   ಬದಲಾದ  ಕಾಲಕ್ಕನುಗುಣವಾಗಿ ತಮ್ಮ ಆಲೋಚನೆಗಳನ್ನೂ ಬದಲಿಸಿಕೊಂಡಿದ್ದರು.ಹೆಣ್ಣು  ಮಕ್ಕಳೂ   ಗಂಡುಮಕ್ಕಳಂತೆ ದುಡಿಯಬೇಕು,  ಕಲಿತ  ವಿದ್ಯೆ  ವ್ಯರ್ಥವಾಗಬಾರದೆಂದು  ಬಾಲ್ಯದಿಂದಲೂ  ನಮಗೆ  ತಿಳಿಹೇಳಿದವರು.ವರದಕ್ಷಿಣೆಯ  ಬಗ್ಗೆ  ಅವರ  ನಿಲುವು  ವಿಶಿಷ್ಟವಾದದ್ದು. ಗಂಡುಮಕ್ಕಳಿಗೆ  ವರದಕ್ಷಿಣೆ  ತೆಗೆದುಕೊಳ್ಳದೆ,  ಹೆಣ್ಣುಮಕ್ಕಳಿಗೆ   ಕೊಡದೆ  ಏಳು  ಜನರ  ಮದುವೆ  ಮಾಡಿ  ಇತರರು  ಬೆರಗಾಗುವಂತೆ  ಮಾಡಿದವರು.  ಎಂಬತ್ತನೆಯ  ವಯಸ್ಸಿನಲ್ಲಿಯೂ  ' ವಯಸ್ಸಾದವರು'  ಎಂದು  ಯಾರಾದರೂ  ಹೇಳಿದರೆ ರೇಗುತ್ತಿದ್ದರು.ಅವರು ವಯಸ್ಸಾದವರ ಹಾಗಿರಲಿಲ್ಲ ಬಿಡಿ.ಬಾಲ್ಯದಲ್ಲಿ ಅವರೊಡನಾಟ ಅಷ್ಟಾಗಿ ಇಲ್ಲದಿದ್ದರೂ ಅವರು ನಿವೃತ್ತಿ ಹೊಂದಿದ ಮೇಲೆ, ನಾವು ವಿವಾಹವಾದ ಮೇಲೆ ನಮ್ಮ ನಡುವೆ ಅತ್ಯಂತ ಅನ್ಯೋನ್ಯತಾ ಭಾವವಿತ್ತು.ಅವರಿಗೆ ಆಸಕ್ತಿ ಇಲ್ಲದ ಕ್ಷೇತ್ರವೇ ಇರಲಿಲ್ಲ. ಇನ್ನೊಬ್ಬರಿಗೆ ತೊಂದರೆ ಕೊಡಬಾರದೆಂಬುದು ಅವರ ಮೂಲ ಮಂತ್ರವಾಗಿತ್ತು. ಅದಕ್ಕಾಗಿಯೇ ಮಕ್ಕಳ ಮನೆಯಲ್ಲಿ ಇರಲಾರಂಭಿಸಿದ ಮೇಲೆ ಸಾಕಷ್ಟು compromise  ಮಾಡಿಕೊಂಡರು.&lt;br /&gt;&lt;br /&gt;ಮೊಮ್ಮಕ್ಕಳು ಅಂತರ್ಜಾತಿ ವಿವಾಹವಾದಾಗ ವಿರೋಧಿಸಿದ  ಆ ಮಕ್ಕಳ ಅಮ್ಮ  ಅಪ್ಪಂದಿರಿಗೆ  ಬುದ್ಧಿ ಹೇಳಿದವರು ನಮ್ಮ ಅಪ್ಪನೇ. ಕಡೆಗೆ   ಸಾವಿನ   ಸಂದರ್ಭದಲ್ಲಿಯೂ ಅಪ್ಪ  ತಮ್ಮ  ಕ್ರಾಂತಿಕಾರಿ  ಸ್ವಭಾವ  ಮೆರೆದವರು.  ಇದ್ದಕ್ಕಿದ್ದಂತೆ  ಒಂದು  ದಿನ  ಎಲ್ಲ  ಮಕ್ಕಳನ್ನೂ  ಕರೆದು  ತಾವು  ಸತ್ತ  ನಂತರ  ಕಣ್ಣುಗಳನ್ನು  ಮಾತ್ರವಲ್ಲದೆ  ಇಡೀ  ದೇಹವನ್ನೇ  -ತಮಗೆ  ಅನೇಕ  ದಶಕಗಳ  ಕಾಲ  ಚಿಕಿತ್ಸೆ  ನೀಡುತ್ತಿದ್ದ  ಆಸ್ಪತ್ರೆಗೆ -  ದಾನನೀಡುವುದಾಗಿ  ತಿಳಿಸಿ  ಎಲ್ಲ  ಸಿದ್ಧತೆಗಳನ್ನೂ  ಮಾಡಿ  ಪತ್ರ  ಬರೆದು  ಅದು  ಎಲ್ಲರಿಗೂ  ಸಿಗುವಂತೆ ಇಟ್ಟಿದ್ದರು!! ಅದು ಕಳೆದು ಹೋದರೆ ಹುಡುಕಲು ಅವರಿರುವುದಿಲ್ಲವಲ್ಲ! .   ಇದಾದ  ವರ್ಷದಲ್ಲಿ  ನಮ್ಮನ್ನಗಲಿದರು.  ನನ್ನ  ಅಮ್ಮ ಅತ್ಯಂತ  ಮುಗ್ಧೆ .  ಸರಳತೆ ಅವಳ  ಪ್ರಧಾನ ಗುಣ.  ಅವರಿಬ್ಬರ  ಸ್ವಭಾವ  ಅಜಗಜಾಂತರವಾಗಿದ್ದರೂ  ಅವರಿಬ್ಬರಲ್ಲಿ  ಅಪಾರ  ಹೊಂದಾಣಿಕೆ.  ತಂದೆಯ  ಎಲ್ಲ ಗುಣಗಳಿಗೂ   ಅಮ್ಮನ  ಒಪ್ಪಿಗೆ.   ಸದಾಕಾಲ  ಇಬ್ಬರೂ  ಜೊತೆಯಾಗಿರುತ್ತಿದ್ದುದು  ಕೆಲವರಿಗಾದರೂ   ಅಸಹನೆಯ  ಭಾವ  ಮೂಡಿಸುತ್ತಿತ್ತು. ಈಗ  ಅಪ್ಪ  ನಮ್ಮನ್ನಗಲಿ  ಮೂರು  ವರ್ಷಗಳಾಗಿವೆ.ಅವರು ನಮ್ಮನ್ನಗಲಿದಾಗ ನಮ್ಮ ಸಂಬಂಧಿಗಳು ಅಷ್ಟೇಕೆ ನನ್ನ ಅಣ್ಣ ಅಕ್ಕ ಚಿಕ್ಕಪ್ಪಂದಿರೇ ಅವರ ದೇಹವನ್ನು ಆಸ್ಪತ್ರೆಗೆ ದಾನ ನೀಡುವುದನ್ನು ವಿರೋಧಿಸಿದಾಗ ಅತ್ಯಂತ ಸೌಮ್ಯ ಸ್ವಭಾವದ ನಮ್ಮಮ್ಮ ಧೃಡವಾಗಿ ನಿಂತು ಅಪ್ಪನ ಕಡೆಯ ಆಸೆಯನ್ನು ನೆರವೇರಿಸಿದರು. ಸುಮಾರು ಐವತ್ತು ವರ್ಷಗಳ ಕಾಲ ಅವರೊಡನೆ ಇದ್ದ ನಾನು ಅವರಿಂದ ಅನೇಕ ಗುಣಗಳನ್ನು ಕಲಿತಿದ್ದೇನೆ. ಅಂತಹ ಅಪ್ಪನಿಗೆ ಒಂದು ಈ ಅಪ್ಪಂದಿರ ದಿನದಂದು ಒಂದು ಶ್ರದ್ಧಾಂಜಲಿ. ಅಪ್ಪನಿಗೊಂದು ನೆನಪಿನ ಶ್ರದ್ಧಾಂಜಲಿ&lt;br /&gt;&lt;/div&gt; &lt;div&gt; &lt;/div&gt; &lt;div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8114402468197807042-6802582902419375828?l=battadatore.blogspot.com' alt='' /&gt;&lt;/div&gt;</content><link rel='replies' type='application/atom+xml' href='http://battadatore.blogspot.com/feeds/6802582902419375828/comments/default' title='Post Comments'/><link rel='replies' type='text/html' href='http://battadatore.blogspot.com/2009/06/blog-post_21.html#comment-form' title='21 Comments'/><link rel='edit' type='application/atom+xml' href='http://www.blogger.com/feeds/8114402468197807042/posts/default/6802582902419375828'/><link rel='self' type='application/atom+xml' href='http://www.blogger.com/feeds/8114402468197807042/posts/default/6802582902419375828'/><link rel='alternate' type='text/html' href='http://battadatore.blogspot.com/2009/06/blog-post_21.html' title='ಅಪ್ಪನಿಗೊಂದು ನೆನಪಿನ ಶ್ರದ್ಧಾಂಜಲಿ'/><author><name>ಚಂದ್ರಕಾಂತ ಎಸ್</name><uri>http://www.blogger.com/profile/00490264860537389455</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='25' src='http://3.bp.blogspot.com/_4wQW2-q8XsA/SVIw-U299dI/AAAAAAAAADY/T9mtUHgBZhU/S220/blogfile12.jpg'/></author><thr:total>21</thr:total></entry><entry><id>tag:blogger.com,1999:blog-8114402468197807042.post-3779833733416744978</id><published>2009-06-18T11:49:00.000+05:30</published><updated>2009-06-18T18:41:40.726+05:30</updated><category scheme='http://www.blogger.com/atom/ns#' term='ರಾಮಾಯಣ'/><title type='text'>ರಾಮಾಯಣ - ಒಂದು ಪ್ರವೇಶ</title><content type='html'>ನಮ್ಮ ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹಾಕಾವ್ಯಗಳಲ್ಲೊಂದಾದ ರಾಮಾಯಣ ವಾಲ್ಮೀಕಿಯಿಂದ ರಚಿತವಾದದ್ದು. ವಾಲ್ಮೀಕಿ ಈ ಕಾವ್ಯದ ಒಂದು ಪಾತ್ರವೂ  ಹೌದು.ರಾಮಾಯಣ ನಡೆದದ್ದು ಹಿಂದೂ ಕಾಲಗಣನೆಯ ನಾಲ್ಕುಯುಗಗಳಲ್ಲಿ ಎರಡನೆಯದಾದ  ತ್ರೇತಾಯುಗದಲ್ಲಿ.ವಾಲ್ಮಿಕಿಯಿಂದ ರಚಿತವಾದ ಈ ಮಹಾಕಾವ್ಯ ಮುಂದೆ  ಲವ-ಕುಶರಿಂದ ಪ್ರಚಲಿತವಾಯಿತು. ಈ ಕಾವ್ಯದ ಎಲ್ಲ ಪಾತ್ರಗಳೂ ಭಾರತದ  ಸಾಂಸ್ಕೃತಿಕ ಪ್ರಜ್ಞೆಯ ಭಾಗವಾಗಿವೆ ಎಂದು ನಿರ್ವಿವಾದವಾಗಿ ಹೇಳಬಹುದು.&lt;br /&gt;&lt;br /&gt;ರಾಮಾಯಣದ ಕಥೆಯನ್ನು ಅತ್ಯಂತ ಸರಳವಾಗಿ ಹೇಳುವುದಾದರೆ ಇದು ಒಳಿತು ಕೆಡುಕಿನ ನಡುವಿನ ಸಂಘರ್ಷದ ಕಥೆ. ಈ  ಸಂಘರ್ಷದಲ್ಲಿ ಒಳಿತಿಗೇ ಕಡೆಯಲ್ಲಿ ಜಯ ಎಂಬುದನ್ನು ಈ ಕಾವ್ಯ ಸಾರುತ್ತದೆ. ಅದಕ್ಕೆ ಹೊಂದುವಂತೆ ಇಲ್ಲಿಯ ಪಾತ್ರಗಳೂ ಅತ್ಯಂತ ನೇರ , ಸರಳ ಸ್ವಭಾವದ  ಪಾತ್ರಗಳು. ಒಳಿತನ್ನು ಪ್ರತಿನಿಧಿಸುವ ರಾಮ ಈ ಕಾವ್ಯದ ನಾಯಕನಾದರೆ ಅವನ ಒಡನಾಡಿ ಸೀತೆ ಈ ಕಾವ್ಯದ ನಾಯಕಿ. ಕೆಡುಕಿನ ಸಂಕೇತವಾದ ರಾವಣ ಇಲ್ಲಿನ ಖಳನಾಯಕ. ರಾಮ ರಾವಣರ ಯುದ್ಧದಲ್ಲಿ  ಅಂತಿಮವಾಗಿ ರಾಮನಿಗೇ ಜಯ.ಇದು ಅತ್ಯಂತ ಸರಳವಾಗಿ ಹೇಳಬಹುದಾದ ಕಥೆ. ಆದರೆ ಈ ಕಾವ್ಯ ಮುಂದೆ ಬಂದ ಹಲವಾರು ಭಾಷೆಯ  ಅನೇಕ ಕವಿಗಳಿಗೆ ಸ್ಫೂರ್ತಿಯ ಸೆಲೆಯಾಗಿದೆ.ಹೀಗಾಗಿ ವಾಲ್ಮೀಕಿಯ ಕಾಲದಿಂದ ಹಿಡಿದು ಆಧುನಿಕ ಕಾಲದವರೆಗೂ ಅನೇಕ ಕವಿಗಳು ಈ ಕಾವ್ಯವನ್ನು ಬೇರೆ ಬೇರೆ ರೀತಿಯಲ್ಲಿ ರಚಿಸಿದ್ದಾರೆ.&lt;br /&gt;&lt;span style="font-size:130%;"&gt;&lt;br /&gt;&lt;/span&gt;&lt;span style="font-weight: bold;font-size:130%;" &gt;ಭಾರತದ  ವಿವಿಧ  ಭಾಷೆಗಳ  ರಾಮಾಯಣಗಳ ಕಿರು ಪರಿಚಯ:&lt;/span&gt;&lt;br /&gt;&lt;br /&gt;೧.ವಾಲ್ಮೀಕಿ ರಾಮಾಯಣದ ನಂತರ ನಮಗೆ  ಸಿಗುವ ಮೊದಲ ರಾಮಾಯಣ &lt;span style="font-weight: bold;"&gt;" ಭಟ್ಟಿಕಾವ್ಯ" .&lt;/span&gt; ಏಳನೆಯ ಶತಮಾನದ&lt;span style="font-weight: bold;"&gt;   ಭಟ್ಟಿಕವಿ &lt;/span&gt;ರಚಿಸಿರುವ ಈ ಕೃತಿ ಅತ್ಯಂತ ವಿಶಿಷ್ಟವಾದದ್ದು. ಇದನ್ನು ಶಾಸ್ತ್ರಕಾವ್ಯ ಎಂದೂ ಕರೆಯಬಹುದು. ಈ ಕೃತಿ ಪ್ರಾಚೀನ ಕಾಲದ ಎರಡು ಮಹಾ ಕೃತಿಗಳನ್ನು ಹೆಣೆದು ರಚಿಸಿದ ಕಾವ್ಯ. ರಾಮಾಯಣ ಮತ್ತು ಪಾಣಿನಿಯ " ಅಷ್ಟಾಧ್ಯಾಯಿ" ಕೃತಿಗಳನ್ನು ಬೆರೆಸಿ ಮಾಡಿದ ಒಂದು ನೂತನ ಪ್ರಯೋಗ. ಪಾಣಿನಿಯ ವ್ಯಾಕರಣದ ನಿಯಮಗಳನ್ನು ರಾಮಾಯಣದ ಕಥೆಯ ಪ್ರಯೋಗಗಳ ಮೂಲಕ ಹೇಳುತ್ತಾ ಹೋಗುತ್ತಾನೆ.ಈ ಕೃತಿಗೆ " ರಾವಣವಧ" ಎಂಬ ಹೆಸರೂ ಇದೆ.&lt;br /&gt;&lt;br /&gt;೨. ಹನ್ನೆರಡನೆಯ ಶತಮಾನದ ತಮಿಳು  ಕವಿ ಕಂಬನ್  ರಚಿಸಿದ "&lt;span style="font-weight: bold;"&gt; ರಾಮಾವತಾರಮ್&lt;/span&gt;" ಕಾವ್ಯ &lt;span style="font-weight: bold;"&gt;ಕಂಬರಾಮಾಯಣ&lt;/span&gt; ಎಂದೇ ಪ್ರಖ್ಯಾತವಾಗಿದೆ. ವಾಲ್ಮೀಕಿ ರಾಮಾಯಣಕ್ಕಿಂತ ಭಿನ್ನವಾದ ಕಥಾಹಂದರ ಇದರಲ್ಲಿದೆ. ಇದೊಂದು ಭಕ್ತಿಪ್ರಧಾನ ಕಾವ್ಯ.&lt;br /&gt;&lt;br /&gt;೩.ಹದಿನಾಲ್ಕನೆಯ ಶತಮಾನದಲ್ಲಿ&lt;span style="font-weight: bold;"&gt;  &lt;/span&gt;&lt;span style="font-weight: bold;"&gt;ಬಂಗಾಳ&lt;/span&gt;&lt;span style="font-weight: bold;"&gt; &lt;/span&gt;ಭಾಷೆಯಲ್ಲಿ ರಚಿತವಾದ &lt;span style="font-weight: bold;"&gt;" &lt;/span&gt;&lt;span style="font-weight: bold;"&gt;ಕೃತ್ತಿವಾಸಿ&lt;/span&gt;&lt;span style="font-weight: bold;"&gt;"&lt;/span&gt;ಕಾವ್ಯವನ್ನು " &lt;span style="font-weight: bold;"&gt;ಶ್ರೀರಾಮಪಾಂಚಾಲಿ&lt;/span&gt;" ಎಂದೂ ಕರೆಯುತ್ತಾರೆ.ಈ ಕೃತಿಯನ್ನು ಬರೆದ ಕವಿ ಕೃತ್ತಿಬಾಸ್ ಓಜ್. ಕನ್ನಡದ ಕುಮಾರವ್ಯಾಸನ ಕಾವ್ಯದಂತೆ ಭಕ್ತಿಪ್ರಧಾನವಾದ ಕಾವ್ಯವಿದು. ರಾಮಾಯಣದ ಕಥೆಯನ್ನು ಬಂಗಾಳ ಭಾಷೆಯಲ್ಲಿ ಹೇಳುವುದಷ್ಟೆ ಈ ಕಾವ್ಯದ ಉದ್ದೇಶವಲ್ಲ. ಉತ್ತರ ಭಾರತದ  ಅನೇಕ ರಾಮಾಯಣ ಪರಂಪರೆಗಳಲ್ಲಿ ಅತಿ ಪ್ರಾಚೀನವಾದದ್ದು ಈ ಕಾವ್ಯ.  ಮಧ್ಯಕಾಲೀನ ಬಂಗಾಳ ಸಮಾಜದ ಚಿತ್ರಣ , ಅಲ್ಲಿಯ ಜನರ ಸಂಸ್ಕೃತಿ, ಅವರು ಎತ್ತಿ ಹಿಡಿಯುವ ಮೌಲ್ಯಗಳು ಇವೆಲ್ಲವನ್ನೂ ಈ ಕಾವ್ಯಬಿಂಬಿಸುತ್ತದೆ ಮತ್ತು ಸುತ್ತಮುತ್ತಲ ಪ್ರಾಂತ್ಯಗಳಲ್ಲಿ ವೈಷ್ಣವಮತ  ನೆಲೆಕಂಡುಕೊಳ್ಳುವಲ್ಲಿ ಈ ಕಾವ್ಯದ ಪಾತ್ರ ಮಹತ್ತರವಾದದ್ದು. ಮುಂದೆ ಬಂದ ಬಂಗಾಲಿ ಸಾಹಿತ್ಯದ ಮೇಲೆ ಈ ಕಾವ್ಯದ ದಟ್ಟ ಪ್ರಭಾವವನ್ನು ಗುರುತಿಸಬಹುದು. ರವೀಂದ್ರನಾಥ ಠಾಗೋರರ ಮೇಲೂ ಈ ಕಾವ್ಯ ಸಾಕಷ್ಟು ಪ್ರಭಾವ ಬೀರಿದೆ.&lt;br /&gt;&lt;br /&gt;ಇವುಗಳಲ್ಲದೆ ಹದಿನೈದನೆಯ ಶತಮಾನದ ರಂಗನಾಥ ಕವಿ ರಚಿಸಿದ ತೆಲುಗು ರಾಮಾಯಣ, ಹದಿನಾರನೆಯ ಶತಮಾನದಲ್ಲಿ ಬಲರಾಮದಾಸ ಕವಿ ರಚಿಸಿದ ಒರಿಯಾ ರಾಮಾಯಣ, 17ನೆ ಶತಮಾನದಲ್ಲಿ ಪ್ರೇಮಾನಂದ ಕವಿ ರಚಿಸಿದ ಗುಜರಾತಿ ರಾಮಾಯಣ , 18ನೆ ಶತಮಾನದಲ್ಲಿ ಕವಿ ಶ್ರೀಧರ ರಚಿಸಿದ ಮರಾಠಿ ರಾಮಾಯಣಗಳು ಭಾರತದ ಬಹುಮಟ್ಟಿಗೆ ಎಲ್ಲ ಭಾಷೆಗಳಲ್ಲೂ ರಾಮಾಯಣ ಕಾವ್ಯಗಳು ಬಂದಿರುವುದನ್ನು ಸೂಚಿಸುತ್ತವೆ.&lt;br /&gt;&lt;br /&gt;ಈ ಎಲ್ಲ ಕಾವ್ಯಗಳಿಗಿಂತ ಕುತೂಹಲ ಮೂಡಿಸುವ ಮತ್ತೊಂದು ಕಾವ್ಯ ಕೇರಳ ಮತ್ತು ಲಕ್ಷದ್ವೀಪದ ಭಾಗಗಳಲ್ಲಿ ಮಾಪಿಳ್ಳೆಗಳು ಹಾಡುವ ಮಾಪಿಳ್ಳೆಪಟ್ಟು ಹಾಡಿನಲ್ಲಿ ರಾಮಾಯಣದ ಕಥೆಯ ಕೆಲವು ಭಾಗಗಳು ಸೇರಿವೆ. ಈ ಭಾಗವನ್ನು ‘ ಮಾಪಿಳ್ಳೆರಾಮಾಯಣ’ ಎಂದೂ ಕರೆಯುತ್ತಾರೆ. ಇವು ಜಾನಪದ ಹಾಡುಗಳಾಗಿದ್ದು ತಲೆಮಾರಿನಿಂದ ತಲೆಮಾರಿಗೆ ಸಾಗಿ ಬಂದಿದೆ.ಈ ರಾಮಾಯಣದ ನಾಯಕ ಒಬ್ಬ ಮುಸ್ಲಿಮ್&lt;span style="font-weight: bold;"&gt; ಸುಲ್ತಾನ&lt;/span&gt;. ಇಲ್ಲಿ ರಾಮನ ಹೆಸರನ್ನು " ಲಾಮನ್" ಎಂದು ಬದಲಾಯಿಸಿರುವುದನ್ನು ಬಿಟ್ಟರೆ ಉಳಿದಂತೆ ಇತರ ಪಾತ್ರಗಳು ರಾಮಾಯಣದ ಕಾವ್ಯದಲ್ಲಿರುವಂತೆಯೇ ಇವೆ. ಮುಸ್ಲಿಮ್ ಸಾಮಾಜಿಕ ರೀತಿ ನೀತಿಗಳಿಗೆ ಹೊಂದುವಂತೆ ಕಥೆಯಲ್ಲಿ ಕೆಲವು ಮಾರ್ಪಾಟುಗಳಾಗಿವೆ.&lt;br /&gt;&lt;br /&gt;&lt;br /&gt;( ಸ್ಫೂರ್ತಿ, ಆಕರ ವಿಕಿಪೀಡಿಯ. ಮುಂದಿನ ಭಾಗದಲ್ಲಿ ಕನ್ನಡದ ರಾಮಾಯಣದ ಪರಿಚಯ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8114402468197807042-3779833733416744978?l=battadatore.blogspot.com' alt='' /&gt;&lt;/div&gt;</content><link rel='replies' type='application/atom+xml' href='http://battadatore.blogspot.com/feeds/3779833733416744978/comments/default' title='Post Comments'/><link rel='replies' type='text/html' href='http://battadatore.blogspot.com/2009/06/blog-post.html#comment-form' title='14 Comments'/><link rel='edit' type='application/atom+xml' href='http://www.blogger.com/feeds/8114402468197807042/posts/default/3779833733416744978'/><link rel='self' type='application/atom+xml' href='http://www.blogger.com/feeds/8114402468197807042/posts/default/3779833733416744978'/><link rel='alternate' type='text/html' href='http://battadatore.blogspot.com/2009/06/blog-post.html' title='ರಾಮಾಯಣ - ಒಂದು ಪ್ರವೇಶ'/><author><name>ಚಂದ್ರಕಾಂತ ಎಸ್</name><uri>http://www.blogger.com/profile/00490264860537389455</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='25' src='http://3.bp.blogspot.com/_4wQW2-q8XsA/SVIw-U299dI/AAAAAAAAADY/T9mtUHgBZhU/S220/blogfile12.jpg'/></author><thr:total>14</thr:total></entry><entry><id>tag:blogger.com,1999:blog-8114402468197807042.post-8503947103827265085</id><published>2009-05-28T06:27:00.001+05:30</published><updated>2009-05-28T06:28:48.056+05:30</updated><title type='text'>ಮೊಟ್ಟೆಗಿಣ್ಣು ತಿಂದು ಸಿಟ್ಟು ಮಾಡಿದವಳೇ !</title><content type='html'>ಗೆಳತಿ ನೆನಪಿದೆಯೇ ನಿನಗೆ? ಮೂರು ದಶಕಗಳ ಹಿಂದೆ ನಾವೆಲ್ಲಾ ಒಟ್ಟಿಗೆ  ಹಾಸ್ಟೆಲ್ ನಲ್ಲಿ ಒಡನಾಡಿದ ದಿನಗಳು.ನನ್ನನ್ನು ನೆನಸಿಕೊಂಡರೆ ನಿನಗೆ ಈಗಲೂ ಸಿಟ್ಟುಬರುತ್ತದೆಯೇ ?ಬಂದರೆ ತಪ್ಪೇನಿಲ್ಲ ಬಿಡು. ಅದೇ ತಾನೆ ಕಾಲೇಜ್ ಮೆಟ್ಟಿಲು ಹತ್ತಲು ಸಿದ್ಧಳಾಗಿದ್ದ ನಾನು ಒಂದು ಪುಟ್ಟ ಹಳ್ಳಿಯಿಂದ  ಬೆಂಗಳೂರಿಗೆ ಬಂದಿಳಿದಾಗ ನೂರಾರು ಕನಸುಗಳು. ನಮ್ಮ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂದು ಅಪ್ಪ ನನ್ನನ್ನು ಹಾಸ್ಟೆಲ್ ಗೆ ಸೇರಿಸಿದರು. ಸಂಭ್ರಮ, ಆತಂಕ ,ಕುತೂಹಲ ಎಲ್ಲ ಭಾವನೆಗಳೊಂದಿಗೆ ಬಂದ ನನಗೆ ಹಾಸ್ಟೆಲ್ ನೋಡಿ ಮನಸ್ಸು ಪಿಚ್ಚೆಂದಿತು. ಕತೆ ಕಾದಂಬರಿಗಳಲ್ಲಿ ಹಾಸ್ಟೆಲ್ ಬಗ್ಗೆ ಓದಿ ಏನೇನೋ ಊಹಿಸಿಕೊಂಡಿದ್ದ ನನಗೆ ಕಟ್ಟಡ ನೋಡಿದ ಕೂಡಲೇ ನಿರಾಸೆಯಾಯಿತು.ಒಂದು ಸಾಮಾನ್ಯ ಮನೆಯೇ ಹಾಸ್ಟೆಲ್ ಆಗಿ ಪರಿವರ್ತನೆಗೊಂಡಿತ್ತು. ಅಲ್ಲಿದ್ದ ಮೂರು  ರೂಮುಗಳ ಜೊತೆಗೆ ಹಾಲ್ ಗೆ ಒಂದು ಸ್ಕ್ರೀನ್ ಅಡ್ಡ ಇಟ್ಟು ನಾಲ್ಕು ರೂಮುಗಳಾಗಿ ವಿಂಗಡಿಸಿದ್ದರು ಕೋಣೆಗಳಲ್ಲಿ ಕಾಟ್ ಗಳಿಲ್ಲ, ವಾರ್ಡ್ ರೋಬ್ ಅಂತೂ ಈ ಕಾಲದ ಕೂಸು. ಉಚಿತ ಹಾಸ್ಟೆಲ್ ಗಳು ಇನ್ನು ಹೇಗಿರಲು ಸಾಧ್ಯ. ಅದಿರಲಿ. ಹೆದರಿದ ಗುಬ್ಬಚ್ಚಿಯಂತೆ  ಕೋಣೆಗೆ ಬಂದ ನನ್ನನ್ನು ನೀವು ಮೂರು ಜನ ಪರಿಚಯಮಾಡಿಕೊಂಡಿರಿ ನಮ್ಮೆಲ್ಲರಿಗಿಂತ ಮಾಡ್ ಹುಡುಗಿಯ ಹಾಗೆ ಕಂಡ ವಿಜಿ, ನನಗಿಂತ ಹಳ್ಳಿಗುಗ್ಗುವಿನ ಹಾಗೆ ಕಾಣಿಸಿದ ನೀನು ( ಕ್ಷಮಿಸು, ಅದೇ ವಾಸ್ತವ )ನನ್ನ ಮನಸ್ಸನ್ನು ಬೇರೆ ಬೇರೆ ಕಾರಣಗಳಿಗಾಗಿ ಸೆಳೆದಿರಿ. ನಿನ್ನ ಅತಿರೇಕದ ವರ್ತನೆಯಿಂದ ಇಡೀ ಹಾಸ್ಟೆಲ್ ನಲ್ಲಿ ಎಲ್ಲರ ಕೀಟಲೆಗೆ ನೀನು ಗುರಿಯಾಗುತ್ತಿದ್ದೆ.ನಿನ್ನ ಮಡಿ ಸಮಾಚಾರ ಎಲ್ಲರಿಗೂ ಸಮಯ ಕಳೆಯಲು ಒಂದು ಹರಟೆಯ ವಸ್ತುವಾಗಿತ್ತುಆ  ವಿಚಾರಗಳು ತೀರ ಕ್ಷುಲ್ಲಕ ಎನಿಸಿ ಯಾರಿಗೇ ಆಗಲಿ ನಗೆ ಉಕ್ಕಿಸುತ್ತಿತ್ತು&lt;br /&gt;&lt;br /&gt;ಉದಾಹರಣೆಗೆ ಯಾರಾದರೂ ಬಾಳೆಹಣ್ಣು ಕಚ್ಚಿ ತಿನ್ನುತ್ತಿದ್ದರೆ ನಿನಗಾಗುತ್ತಿರಲಿಲ್ಲ. ವಿಜಿ ಒಮ್ಮೆ ಚಕ್ಕುಲಿಯನ್ನು ಕುರುಂ ಕುರುಮ್ ಎಂದು ಕಚ್ಚಿ ತಿನ್ನುತ್ತಿದ್ದಾಗಲೂ ನೀನು ಮುಖ ಸಿಂಡರಿಸಿಕೊಂಡು ಮಡಿ ಹಾಳಾಯ್ತೆಂದು ಹಾರಾಡಿದ್ದೆ. ಇದರಿಂದ ಇತರರು ನಿನ್ನನ್ನು ರೇಗಿಸಲೆಂದೇ ನಿನ್ನೆದುರು ಬೇಕೆಂದೇ ಕಚ್ಚಿ ತಿನ್ನುವುದು ಬೆರಳು ಚೀಪುವುದು ಮಾದಿ ನಿನ್ನಷ್ಟು ಕೆರಳಿಸುತ್ತಿದ್ದರು. ಒಮ್ಮೆ ವಿಜಿಗೆ ಒಂದು ಭಯಂಕರ ಐಡಿಯಾ ತಲೆಗೆ ಹೊಳೆಯಿತು.ಹೇಗಾದರೂ ಮಾಡಿ ನಿನ್ನ ಮಡಿಯನ್ನು ಮುರಿಯಬೇಕೆಂಬ ಪ್ಲ್ಯಾನ್ ಹಾಕಿದಳು. ಎಂದೋ ಒಮ್ಮೆ ಮಾತಿನ ನಡುವೆ ನೀನು  ಗಿಣ್ಣು ಹಾಲು ನಿನಗಿಷ್ಟ ಎಂದಿದ್ದು ಅವಳ ನೆನಪಿನಲ್ಲಿತ್ತು.ಕೂಡಲೇ ಅವಳು ನಮ್ಮೆಲ್ಲರನ್ನೂ ಸೇರಿಸಿಕೊಂಡು ಕಾರ್ಯಪ್ರವೃತ್ತಳಾದಳು.ಅವಳು ಹೇಳಿದ ವಿಷಯ ಕೇಳಿ ನನಗೇ ಗಾಬರಿಯಾಯಿತು. ಇನ್ನು ಬಾಯ್ತೆರೆದರೆ ನನ್ನನ್ನೂ ನಿನ್ನ ಲಿಸ್ಟ್ ಗೆ ಸೇರಿಸುತ್ತಾಳೆಂದು ಸುಮ್ಮನಾದೆ.ವಿಜಿಯ ಮನೆಯಲ್ಲಿ ಅವರೆಲ್ಲರಿಗೂ ಮೊಟ್ಟೆ ತಿನ್ನುವ ಅಭ್ಯಾಸವಿತ್ತು.ಆದರೆ ಈ ಹಾಸ್ಟೆಲ್ ನಡೆಸುವವರಾಗಲಿ ಇಲ್ಲಿ ಬರುವ ವಿದ್ಯಾರ್ಥಿಗಳಾಗಲಿ ಪಕ್ಕಾ ಸಸ್ಯಾಹಾರಿಗಳು. ನೀನು ಕಾಲೇಜಿನಿಂದ ಲೇಟಾಗಿ ಬರುವ ಆ ಗುರುವಾರ ,  ಅಡಿಗೆ ಪಾಪಮ್ಮಳಿಗೆ ಪೂಸಿಹೊಡೆದು ಕುಕ್ಕರಿನಲ್ಲಿ ಮೊಟ್ಟೆ , ಹಾಲು, ಸಕ್ಕರೆ ಎಲ್ಲಾ ಬೆರಸಿ ಬೇಯಿಸಿದಳು. ಅದು ಪೂರ್ತಿ ಸಿದ್ಧವಾದಮೇಲೆ ನೋಡಿದರೆ ಗಿಣ್ಣುಹಾಲಿನಲ್ಲಿ ಮಾಡಿದ ಸಿಹಿತಿನಿಸಿನ ಹಾಗೇ ಕಾಣುತ್ತಿತ್ತು.(ನನಗೆ ಈ ವಿಷಯ ತಿಳಿಯದೇ ಇದ್ದಿದ್ದರೆ ನಾನು ಬಾಯಿ ಚಪ್ಪರಿಸಿ ತಿಂದು ಬಿಡುತ್ತಿದ್ದೆನೇನೋ ?) ನೀನು ಬಂದ ಕೂಡಲೇ ಹಾಸ್ಟೆಲ್ ಓನರ್  ಗಿಣ್ಣು ಹಾಲು ಕಳಿಸಿದ್ದರೆಂದೂ ತಿನ್ನಲು ಬಿಸಿಬಿಸಿ ತಿನಿಸು ಸಿದ್ಧವಾಗಿದೆಯೆಂದು ಹೇಳಿ ಅದನ್ನು ತಟ್ಟೆಯಲ್ಲಿ ಹಾಕಿ ಕೊಟ್ಟಾಗ ನೀನು ಅದೆಷ್ಟು ಸಂತಸ ಪಟ್ಟೆ! ಎಲ್ಲವನ್ನೂ ತಿಂದು , ಬಹುಶಃ ಮೊಟ್ಟಮೊದಲ ಬಾರಿಗೆ ಇಷ್ಟು ಸೊಗಸಾದ ಗಿಣ್ಣಿನ ಪದಾರ್ಥ ತಿಂದಿದ್ದೆಂದು ಮೆಚ್ಚುಗೆ ಸೂಚಿಸಿದೆ...ಎಲ್ಲರೂ ಉಕ್ಕಿ ಬರುತ್ತಿದ್ದ ನಗುವನ್ನು ತಡೆ ಹಿಡಿಯಲು ಪ್ರಯತ್ನಿಸುತ್ತಿದ್ದರು. ಕೈ ತೊಳೆಯಲು ಹಿತ್ತಿಲಿಗೆ ಹೋದ ನೀನು  ಡಸ್ಟ್ ಬಿನ್ನಿನಲ್ಲಿದ್ದ ಮೊಟ್ಟೆಯ ಸಿಪ್ಪೆಯನ್ನು ನೋಡಿ " ಅಯ್ಯಯ್ಯೋ ಯಾರ್ರೇ ಅದು ಮೊಟ್ಟೆ ತಿನ್ನುವವರು, ನಾನು ಈಗಲೇ ವಾರ್ಡನ್ನಿಗೆ ಹೇಳ್ತೀನಿ " ಎಂದು ಕಿರುಚುತ್ತಾ ಒಳಬಂದೆ. ನಾನು ಸುಮ್ಮನಿರಬೇಕೋ ಬೇಡವೋ, ಕಿಸಕ್ಕನೆ ನಕ್ಕು " ಯಾಕೆ ಗಿಣ್ಣು ಚೆನ್ನಾಗಿರಲಿಲ್ಲವೇನೇ ? " ಎಂದು ಕೇಳಿದಾಗ ಎಲ್ಲಾ ಅರ್ಥವಾದ ನೀನು " ಸಿಂಕ್ ಬಳಿ ಓಡಿ ವಾಂತಿ ಮಾಡಲು ಯತ್ನಿಸಿದೆ. ಆದರೆ ನಮ್ಮಪ್ಪನಾಣೆ ನಿನ್ನ ಬಾಯಿಂದ ಸ್ವಲ್ಪವೂ ವಾಂತಿ ಬರಲಿಲ್ಲ.!!ವಿಜಿ ಸುಮ್ಮನಿರದೆ " ಅಯ್ಯೋ ಅದು ಜೀರ್ಣವಾಗಿ ಬಿಟ್ಟಿದೆ ಕಣೆ . ಯಾಕೆ ಸುಮ್ಮನೆ ಇಲ್ಲದ ವಾಂತಿ ಬರಿಸಿಕೊಳ್ಳಲು ಪ್ರಯತ್ನಿಸುವೆ" ಎಂದಾಗ ಮುಖಭಂಗಿತಳಾದ ನೀನು ಒಂದು ವಾರ ನಮ್ಮೊಡನೆ ಮಾತು ಬಿಟ್ಟಿದ್ದೆ.&lt;br /&gt;&lt;br /&gt;ಈಗ ನೆನಸಿಕೊಂಡರೆ ನನಗೇ ನಾಚಿಕೆಯಾಗುತ್ತದೆ. ಹಾಸ್ಟೆಲ್ ತೊರೆದ ಮೇಲೆ  ಮತ್ತೆ ನೀನು ಭೇಟಿಯಾಗಲೇ ಇಲ್ಲ.ನಿನಗೆ ಮದುವೆ ಆಯಿತೆಂದೂ ಒಳ್ಳೆ ಕೆಲಸದಲ್ಲಿರುವೆಯೆಂದೂ ವಿಜಿ ಒಮ್ಮೆ ಸಿಕ್ಕಾಗ ಹೇಳಿದ್ದಳು. ಆದರೆ ನೀನು ಕ್ರಿಶ್ಚಿಯನ್ ಹುಡುಗನನ್ನು ಪ್ರೀತಿಸಿ ಮದುವೆ ಮಾಡಿಕೊಂಡೆ ಎಂದು ಕೇಳಿದಾಗ ಮಾತ್ರ ದಿಗ್ಭ್ರಮೆಯಾಯಿತು. ನಿನ್ನನ್ನೊಮ್ಮೆ ಮಾತನಾಡಿಸಬೇಕೆಂದು  ಹಂಬಲವಾಗುತ್ತಿದೆ. ನಿನ್ನ ವಿಳಾಸ ನಮಗಾರಿಗೂ ಗೊತ್ತಿಲ್ಲ. ಈ ಬರಹವನ್ನೇನಾದರೂ ಓದಿದರೆ ಮರೆಯದೆ ಒಮ್ಮೆ ಭೆಟ್ಟಿಮಾಡು ಅಥವಾ ಮಿಸ್ ಕಾಲ್ ಕೊಟ್ಟರೂ ಸರಿಯೇ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8114402468197807042-8503947103827265085?l=battadatore.blogspot.com' alt='' /&gt;&lt;/div&gt;</content><link rel='replies' type='application/atom+xml' href='http://battadatore.blogspot.com/feeds/8503947103827265085/comments/default' title='Post Comments'/><link rel='replies' type='text/html' href='http://battadatore.blogspot.com/2009/05/blog-post.html#comment-form' title='29 Comments'/><link rel='edit' type='application/atom+xml' href='http://www.blogger.com/feeds/8114402468197807042/posts/default/8503947103827265085'/><link rel='self' type='application/atom+xml' href='http://www.blogger.com/feeds/8114402468197807042/posts/default/8503947103827265085'/><link rel='alternate' type='text/html' href='http://battadatore.blogspot.com/2009/05/blog-post.html' title='ಮೊಟ್ಟೆಗಿಣ್ಣು ತಿಂದು ಸಿಟ್ಟು ಮಾಡಿದವಳೇ !'/><author><name>ಚಂದ್ರಕಾಂತ ಎಸ್</name><uri>http://www.blogger.com/profile/00490264860537389455</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='25' src='http://3.bp.blogspot.com/_4wQW2-q8XsA/SVIw-U299dI/AAAAAAAAADY/T9mtUHgBZhU/S220/blogfile12.jpg'/></author><thr:total>29</thr:total></entry><entry><id>tag:blogger.com,1999:blog-8114402468197807042.post-6473694304959496830</id><published>2009-05-10T09:22:00.001+05:30</published><updated>2009-05-10T14:44:58.398+05:30</updated><category scheme='http://www.blogger.com/atom/ns#' term='ಮಗಳ ನೆನಪಿನಲೋಕ'/><category scheme='http://www.blogger.com/atom/ns#' term='ತಾಯಿ'/><category scheme='http://www.blogger.com/atom/ns#' term='ಮಮತೆ'/><title type='text'>ಪ್ರೀತಿಯ ಅಮ್ಮನಿಗೊಂದು ಮಮತೆಯ ಓಲೆ</title><content type='html'>&lt;span style="font-style: italic;"&gt;&lt;span style="font-weight: bold;"&gt;&lt;/span&gt;&lt;/span&gt;&lt;br /&gt;&lt;br /&gt;&lt;br /&gt;&lt;br /&gt;ನಾನು ಪುಟ್ಟಬಾಲಕಿಯಾಗಿಯಾಗಿದ್ದಾಗ ನೀನು ನನಗೆ  ಹೇಗೆ ಕಂಡಿದ್ದೆ ?ನಪಿಸಿಕೊಳ್ಳಲು ಪ್ರಯತ್ನಿಸುವೆ. ಪ್ರತಿದಿನ  ನಮಗೆ ಹಗಲಾಗುತ್ತಿದ್ದುದೇ ನಿನ್ನ ಮಧುರ ಮಂಜುಳ ಗಾನ ಕಿವಿಯ ಮೇಲೆ ಬಿದ್ದಾಗ. ಮುಂಜಾನೆ ನಾಲ್ಕು ಗಂಟೆಗೇ ಎದ್ದು ಸ್ನಾನ ಮಾಡಿ ಸರಳವಾಗಿ ಜಡೆ  ಹೆಣೆದು, ಹೂ ಮುಡಿದು ( ಅದಂತೂ ಕಡ್ಡಾಯ. ಹೂವಿಲ್ಲದ ನಿನ್ನನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ) ಹಾಡಿಕೊಳ್ಳುತ್ತಾ ದೇವರಪೂಜೆ ಮಾಡುವಾಗ ಪಂಚೇಂದ್ರಿಯಗಳಲ್ಲಿ ಮೊದಲು ಎಚ್ಚರಗೊಳ್ಳುತ್ತಿದ್ದುದು ಕಿವಿ ( ಶ್ರವಣೇಂದ್ರಿಯ!) ನಂತರ ದೇವರಮನೆಯಲ್ಲಿ ನೀನು ಹಚ್ಚಿದ ಊದಿನಕಡ್ಡಿಯ ಪರಿಮಳವು ,ಅಡಿಗೆಮನೆಯ ಡಿಕಾಕ್ಷನ್ನಿನ್ನ ಸುವಾಸನೆಯೊಂದಿಗೆ ಬೆರೆತು ಪೂರ್ಣ ಎಚ್ಚರವಾಗುತ್ತಿತ್ತು. ಮನೆ ತುಂಬಾ ಜನರಿದ್ದುದರಿಂದ ಬೆಳಗಾದ ನಂತರ ನಿನ್ನೊಡನೆ ಕಾಲಕಳೆದಿದ್ದೇ ನೆನಪಿಲ್ಲ. ನೀನು ಯಾರಮೇಲೂ ಕೋಪಮಾಡಿಕೊಂಡಿದ್ದು ನೆನಪಿಲ್ಲ. ಆದರೂ ಒಂದು ಪ್ರಸಂಗ ಮಾತ್ರ ಹಸಿರಾಗಿದೆ.&lt;br /&gt;&lt;br /&gt;ನನ್ನ ಹಿರಿಯ ಅಣ್ಣಂದಿರಿಗೆ ಆ ಕಾಲದಲ್ಲಿಯೇ ಟ್ರೇಡ್ ಆಟ ಬಹಳ ಇಷ್ಟ.ರಜೆಯಲ್ಲಿ ಮಾವನ ಮನೆಗೆ ಹೋಗಿದ್ದಾಗ ಅವರ ಮಕ್ಕಳು ಆಡುತ್ತಿದ್ದ ಆಟ ನೋಡಿ ಅಣ್ಣಂದಿರು ಮನೆಯಲ್ಲಿರುವ ಪೇಪರ್ ಮತ್ತು ದಪ್ಪ ಕಾರ್ಡ್ಗಳಿಂದ ಅದೆಷ್ಟು ಚೆನ್ನಾಗಿ ಇಡೀ ಸೆಟ್ ಸಿದ್ಧಪಡಿಸಿದ್ದರು.ಅಪ್ಪ ಆಫೀಸಿಗೆ ಹೋದ ಕೂಡಲೇ  ಆಟಕ್ಕೆ ಕುಳಿತರೆ ನೀನೆಷ್ಟು ಕರೆದರೂ ಜಪ್ಪಯ್ಯ ಎನ್ನುತ್ತಿರಲಿಲ್ಲ. ಆಗಲೂ ನೀನು ಜೋರಾಗಿ ಬೈದದ್ದನ್ನು ನಾ ಕಾಣೆ! ಆದರೂ ಒಂದು ದಿನ ನಿನಗೇಕೆ ಸಹನೆ ಮೀರಿತ್ತೋ ತಿಳಿಯೆ , ಅವರು ಆಡುತ್ತಿರುವಲ್ಲಿಗೆ ಹೋಗಿ ಆಟದ ಎಲ್ಲಾ ಸಾಮಗ್ರಿಗಳನ್ನು ಕಿತ್ತುಕೊಂಡು ಹೋಗಿ ಉರಿಯುತ್ತಿರುವ ಬಚ್ಚಲೊಲೆಗೆ ಹಾಕಿ ಬಿಟ್ಟೆಯಲ್ಲ! ಆ ಒಂದು ಘಟನೆ ಬಿಟ್ಟರೆ ನೀನು ಕೋಪಿಸಿಕೊಂಡದ್ದನ್ನೇ ನಾ ಕಾಣೆ. ಸಾಮಾನ್ಯವಾಗಿ ಮಕ್ಕಳಲ್ಲಿ ಯಾರಾದರೂ ಓದದೆ ಕಾಲಕಳೆಯುತ್ತಿದ್ದರೆ ನೀನು ನೇರವಾಗಿ ಬೈಯದೆ ನಿನ್ನ ಪಾಡಿಗೆ ಅಡುಗೆ ಮಾಡುತ್ತಾ " ಕಾಲ ಕಳೆದೆನಲ್ಲಾ ಜ್ಞಾನ ಬರಲಿಲ್ಲಾ ಕಾಲನವರು ಬಂದು ಕೇಳಿದರೇನು ಹೇಳಲಿ ಸೊಲ್ಲಾ..." ಎಂದು ದಾಸರ ಪದ ಹಾಡುತ್ತಿದ್ದೆ. ಪ್ರತಿಯೊಂದಕ್ಕೂ ಹಾಡಿನ ಮೂಲಕವೇ ಉತ್ತರಿಸುತ್ತಿದ್ದ ನಿನ್ನಲ್ಲಿ ಹಾಡಿನ ಭಂಡಾರವೇ ಇತ್ತು.ಈಗಲೂ ಇದೆ.&lt;br /&gt;&lt;br /&gt;ಶಾಲೆಗೆ ಹೋಗುವಾಗ ಇತರ ಮಕ್ಕಳಂತೆ ನಮಗೂ ಎರಡು ಡಬ್ಬಿಗಳಿರುವ ಕ್ಯಾರಿಯರ್ ಬೇಕೆಂದು ಹಠ ಮಾಡಿದಾಗ ನೀನು ಒಂದೇ ಉದ್ದ ಕ್ಯಾರಿಯರ್ನಲ್ಲಿ ಕೆಳಗೆ ಮೊಸರನ್ನ ಹಾಕಿ. ಮೇಲೆ ಸಾರನ್ನ ಹಾಕಿಕೊಡುತ್ತಿದ್ದೆ. ಗೆಳತಿಯರಿಗೆಲ್ಲಾ ಇದೊಂದು ಅದ್ಭುತ!. ಸಾರನ್ನ ಮುಗಿದು ಮೊಸರನ್ನ ಪ್ರಾರಂಭವಾಗುವುದನ್ನು ಕುತೂಹಲದಿಂದ  ಎದುರು ನೋಡುತ್ತಿದ್ದರು.ಅವೆರಡೂ ಯಾವತ್ತೂ ಕಲಸುಮೇಲೋಗರವಾಗಿರಲಿಲ್ಲ.&lt;br /&gt;&lt;br /&gt;ಬಾಲ್ಯದಲ್ಲಿ ನೀನಿಲ್ಲದಿದ್ದರೆ ಆಗುವುದೇ ಇಲ್ಲ ಎಂದು ನಾನು ಹಠ ಮಾಡಿದ ಸಂದರ್ಭ ಯಾವುದಾದರೂ ಇದೆಯೇ ? ಎಂದು ಯೋಚಿಸಿದರೆ ಉಹೂ ಇಲ್ಲವೇ ಇಲ್ಲ. ಮನೆ ತುಂಬಾ ಜನರಿದ್ದುದರಿಂದ, ನಮ್ಮ ಅಗತ್ಯಗಳನ್ನು ಯಾರಾದರೊಬ್ಬರು ಪೂರೈಸುತ್ತಿದ್ದುದರಿಂದ , ಎರಡು ಮೂರು ವರ್ಷ ವ್ಯತ್ಯಾಸದ ಅಕ್ಕ, ಅಣ್ಣ ತಂಗಿ ಇದ್ದುದರಿಂದ ಹೀಗಾಗಿರಬಹುದೇ? ನೀನು ಬೇಕೇ ಬೇಕು, ನಿನ್ನೊಡನೆ ಹೆಚ್ಚಿಗೆ ಮಾತನಾಡಿ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಬೇಕೆನಿಸಿದ್ದು ನನ್ನ ಮದುವೆಯ ನಂತರವೇ.ನಾನು  ಬೇರೆ ಊರಿನಲ್ಲಿದ್ದುದರಿಂದ ಪುಟ್ಟ ಮಗನೊಂದಿಗೆ ವರ್ಷಕ್ಕೊಮ್ಮೆ ತವರಿಗೆ ಬಂದಾಗ ನೀನು ಅಪ್ಪ ನಮ್ಮನ್ನು ನೋಡಿಕೊಳ್ಳುತ್ತಿದ್ದ ರೀತಿ ಈಗಲೂ ಕಣ್ತುಂಬುವಂತೆ ಮಾಡುತ್ತದೆ. ಮದುವೆಯಾದ ಹೊಸತರಲ್ಲಿ ತವರುಮನೆಯ ಗೀಳು ಅಪಾರವಿತ್ತು. ಪುಟ್ಟ ಮಕ್ಕಳಿರುವ ಹೆಣ್ಣುಮಕ್ಕಳಿಗೆ ಅಮ್ಮನ ಅಗತ್ಯ, ಅನಿವಾರ್ಯತೆ ಎಷ್ಟೆಂಬುದು ಕ್ರಮೇಣ ಅರ್ಥವಾಗುತ್ತಾ ಹೋಯಿತು. ದಿನ ಕಳೆದಂತೆ ನಮ್ಮ ಮಕ್ಕಳು ದೊಡ್ಡವರಾದಂತೆ ಅವರ ಓದು. ಮನೆಯ ಕೆಲಸ , ನೌಕರಿಯ ಜವಾಬ್ದಾರಿ ಇವೆಲ್ಲದರ ನಡುವೆ ನಿನ್ನನ್ನು ಭೇಟಿಯಾಗುವುದೇ ಅಪರೂಪವಾಗುತ್ತಾ ಬಂತು. ಎಂತಹ ವಿಪರ್ಯಾಸ! ಮೊದಲು ನೂರಾರು ಮೈಲು ದೂರವಿರುವ ತವರು ಮನೆಗೆ ಓಡಿ ಬರುತ್ತಿದ್ದ ನಾನು, ಈಗ ಇಬ್ಬರೂ ಒಂದೇ ಊರಲ್ಲಿದ್ದರೂ ಭೇಟಿಯಾಗುವುದು ಬೆರಳೆಣಿಕೆಯಷ್ಟು ಬಾರಿಯಾಗಿತ್ತು. ಆದರೆ ಕಾಲಚಕ್ರ ಹಾಗೇ ನಿಲ್ಲಲಿಲ್ಲ ನೋಡು.ನನ್ನ ಮಗ ಬೆಳೆದು ತನ್ನ ಕಾಲ ಮೇಲೆ ನಿಂತು ಸದಾಕಾಲ ಅಮೆರಿಕ, ಆಸ್ಟ್ರೇಲಿಯಾ ಎಂದು ಸುತ್ತುತ್ತಾ ಇರುವಾಗ  , ಸಹಜವಾಗಿಯೇ ನನ್ನ ಅಗತ್ಯ ಅವನಿಗೆ ಕಡಿಮೆಯಾಯಿತು.ಆಗ ಶುರುವಾಯಿತು ನೋಡು, ಹೆಣ್ಣುಮಕ್ಕಳಿಲ್ಲದಿದ್ದ ನನಗೆ  ನನ್ನ ಮನದ ಭಾವನೆಗಳನ್ನು ನಿನ್ನೊಡನೆ ಹಂಚಿಕೊಳ್ಳಬೇಕೆಂಬ ತುಡಿತ..ಸದಾ ಹಸನ್ಮುಖಿಯಾಗಿರುತ್ತಾ ನಮ್ಮ ಎಲ್ಲಾ ಮಾತುಗಳನ್ನೂ ಬೇಸರವಿಲ್ಲದೆ ಕೇಳಿಸಿಕೊಳ್ಳುತ್ತಾ ನೀನೂ ಅಪ್ಪಾ ನನ್ನ ದೈನಂದಿನ ಬೇಸರಗಳನ್ನು ಹೋಗಲಾಡಿಸುತ್ತಾ ಹುರಿದುಂಬಿಸುವ ಮಾತನ್ನಾಡುತ್ತಿದ್ದರೆ ಅದೆಷ್ಟು ನೆಮ್ಮದಿ ಮನಸ್ಸಿಗೆ. ಆದರೆ ವಿಧಿ ಎಂಬುದೊಂದಿದೆಯಲ್ಲಾ. ಸದಾಕಾಲ ಚಟುವಟಿಕೆಯಿಂದಿರುತ್ತಿದ್ದ ನಿನ್ನ ಬಲಗೈ ಬಲಗಾಲು ನಿಷ್ಕ್ರಿಯವಾದಾಗ ನೀನು ಬದುಕನ್ನು ಎದುರಿಸಿದ ರೀತಿ ಸ್ತುತ್ಯಾರ್ಹ. ನಿನಗಿಂತ ನಿನ್ನ ಸ್ಥಿತಿಗೆ ಹೆಚ್ಚಾಗಿ ನೋವನುಭವಿಸಿದವರು ಅಪ್ಪ.ವಯಸ್ಸಿನ ಪರಿವೆ ಇಲ್ಲದೆ ಸದಾಕಾಲ ಚಿಟುವಟಿಕೆಯಿಂದಿದ್ದ ನಿನಗೆ ಇಳಿವಯಸ್ಸಿನಲ್ಲಿ  ಹೀಗಾದದ್ದು ಅವರ ನೋವಿಗೆ ಮೂಲ ಕಾರಣ!. ನಿಮ್ಮಿಬ್ಬರಿಗೆ ದೈಹಿಕವಾಗಿ ವಯಸ್ಸಾಗಿದ್ದರೂ ಮಾನಸಿಕವಾಗಿ ಇನ್ನೂ ಯುವಕರೇ ಆಗಿದ್ದಿರಿ. ಪ್ರತಿಯೊಂದರಲ್ಲೂ ಅದೇ ಮೊದಲಿನ ಉತ್ಸಾಹ, ಕುತೂಹಲ.ಬದಲಾದ ಕಾಲಕ್ಕನುಗುಣವಾಗಿ ಎಲ್ಲವನ್ನೂ ಬೆರಗುಗಣ್ಣುಗಳಿಂದ ನೋಡುತ್ತಾ- ಆದರೆ ಅನೇಕ ವೃದ್ಧರಂತೆ ಗೊಣಗದೆ, ಹೊಸ ಹೊಸ ವಿಷಯಗಳನ್ನು ಅರಿಯುತ್ತಾ ಪತ್ರಿಕೆಗಳನ್ನು ಓದುತ್ತಾ ನಮ್ಮೊಡನೆ ಚರ್ಚೆಯಲ್ಲಿ ಭಾಗಿಯಾಗುತ್ತಿದ್ದ ನಿಮ್ಮ ಸಾನ್ನಿಧ್ಯ ಯಾವತ್ತೂ ಆಹ್ಲಾದಕರವೇ. ಯಾವಾಗ ನಿನ್ನ ಆರೋಗ್ಯ ತಪ್ಪಿತೋ ಆಗ ಅಪ್ಪ ಮಾನಸಿಕವಾಗಿ ಕುಸಿದುಹೋಗಿ ಮೂರು  ವರ್ಷಗಳ ಹಿಂದೆ ನಮ್ಮನ್ನು ಶಾಶ್ವತವಾಗಿ ಅಗಲಿದಾಗ ನಿನ್ನ ಸ್ಥಿತಿ! ಆದರೂ ನೀನು ನಿನ್ನಿಂದ ಯಾರಿಗೂ ತೊಂದರೆಯಾಗಬಾರದೆಂದು ನಿನ್ನ ದುಃಖವನ್ನು  ಯಾರಬಳಿಯೂ ಹೇಳಿಕೊಳ್ಳುತ್ತಿರಲಿಲ್ಲ.ಈ ಸಂದರ್ಭದಲ್ಲಿ ನೀನು ಹೆಚ್ಚಾಗಿ ಬಯಸುತ್ತಿದ್ದುದು ಯಾರಾದರೂ  ನಿನ್ನೊಡನೆ ಕೊಂಚಕಾಲ ಪ್ರೀತಿಯಿಂದ  ಮಾತನಾಡಲಿ ಎಂದು. ಆದರೆ ಇಂದಿನ ವೇಗದ ಯುಗದಲ್ಲಿ ಯಾರಿಗೆ ತಾನೇ ಸಮಯವಿರುತ್ತದೆ ಹೇಳು ? ಅಣ್ಣ ಸಾಧ್ಯವಾದಷ್ಟು ಹೊತ್ತು ನಿನ್ನೊಡನೆ ಮಾತನಾಡುತ್ತಾ ಕಾಲ ಕಳೆದರೂ ನಿನಗೆ  ಹೆಣ್ಣುಮಕ್ಕಳೊಂದಿಗೆ ಹೆಚ್ಚು ಕಾಲಕಳೆಯಲು ಇಷ್ಟವಾಗುತ್ತಿತ್ತು. ಒಂದು ಕಾಲದಲ್ಲಿ ನಾನು ನಿನ್ನ ಜೊತೆಗಾಗಿ ಹಂಬಲಿಸಿದ ಹಾಗೆ ನೀನು ನನಗಾಗಿ ಕಾಯುತ್ತಿದ್ದೆ. ನನಗೇ ಆಶ್ಚರ್ಯವಾಗುವಂತೆ ನಾನು ನಿನ್ನಲ್ಲಿ ಒಬ್ಬ ಮಗಳನ್ನು ಕಾಣುತ್ತಿದ್ದೆ. ಅದು ನನಗೆ ಸ್ಪಷ್ಟವಾದದ್ದು " ನಿನ್ನೊಡನೆ ಮಾತನಾಡುತ್ತಿದ್ದರೆ ನನ್ನ ಅಮ್ಮನೊಡನೆ ಮಾತನಾಡಿದಂತಾಗುತ್ತದೆ" ಎಂದು ನೀನು ಹೇಳಿದಾಗ.. ಹೆಣ್ಣು ಮಕ್ಕಳಿಲ್ಲದ ನಾನು ನಿನ್ನಲ್ಲಿ ಮಗಳನ್ನು ಕಾಣುತ್ತಿದ್ದೆ. ಪ್ರತಿ ಹೆಣ್ಣಿಗೂ ಒಂದಾದರೂ ಹೆಣ್ಣುಮಗು ಇರಲೇ ಬೇಕಾದ ಅವಶ್ಯಕತೆ ಆಗ ನನಗೆ ಅರ್ಥವಾಯಿತು. ನೀನು ಆ ಕೊರತೆ ನೀಗಿಸಿರುವೆ. ಕೈ ಕಾಲು,ಕೈ ಸ್ವಾಧೀನದಲ್ಲಿಲ್ಲದಿದ್ದರೂ ನಿನ್ನ ಅನೇಕ ಕೆಲಸಗಳನ್ನು ಒಂದೇ ಕೈಯಲ್ಲಿ ಮಾಡಿಕೊಳ್ಳುವ ನಿನ್ನ ಆತ್ಮಾಭಿಮಾನ ನನಗೆ ಸ್ಫೂರ್ತಿಯ ಸೆಲೆ. ಅಂತೂ ನೀನು ನನಗೆ ಮಾತೃ ವಾತ್ಸಲ್ಯವನ್ನೂ ಮತ್ತು ಮಗಳ ಮಮತೆಯನ್ನೂ ಏಕಕಾಲದಲ್ಲಿಯೇ ಕೊಟ್ಟಿರುವೆ. ಈ ಮದರ್ಸ್ ಡೇ ಸಂದರ್ಭದಲ್ಲಿ ನನ್ನದೊಂದು ಪ್ರೀತಿಯ ನಮನ.&lt;br /&gt;&lt;br /&gt;ನಿನ್ನ ಮಗಳು&lt;br /&gt;&lt;br /&gt;&lt;span style="font-weight: bold; font-style: italic; color: rgb(0, 0, 0);font-size:85%;" &gt;  &lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8114402468197807042-6473694304959496830?l=battadatore.blogspot.com' alt='' /&gt;&lt;/div&gt;</content><link rel='replies' type='application/atom+xml' href='http://battadatore.blogspot.com/feeds/6473694304959496830/comments/default' title='Post Comments'/><link rel='replies' type='text/html' href='http://battadatore.blogspot.com/2008/05/amma.html#comment-form' title='13 Comments'/><link rel='edit' type='application/atom+xml' href='http://www.blogger.com/feeds/8114402468197807042/posts/default/6473694304959496830'/><link rel='self' type='application/atom+xml' href='http://www.blogger.com/feeds/8114402468197807042/posts/default/6473694304959496830'/><link rel='alternate' type='text/html' href='http://battadatore.blogspot.com/2008/05/amma.html' title='ಪ್ರೀತಿಯ ಅಮ್ಮನಿಗೊಂದು ಮಮತೆಯ ಓಲೆ'/><author><name>ಚಂದ್ರಕಾಂತ ಎಸ್</name><uri>http://www.blogger.com/profile/00490264860537389455</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='25' src='http://3.bp.blogspot.com/_4wQW2-q8XsA/SVIw-U299dI/AAAAAAAAADY/T9mtUHgBZhU/S220/blogfile12.jpg'/></author><thr:total>13</thr:total></entry><entry><id>tag:blogger.com,1999:blog-8114402468197807042.post-4348078894315863686</id><published>2009-04-08T19:50:00.000+05:30</published><updated>2009-04-08T20:24:47.164+05:30</updated><title type='text'>ಸಹಸ್ರಶಿರರಾವಣನ ಸಂಹಾರ</title><content type='html'>&lt;p&gt;ರಾವಣನನ್ನು ಕೊಂದು ಸೀತಾ ಲಕ್ಷ್ಮಣರೊಡನೆ ಅಯೋಧ್ಯೆಗೆ ಹಿಂತಿರುಗಿದ ರಾಮನನ್ನು ಪ್ರತಿಯೊಬ್ಬರೂ - ಮುನಿಗಳು, ಸಾಮಂತ ರಾಜರೂ, ಪ್ರಜೆಗಳೂ ಬಾಯಿತುಂಬಾ ಹೊಗಳಲಾರಂಬಿಸಿದರು. ಒಮ್ಮೆ ಕೆಲವು ಮುನಿಗಳು ತಮ್ಮ ಶಿಷ್ಯರೊಡನೆ ರಾಮನ  ಆಸ್ಠಾನಕ್ಕೆ ಬಂದು ಅವನನ್ನು ಹೊಗಳುತ್ತಾ&lt;/p&gt;&lt;p&gt; &lt;span style="font-weight: bold; font-style: italic; color: rgb(0, 153, 0);"&gt;" ರಾಮ ಅತ್ಯಂತ ಪರಾಕ್ರಮಶಾಲಿಯಾದ ದಶಕಂಠ ರಾವಣನನ್ನು  ಕೊಂದ ನಿನ್ನಂತಹ  ವೀರರೂ ಶೂರರೂ ಈ ಲೋಕದಲ್ಲಿಯೇ ಇಲ್ಲ. ನಿನ್ನಿಂದಲೇ ನರರೂ ಸುರರೂ  ನಿಶ್ಚಿಂತರಾಗಿರುವುದು" &lt;br /&gt;&lt;/span&gt;&lt;/p&gt;&lt;p&gt;&lt;span style="font-weight: bold; font-style: italic; color: rgb(0, 153, 0);"&gt;&lt;/span&gt;&lt;span style="font-weight: bold; color: rgb(51, 51, 51);"&gt;&lt;/span&gt;&lt;span style="color: rgb(51, 51, 51);"&gt;ಎನ್ನುತ್ತಿದ್ದಂತೆಯೇ ,ಸೀತೆ&lt;/span&gt;&lt;/p&gt;&lt;p style="font-weight: bold; font-style: italic; color: rgb(0, 153, 0);"&gt;" ಮುನಿಗಳೇ ನೀವು ಹೊಗಳಿದ್ದರಲ್ಲಿ ಅತಿಶಯೋಕ್ತಿ ಇಲ್ಲ. ಆದರೆ ನೀವೆಲ್ಲ ತಿಳಿದಂತೆ ಅತ್ಯಂತ ಪರಾಕ್ರಮಶಾಲಿಯಾದ  ರಾವಣನಿಗಿಂತಲೂ  ಶೂರನಾದ ಮತ್ತೊಬ್ಬ ರಾವಣನಿದ್ದಾನೆ. ಅವನೇ  ಸಹಸ್ರಶಿರ ರಾವಣ. ಹೆಸರಿಗೆ ತಕ್ಕಂತೆ ಅವನಿಗೆ ಸಹಸ್ರ ತಲೆಗಳಿವೆ. "&lt;br /&gt;&lt;/p&gt;&lt;p style="font-weight: bold; color: rgb(0, 153, 0);"&gt;&lt;span style="font-weight: normal; color: rgb(51, 51, 51);"&gt;ಎನ್ನುತ್ತಿದ್ದಂತೆಯೇ ಎಲ್ಲರೂ ಸೀತೆಯನ್ನು ಸ್ವಲ್ಪ ಅನುಮಾನದ ದೃಷ್ಟಿಯಿಂದ ನೋಡಲಾರಂಬಿಸಿದರು.&lt;/span&gt;&lt;/p&gt;    &lt;p&gt;&lt;span style="color: rgb(51, 51, 51);"&gt;ಕೂಡಲೆ ಸೀತೆ&lt;/span&gt;&lt;span style="font-weight: bold; font-style: italic; color: rgb(0, 153, 0);"&gt; " ನಾನು ಸುಳ್ಳು ಹೇಳುತ್ತಿರುವೆನೆಂದು ಭಾವಿಸದಿರಿ. ನಾನು  ಹೇಳುತ್ತಿರುವುದೆಲ್ಲಾ ಸತ್ಯ. ನನ್ನ ಬಾಲ್ಯದಲ್ಲಿ ಮುನಿಗಳಿಂದ ದಶಕಂಠ ರಾವಣ ಹಾಗೂ ಸಹಸ್ರಶಿರರಾವಣರ ಬಗ್ಗೆ ಕೇಳಿದ್ದೆ. ಆಗ ಅದನ್ನು ನಾನು ನಂಬಿರಲಿಲ್ಲ. ಆದರೆ ದಶಕಂಠ ರಾವಣನನ್ನು ನೋಡಿದ ಮೇಲೆ ಇನ್ನೊಬ್ಬ ರಾವಣ ಇರಬಹುದೆಂಬ ನಂಬಿಕೆ ಮೂಡಿದೆ.ಜೊತೆಗೆ ಆ ಮುನಿ ತಾನು ಸ್ವತಃ ಅವನನ್ನು  ನೋಡಿದ್ದಾಗಿ ಹೇಳಿದ್ದ. ಪುಷ್ಕರ ಎಂಬ ದ್ವೀಪದಲ್ಲಿರುವ ಅವನು  ದೇವಾನುದೇವತೆಗಳನ್ನು ತನ್ನ ದಾಸರನ್ನಾಗಿಸಿಕೊಂಡಿದ್ದಾನೆ. ಅವನ ಶೌರ್ಯ ಅಪರಿಮಿತವಾದದ್ದು. ದಶಕಂಠ ರಾವಣನನ್ನು ಕೊಲ್ಲಲೇ ನನ್ನ ಅರಸ ರಾಮ ಎಷ್ಟೊಂದು ಕಷ್ಟ ಎದುರಿಸಬೇಕಾಯಿತು. ಇನ್ನು ಈ ರಾವಣನನ್ನು ಸಂಹರಿಸಲು ಹೇಗೆ ತಾನೇ ಸಾಧ್ಯ?&lt;/span&gt;&lt;span style="font-weight: bold; color: rgb(51, 51, 51);"&gt;&lt;/span&gt;&lt;span style="color: rgb(51, 51, 51);"&gt;: ಎಂದಳು.&lt;/span&gt;&lt;/p&gt;    &lt;p&gt;ಅವಳ ಮಾತುಗಳನ್ನು ಕೇಳಿ ಮುನಿಗಳು ನಿಜವಿರಬಹುದೆಂದು ಭಾವಿಸಿದರು. ಆದರೆ ರಾಮನಿಗೆ ಮಾತ್ರ ಅಪಾರ ಕೋಪ ಬಂದಿತು. ಕಣ್ಣುಗಳು ಕೆಂಡದುಂಡೆಗಳಾದುವು. ರೋಷದಿಂದ ಎದ್ದು ನಿಂತು&lt;/p&gt;&lt;p&gt; &lt;span style="font-weight: bold; font-style: italic; color: rgb(255, 0, 0);"&gt;" ಇಂತಹ ಭೀಕರ ರಾಕ್ಷಸನನ್ನು ಕೊಲ್ಲಲು ಸಾಧ್ಯವಿದೆಯೋ ಇಲ್ಲವೋ ತೋರಿಸುವೆನು. ಯುಧ್ಧಕ್ಕೆ ಸಿದ್ದರಾಗಿ" &lt;/span&gt;ಎಂದನು.&lt;/p&gt;&lt;p&gt;ಅತಿ ಶೀಘ್ರದಲ್ಲಿಯೇ ರಾಮನು ಸೀತೆ ಹಾಗೂ ತನ್ನ ಸೈನ್ಯದೊಡನೆ ಪುಷ್ಕರ ದ್ವೀಪಕ್ಕೆ ಹೊರಟನು.ಆ ದ್ವೀಪದ ಬಳಿ ಬಂದು ಇವರು ಸಿಂಹನಾದ ಮಾಡಿದಾಗ ಅಲ್ಲಿಯ ರಾಜ ಸಹಸ್ರಶಿರರಾವಣನಿಗೆ ಈ ನರವಾನರರು ಯಾರೆಂಬುದೇ ಅರ್ಥವಾಗಲಿಲ್ಲ. ತಮ್ಮ ದ್ವೀಪವನ್ನು ನೋಡಲು ಬಂದವರಿರಬಹುದೆಂದುಕೊಂಡ. ಹಾಗೆ ಬಂದವರಾದರೆ ಇಷ್ಟೊಂದು ದೊಡ್ದ ಸೈನ್ಯವೇಕೆ? ಎಂದು ಚಿಂತಿಸುತ್ತಿರುವಾಗಲೇ ಅಶರೀರವಾಣಿಯೊಂದು,&lt;/p&gt;&lt;p&gt; &lt;span style="font-weight: bold; font-style: italic; color: rgb(153, 51, 153);"&gt;"ಬಂದವರು ನಿನ್ನ ವೈಭವ ನೋಡಲು ಬಂದಿಲ್ಲ. ದಶಕಂಠ ರಾವಣನನ್ನು ಕೊಂದ ಸಾಕ್ಷಾತ್ ಶ್ರೀರಾಮನೇ ನಿನ್ನ ಸಂಹಾರಕ್ಕಾಗಿ ಬಾರಿ ಸೈನ್ಯದೊಡನೆ ಬಂದಿದ್ದಾನೆ. ಮರೆಯ ಬೇಡ  ಅವನು ದೈವಾಂಶಸಂಭೂತನು "&lt;br /&gt;&lt;/span&gt;&lt;/p&gt;&lt;p&gt;&lt;span style="font-weight: bold; font-style: italic; color: rgb(153, 51, 153);"&gt;&lt;/span&gt;ಎಂದು ಹೇಳಿತು.ಈ ಮಾತುಗಳನ್ನು ಕೇಳಿ ಆ ರಾವಣನ ಕೋಪ ಮುಗಿಲಿಗೇರಿತು.ಕೂಡಲೇ ತನ್ನ ಸೈನ್ಯಕ್ಕೆ  ಯುದ್ಧ ಮಾಡಲು ಆಜ್ಞೆ ಮಾಡಿದನು. ವಿಭೀಷನ ಕಡೆಯ ರಾಕ್ಷಸರೂ, ನರರೂ ಉತ್ಸಾಹದಿಂದ ಯುದ್ಧ ಪ್ರಾರಂಬಿಸಿದರು.ಅತ್ತ ಆ ರಾವಣನ ಸೈನ್ಯವೂ ಅಷ್ಟೇ ಉತ್ಸಾಹದಿಂದ ಯುದ್ಧ ಮುಂದುವರಿಸಿತು. ಎರಡೂ ಕಡೆಯ ಸೈನಿಕರೂ ಪ್ರಾಣದ ಹಂಗು ತೊರೆದು ಹೋರಾಡತೊಡಗಿದರು. ಸರಿಸಮಾನ ಹೋರಾಟದಿಂದ ಜಯಲಕ್ಷ್ಮಿ ಯಾರಕಡೆಗೂ ಬಾಗಲಿಲ್ಲ. ಆದರೆ ರಕ್ತಪಾತ ಮಾತ್ರ ಮಿತಿಮೀರಿತು. ಯಾವುದೇ ಏರಿಳಿತವಿಲ್ಲದ ಈ ಯುದ್ಧ ಎರಡೂ ಕಡೆಯ ಸೈನಿಕರಲ್ಲಿ ಮತ್ತಷ್ಟು ರೋಷ ಕೆರಳಿಸಿತು. ಕ್ರಮೇಣ ರಾವಣನ ಸೈನ್ಯ ಮೇಲುಗೈ ಸಾಧಿಸುತ್ತಾ ರಾಮನ ಕಡೆಯ ನರಸೇನೆ ಹಾಗೂ ರಾಕ್ಷಸ ಸೇನೆಯನ್ನು ಸೋಲಿಸಿತು. ರಾವಣನ ಸೈನಿಕರು ವಿಜಯೋತ್ಸಾಹದಿಂದ ಉನ್ಮತ್ತರಾಗಿ  ಶತ್ರುಪಾಳಯದತ್ತ ಮತ್ತಷ್ಟು ಮುನ್ನುಗ್ಗಿದರು. ಈ ಹಂತದಲ್ಲಿ ಅವರಿಗೆ ಆಶ್ಚರ್ಯವಾಗುವ ರೀತಿಯಲ್ಲಿ  &lt;span style="font-weight: bold; font-style: italic;"&gt;ಕಪಿಸೈನ್ಯ&lt;/span&gt; ಎದುರಾಯಿತು. ನಿರೀಕ್ಷೆಗೂ ಮೀರಿ ಆ ಸೈನ್ಯ ರಾಕ್ಷಸರ ಮೇಲೆ ದಾಳಿ ಮಾಡಿತು.  ದೀರ್ಘ ಹೋರಾಟದನಂತರ ಸಹಸ್ರಶಿರರಾವಣನ ಸೈನ್ಯ ಸಂಪೂರ್ಣ ನೆಲಕಚ್ಚಿತು.  ಈ ಅನಿರೀಕ್ಷಿತ ವಿಜಯವನ್ನು ನೋಡಿ ಆಕಾಶದಲ್ಲಿ ನೆರೆದಿದ್ದ ದೇವತೆಗಳು  ಸಂತೋಷದಿಂದ ಮೂಕವಿಸ್ಮಿತರಾದರು.&lt;/p&gt;    &lt;p&gt;ಯಃಕಶ್ಚಿತ್ ಕೋತಿಗಳಿಂದ ತಮ್ಮ ಸೈನ್ಯ ಸೋತ ವಿಷಯ ಕೇಳಿ ರಾವಣನು ಕೆರಳಿ ಕೆಂಡವಾಗಿ ತಾನೇ ರಣಭೂಮಿಗೆ ಬಂದನು. ಅಲ್ಲಿಯ ದೃಶ್ಯ ನೋಡಿ ಅವನ ಕೋಪ ತಣ್ಣಗಾಯಿತು. ನರ ವಾನರರ ಬಗ್ಗೆ ಕೇವಲ ಕಿವಿಯಿಂದ ಕೇಳಿದ್ದ ಅವನು ಈಗ ಸ್ವತಃ ಕಣ್ಣಾರೆ ಕಪಿಗಳನ್ನು , ನರ ಸೈನ್ಯವನ್ನುನೋಡಿ&lt;br /&gt;&lt;/p&gt;&lt;p&gt;&lt;span style="font-weight: bold; font-style: italic; color: rgb(0, 153, 0);"&gt;" ಇವರು ನನಗೆ ಸರಿಸಮಾನರೆ? ಇವರ ಮೇಲೆ ಕೈಮಾಡಿದರೆ ಜನರು ನನ್ನನ್ನು ನೋಡಿ ಜರೆಯುತ್ತಾರೆ. ಸುಮ್ಮನಿದ್ದು ಹಿಂತಿರುಗಿದರೆ ಆಡಿಕೊಂಡು ನಗುತ್ತಾರೆ. ಏನು ಮಾಡಲಿ ? "&lt;/span&gt; &lt;/p&gt;&lt;p&gt;ಎಂದು ಚಿಂತಿಸಿ ಒಂದು ನಿರ್ಧಾರಕ್ಕೆ ಬಂದನು.ಇವರನ್ನು ಯುದ್ಧದಲ್ಲಿ ಗಾಸಿಗೊಳಿಸಿದರೆ ನನಗೇನು ಲಾಭ ? ಇವರಿಗೆ ಸರಿಯಾದ ಶಾಸ್ತಿ ಮಾಡುವೆನು , ಎಂದು ರಾಮನ ಸೈನ್ಯದ ಮೇಲೆ ವಾಯುವ್ಯಾಸ್ಟ್ರ ಪ್ರಯೋಗಿಸಿದನು. ನೋಡನೋಡುತ್ತಿದ್ದಂತೆಯೇ ಆ ಅಸ್ತ್ರದ ಪ್ರಭಾವದಿಂದ ರಾಮನ ಸೈನ್ಯವಿಡೀ ಬಿರುಗಾಳಿಗೆ ಸಿಕ್ಕ ತರಗೆಲೆಗಳಂತೆ ಹಾರಿ ಸಮುದ್ರದಾಚೆ ತಮ್ಮ ಸ್ವಸ್ಥಾನದಲ್ಲಿ ಬಿದ್ದಿತು. ಅವರೆಲ್ಲರೂ ಯುದ್ಧದಲ್ಲಿ ಸೋತು ಸುಸ್ತಾಗಿ ಪುಷ್ಕರ ದ್ವೀಪದಿಂದಾಚೆಗೆ ಈಜಿಕೊಂಡು ಹೋಗುವ ಶ್ರಮವನ್ನು ರಾವಣ ತಪ್ಪಿಸಿದನೋ ಎಂಬಂತೆ ಆ ದೃಶ್ಯವಿತ್ತು. ಈಗ ರಾವಣನ ಎದುರಿಗೆ ಕೇವಲ ರಾಮ,ಸೀತೆಮತ್ತು ಋಷಿಗಳು ಮಾತ್ರ ಉಳಿದರು . ಈ ವಿಚಿತ್ರ ಬೆಳವಣಿಗೆಯಿಂದ  ಅಚ್ಚರಿಗೊಂಡ ರಾಮನು ಸೀತೆಯ ಕಡೆ ನೋಡಿದರೆ ಅವಳು ಮುಗುಳ್ನಗುತ್ತಿದ್ದಾಳೆ!!.ಮುನಿಗಳು ಹೆದರುತ್ತಿದ್ದಾರೆ.&lt;/p&gt;&lt;p&gt;ಬಹುಬೇಗ ರಾಮನು ತನ್ನ ಅಚ್ಚರಿಯನ್ನು ಬದಿಗೊತ್ತಿ ತನ್ನ ಬಿಲ್ಲನ್ನು ಹೆದೆಗೇರಿಸಿ ಒಮ್ಮೆ ಧನುಷ್ಟಂಕಾರ ಮಾಡಿದನು.ಆ ದ್ವನಿಗೆ ರಾಕ್ಷಸರು ಹೆದರಿದರೂ ಸಹಸ್ರಮುಖನು ಮಾತ್ರ ಹೆದರದೆ ತನ್ನವರನ್ನು ಹುರಿದುಂಬಿಸಿ ಯುದ್ಧ ಪ್ರಾರಂಬಿಸಿದನು.ಅವನ ಮತ್ತು ರಾವಣನ ನಡುವೆ ಸಮಬಲದ ಹೋರಾಟ ಸಾಗಿತು.ರಾಮನು ಬಿಟ್ಟ ಬಾಣಗಳಿಗೆ ಅವನ ಬಳಿ ಒಂದು ಪ್ರತ್ಯಸ್ತ್ರ ಇದ್ದೇ ಇರುತ್ತಿತ್ತು. ಕಡೆಗೆ ರಾಮನು ಇವನನ್ನು ಹೇಗಾದರೂ ಸೋಲಿಸಲೇಬೇಕೆಂದು ರಾವಣನನ್ನು ಕೊಂದ ದಿವ್ಯಾಸ್ತ್ರ&lt;span style="font-weight: bold; font-style: italic; color: rgb(204, 0, 0);"&gt;(ರಾಮಬಾಣ) &lt;/span&gt;ಪ್ರಯೋಗಿಸಿದನು. ಅದು ವೇಗವಾಗಿ  ಬೆಂಕಿಯುಗುಳುತ್ತಾ ರಾವಣನ ಬಳಿ ಬಂತು. ಇನ್ನೇನು ಅವನ ಶಿರಗಳು ನೆಲಕ್ಕುದುರಿದುವು ಎನ್ನುವಷ್ಟರಲ್ಲಿ ಸಹಸ್ರಶಿರನು ಮಿಂಚಿನಂತೆ ಆ ಬಾಣವನ್ನು ಮುರಿದು ಮತ್ತೊಂದು ತೀಕ್ಷ್ಣ ಬಾಣವನ್ನು  ಪ್ರಯೋಗಿಸಿದನು. ಆ ಬಾಣವು ವೇಗವಾಗಿ ಬಂದು ರಾಮನ  ಎದೆಗೆ ತಾಗಿ ಅವನು ನೆಲಕ್ಕುರುಳಿದನು. ದೇವತೆಗಳ ಹಾಹಾಕಾರ ಹೇಳತೀರದು. ಮುನಿಗಳಂತೂ ರಾಕ್ಷಸನ ಬಾಯಿಗೆ ಬಿದ್ದೆವೆಂದು ಮರುಗಿದರು. ಯಾರಮುಖದಲ್ಲಿಯೂ ನಗುವಿಲ್ಲದಿದ್ದರೂ ಸೀತೆ ಮಾತ್ರ ಮುಗುಳ್ನಗುತ್ತಿದ್ದಳು.ಆ ತಪಸ್ವಿಗಳು ಸೀತೆಯ ಮುಖ ನೋಡಿ&lt;/p&gt;&lt;p&gt;&lt;span style="font-weight: bold; font-style: italic; color: rgb(0, 153, 0);"&gt; "ಅಮ್ಮ, ನೀನು ಹೇಳಿದ್ದು ನಿಜ. ಈ ರಕ್ಕಸ ಮಹಾನ್ ಶೂರ. ಅವನನ್ನು ಯಾರು ಗೆಲ್ಲಲೂ ಸಾಧ್ಯವಿಲ್ಲ. ರಾಮನಿಗೇ ಆಗಲಿಲ್ಲ. ಇನ್ನು ನಮಗೆ ನೀನೇ ಗತಿ. ನಿನ್ನನ್ನು ಎಲ್ಲರೂ ಆದಿಶಕ್ತಿ ಎನ್ನುತ್ತಾರೆ. ಬಹುಶಃ ನೀನೇ ನಮ್ಮರಕ್ಷಕಿ.  ಯಾವವಿಧದಲ್ಲಾದರೂ ನಮ್ಮನ್ನು ಕಾಪಾಡು"&lt;/span&gt; &lt;/p&gt;&lt;p&gt;ಎಂದು ಬೇಡಿಕೊಂಡರು.&lt;/p&gt;    &lt;p&gt;ಅವರು ಸೀತೆಯನ್ನು ಹೊಗಳಿ ಬೇಡಿಕೊಳ್ಳುತ್ತಿರುವಂತೆಯೇ ಸೀತೆಯ ರೂಪ ಬದಲಾಯಿತು.&lt;/p&gt;&lt;p&gt;&lt;span style="font-weight: bold; font-style: italic; color: rgb(255, 0, 0);"&gt;ತಲೆ&lt;/span&gt;&lt;span style="font-weight: bold; font-style: italic; color: rgb(255, 0, 0);"&gt; ಕೂದಲು ಕೆದರಿತು, ಕಣ್ಣು ಕೆಂಪಾಯಿತು, ಸೌಮ್ಯ ಮುಖ ಉರಿಮುಖವಾಯಿತು.ಕೋರೆಹಲ್ಲು ಮೂಡಿ ನಾಲಗೆ ನೀಳವಾಯಿತು.ನಾಲ್ಕು ತೋಳುಗಳು,ಕೊರಳಲ್ಲಿ ರುಂಡಮಾಲೆ, ಕೈಯಲ್ಲಿ ಎಲುಬಿನ ಒಡವೆ&lt;/span&gt; - ಒಟ್ಟಿನಲ್ಲಿ &lt;span style="font-weight: bold; font-style: italic; color: rgb(255, 0, 0);"&gt;ಮಹಾಕಾಳಿ&lt;/span&gt;ಯಂತೆ ಕಾಣುತ್ತಿದ್ದ ಅವಳು ಹಾರಿ ರಾವಣನೊಡನೆ ಹೋರಾಡಿದಳು.ಆದರೆ ಅವಳ ಯುದ್ಧವನ್ನು ಯಾರೂ ನೋಡಲಾಗಲಿಲ್ಲ.ಕಣ್ರೆಪ್ಪೆ ಮುಚ್ಚಿ ತೆರೆಯುವಷ್ಟರಲ್ಲಿ ರಾವಣನ ಸಾವಿರ ತಲೆಗಳೂ ನೆಲಕ್ಕುದುರಿದ್ದವು.ಆದರೆ ಸೀತೆಯ ಮಹಾಕಾಳಿಯ ರೋಷ ಕಡಿಮೆಯಾಗಿರಲಿಲ್ಲ. ಕೂಡಲೇ ಬ್ರಹ್ಮಾದಿ ದೇವತೆಗಳು ಮತ್ತು ಮುನಿಗಳು ಅವಳನ್ನು ಸ್ತುತಿಸಿ ಶಾಂತಗೊಳಿಸಿದರು. ನಂತರ ಸೀತೆಯ ಇಚ್ಚೆಯಂತೆ ರಾಮನನ್ನು ಎಬ್ಬಿಸಿದರು. ಎಚ್ಚೆತ್ತ ರಾಮನು&lt;br /&gt;&lt;/p&gt;&lt;p&gt;&lt;span style="font-weight: bold; font-style: italic; color: rgb(255, 0, 0);"&gt;" ಎಲ್ಲಿ ಆ ದುಷ್ಟ ರಾವಣ? ನನ್ನ ಬಾಣ ಮುರಿಯುವಷ್ಟು ಧೈರ್ಯವೇ ಅವನಿಗೆ? " &lt;/span&gt;&lt;br /&gt;&lt;/p&gt;&lt;p&gt;ಎಂದು ಹೇಳುತ್ತಾ ಹುಬ್ಬು ಗಂಟಿಕ್ಕಿ ಬಿಲ್ಲನ್ನು ಎತ್ತಿಕೊಂಡು.ಎದುರಿಗೆ ನೋಡಿದರೆ ಸೀತೆಯ ಮಹಾಕಾಳಿ   ಅವತಾರ. ಕೂಡಲೇ ಅವನ ಕೈಯಲ್ಲಿದ್ದ ಬಿಲ್ಲು ತಾನೇತಾನಾಗಿ ಜಾರಿ ಕೆಳಗೆ ಬಿತ್ತು. ಮುನಿಗಳು ಅವನಿಗೆ ಎಲ್ಲಾ ವಿವರಗಳನ್ನು ತಿಳಿಸಿದರು.ಆಗ ರಾಮನಿಗೆ ಸೀತೆಯ ಶಕ್ತಿಯ ಆಳ ತಿಳಿಯಿತು.ಆದರೆ ಪ್ರಜೆಗಳಿಗೆ, ಸೈನಿಕರಿಗೆ, ಇನ್ಯಾರಿಗೂ ರಾವಣನನ್ನು ಕೊಂದವಳು ಸೀತೆ ಎಂದು ತಿಳಿಯಲಿಲ್ಲ.&lt;br /&gt;&lt;/p&gt;&lt;p&gt;   ಎಲ್ಲರೂ ಯುದ್ಧಭೂಮಿಯಿಂದ ಹಿಂತಿರುಗಿದರು&lt;/p&gt; &lt;p&gt;ಹಿಂದಿರುಗಿ ಅಯೋಧ್ಯೆಗೆ ಮರಳಿದಾಗ ಅವನ ಶೌರ್ಯವನ್ನು ಜನರು ಹಾಡಿಹೊಗಳುತ್ತಿದ್ದರೆ , ರಾಮನು ನಾಚಿಕೆಯಿಂದ ಸೀತೆಯ ಮುಖ ನೋಡಿದ. ಅವಳು ಮಾತ್ರ ಎಂದಿನಂತೆ ಸೌಮ್ಯವಾಗಿ ಮುಗುಳ್ನಗುತ್ತಿದ್ದಳು.ರಾಮನ ಅಹಂಕಾರ ಮರೆಯಾಯಿತು. ಅಂದಿನಿಂದ ರಾಮನು ಯಾರ ಮುಂದೂ ದಶಕಂಠ ರಾವಣನನ್ನು ಕೊಂದ ಪ್ರತಾಪವನ್ನು ಕೊಚ್ಚಿ ಕೊಳ್ಳುತ್ತಿರಲಿಲ್ಲ.!!  &lt;br /&gt;&lt;/p&gt;&lt;p&gt;(&lt;span style="font-weight: bold;"&gt;ಅದ್ಭುತ ರಾಮಾಯಣದಿಂದ ಆಯ್ದ ಭಾಗ)&lt;/span&gt;&lt;br /&gt;&lt;/p&gt;&lt;p&gt;&lt;br /&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8114402468197807042-4348078894315863686?l=battadatore.blogspot.com' alt='' /&gt;&lt;/div&gt;</content><link rel='replies' type='application/atom+xml' href='http://battadatore.blogspot.com/feeds/4348078894315863686/comments/default' title='Post Comments'/><link rel='replies' type='text/html' href='http://battadatore.blogspot.com/2009/04/blog-post_08.html#comment-form' title='27 Comments'/><link rel='edit' type='application/atom+xml' href='http://www.blogger.com/feeds/8114402468197807042/posts/default/4348078894315863686'/><link rel='self' type='application/atom+xml' href='http://www.blogger.com/feeds/8114402468197807042/posts/default/4348078894315863686'/><link rel='alternate' type='text/html' href='http://battadatore.blogspot.com/2009/04/blog-post_08.html' title='ಸಹಸ್ರಶಿರರಾವಣನ ಸಂಹಾರ'/><author><name>ಚಂದ್ರಕಾಂತ ಎಸ್</name><uri>http://www.blogger.com/profile/00490264860537389455</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='25' src='http://3.bp.blogspot.com/_4wQW2-q8XsA/SVIw-U299dI/AAAAAAAAADY/T9mtUHgBZhU/S220/blogfile12.jpg'/></author><thr:total>27</thr:total></entry><entry><id>tag:blogger.com,1999:blog-8114402468197807042.post-2797086827847167795</id><published>2009-04-03T11:28:00.000+05:30</published><updated>2009-04-03T16:26:40.800+05:30</updated><title type='text'></title><content type='html'>&lt;span style="font-size:130%;"&gt;&lt;br /&gt;"&lt;/span&gt;&lt;span style="font-weight: bold; font-style: italic; color: rgb(204, 0, 0);font-size:130%;" &gt;.....&lt;/span&gt;&lt;span style="font-weight: bold; font-style: italic; color: rgb(204, 0, 0);font-size:130%;" &gt;ಸೀತೆಯ&lt;/span&gt;&lt;span style="font-weight: bold; font-style: italic; color: rgb(204, 0, 0);font-size:130%;" &gt;ರ &lt;/span&gt;&lt;span style="font-weight: bold; font-style: italic; color: rgb(204, 0, 0);font-size:130%;" &gt;ಅಗ್ನಿಪ್ರವೇಶ&lt;/span&gt;&lt;span style="font-weight: bold; font-style: italic; color: rgb(204, 0, 0);font-size:130%;" &gt; &lt;/span&gt;&lt;span style="font-weight: bold; font-style: italic; color: rgb(204, 0, 0);font-size:130%;" &gt;ಪ್ರಸಂಗ&lt;/span&gt;&lt;span style="font-weight: bold; font-style: italic; color: rgb(204, 0, 0);font-size:130%;" &gt;"&lt;/span&gt;&lt;br /&gt;&lt;br /&gt;&lt;br /&gt;ರಾಮನಿಂದ ರಾವಣ ಹತನಾದ. ಈ ಸಂತಸದ ಸಮಾಚಾರ ಕೇಳಿದ ಸೀತೆ ಇನ್ನೇನು ರಾಮ ತನ್ನನ್ನು ಕರೆದೊಯ್ಯಲು ಬರುತ್ತಾನೆ   ಎಂದು ಕಾಯುತ್ತಿದ್ದಳು. ಆಗ ಹನುಮಂತನ   ಜೊತೆ ವಿಭೀಷಣ ಮತ್ತು ಅವನ ಮಗಳು ಅನಲೆ ಇವಳ ಬಳಿ ಬಂದರು. ಬಳಿ ಬಂದ ಹನುಮಂತನು  " ರಾಮನಿಂದು ರಾವಣನ ಸಂಹಾರ ಮಾಡಿ ವಿಜಯಶಾಲಿಯಾಗಿದ್ದಾನೆ  ತಾಯೆ, ಶಿರಸ್ನಾನ ಮಾಡಿ ದಿವ್ಯ ಅಂಗರಾಗ ಲೇಪಿಸಿಕೊಂಡು, ವಸ್ತ್ರಾಭರಣಗಳನ್ನು ಧರಿಸಿ ಭೋಗೀಂದ್ರನ ಅರ್ಧಾಂಗಿಯಂತೆ ಚೆನ್ನಾಗಿ ಅಲಂಕರಿಸಿಕೊಂಡು ಬರುವಂತೆ ರಾಮ ತಿಳಿಸಿದ್ದಾನೆ "ಎಂದನು.&lt;br /&gt;&lt;br /&gt;" ನಾನು ಅಸ್ನಾತಳಾಗಿಯೇ ಪತಿದರ್ಶನಕೆ ತೆರಳಲು ಇಚ್ಚಿಸುವೆ"ಎಂದು ಸೀತೆ ಹೇಳಿದಾಗ,&lt;br /&gt;&lt;br /&gt;" ಅದು ರಾಮನ ಅಜ್ಞೆ ತಾಯಿ "ಎಂದು ತನ್ನ ಅಸಹಾಯಕತೆಯನ್ನು ತೋರಿದನು&lt;br /&gt;&lt;br /&gt;" ಹಾಗಿದ್ದರೆ ಅವನ ಆಜ್ಞೆಯಂತಾಗಲಿ, ಅವನ ಇಚ್ಚೆಯಂತೆ ಬರುವೆನು " ಎಂದು ಹೇಳಿದಳು.ಅನಲೆ ಸೀತೆಯನ್ನು ಅಲಂಕರಿಸಲು ತನ್ನೊಂದಿಗೆ ಕರೆದೊಯ್ದಳು.&lt;br /&gt;&lt;br /&gt;ಇತ್ತ ಹನುಮಂತನು ರಾಮನ ಬಳಿ ಬಂದು ಸೀತೆ ಇನ್ನು ಸ್ವಲ್ಪ ಹೊತ್ತಿಗೆ ಅವನಿಚ್ಚೆಯಂತೆ ಬರುವಳೆಂದು ತಿಳಿಸಿದನು.&lt;br /&gt;&lt;br /&gt;" ಎಲೈ ಹನುಮಂತ, ಮಹಾರಾಣಿ ಸೀತೆಗೆ   ಸಲ್ಲಬೇಕಾದ  ಗೌರವ ಮರ್ಯಾದೆಯನ್ನು ತೋರಿ ಅವಳನ್ನು ನಾನು ಸ್ವೀಕರಿಸುವೆ. ಇಡೀ ವಾನರ ಸೈನ್ಯಕ್ಕೆ ಸೀತೆಯ ಆಗಮನ ವಿಚಾರವನ್ನು ತಿಳಿಸು.ತನಗೆ ಹೊಸಬಾಳು ಕೊಟ್ಟ ಮಹಿಮಾನ್ವಿತ ವಾನರರನ್ನು ಸೀತೆ ನೋಡಿ ಕೃತಜ್ಞತೆ ಸಲ್ಲಿಸಲಿ." ಈ ಮಾತುಗಳನ್ನಾಡಿದ ರಾಮನು ತನ್ನಷ್ಟಕ್ಕೆ ತಾನೇ ಯಾವುದೋ ಚಿಂತೆಯಲ್ಲಿ ಮುಳುಗಿದನು.ಅವನ ಮುಖ ಅತ್ಯಂತ ಗಂಭೀರ ಮುಖಭಾವ ತಳೆಯಿತು.&lt;br /&gt;&lt;br /&gt;ಸ್ವಲ್ಪ ಸಮಯದಲ್ಲಿಯೇ ವಾನರರೆಲ್ಲಾ ಸೀತೆಯನ್ನು ಕಾಣುವ ಆತುರದಿಂದ ಒಂದೆಡೆ ಸೇರಿದರು.ಸೀತೆ ಬರುತ್ತಿರುವಳೆಂಬ ಮಂಗಳ ಧ್ವನಿ ಕೇಳಿಸಿತು.ಎಲ್ಲರೂ ಹರ್ಷೋದ್ಗಾರ ಮಾಡುತ್ತಿದ್ದಂತೆಯೇ ಪಲ್ಲಕ್ಕಿಯಲ್ಲಿ ಸೀತೆಯನ್ನು ಕರೆತಂದರು.  ಸೀತೆಯೊರ್ವಳನ್ನೇ ಕರೆತರುವಂತೆ ರಾಮ ಸೂಚಿಸಿದ. ಪಲ್ಲಕ್ಕಿಯಿಂದ  ಇಳಿದ ಸೀತೆಯ ಸುತ್ತಲೂ ಸೇವಕಿಯರು ಲಜ್ಜಾಪಟವನ್ನು ಹಿಡಿದು ಕರೆತಂದರು. ಸೀತೆಯ ದರ್ಶನಕ್ಕಾಗಿ ಕಾತರದಿಂದ ಕಾಯುತ್ತಿದ್ದ ವಾನರರೆಲ್ಲಾ ಚಲ್ಲಾಪಿಲ್ಲಿಯಾಗಿ ಸೀತೆಯ ಬಳಿಗೇ ಓಡಿಬರಲಾರಂಭಿಸಿದರು. ಆದರೆ ಶಿಸ್ತನ್ನು ಕಾಪಾಡುವುದಕ್ಕಾಗಿ ವಿಭೀಷಣನು ತನ್ನ ಕಾವಲು ಭಟರಿಗೆ ಆಜ್ಞೆಯಿತ್ತು ವಾನರರನ್ನು ಹಿಂದೆ ತಳ್ಳುವಂತೆ ಸೂಚಿಸಿದನು. ಆ ಭಟರು ತಮ್ಮ ಕೈಯಲ್ಲಿರುವ ದಂಡಗಳಿಂದ ವಾನರರ ಮೇಲೆ ಬಲಪ್ರಯೋಗ ಮಾಡುತ್ತಿರುವುದನ್ನು ಕಂಡು ರಾಮನಿಗೆ ನಖಶಿಖಾಂತ ಕೋಪ ಬಂದಿತು.&lt;br /&gt;&lt;br /&gt;" ಎಲೈ ವಿಭೀಷಣ , ಮೊದಲು ನಿನ್ನ ಭಟರಿಗೆ  ದಂಡಗಳನ್ನು ದೂರವಿಡುವಂತೆ ಹೇಳು. ಈ ವಾನರರು ನನ್ನ ಪ್ರೀತಿಪಾತ್ರರು. ಅವರು ನನ್ನವರು. ಸೀತೆಗೇಕೆ ಲಜ್ಜಾಪಟ? ಈ ವಾನರರು ಸೀತೆಯನ್ನು ನೋಡಿದರೆ ಅವಳ ಮರ್ಯಾದೆಗೆ ಕುಂದುಬರುವುದಿಲ್ಲ.ಸ್ವಯಂವರದಲ್ಲಿ, ಯುದ್ಧಭೂಮಿಯಲ್ಲಿ, ಕಷ್ಟಕಾಲದಲ್ಲಿ ಸ್ತ್ರೀಗೆ ಯಾರ ಕಣ್ಣೋಟದ ದೋಷವೂ ತಟ್ಟದು.ಅವಳು ಲಜ್ಜಾಪಟವಿಲ್ಲದೆಯೇ ನನ್ನೆಡೆಗೆ ಬರಲಿ" ಎಂದನು.&lt;br /&gt;&lt;br /&gt;ಸೀತೆ ತಾನೊರ್ವಳೇ ರಾಮನ ಬಳಿ ಬರುತ್ತಿರುವಂತೆಯೇ ಅವಳನ್ನು ಕಡೆಗಣ್ಣ ನೋಟದಿಂದ ರಾಮ ನೋಡಿದನು.ಅವಳು ತನ್ನಾಣತಿಯಂತೆ ಸ್ನಾನ ಮಾಡಿ ಶುಭ್ರ ವಸ್ತ್ರ, ಆಭರಣಗಳನ್ನು ಧರಿಸಿ ಬರುತ್ತಿದ್ದುದನ್ನು ನೋಡಿ ಅವನಿಗೆ ಸಮಾಧಾನವಾಯಿತು.ಅವಳು ಮಲಿನ ವಸ್ತ್ರ ಧರಿಸಿ, ಕೃಶಳಾಗಿ,ಎಲ್ಲರ  ಅನುಕಂಪಕ್ಕೆ  ತುತ್ತಾಗುವಂತೆ ಬಂದಿದ್ದರೆ ತಾನು ಈಗ ಆಡಲು ಉದ್ದೇಶಿಸಿರುವ ಕ್ರೂರ ಮಾತುಗಳನ್ನು ಆಡಲು ಸಾಧ್ಯವಾಗುತ್ತಿತ್ತೇ ? ಈಗಲಾದರೆ ಅವಳೊಡನೆ ಒರಟು ಮಾತಾಡಲು ತನಗೆ ಹಿಂಜರಿಕೆಯಾಗುತ್ತಿಲ್ಲ ಎಂದು ನಿಟ್ಟುಸಿರು ಬಿಟ್ಟನು.ಆದರೆ ಅವಳನ್ನು ಮಾತನಾಡಿಸದೆ ಎತ್ತಲೋ ನೋಡಲಾರಂಭಿಸಿದನು.ಅವನ ಈ ನಡವಳಿಕೆಯನ್ನು ಕಂಡು ಸುಗ್ರೀವ, ಲಕ್ಷ್ಮಣ, ಜಾಂಬವಂತ ಮುಂತಾದವರಿಗೆ ದಿಗ್ಭ್ರಾಂತಿಯೊಡನೆ ಯಾವುದೋ ಭೀತಿ ಮೂಡಿತು.ಎಲ್ಲರ ಕಣ್ಣೋಟವೂ ತನ್ನ ಮೇಲಿರಲು ಎದುರಿಗೆ ನಿಂತ ತನ್ನನ್ನು ರಾಮನು ಏಕೆ ಮಾತನಾಡಿಸುತ್ತಿಲ್ಲವೆಂದು ಸೀತೆ ತಗ್ಗಿಸಿದ ತಲೆಯೆತ್ತಿ ಅವನನ್ನು ನೋಡಿದಳು.ಆದರೆ ತಾನು ಇದುವರೆಗೂ ನೋಡಿದ್ದ ಸೌಮ್ಯ ಮುಖದ ರಾಮನಾಗಿರಲಿಲ್ಲ ಅವನು. ಅವನ ಮುಖದಲ್ಲಿ ರಾವಣನನ್ನು ಕೊಂದ ಹೆಮ್ಮೆ ಅಹಂಕಾರ ತುಂಬಿತ್ತು. ರಾಮನ ಪ್ರತಿಕ್ರಿಯೆಯನ್ನೇ ನಿರೀಕ್ಷಿಸುತ್ತಿದ್ದ ಸಮೂಹ ನಿಶ್ಯಬ್ಧವಾಗಿತ್ತು. ಆ ಅಸಹನೀಯ ನೀರವತೆಯನ್ನು ಮುರಿಯುವಂತೆ ರಾಮನು,&lt;br /&gt;&lt;br /&gt;" ಎಲೈ ಸೀತೆ, ಯುದ್ಧಭೂಮಿಯಲ್ಲಿ ಶತ್ರುವನ್ನು ಗೆದ್ದಿದ್ದೇನೆ.ಈ ಯುದ್ಧದಲ್ಲಿ ಹನುಮಂತ, ಸುಗ್ರೀವ, ಲಕ್ಷ್ಮಣ, ವಿಭೀಷಣ, ಮುಂತಾದವರು ನನಗೆ ನೆರವನ್ನಿತ್ತಿದ್ದಾರೆ. ನನ್ನ ಕುಲದ ತೇಜಸ್ಸನ್ನು ಉಳಿಸಲು , ನನ್ನ ಪೌರುಷವನ್ನು ತೋರಲು ನಾನು ಶತ್ರುವನ್ನು ಕೊಂದಿದ್ದೇನೆ. ನಿನ್ನನ್ನು ಪಡೆಯಲಲ್ಲ . ನೀನೀಗ ಸ್ವತಂತ್ರಳು. ನಿನಗಿಷ್ಟ ಬಂದ ಕಡೆ ನಡೆ "ಎಂದು ಚುಚ್ಚುಮಾತಿನಿಂದ ಸೀತೆಯನ್ನು ಅವಮಾನಿಸಿದನು.&lt;br /&gt;&lt;br /&gt;ಪತಿಯ ಈ ಭಯಂಕರ ಮಾತುಗಳಿಂದ ಸೀತೆ ದಿಗ್ಭ್ರಾಂತಳಾದಳು. ಆದರೂ ಅವನಿಗೆ ಕೈಮುಗಿದು,&lt;br /&gt;" ನಿನಗೆ ಈ ಮಾತುಗಳು ತರವಲ್ಲ. ಅನಾಗರಿಕರು ಮಾತನಾಡುವಂತೆ ಏಕೆ ಮಾತನಾಡುತ್ತಿರುವೆ? ರಾಕ್ಷಸನು ನನ್ನನ್ನು ಮುಟ್ಟಿದ.  ಅಪರಾಧಿ ನಾನಲ್ಲ,ಆ ದೈವವೇ ಅಪರಾಧಿ.&lt;span style="font-weight: bold; color: rgb(153, 0, 0);"&gt; &lt;/span&gt;&lt;span style="font-weight: bold; color: rgb(153, 0, 0);"&gt;ಆ&lt;/span&gt;&lt;span style="font-weight: bold; color: rgb(153, 0, 0);"&gt; &lt;/span&gt;&lt;span style="font-weight: bold; color: rgb(153, 0, 0);"&gt;ರಾಕ್ಷಸನು&lt;/span&gt;&lt;span style="font-weight: bold; color: rgb(153, 0, 0);"&gt; &lt;/span&gt;&lt;span style="font-weight: bold; color: rgb(153, 0, 0);"&gt;ನನ್ನ&lt;/span&gt;&lt;span style="font-weight: bold; color: rgb(153, 0, 0);"&gt; &lt;/span&gt;&lt;span style="font-weight: bold; color: rgb(153, 0, 0);"&gt;ಮೈಯನ್ನಲ್ಲದೆ&lt;/span&gt;&lt;span style="font-weight: bold; color: rgb(153, 0, 0);"&gt; &lt;/span&gt;&lt;span style="font-weight: bold; color: rgb(153, 0, 0);"&gt;ಮನಸ್ಸನ್ನು&lt;/span&gt;&lt;span style="font-weight: bold; color: rgb(153, 0, 0);"&gt; &lt;/span&gt;&lt;span style="font-weight: bold; color: rgb(153, 0, 0);"&gt;ಮುಟ್ಟಿದನೇ&lt;/span&gt;&lt;span style="font-weight: bold; color: rgb(153, 0, 0);"&gt; ?&lt;/span&gt;ಬಾಲ್ಯದಲ್ಲಿಯೇ ನನ್ನ ಕೈ ಹಿಡಿದ ನಿನಗೆ ನನ್ನ ಸ್ವಭಾವ ತಿಳಿದಿಲ್ಲವೇ ?ನನ್ನೊಡನೆ  ಕಳೆದ ಆ ದಿನಗಳ ಅನುಭವದಿಂದ  ನನ್ನ ಭಕ್ತಿ , ಚಾರಿತ್ರ್ಯ , ಶೀಲವನ್ನು ನಿನಗೆ ಅರ್ಥವಾಗದಿದ್ದಮೇಲೆ ನಾ ಕೆಟ್ಟಂತೆಯೇ ಸರಿ. ನಿನ್ನ ಅನುಮಾನಕ್ಕೆ ನನ್ನ ಬಳಿ ಉತ್ತರವಿಲ್ಲ " ಎಂದು ಹೇಳಿ ಸ್ವಲ್ಪ ಹೊತ್ತು ಚಿಂತಿಸಿ, ಒಂದು ನಿರ್ಧಾರಕ್ಕೆ ಬಂದವಳಂತೆ ಲಕ್ಷ್ಮಣನ ಕಡೆಗೆ ತಿರುಗಿ,&lt;br /&gt;&lt;br /&gt;" ಎಲೈ ಲಕ್ಷ್ಮಣ ಒಂದು ಚಿತೆಯನ್ನು ಸಿದ್ಧಪಡಿಸು. ತುಂಬಿದ ಸಭೆಯಲ್ಲಿ ಪತಿಯಿಂದ ತಿರಸ್ಕೃತಳಾದ ನನಗೆ ಬೇರೆ ದಾರಿಯಿಲ್ಲ. ಆ ಅಗ್ನಿಯೇ ನನಗಾಸರೆ " ಎಂದಳು.ದಿಕ್ಕು ತೋಚದೆ ಲಕ್ಷ್ಮಣನು ರಾಮನ ಕಡೆ ನೋಡಿದನು. ಅವನ ಕಠೋರ ಮುಖಭಾವ ಸಿತೆ ಹೇಳಿದಂತೆ ಮಾಡು ಎಂದು ಸೂಚಿಸಿತು. ಅಂತೂ ಎಲ್ಲರೂ ನೋಡುತ್ತಿದ್ದಂತೆಯೇ ಒಂದು ಬೃಹತ್ ಚಿತೆ ಸಿದ್ಧವಾಯಿತು. ಸೀತೆ ಮಾತನಾಡದೆ ರಾಮನ ಸುತ್ತ ಒಂದು ಪ್ರದಕ್ಷಿಣೆ ಹಾಕಿ ,  ದೀರ್ಘದಂಡ ನಮಸ್ಕಾರ ಮಾಡಿ ಅಗ್ನಿಯೆಡೆ ನಡೆದು ಅಗ್ನಿಗೆ ನಮಸ್ಕರಿಸಿ " ಸದಾಕಾಲ ನನ್ನ ಪತಿಯನ್ನೇ ಸ್ಮರಿಸಿದವಳು ನಾನಾದರೆ ನನ್ನನ್ನು ರಕ್ಷಿಸು " ಎಂದು ಹೇಳಿ ಬೆಂಕಿಯನ್ನು ಪ್ರವೇಶಿಸಲುದ್ಯಕ್ತಳಾದಳು.&lt;br /&gt;&lt;br /&gt;ಇವೆಲ್ಲವನ್ನೂ ನಿರ್ಲಕ್ಷ್ಯ ದೃಷ್ಟಿಯಿಂದ ನೋಡುತ್ತಿದ್ದ ರಾಮನ ಮುಖ ಇದ್ದಕ್ಕಿದ್ದಂತೇ ಕಾಂತಿಯುತವಾಗಿ ಎಲ್ಲರೂ ನೋಡುತ್ತಿರುವಂತೆಯೇ ರಾಮನು ಆ ಅಗ್ನಿಯೊಳಗೆ ಪ್ರವೇಶಿಸಿಯೇ ಬಿಟ್ಟನು!!ಸ್ವಲ್ಪ ಹೊತ್ತಿನಲ್ಲಿಯೇ ಅಗ್ನಿಯಿಂದ ಪರಿಶುದ್ಧರಾದ ರಾಮ ಮತ್ತು ಸೀತೆಯರು ಕೈ ಕೈಹಿಡಿದು ಬೆಂಕಿಯಿಂದ ಹೊರಬಂದರು.&lt;br /&gt;&lt;br /&gt;ದೂರದಲ್ಲಿ ನಿಂತಿದ್ದ ವಿಭೀಷಣ ಪುತ್ರಿ ಅನಲೆ ಓಡಿ ಬಂದು ರಾಮನ ಕಾಲಿಗೆರಗಿ ,&lt;br /&gt;&lt;br /&gt;" ನನ್ನನ್ನು ಮನ್ನಿಸು ರಾಮ. ಸೀತೆಯನ್ನು ನೀನು ನಿಂದಿಸುತ್ತಿದ್ದಾಗ ನಾನು ನಿನ್ನನ್ನು ಚೆನ್ನಾಗಿ ಬಯ್ದುಕೊಂಡೆ. &lt;span style="font-weight: bold; color: rgb(204, 0, 0);"&gt;ಪತಿವ್ರತೆಯಾದ ಸೀತೆಯನ್ನು ಬೆಂಕಿಗೆ ತಳ್ಳುವ ನೀನೆಷ್ಟರಮಟ್ಟಿಗೆ ಪರಿಶುದ್ಧ ? ನಿನ್ನನ್ನು ಪರೀಕ್ಷಿಸುವರಾರು ?ಎಂದು ನಿಂದಿಸಿದೆ. ನಿನ್ನನ್ನೇ ಅಗ್ನಿಪರೀಕ್ಷೆಗೆ ಒಡ್ಡಿಕೊಂಡ ನೀನು ಶ್ರೇಷ್ಟನೇ ಸರಿ " &lt;/span&gt;ಎಂದಳು. ಅವಳ ಮಾತುಗಳು ಅಲ್ಲಿದ್ದವರೆಲ್ಲರ ಹೃದಯದ ಪ್ರತಿಧ್ವನಿಯಂತಿತ್ತು.ರಾಮನು ಮಾತ್ರ ಈ ಮಾತಿಗೆ ಉತ್ತರಿಸದೆ ನಸುನಗುತ್ತಲಿದ್ದ.&lt;br /&gt;&lt;br /&gt;{ ಸೀತೆಯನ್ನು ಅಗ್ನಿಪರೀಕ್ಷೆಗೊಡ್ಡಿದ ರಾಮನ ವ್ಯಕ್ತಿತ್ವ ಯಾವಾಗಲೂ ನನ್ನನ್ನು ಕೊರೆಯುತ್ತಿತ್ತು. ಕುವೆಂಪು ಅವರು ಶ್ರೀರಾಮಾಯಣದರ್ಶನಮ್ ನಲ್ಲಿ ಈ ಪ್ರಸಂಗದ ಚಿತ್ರಣದಲ್ಲಿ ರಾಮನ ವ್ಯಕ್ತಿತ್ವವನ್ನು ಮೇಲಕ್ಕೆತ್ತಿದ್ದು ನನಗೆ ಬಹಳ ಇಷ್ಟವಾಯಿತು. ಆದ್ದರಿಂದ&lt;span style="font-weight: bold; color: rgb(204, 0, 0);font-size:130%;" &gt; ಶ್ರೀರಾಮನವಮಿ&lt;/span&gt;ಯಂದು ಶುಭಾಶಯಗಳೊಂದಿಗೆ ಕುವೆಂಪುರವರ ಈ ಭಾಗವನ್ನು ಪರಿಚಯಿಸಿದ್ದೇನೆ}&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8114402468197807042-2797086827847167795?l=battadatore.blogspot.com' alt='' /&gt;&lt;/div&gt;</content><link rel='replies' type='application/atom+xml' href='http://battadatore.blogspot.com/feeds/2797086827847167795/comments/default' title='Post Comments'/><link rel='replies' type='text/html' href='http://battadatore.blogspot.com/2009/04/blog-post.html#comment-form' title='23 Comments'/><link rel='edit' type='application/atom+xml' href='http://www.blogger.com/feeds/8114402468197807042/posts/default/2797086827847167795'/><link rel='self' type='application/atom+xml' href='http://www.blogger.com/feeds/8114402468197807042/posts/default/2797086827847167795'/><link rel='alternate' type='text/html' href='http://battadatore.blogspot.com/2009/04/blog-post.html' title=''/><author><name>ಚಂದ್ರಕಾಂತ ಎಸ್</name><uri>http://www.blogger.com/profile/00490264860537389455</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='25' src='http://3.bp.blogspot.com/_4wQW2-q8XsA/SVIw-U299dI/AAAAAAAAADY/T9mtUHgBZhU/S220/blogfile12.jpg'/></author><thr:total>23</thr:total></entry><entry><id>tag:blogger.com,1999:blog-8114402468197807042.post-1868771173664178850</id><published>2009-03-01T15:15:00.000+05:30</published><updated>2009-04-09T16:48:35.384+05:30</updated><title type='text'>ನಾಮಾಯ ತಸ್ಮೈ ನಮಃ</title><content type='html'>&lt;span style="font-weight: bold;"&gt;&lt;/span&gt;&lt;br /&gt;ಹೆಸರಿನ ವೈಶಿಷ್ಟತೆ  ನನ್ನನ್ನು ಯಾವಾಗಲೋ ಬೆರಗಿನಿಂದ ನೋಡುವಂತೆ  ಮಾಡಿದೆ.ಮನುಷ್ಯ ಮಾತನಾಡುವುದನ್ನು ಕಲಿತ ನಂತರ ಪರಸ್ಪರರನ್ನು ಬೇರ್ಪಡಿಸಿ ಗುರುತಿಸಲು ಹೆಸರು ಎಂಬುದು ಹುಟ್ಟಿಕೊಂಡಿರಬೇಕು.ಕಾಲ ಸರಳವಾದಷ್ಟೂ ಹೆಸರುಗಳೂ ಸರಳವಾಗಿದ್ದುವು. ದೇವತೆಗಳನ್ನೇ ನೋಡಿ. ಅನೇಕ ದೇವರುಗಳ  ಹೆಸರು ತಂದೆಯಿಂದ ಅಥವಾ ಅವರಿರುವ ಊರಿನಿಂದ ನಿರ್ಧಾರಿತವಾಗಿರುತ್ತದೆ. ನೇಗಿಲತುದಿಯಲ್ಲಿ ಸಿಕ್ಕಿದ್ದರಿಂದ ' ಸೀತಾ' ಪರ್ವತರಾಜನ ಮಗಳಾದ್ದರಿಂದ ಪಾರ್ವತಿ, ಗಿರಿರಾಜನ ಮಗಳು ಗಿರಿಜೆ, ಕೋಸಲರಾಜನ ಮಗಳು ಕೌಸಲ್ಯಾ, ದ್ರುಪದನ ಮಗಳು ದ್ರೌಪದಿ , ಪಾಂಚಾಲರಾಜನ ಮಗಳಾದ್ದರಿಂದ ಪಾಂಚಾಲಿ ( ಪಂಚ ಪಾಂಡವರ ಪತ್ನಿಯಾದ್ದರಿಂದ ಪಾಂಚಾಲಿ ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ) ಎಲ್ಲರನ್ನೂ ರಮಿಸುವಷ್ಟು ಸುಂದರನಾದ್ದರಿಂದ ರಾಮ ,  ಕಪ್ಪಗಿದ್ದುದರಿಂದ ಕೃಷ್ನ  ..  ... ಹೀಗೆ ಹೇಳುತ್ತಾ ಹೋದರೆ ಅಂತ್ಯವಿಲ್ಲದಷ್ಟು ಹೆಸರುಗಳು ಸಿಗುತ್ತವೆ. ಹಿಂದಿನ ಕಾಲದಲ್ಲಿ ಅಜ್ಜನ ಹೆಸರನ್ನು ಮೊಮ್ಮಗನಿಗೆ ಇಡುತ್ತಿದ್ದರು. ಇದರಿಂದ ಹೊಸ ಹೆಸರು ಹುಡುಕುವ ತಾಪತ್ರಯ ತಪ್ಪುತ್ತಿತ್ತು.ಇತಿಹಾಸದ ಪುಟಗಳನ್ನು ತೆರೆದರೆ ಒಬ್ಬನೇ ರಾಜನ ಹೆಸರು ಮತ್ತೆ ಮತ್ತೆ ಬಂದಾಗ ಅವನಿಗೆ ೧,೨೩ ಎಂದು ವರ್ಗೀಕರಿಸುತ್ತಿದ್ದರು.&lt;br /&gt;&lt;br /&gt;ಇನ್ನು ದಶಕಗಳ ಹಿಂದಿನ ಸಾಮಾನ್ಯ ಜನರನ್ನು ನೋಡಿದರೆ ಅಚ್ಚ ಕನ್ನಡದ ಹೆಸರುಗಳೇ ಹೆಚ್ಚಾಗಿ ಕಾಣುತ್ತವೆ.ಕೆಂಚ, ಧೂಳ್ಯ,ಕಲ್ಲಪ್ಪ, ಕಲ್ಲವ್ವ, ತಿಪ್ಪ, ಮುದ್ದ, ಮುಂತಾದವು. ನಮಗೆ ಗೊತ್ತಿರುವಂತೆ ನಮ್ಮ ದೇಸೀ ದೇವರಗಳ ಹೆಸರುಗಳೂ ಹೀಗೆ. ಕಾಳಮ್ಮ, ಮಾರಮ್ಮ, ದುಗ್ಗಮ್ಮ,ಎಲ್ಲಮ್ಮ ...ನಂತರ ಆರ್ಯರೊಂದಿಗೆ ಅವರ ದೇವರುಗಳೂ ಬಂದರು. ಇದಕ್ಕಿಂತ ಕುತೂಹಲಕರವಾಗಿರುವುದು ಕೆಲ ದೇವರುಗಳ ಒಕ್ಕಲಿರುವವರ ಮನೆಗಳಲ್ಲಿ ಆ ದೇವರ ಹೆಸರಿನೊಂದಿಗೇ ಮನೆಯವರ ಹೆಸರು ತಳುಕು ಹಾಕಿಕೊಂಡಿರುತ್ತದೆ. ಧರ್ಮಸ್ಥಳದ ಮಂಜುನಾಥನ ಭಕ್ತರಾದ ನಮ್ಮ ಸೋದರತ್ತೆಯ ಮನೆಯಲ್ಲಿರುವವರ ಹೆಸರುಗಳು ಮಂಜುನಾಥ, ಮಂಜುಳ, ಅಣ್ಣಪ್ಪ, ...ಹಿಗಿವೆ. ಇನ್ನು ನಾಗದೇವರನ್ನು ಪೂಜಿಸುವವರನ್ನು ಕೇಳಲೇಬೇಡಿ. ನನ್ನ ಅಣ್ಣನ ಗೆಳೆಯನ ಮನೆಯಲ್ಲಿ ಎಲ್ಲರ ಹೆಸರೂ ‘ನಾಗ’ಇಂದ ಪ್ರಾರಂಭವಾಗುತ್ತಿತ್ತು. ನಾಗಶಯನ, ನಾಗಮನೋಹರ, ನಾಗಚಂದ್ರಿಕಾ, ನಾಗರಾಜ, ನಾಗರತ್ನ .. ಹೀಗೆ. ಆದರೆ ಕೆಲ ಊರುಗಳಲ್ಲಿ  ಕೆಲ ಹೆಸರುಗಳೇ ಹೆಚ್ಚು ಪ್ರಚಲಿತವಾಗಿರುತ್ತವೆ ಎಂಬುದು ನನಗೆ ತಿಳಿದಿರಲಿಲ್ಲ. .ನಾವು ಎರಡು ದಶಕಗಳ ಹಿಂದೆ ಗೌರಿಬಿದನೂರಿನಲ್ಲಿದ್ದಾಗ  ನಾನೊಂದು ವಿಚಿತ್ರ ಗಮನಿಸಿದೆ. ಅಲ್ಲಿನ ಜನರಲ್ಲಿ ಗಂಗಾ ಹೆಸರೇ ಪ್ರಧಾನವಾಗಿ ಕಾಣುತ್ತಿತ್ತು. ಗಂಗಪ್ಪ, ಗಂಗಮ್ಮ. ದೊಡ್ಡಗಂಗಯ್ಯ, ಪುಟ್ಟಗಂಗಪ್ಪ...ಗಂಗರಾಜು, ಇದೇಕೆ ಹೀಗೆ ?ಎಂದು ಬಹಳ ಆಶ್ಚರ್ಯವಾಯಿತು. ನಮ್ಮ ಮನೆಗೆ ಕೆಲಸಕ್ಕೆ ಬರುವ ಗಂಗಮ್ಮನ ಮನೆಯಲ್ಲಿರುವವರೆಲ್ಲಾ ಗಂಗಾಗಳೇ. ಕಾರಣ ಕೇಳಿದಾಗ ಅವಳು ಕೊಟ್ಟ ಉತ್ತರ ಊರಿನ ಬಳಿ ಇರುವ ಮುದ್ದಗಾನಗುಂಟೆಯತ್ತ ಬೆರಳು ಮಾಡಿ ತೋರಿಸಿತು. ಅಲ್ಲಿನ ಗಂಗಮ್ಮನನ್ನು ಪೂಜಿಸಿದರೆ ಮಕ್ಕಳಾಗುತ್ತದೆ ಎಂಬ ನಂಬಿಕೆ ಇದೆ. ನಾಗ ದೇವರನ್ನು ಪೂಜಿಸಿದರೆ ಮಕ್ಕಳಾಗುವುದು ಎಂಬ ನಂಬಿಕೆ ಇಲ್ಲವೇ ? ಹಾಗೆ.ಅಲ್ಲಿಯ ಗಂಗಮ್ಮ ಅನೇಕ ಮನೆಗಳವರಿಗೆ ಹಿಂದಿನಿಂದ ಸತ್ಯದ ದೇವರು&lt;br /&gt;&lt;br /&gt;ಇಷ್ಟೆಲ್ಲಾ ಪೀಠಿಕೆ ಏಕೆನ್ನುವಿರೋ? ಇತ್ತೀಚೆಗೆ ಒಂದು ದಿನ ಎಂದಿನ ಹಾಗೆ  ಕಾಲೇಜಿನಿಂದ ಮನೆಗೆ ಬಂದು ಗಾಡಿ ಒಳಗಿಟ್ಟು ಅಭ್ಯಾಸ ಬಲದಂತೆ ಪೋಸ್ಟ್ ಬಾಕ್ಸ್ ತೆಗೆದು ಯಾವುದಾದರೂ ಪತ್ರವಿದೆಯಾ? ಎಂದು ನೋಡಿದೆ. ಎಷ್ಟೊಂದು ಪೋಸ್ಟ್ ಗಳು!. ಒಂದೆರಡು ಪತ್ರಿಕೆಗಳು, ಮತ್ತೆರಡು ಕ್ರೆಡಿಟ್ ಕಾರ್ಡ್ Statement ಗಳು, ಅವುಗಳ ನಡುವೆ ಒಂದು ವಿದೇಶಿ ಪತ್ರ. ಅದರ ಮೇಲಿದ್ದ 'ಪ್ರತಿಭಾ ರಾಮ್ ' ಹೆಸರು ನನ್ನಲ್ಲಿ  ಹೆಸರಿನ ಬಗ್ಗೆ ಇಷ್ಟೊಂದು ಯೋಚಿಸುವಂತೆ ಮಾಡಿತು. ಒಂದು  ರೀತಿಯ ಅವರ್ಣನೀಯ ಆನಂದವನ್ನುಂಟು ಮಾಡಿತು. ಆ ಹೆಸರನ್ನು ಕೇಳಿ ಎಷ್ಟೊಂದು ದಿನಗಳಾದವು! ಸಾವಿತ್ರಿ ಪತ್ರ ಬರೆದು ಎಷ್ಟೊಂದು ದಿನಗಳಾದವು? . ಹೌದು ರಘು ತೀರಿಕೊಂಡನಂತರ ಸಾವಿತ್ರಿ ಪತ್ರ ಬರೆದದ್ದೇ ಕಡಿಮೆ. ಒಂದು ಹಂತದಲ್ಲಿ  ಪ್ರತಿಭಾ ಹೆಸರು ಬೇಸರವಾಗಿಬಿಟ್ಟಿದ್ದು ಎಷ್ಟು ನಿಜವೋ  ಈಗ ಅದರ ನೆನಪು ಸುಂದರವಾಗಿದೆ ಎಂದು ಅನಿಸುತ್ತಿರುವುದೂ ಅಷ್ಟೇ ನಿಜ..&lt;br /&gt;       &lt;br /&gt;ನಮ್ಮ ಮನೆಯಲ್ಲಿ ಎಲ್ಲ ಮಕ್ಕಳ ಹೆಸರಿಟ್ಟವರೂ ನನ್ನ ಅಪ್ಪನೇ ಅಂತೆ. ಅದರ ಬಗ್ಗೆ ಅಮ್ಮನಿಗೂ ಹೆಮ್ಮೆ. ಎಲ್ಲರ ಹೆಸರೂ ಪರವಾಗಿಲ್ಲ. ನನಗೇಕೆ ಈ ಹೆಸರಿಟ್ಟರು ? ಎಂಬುದು ಸದಾಕಾಲ ನನ್ನನ್ನು ಕಾಡುತ್ತಿದ್ದ  ಪ್ರಶ್ನೆ. ಸದಾಕಾಲ ಎಂದರೆ ನಾನು ಕಾಲೇಜಿಗೆ ಸೇರಿದಾಗಿನಿಂದ ನನ್ನನ್ನು ಕಾಡುತ್ತಿದ್ದ ಪ್ರಶ್ನೆ. ಅಲ್ಲಿಯವರೆಗೆ ನನ್ನದೊಂದು ವಿಚಿತ್ರ ಹೆಸರು ಅನ್ನಿಸಿರಲೇ ಇಲ್ಲ. ನಾನು ಚಿಕ್ಕ ಊರಿನಲ್ಲಿ ಪಿಯುಸಿ ಮುಗಿಸುವವರೆಗೆ ನನ್ನ ಹೆಸರಿನ ಬಗ್ಗೆ ನನಗೆ ಗಮನವೇ ಇರಲಿಲ್ಲ. ಆದರೆ ಬೆಂಗಳೂರಿನಂತಹ ಪಟ್ಟಣದಲ್ಲಿ ನನ್ನ ಮುಂದಿನ ವಿದ್ಯಾಭ್ಯಾಸ ಪ್ರಾರಂಭವಾದಾಗ ಈ ಹೆಸರಿನ ಬಗ್ಗೆ ಕೀಳರಿಮೆ ಉಂಟಾಗಲು ಪ್ರಾರಂಭವಾಯಿತು.ಕಾಲೇಜಿನಲ್ಲಿ ನನ್ನ ಹೆಸರು ದಾಖಲಾಗಿ  ಕಾರಣಾಂತರಗಳಿಂದ ( ಹಾಸ್ಟೆಲ್ ನಲ್ಲಿ ನನ್ನ ದಾಖಲಾತಿ ಇನ್ನೂ ಆಗದೆ ಇದ್ದುದರಿಂದ) ನಾನು ಕಾಲೇಜಿಗೆ ಹೋಗುವುದು ತಡವಾದಾಗ- ಒಂದೆರಡು ದಿನ ತಡವಲ್ಲ ,ಇಪ್ಪತ್ತು ದಿನಗಳು ತಡವಾದಾಗ ಮೊದಲ ದಿನವೇ ನನ್ನದೊಂದು ಎಡವಟ್ಟು ಹೆಸರು ಎಂಬ ಅರಿವು ಮೂಡಿತು. ಈ ಮಹಾನಗರದಲ್ಲಿ ಯಾರೊಬ್ಬರ ಪರಿಚಯವೂ ಇಲ್ಲದೆ ನಾನು ಮೊದಲ ದಿನ ತರಗತಿಯ ಒಂದು ಮೂಲೆಯಲ್ಲಿ ಮುದುರಿಕೊಂಡು ಕುಳಿತಿದ್ದೆ. ಮೊದಲ ತರಗತಿ ಪ್ರಾರಂಭವಾಯಿತು. ಅಧ್ಯಾಪಕರು ಹಾಜರಿ ಹಾಕಲು ಪ್ರಾರಂಭಿಸಿ ಹೆಸರುಗಳನ್ನು ಕರೆಯಲಾರಂಭಿಸಿದರು. ಅನ್ನಪೂರ್ಣ, ಅರುಣ,.. ಭವ್ಯ.., ಭಾರತಿ.. ಬಾಲು...&lt;b&gt;ಚಂದ್ರಕಾಂತ  &lt;/b&gt;ಎಂದು ಕರೆದು ಎಂದಿನಂತೆ ಅಂದೂ  ನಾನು ಹಾಜರಾಗಿಲ್ಲವೇನೋ ಎಂಬ ಭಾವದಲ್ಲಿ ಒಮ್ಮೆ ಕಣ್ಣೆತ್ತಿ  &lt;b&gt;ಹುಡುಗರ&lt;/b&gt;  ಕಡೆ ನೋಡಿ Absent ಗುರುತು ಮಾಡಬೇಕೆಂದಿದ್ದರೇನೋ ? ಅಷ್ಟರಲ್ಲಿ ನಾನು ಸಣ್ಣ ದನಿಯಲ್ಲಿ 'ಎಸ್ ಸರ್' ಎಂದೆ. ಅಧ್ಯಾಪಕರೊಂದಿಗೆ ಇಡೀ ತರಗತಿ ನನ್ನತ್ತ ಆಶ್ಚರ್ಯದಿಂದ ನೋಡಲಾರಂಭಿಸಿತು. ಏಕೆಂದು ತಿಳಿಯದಿದ್ದರೂ ಎಲ್ಲರ ಗಮನ ನನ್ನ ಮೇಲಿದ್ದುದರಿಂದ ಸಂಕೋಚವಾಯಿತು.ಅಧ್ಯಾಪಕರ ಮುಖದಲ್ಲಿ ಅಚ್ಚರಿಯ ಭಾವ ಏಕೆ ಮೂಡಿತು? ತಿಳಿಯಲಿಲ್ಲ. ಆದರೆ ಇದು ಅಷ್ಟಕ್ಕೇ ನಿಲ್ಲಲಿಲ್ಲ.! ಹಾಗೇ ಹಾಜರಿ ಮುಂದುವರೆಯಿತು. &lt;b&gt;'ಲಕ್ಷ್ಮೀಕಾಂತ'&lt;/b&gt;ಎಂದು ಕರೆದ ಸರ್ ಒಮ್ಮೆ ಕಣ್ಣೆತ್ತಿ &lt;b&gt;ಹುಡುಗಿಯರ &lt;/b&gt;ಕಡೆ ನೋಡಿ Absent ಮಾರ್ಕ್ ಮಾಡಬೇಕೆಂದಿದ್ದರೇನೋ ಆದರೆ ಹುಡುಗರ ಕಡೆಯಿಂದ 'ಎಸ್ ಸರ್' ಎಂಬ ಗಡಸು ಧ್ವನಿ ಕೇಳಿಸಿದಾಗ ಮತ್ತೊಮ್ಮೆ ಎಲ್ಲರ ಅಚ್ಚರಿಯ ಕಣ್ಣುಗಳು ಅವನತ್ತ ತಿರುಗಿತು. ಆ ಹುಡುಗನೂ ಅದೇ ದಿನ ತರಗತಿಗೆ ಬರಲಾರಂಭಿಸಿದ್ದ ಎಂದು ಅನಂತರ ತಿಳಿಯಿತು!.&lt;br /&gt;       &lt;br /&gt;ಹೀಗೆ ಪ್ರತಿಯೊಬ್ಬ  ಅಧ್ಯಾಪಕರು ತರಗತಿಗೆ ಬಂದಾಗಲೂ 'ಚಂದ್ರಕಾಂತ' ಎಂದು ಕರೆದು ಹುಡುಗರ ಕಡೆ ನೋಡಿ ,ಅನಂತರ ನಾನು ಉತ್ತರಿಸಿದ ಮೇಲೆ ಆಶ್ಚರ್ಯದಿಂದ ನನ್ನೆಡೆ ನೋಡುವುದು.. ನಡೆದೇ ಇತ್ತು.ಇಷ್ಟು ಸಾಲದೆಂಬಂತೆ ನೋಟೀಸ್ ಬೋರ್ಡ್ ಮೇಲೆ ವಿದ್ಯಾರ್ಥಿಗಳ ರಿಜಿಸ್ಟರ್ ನಂಬರ್ ಪಟ್ಟಿಯನ್ನು ಪ್ರಕಟಿಸಿದಾಗ ನನ್ನ ಹೆಸರು ಹುಡುಗರ ಹೆಸರಿನಲ್ಲಿತ್ತು. ಆ ಕಾಲೇಜಿನಲ್ಲಿ ಹುಡುಗಿಯರ ಹೆಸರನ್ನು ಇಂಗ್ಲೀಷಿನ ಕ್ಯಾಪಿಟಲ್ ಅಕ್ಷರಗಳಲ್ಲಿ ಪ್ರಕಟಿಸುತ್ತಿದ್ದರು. ನನಗಂತೂ ಕಛೇರಿಗೆ ಹೋಗಿ ನನ್ನ ಹೆಸರು ಹುಡುಗರ ಪಟ್ಟಿಯಲ್ಲಿದೆ ಎಂದು ಹೇಳಲೂ ಸಂಕೋಚ. ಅಂತೂ ವಿದ್ಯಾಭ್ಯಾಸ ಮುಗಿಯುವಷ್ಟರಲ್ಲಿ ನನ್ನ ಹೆಸರಿನ ಬಗ್ಗೆ ಪೂರ್ಣವಾಗಿ ಕೀಳರಿಮೆ ಬಂದಿತ್ತು.&lt;br /&gt;      &lt;br /&gt;ವಿದ್ಯಾಭ್ಯಾಸ ಮುಗಿದ ಕೂಡಲೇ ನನ್ನ ಮದುವೆಯೂ ನಡೆಯಿತು. ಮದುವೆಗೆ ಮುಂಚೆ ನನ್ನವರು’ ಹೆಸರು ಬದಲಾಯಿಸಿಕೊಳ್ಳಲು ಇಷ್ಟವೆ? ಎಂದು ಕೇಳಿದಾಗ&lt;br /&gt;' ಸಧ್ಯ ಮದುವೆಯ ನಂತರ  ಗಂಡನ ಊರಿಗೆ ಹೋದಾಗ ನನ್ನ ಹೆಸರು ಕೇಳಿದವರಿಗೆಲ್ಲಾ ಈ ಹೆಸರು ಹೇಳಿ ಅವರ ವಿಚಿತ್ರ ಮುಖಭಾವ ನೋಡುವುದು ತಪ್ಪಿತಲ್ಲಾ ’ಎಂದು ಕೂಡಲೇ ಒಪ್ಪಿಕೊಂಡೆ. ಹೀಗೆ ನಾನು 'ಚಂದ್ರಕಾಂತ 'ಹೋಗಿ 'ಪ್ರತಿಭಾ' ಆದೆ.ಎಷ್ಟೋ ಬಾರಿ  ಯಾರಾದರೂ ' ಪ್ರತಿಭಾ ' ಎಂದು ಕರೆದರೆ ತಿರುಗಿ ನೋಡಲೂ ಮರೆಯುತ್ತಿದ್ದೆ. ಹೀಗೆ ತವರು ಮನೆಯವರಿಗೆ ಚಂದ್ರಕಾಂತ ,  ಅತ್ತೆ ಮನೆಯವರಿಗೆ ಹಾಗೂ ನನ್ನೂರಿನವರಿಗೆ "ಪ್ರತಿಭಾ' ಹೆಸರಿನವಳಾದೆ.ಕೆಲವು ವರ್ಷಗಳುರುಳಿದುವು.  ಮೊದಲ ಹೆಸರು ಕ್ರಮೇಣ ಮರೆಯಾಗಿ ಪ್ರತಿಭಾ ಹೆಸರೇ ಹೆಚ್ಚೂ ಕಡಿಮೆ ನನ್ನ ಹೆಸರಾಯಿತು.  ನಮ್ಮ ಪ್ರೀತಿಯ ಮಗ ಅಂಬೆಗಾಲಿಡುತ್ತಾ , ನಡೆದಾಡುತ್ತಾ ಶಾಲೆಗೆ ಸೇರಿದ. ಮದುವೆಯಾಗಿ ಆರು ವರುಷಗಳಾದುವು.ತವರಿಗೆ ಆಗೊಮ್ಮೆ , ಈಗೊಮ್ಮೆ ಹೋಗುತ್ತಿದ್ದಾಗ ಮಾತ್ರ ನನ್ನ ಮೊದಲ ಹೆಸರು ಕಿವಿಗೆ ಬೀಳುತ್ತಿತ್ತು.ಈ ಹಂತದಲ್ಲಿ  ನನಗೇ  ಅರಿವಿಲ್ಲದೆ ನನ್ನ ಮೊದಲ ಹೆಸರಿನ ಬಗ್ಗೆ ನಿಧಾನವಾಗಿ ಪ್ರೀತಿ ಹುಟ್ಟಲಾರಂಭಿಸಿತು. ನಮ್ಮ ಬಾಲ್ಯದಲ್ಲಿ ನಮಗಿಷ್ಟವಿಲ್ಲದ ವಸ್ತುವನ್ನು ಯಾರಿಗಾದರೂ ( ಮನೆಯಲ್ಲಿರುವ ಇತರ ಮಕ್ಕಳಿಗೆ) ಕೊಟ್ಟು, ನಂತರ ಅವರ ಕೈಯಲ್ಲಿ ಆ ವಸ್ತುವನ್ನು ನೋಡಿದಾಗ ಅದರ ಬಗ್ಗೆ ಆಸೆಮೂಡುವುದು ಸಹಜ.ಆದರೆ ನನ್ನ ಮೊದಲ ಹೆಸರಿನ ಅನುಪಸ್ಥಿತಿಯಲ್ಲಿ ಅದು ನನ್ನನ್ನು ತೀವ್ರವಾಗಿ ಸೆಳೆಯಲಾರಂಭಿಸಿತು. ಯಾರಿಗಾದರೂ ಹೇಳಿದರೆ ಹುಚ್ಚೆನುವುದಿಲ್ಲವೇ ? ನನ್ನ ಹೆಸರು ನನ್ನ ಕಿವಿಗೆ ಬೀಳಬೇಕೆನಿಸುತ್ತಿತ್ತು.ಒಂದೆರಡು ಬಾರಿ  ನನ್ನ ಹೆಸರು ಕನಸಿನಲ್ಲಿ ಕಾಣಿಸಿಕೊಳ್ಳುತ್ತಾ " ನನ್ನನ್ನು ಮರೆತೆಯಾ ? " ಎಂದು ಕೇಳಿದಂತೆನಿಸುತ್ತಿತ್ತು.ಯಾರಲ್ಲಿ ಹೇಳಿಕೊಳ್ಳುವುದು ?&lt;br /&gt;  &lt;br /&gt;ಇದೇ ಸಂದರ್ಭದಲ್ಲಿ ನನ್ನ ಮೊದಲ ಹೆಸರಿನೊಡನೆ ಮತ್ತೆ ನಾನು ಕೈಜೋಡಿಸುವ  ಸಂದರ್ಭ ತಾನಾಗಿಯೇ ಒದಗಿ ಬಂದದ್ದೊಂದು ವಿಶೇಷ.ನನ್ನ ಮಗ ಶಾಲೆಗೆ ಹೋಗಲಾರಂಭಿಸದ ಮೇಲೆ ಆ ಊರಿನಲ್ಲಿರುವ ಕಾಲೇಜಿನಲ್ಲಿ ಒಂದು ಉಪನ್ಯಾಸಕ ಹುದ್ದೆ ಖಾಲಿ ಇದೆಯೆಂದೂ ಅದು ಅರೆಕಾಲಿಕ ಹುದ್ದೆಯಾದ್ದರಿಂದ ಬಂದವರಾರೂ ಅಲ್ಲಿ ಉಳಿಯುತ್ತಿಲ್ಲವೆಂದೂ ತಿಲಿಯಿತು.ಕಾಲೇಜಿನ ಮಖ್ಯಸ್ಥರು ನಮ್ಮ ಮನೆಗೆ ಬಂದು ಉಪನ್ಯಾಸಕಿಯಾಗುವಂತೆ ಕೇಳಿಕೊಂಡರು. ಉದ್ಯೋಗಸ್ಠ ಮಹಿಳೆಯಾದರೆ ನನ್ನ ಮನೆ, ಮಗುವಿನ ಕಡೆ ಗಮನ ಕಡಿಮೆಯಾಗಬಹುದೆಂದು ನಾನು ಯಾವುದೇ ಉದ್ಯೋಗಕ್ಕೆ ಪ್ರಯತ್ನಿಸಿರಲಿಲ್ಲ. ಆದರೆ ಈಗ ಮಗನೂ ಶಾಲೆಗೆ ಹೋಗುತ್ತಿದ್ದುದರಿಂದ ಕೆಲಸ, ಸಂಸಾರ ಎರಡಕ್ಕೂ ಸಮಯ ಸಿಕ್ಕುತ್ತಿದ್ದುದರಿಂದ ನಾನು ಆ ಕೆಲಸಕ್ಕೆ ಸೇರಿಕೊಂಡೆ. ಕೆಲಸಕ್ಕೆ ಸೇರುವಾಗ ನನ್ನ ಅಂಕಪಟ್ಟಿ ,ಮಾರ್ಕ್ಸ್ ಕಾರ್ಡ್ ನೋಡಿದಾಗ ಕಾಲೇಜಿನವರಿಗೆ ನನ್ನ ಹೆಸರು ಚಂದ್ರಕಾಂತ ಎಂದು ತಿಳಿಯಿತು. ಅವರು ಹೆಸರು ಬದಲಿಸಿಕೊಳ್ಳುವುದು ಕಷ್ಟವಿಲ್ಲವೆಂದು ತಿಳಿಸಿದರು. ಆದರೆ ನಾನು ಮಾತ್ರ ಈ ಸುವರ್ಣಾವಕಾಶ ಕಳೆದುಕೊಳ್ಳಲು ಸಿದ್ಧಳಿರಲಿಲ್ಲ. ಮತ್ತೊಮ್ಮೆ ಆ ಊರಿನಲ್ಲಿ ಪರಿಚಯದವರಿಗೆಲ್ಲಾ ನನ್ನ ಹಳೆಯ ಹೆಸರು ಹೇಳುವ ಸಂದರ್ಭ ಬಂದು ಹಳೆಯ ಘಟನೆಯೇ ಮರುಕಳಿಸುತ್ತಿತ್ತು.ಯಥಾಪ್ರಕಾರ ಎಲ್ಲರೂ ನನ್ನ ಹೆಸರನ್ನು ಕೇಳಿ ನನ್ನನ್ನು ಕೊಂಚ ವಿಚಿತ್ರವಾಗಿಯೇ ನೋಡಿದರೂ ನನಗೆ ಮಾತ್ರ ಮೊದಲಿನಂತೆ ಅವಮಾನ ಎನಿಸಲಿಲ್ಲ. ಕೀಳರಿಮೆಯ ಭಾವ ಮೂಡಲಿಲ್ಲ.&lt;br /&gt;&lt;br /&gt;ಅಂದಿನಿಂದ ಎರಡುದಶಕಗಳಲ್ಲಿ ನನ್ನ ಈ ಹೆಸರು ಅನೇಕ ಬಾರಿ ನನ್ನನ್ನು ಪೇಚಿಗೆ ಸಿಲುಕಿಸಿದೆ.ನಾವು ಬೆಂಗಳೂರಿಗೆ ಬಂದು  ಪೂರ್ಣಾವಧಿ ಕೆಲಸಕ್ಕೆ ಸೇರಿ, ಹೊಸ ಸಹೋದ್ಯೋಗಿಗಳ   ಪರಿಚಯವಾಗಿ , ನನ್ನ  ಹೆಸರು ಹೇಳಿದಾಗ ವಿಚಿತ್ರ ಮುಖಭಾವವೇ. ಈ ನಡುವೆ ನನ್ನ ಹೆಸರಿನ ಸ್ತ್ರೀಯರು ಯಾರಾದರೂ ಇದ್ದಾರೆಯೇ ? ಎಂದು ಹಾಗೆ ಸುಮ್ಮನೆ ಕಣ್ಣಾಡಿಸುತ್ತಿದ್ದೆ. ನನ್ನ ಹೆಸರಿನವರೇನೋ ಇದ್ದಾರೆ. ಆದರೆ ಎಲ್ಲರೂ ಪುರುಷರೆ. ಟಿವಿಯಲ್ಲಿ  ಪ್ರಖ್ಯಾತ ಧಾರಾವಾಹಿ &lt;b&gt;ಚಂದ್ರಕಾಂತಾ &lt;/b&gt;ಪ್ರಸಾರವಾದಾಗ.,ಕಥಾ ನಾಯಕಿ ಚಂದ್ರಕಾಂತ ರಾಜಕುಮಾರಿ ಎಂಬುದು ತಿಳಿದು ಖುಷಿಯಾಯಿತು. ನನ್ನ ಹೆಸರಿನ ಕಾರಣದಿಂದ ನಾನು ಈವರೆಗೂ ಪೇಚು ಎದುರಿಸುತ್ತಲೇ ಬಂದಿರುವೆ.&lt;br /&gt;&lt;br /&gt;ಮೊದಲ ಬಾರಿ ಕ್ರೆಡಿಟ್ ಕಾರ್ಡ್ ಮಾಡಿಸುವಾಗ ಎಲ್ಲ ವಿವರಗಳನ್ನೂ ಬರೆದುಕೊಂಡುಹೋದ, ಬ್ಯಾಂಕಿನ ಮಹಾಶಯ. ಕಾರ್ಡ್ ಬಂದಾಯಿತು. ಬರುವ ಮುಂಚೆ ಕ್ರೆಡಿಟ್ ಕಾರ್ಡ್ ನ ಕಡೆಯವರು verification ಮಾಡುವಾಗ ಅತ್ತಕಡೆಯಿಂದ&lt;br /&gt;&lt;br /&gt;" Can I speak to Mr. Chandrakaantha " ಎಂದು ಕೋಗಿಲೆ ಕಂಠದಿಂದ ಉಲಿದ ಹೆಣ್ಣು ಧ್ವನಿ ಕೇಳಿಸಿತು. ಎದುರಿಗಿರುವವರು ಇಂಗ್ಲೀಷ್ ನಲ್ಲಿ ಮಾತನಾಡಿದರೂ ನಾನು ಮಾತ್ರ ಕನ್ನಡದಲ್ಲಿಯೇ ಉತ್ತರಿಸುವ ಸ್ವಭಾವದವಳು.ಆದ್ದರಿಂದ&lt;br /&gt;&lt;br /&gt;" ಹೇಳಿ, ನಾನೇ ಚಂದ್ರಕಾಂತ " ಎಂದೆ&lt;br /&gt;&lt;br /&gt;" ನಾವು ಚಂದ್ರಕಾಂತ ಜೊತೆ ಮಾತನಾಡಬೇಕು " ಮತ್ತದೇ ಮಾತು ಅವಳದು&lt;br /&gt;&lt;br /&gt;" ನಾನೇ ಶ್ರೀಮತಿ ಚಂದ್ರಕಾಂತ " ಎಂದೆ.&lt;br /&gt;&lt;br /&gt;" ನಮಗೆ ಚಂದ್ರಕಾಂತ ಅವರ ಶ್ರೀಮತಿ ಬೇಡ, ಮಿಸ್ಟರ್ ಚಂದ್ರಕಾಂತ ಬೇಕು " ಎಂದಾಗ ನನ್ನ ಕೋಪ ನೆತ್ತಿಗೇರಿತು.ಆದರೂ ತಾಳ್ಮೆಯಿಂದ ಕಾರ್ಡ್ ನಲ್ಲಿ ಬರೆದ ವಿವರಗಳನ್ನು ಕಣ್ಣುಬಿಟ್ಟು ನೋಡಿ ಎಂದ ಮೇಲೆ ಅವಳು ತಾಳ್ಮೆಯಿಂದ ಇದರಲ್ಲಿ ಮಿಸ್ಟರ್ ಎಂದೇ ಇದೆಯೆಂದಳು. ಕೂಡಲೇ ನಮಗೆ ಕಾರ್ಡ್ ಬೇಡವೆಂದು ಹೇಳಿದೆ. ಕೂಡಲೇ  ಎಚ್ಚೆತ್ತುಕೊಂಡ ಅವಳು ಅದನ್ನು ತಿದ್ದುಪಡಿ ಮಾಡಿ ಕಾರ್ಡ್ ಕಳಿಸುವೆನೆಂದಳು&lt;br /&gt;&lt;br /&gt;ಇದು ಕೇವಲ ಕಾರ್ಡ್ ವಿಷಯಕ್ಕೆ ಮಾತ್ರವಲ್ಲ ವಿಮಾಪಾಲಿಸಿಯ ವಿಚಾರದಲ್ಲೂ ಹೀಗೇ ಆಗಿದೆ.ಪಾಲಿಸಿ ಮಾಡಿಸುವಾಗ ಆ ಏಜೆಂಟ್ ನನ್ನ ವಿವರಗಳನ್ನು ಸರಿಯಾಗಿಯೇ ಬರೆದಿರುವಳೆಂದು ಕೊಂಡಿದ್ದೆ. ಕೆಲವು ವರ್ಷಗಳ ನಂತರ ಸ್ವಲ್ಪ ಹಣ ಹಿಂದಕ್ಕೆ ಬಂದಾಗ ಅದರಲ್ಲಿ ಮಿಸ್ಟರ್ ಎಂದಿರುವುದನ್ನು ನೋಡಿ ಅದನ್ನು ಸರಿಪಡಿಸುವಲ್ಲಿ ಸ್ವಲ್ಪ ದಿನಗಳೇ ಕಳೆದುವು.&lt;br /&gt;&lt;br /&gt;ಕೆಲವು ವರ್ಷಗಳ ಹಿಂದೆ ಪತ್ರಿಕೆಯೊಂದಕ್ಕೆ ನನ್ನ ಲೇಖನವನ್ನು ಕಳಿಸಿದಾಗ ಅವರು ಚಂದ್ರಕಾಂತ್ ಎಂದು ಪ್ರಕಟಿಸಿದ್ದರು.ಸಂಪಾದಕರೊಂದಿಗೆ ಮಾತನಾಡಿದಾಗ ಅವರು ಹೇಳಿದ್ದು&lt;br /&gt;" ಮುಂದಿನ ಬಾರಿ ಸರಿಯಾಗಿ ಪ್ರಕಟಿಸುತ್ತೇವೆ " ಎಂದು. ಮತ್ತೊಂದು ಲೇಖನ ಪ್ರಕಟವಾಯಿತು. ಅದರಲ್ಲಿ ಚಂದ್ರಕಾಂತಾ ಎಂದು ಪ್ರಕಟಿಸಿದ್ದಾರೆ. ಸ್ತ್ರೀಲಿಂಗಕ್ಕೆ ದೀರ್ಘ ಸ್ವರ ಇರಬೇಕಲ್ಲವೇ ? ಎಂದು.ತಮ್ಮ ವ್ಯಾಕರಣ ಜ್ಞಾನವನ್ನು ಪ್ರದರ್ಶಿಸಿದರು ಇನ್ನು ಇವರೊಂದಿಗೆ ಮಾತನಾಡಿ ಪ್ರಯೋಜನವಿಲ್ಲವೆಂದು ಸುಮ್ಮನಾದೆ.&lt;br /&gt;&lt;br /&gt;ಕೆಲವೊಮ್ಮೆ ಬ್ಲಾಗ್ ಸಹೃದಯಿಗಳೂ ನನ್ನನ್ನು ಸರ್ ಎಂದೇ ಸಂಬೋದಿಸಿದ್ದಾರೆ.ನಾನು ಮಾತ್ರ ಈಗ ಯಾರನ್ನೂ ತಿದ್ದಲು ಹೋಗುತ್ತಿಲ್ಲ.&lt;br /&gt;&lt;br /&gt;ಆದರೆ ತೀರಾ ಇತ್ತೀಚೆಗೆ ಟಿ.ಎನ್.ಸೀತಾರಾಮ್ ತಮ್ಮ ಮುಕ್ತ...ಮುಕ್ತ ಧಾರಾವಾಹಿಯಲ್ಲಿ ಶಾಂಭವಿಯ ಅಣ್ಣನಿಗೆ ಚಂದ್ರಕಾಂತ ಎಂಬ ಹೆಸರಿಟ್ಟುಬಿಟ್ಟಿದ್ದಾರೆ.! ಅದು ಯಾವ ನ್ಯಾಯ ಹೇಳಿ?&lt;br /&gt;&lt;br /&gt;ನನಗೇ ಆಶ್ಚರ್ಯವಾಗುವಂತೆ ನನಗೀಗ ಕೀಳರಿಮೆ ಪೂರ್ತಿ ಕಡಿಮೆಯಾಗಿದೆ." ನನಗೇಕೆ ನಮ್ಮಪ್ಪ ಈ ಹೆಸರಿಟ್ಟರೋ" ಎಂದು ತಲೆಚಚ್ಚಿಕೊಳ್ಳುವುದನ್ನೂ ಬಿಟ್ಟಿದ್ದೇನೆ.ಇಂತಹ ಒಂದೊಂದು ಪ್ರಸಂಗ ನಡೆದಾಗಲೂ ನನ್ನ ಹೆಸರಿನ ಮೇಲಿನ ವ್ಯಾಮೋಹ ಹೆಚ್ಚುತ್ತಲೇ ಹೋಗಿದೆ.    ಆದ್ದರಿಂದಲೇ &lt;span style="color: rgb(153, 0, 0);font-size:130%;" &gt;&lt;b&gt;" ನಾಮಾಯ ತಸ್ಮೈ ನಮಃ " &lt;/b&gt;&lt;/span&gt;ಎಂದು ನನ್ನ ಹೆಸರಿಗೊಂದು ನಮಸ್ಕಾರ ಹಾಕಿದ್ದೇನೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8114402468197807042-1868771173664178850?l=battadatore.blogspot.com' alt='' /&gt;&lt;/div&gt;</content><link rel='replies' type='application/atom+xml' href='http://battadatore.blogspot.com/feeds/1868771173664178850/comments/default' title='Post Comments'/><link rel='replies' type='text/html' href='http://battadatore.blogspot.com/2009/03/blog-post.html#comment-form' title='36 Comments'/><link rel='edit' type='application/atom+xml' href='http://www.blogger.com/feeds/8114402468197807042/posts/default/1868771173664178850'/><link rel='self' type='application/atom+xml' href='http://www.blogger.com/feeds/8114402468197807042/posts/default/1868771173664178850'/><link rel='alternate' type='text/html' href='http://battadatore.blogspot.com/2009/03/blog-post.html' title='ನಾಮಾಯ ತಸ್ಮೈ ನಮಃ'/><author><name>ಚಂದ್ರಕಾಂತ ಎಸ್</name><uri>http://www.blogger.com/profile/00490264860537389455</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='25' src='http://3.bp.blogspot.com/_4wQW2-q8XsA/SVIw-U299dI/AAAAAAAAADY/T9mtUHgBZhU/S220/blogfile12.jpg'/></author><thr:total>36</thr:total></entry><entry><id>tag:blogger.com,1999:blog-8114402468197807042.post-5923986686843651968</id><published>2009-02-21T19:56:00.000+05:30</published><updated>2009-02-24T22:27:16.962+05:30</updated><category scheme='http://www.blogger.com/atom/ns#' term='ಭೀಷ್ಮ'/><category scheme='http://www.blogger.com/atom/ns#' term='ಓತಿ'/><category scheme='http://www.blogger.com/atom/ns#' term='ಮಹಾಭಾರತ'/><title type='text'>ಭೀಷ್ಮರಿಗೆ ಓತಿ ಶಾಪ ಕೊಟ್ಟ ಪ್ರಸಂಗ</title><content type='html'>&lt;span style="color: rgb(153, 0, 0);font-size:6;" &gt;&lt;b&gt;ಭೀಷ್ಮರಿಗೆ ಓತಿ ಶಾಪ ಕೊಟ್ಟ ಪ್ರಸಂಗ&lt;/b&gt;&lt;/span&gt;&lt;br /&gt;&lt;br /&gt;ವಾರಣಾವತದ ಅರಗಿನರಮನೆಯಲ್ಲಿ ಸುಟ್ಟು ಭಸ್ಮವಾಗಿರುವರೆಂದು  ಭಾವಿಸಿದ್ದ ಪಾಂಡವರು ಬದುಕಿ ಉಳಿದಿದ್ದಾರೆ ಎಂಬ ಸುದ್ದಿ ಕೇಳಿ ಹಸ್ತಿನಾಪುರದ ಜನತೆಗೆ ಸಂಸವಾಯಿತು.ಭೀಷ್ಮರು ಎಲ್ಲರಿಗಿಂತ ಹೆಚ್ಚು ಸಭ್ರಮ ಪಟ್ಟರು.ಪಾಂಡವರು ಬದುಕಿ ಉಳಿದಿರುವುದು ಮಾತ್ರವಲ್ಲ ತಮ್ಮ ಶೌರ್ಯ , ಪರಾಕ್ರಮದಿಂದ ಹಲವು ರಾಕ್ಷಸರನ್ನು ಕೊಂದು ಕೆಲವು ರಾಜಾಧಿರಾಜರನ್ನು ಗೆದ್ದು ,  ಪಾಂಚಾಲ ನಗರಿಯ ರಾಜ ದ್ರುಪದನ ರಾಜಕುಮಾರಿ ದ್ರೌಪದಿಯನ್ನುವಿವಾಹವಾಗಿ  ಈಗ ಹಸ್ತಿನಾಪುರಕ್ಕೆ ಬರುತ್ತಿದ್ದಾರೆಂಬ ಸುದ್ದಿ  ಅವರ ಸಂತಸವನ್ನು ಇಮ್ಮಡಿ ಮಾಡಿತ್ತು.ಈ ಸಂತೋಷದ ಸಮಯದಲ್ಲಿ ತಮ್ಮ ತಾಯಿ ಗಂಗಾಮಾತೆಯನ್ನು ನೋಡಬೇಕೆಂಬ ಆಸೆ ಭೀಷ್ಮರಿಗೆ ಹುಟ್ಟಿತು.ಸಂತಸದ , ದುಃಖದ - ಯಾವ ಸಮಾಚಾರವನ್ನೇ ಆಗಲಿ ಗಂಗಾಮಾತೆಯ ಬಳಿ ಹಂಚಿಕೊಳ್ಳುವುದು ಭೀಷ್ಮರಿಗೆ ಲಾಗಾಯ್ತಿನಿಂದ ಬಂದ ಅಭ್ಯಾಸ.ಮರುದಿನ ಕೋಳಿಕೂಗುವ ಹೊತ್ತಿಗೆ ಗಂಗಾನದಿಗೆ ಹೋಗಿ ಮಿಂದು , ಮಡಿಯುಟ್ಟು ಪೂಜೆ ಪುನಸ್ಕಾರ ಮಾಡಿ ಬರಬೇಕೆಂದು ನಿರ್ಧರಿಸಿ ಭೀಷ್ಮರು ಮಲಗಿದರು.&lt;br /&gt;&lt;br /&gt;ಮುಂಗೋಳಿ ಕೂಗುವಾಗ , ಮೂಡು ಕೆಂಪೇರುವಾಗ ಕೌರವ, ಪಾಂಡವರಿಗೆಲ್ಲಾ ಹಿರಿಯರಾದ  ಭೀಷ್ಮರು ಬಲಮಗ್ಗುಲಲ್ಲೆದ್ದು , ಗಂಗಾಮಾತೆಯನ್ನು ನೆನಪಿಸಿಕೊಳ್ಳುತ್ತಲೇ ಶಿವಸ್ಮರಣೆ ಮಾಡಿದರು. ನಂತರ ಕಾವಿವಸ್ತ್ರ ಧರಿಸಿ , ಒಂದು ಕೈಯಲ್ಲಿ ಕಮಂಡಲವನ್ನು , ಮತ್ತೊಂದು ಕೈಯಲ್ಲಿ ಆಸರೆಗಾಗಿ ದೊಣ್ಣೆಯನ್ನೂ ಹಿಡಿದುಕೊಂಡು ದಾಪುಗಾಲು ಹಾಕುತ್ತಾ ಗಂಗೆಯ ಬಳಿ ನಡೆದರು.ಅವರ ಮನಸ್ಸಿನ ತುಂಬಾ ಪಾಂಡವರ ಆಲೋಚನೆಗಳೇ ತುಂಬಿದ್ದವು. ಅವರ ಹುಟ್ಟು , ಅವರ ಬಾಲ್ಯ , ಅರಣ್ಯದಲ್ಲಿ ಬದುಕಿದ ರೀತಿ , ಪಾಂಡುವಿನ ಸಾವು, ನಂತರ ತಾಯಿ ಕುಂತಿಯೊಡನೆ ಹಸ್ತಿನಾವತಿಗೆ ಬಂದದ್ದು, ಕೌರವ ಪಾಂಡವರಲ್ಲಿ ಸದಾ ತುಂಬಿತುಳುಕುತ್ತಿದ್ದ ಅಸಮಾಧಾನ ಕಡೆಗೆ ಅವರನ್ನು ದೃತರಾಷ್ಟ್ರನು ವಾರಣಾವತಕ್ಕೆ ಕಳಿಸಿದ್ದು, ಅಲ್ಲಿ ಅರಗಿನ ಮನೆಯಲ್ಲಿ ಅವರು ಸತ್ತುಹೋದರೆಂಬ ಸುದ್ದಿ , ನಂತರ ಅವರು  ಕಾಡಿನಲ್ಲಿ ಪಟ್ಟಿರಬಹುದಾದ ಕಷ್ಟಗಳ ಸರಮಾಲೆ...ಹೀಗೆ ಅವರ ಮನದ ತುಂಬಾ ಪಾಂಡವರೇ ಆವರಿಸಿದ್ದರು. ಆಗ ಅವರ ದಾರಿಗೆ ಅಡ್ಡವಾಗಿ ಓತಿಕ್ಯಾತವೊಂದು ಬರುತ್ತಿದ್ದುದು ಭೀಷ್ಮರ ಗಮನಕ್ಕೆ ಬರಲಿಲ್ಲ. ಅಕಸ್ಮಾತ್ತಾಗಿ ಅವರು ದೊಣ್ಣೆ ಊರುವುದಕ್ಕೂ ಓತಿ ಅದರ ತುದಿಗೆ ಸಿಕ್ಕಿಕೊಳ್ಳುವುದಕ್ಕೂ ಸಮನಾಯಿತು. ಓತಿ ದೊಣ್ಣೆಯ ತುದಿಯಿಂದ ಬಿಡಿಸಿಕೊಳ್ಳಲು ವಿಲವಿಲ ಒದ್ದಾಡಿತು. ಆಗ ಅದರ ಇರುವಿಕೆ ಭೀಷ್ಮರ ಗಮನಕ್ಕೆ ಬಂದು, ತನ್ನ ಕೆಲಸಕ್ಕೆ ಅಡ್ಡವಾಗಿ ಬಂದ ಓತಿಯ ಬಗ್ಗೆ ಅವರಿಗೆ ಅಪಾರ ರೋಷ ಉಕ್ಕಿ ಬಂದಿತು.&lt;br /&gt;&lt;br /&gt;" ಬೆಳಿಗ್ಗೆಯೇ ಇದೆಂತಹ ಅಪಶಕುನ " ಎಂದು ತಮ್ಮಲ್ಲಿಯೇ ಸಿಡಿಮಿಡಿಗೊಂಡು ದೊಣ್ಣೆಯ ತುದಿಯಿಂದ ಆ ಓತಿಯನ್ನು ಎತ್ತಿ ದೂರಕ್ಕೆ ಚಿಮ್ಮಿದರು. ರೊಯ್ಯನೆ ಹಾರಿದ ಓತಿ ಅನತಿ ದೂರದಲ್ಲಿದ್ದ ಮುಳ್ಳಿನ ರಾಶಿಯ ಮೇಲೆ ಬಿದ್ದಿತು. ಮೊದಲೇ ನೋವು ತಿನ್ನುತ್ತಿದ್ದ ಓತಿ ಮುಳ್ಳಿನ ತಿವಿತದಿಂದ ವಿಲವಿಲನೆ ಒದ್ದಾಡಿತು.&lt;br /&gt;&lt;br /&gt;ದಾರಿಯ ಕಂಟಕವನ್ನು ತೊಲಗಿಸಿದ ಭೀಷ್ಮರು ತಮ್ಮ ಪಾಡಿಗೆ ತಾವು ನಡೆಯಲು ಪ್ರಾರಂಭಿಸಿದಾಗ&lt;br /&gt;&lt;br /&gt;" ನಿಲ್ರಪ್ಪಾ ಭೀಷ್ಮರೆ " ಎಂದು ಯಾರೋ ಕೂಗಿದಂತೆ ಕೇಳಿಸಿತು.&lt;br /&gt;&lt;br /&gt;ತಿರುಗಿ ಸುತ್ತಲೂ ನೋಡಿದರೆ ಮುಳ್ಳಿನ ರಾಶಿಯ ಮೇಲೆ ಬಿದ್ದಿದ್ದ ಓತಿಕ್ಯಾತ ,&lt;br /&gt;&lt;br /&gt;" ನಿಲ್ರಪ್ಪಾ ಭೀಷ್ಮರೆ , ನೀವು ದೊಡ್ಡ ಮನುಷ್ಯರು. ರೀ ಸ್ವಾಮಿ ಹಂಗೇ ಹೋಯ್ತಾ ಇದ್ದೀರಲ್ಲಾ , ನಿಲ್ಲಿ ಸ್ವಾಮಿ ನಿಲ್ಲಿ. ಮಾಡೋದು ಮಾಡ್ಬಿಟ್ಟು ಕತ್ ಬಗ್ಗಿಸಿಕೊಂಡು ಹೋಗ್ತಾ ಇದ್ದೀರಲ್ಲಾ ? ಇದು ನ್ಯಾಯವೇನ್ರಪ್ಪಾ " ಎಂದು ಕೇಳಿತು.&lt;br /&gt;&lt;br /&gt;" ನಂದೇನು ತಪ್ಪು ಇದರಲ್ಲಿ ? ನೀನೇ ತಾನೆ ನನ್ನ ದೊಣ್ಣೆಗೆ ಅಡ್ಡ ಬಂದಿದ್ದು " ಎಂದರು ಭೀಷ್ಮರು.&lt;br /&gt;&lt;br /&gt;" ಹೌದಪ್ಪಾ ನಿಮ್ ದೊಣ್ಣೆಗೆ ಅಡ್ಡ ಬಂದಿದ್ದು ನನ್ನದೇ ತಪ್ಪು.  ಅದರಲ್ಲಿ ನಿಮ್ಮ ತಪ್ಪೇನೂ ಇಲ್ಲ. ಆದರೆ ನಾನು ವಿಲವಿಲ ಒದ್ದಾಡ್ತಾ   ಇದ್ದಾಗ ಸುಮ್ಮನಿರದೆ ನಿಮ್ಮ ದೊಣ್ಣೆ ತುದಿಯಿಂದ ನನ್ನನ್ನು ದೂರಕ್ಕೆ ಚಿಮ್ಮಿದ್ದು ನಿಮ್ಮ ತಪ್ಪಲ್ವಾ ?" ಎಂದಾಗ ಭೀಷ್ಮರು ಉತ್ತರಿಸದೆ ಸುಮ್ಮನಿದ್ದರು. ಆಗ ಓತಿಯು ತನ್ನ ಮಾತನ್ನು ಮುಂದುವರಿಸಿ,&lt;br /&gt;&lt;br /&gt;" ಈ ರೊಟ್ಟಿಮುಳ್ಳಿನ ರಾಶಿ ಮೇಲೆ ಬಿದ್ದು ನನ್ನ ದೇಹವೆಲ್ಲಾ ರಣರಂಪವಾಗಿದೆ. ಇದು ನಿಮ್ಮ ತಪ್ಪಲ್ವಾ ? ದೊಣ್ಣೆ ಊರಿದ್ದು ನಿಮ್ಮ ತಪ್ಪಲ್ಲ. ಆದರೆ ತಿಳಿದೂ ತಿಳಿದೂ ಎತ್ತಿ ಬಿಸಾಕಿದ್ದು ನಿಮ್ಮ ತಪ್ಪಲ್ಲವೇ ?&lt;br /&gt;ಸಾಯುವ ಕಾಲದಲ್ಲಿ ನಾನು ಹೇಗೆ ಮುಳ್ಳಿನ ಮೇಲೆ ಒರಗಿ   ಒದ್ದಾಡ್ತಾ ಇದ್ದೀನೋ ಹಾಗೆ ನೀವೂ ಸಹ ಕಡೆಗಾಲದಲ್ಲಿ ಮುಳ್ಳಿನ ಮೇಲೆ ಒರಗಿ ಸಾಯ್ರಪ್ಪಾ " ಎಂದು ಶಾಪ ಕೊಟ್ಟಿತು.&lt;br /&gt;&lt;br /&gt;" ಅಯ್ಯೋ ದೇವ್ರೇ ! ಈ ಓತಿ ಎಂತಹ ಶಾಪ ಕೊಟ್ಬಿಡ್ತಲ್ಲಾ ," ಎಂದು ಬೆದರಿದ ಭೀಷ್ಮರು ಓತಿಯ ಬಳಿ ಓಡಿ ಹೋಗಿ ,&lt;br /&gt;&lt;br /&gt;" ನಾನು   ಉದ್ದೇಶಪೂರ್ವಕವಾಗಿ ಮಾಡಿದ ತಪ್ಪು ನನಗರಿವಾಗಿದೆ. ದಯವಿಟ್ಟು ನನ್ನನ್ನು ಕ್ಷ್ಮಮಿಸಿ ಬಿಡಪ್ಪ " ಎಂದರು.&lt;br /&gt;&lt;br /&gt;ಆದರೆ ಓತಿ ಅವರತ್ತ ಕಣ್ಣೆತ್ತಿಯೂ ನೋಡಲಿಲ್ಲ. ಕಾಲ ಮಿಂಚಿತ್ತು.ಬಗ್ಗಿ ನೋಡಿದರೆ ಓತಿಯ ಪ್ರಾಣ ಆಗಲೇ ಹಾರಿಹೋಗಿತ್ತು.!&lt;br /&gt;&lt;br /&gt;ದುಃಖಿತರಾದ ಭೀಷ್ಮರು " ಓತಿಯ ಮಾತುಗಳು ಎಷ್ಟು ಅರ್ಥಪೂರ್ಣ ! &lt;span style="font-weight: bold; font-style: italic;"&gt;ತಿಳಿಯದೆ ಮಾಡಿದ ತಪ್ಪಿಗೆ ಕ್ಷಮೆ ಸಿಗಬಹುದು. ಆದರೆ ತಿಳಿದೂ ತಿಳಿದೂ   ಮಾಡುವ ತಪ್ಪು ಘೋರವಾದದ್ದು. ಆದ್ದರಿಂದಲೇ ಅದಕ್ಕೆ ಕ್ಷಮೆ ಇರುವುದಿಲ್ಲ " &lt;/span&gt;&lt;br /&gt;&lt;br /&gt;ಎಂದು ಚಿಂತಿಸುತ್ತಾ ಗಂಗಾನದಿಯತ್ತ ನಡೆದರು.&lt;br /&gt;&lt;br /&gt;ಮುಂದೆ ಮಹಾಭಾರತ ಯುದ್ಧ ಸಂದರ್ಭದಲ್ಲಿ ಭೀಷ್ಮರು ಅರ್ಜುನ  ರಚಿಸಿದ ಶರಶಯ್ಯೆಯ ಮೇಲೆ ಮಲಗಿ ಅಪಾರ ನೋವನ್ನನುಭವಿಸುತ್ತಾ ಕೊನೆಯುಸುರೆಳೆದರು.&lt;br /&gt;&lt;br /&gt;ಆಧಾರ : ಜನಪದ ಮಹಾಭಾರತ&lt;br /&gt;&lt;br /&gt;[ ಈ ಕತೆ 8 ನೆ ಡಿಸೆಂಬರ್ 2007 ರ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. }&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8114402468197807042-5923986686843651968?l=battadatore.blogspot.com' alt='' /&gt;&lt;/div&gt;</content><link rel='replies' type='application/atom+xml' href='http://battadatore.blogspot.com/feeds/5923986686843651968/comments/default' title='Post Comments'/><link rel='replies' type='text/html' href='http://battadatore.blogspot.com/2009/02/blog-post_21.html#comment-form' title='27 Comments'/><link rel='edit' type='application/atom+xml' href='http://www.blogger.com/feeds/8114402468197807042/posts/default/5923986686843651968'/><link rel='self' type='application/atom+xml' href='http://www.blogger.com/feeds/8114402468197807042/posts/default/5923986686843651968'/><link rel='alternate' type='text/html' href='http://battadatore.blogspot.com/2009/02/blog-post_21.html' title='ಭೀಷ್ಮರಿಗೆ ಓತಿ ಶಾಪ ಕೊಟ್ಟ ಪ್ರಸಂಗ'/><author><name>ಚಂದ್ರಕಾಂತ ಎಸ್</name><uri>http://www.blogger.com/profile/00490264860537389455</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='25' src='http://3.bp.blogspot.com/_4wQW2-q8XsA/SVIw-U299dI/AAAAAAAAADY/T9mtUHgBZhU/S220/blogfile12.jpg'/></author><thr:total>27</thr:total></entry><entry><id>tag:blogger.com,1999:blog-8114402468197807042.post-8800895642670591595</id><published>2009-02-15T12:05:00.000+05:30</published><updated>2009-02-16T20:02:17.713+05:30</updated><title type='text'>ನೆತ್ತಿಯ ಮೇಲೆ ಸೂರ್ಯ ಬರಲೇ ಇಲ್ಲ ...</title><content type='html'>ಮೊದಲ ಬಾರಿ ನಾನೊಬ್ಬಳೇ ವಿದೇಶಕ್ಕೆ ಹೋಗುವ ಪ್ರಸಂಗ ನನ್ನ ಮುದ್ದು ಮೊಮ್ಮಗನಿಂದ ನನಗೆ ಒದಗಿತು.  ಒಬ್ಬಳೇ ಹೋಗಲು ನನಗೆ ಇಷ್ಟವಿರಲಿಲ್ಲ. ಆದರೆ ಏನು ಮಾಡುವುದು ? ಸೊಸೆಯಂತೂ ಮೊಮ್ಮಗನನ್ನು ನೋಡಲು ನಿಮಗಿಷ್ಟವಿಲ್ಲವೇ ?ಎಂದು ಆಗಾಗ ಸೆಂಟಿಮೆಂಟಲ್ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು. ನನಗೂ ಪುಟ್ಟನನ್ನು ನೋಡುವ ಹಂಬಲ ಬೆಟ್ಟದಷ್ಟಿತ್ತು. ನನ್ನವರಿಗೆ ಒಬ್ಬಳನ್ನೇ ಕಳಿಸಲು ಇಷ್ಟವಿಲ್ಲ. ನನಗೂ ಒಳಗೊಳಗೇ ಅಳುಕು ಕಾಡುತ್ತಿದ್ದರೂ ಧೈರ್ಯದ ಸೋಗು ಹಾಕಿ ಪಯಣಕ್ಕೆ ಸಿದ್ಧಳಾದೆ.ನೇರ ಪಯಣವಾಗಿದ್ದರೆ ಅಂಥಾ ತೊಂದರೆಯೇನಿರಲಿಲ್ಲ. ಆದರೆ ಮೆಲ್ಬರ್ನ್ ಗೆ ಹೋಗುವಾಗ ಕೌಲಾಲಂಪೂರ್ ನಲ್ಲಿ ವಿಮಾನ ಬದಲಿಸಬೇಕಿತ್ತು. ಈ ಹಿಂದೆ ಎರಡು ಬಾರಿ ವಿದೇಶಕ್ಕೆ ಹೋದಾಗಲೂ ನಾವು ಮೂರು ಜನ ಒಟ್ಟಿಗೆ ಹೋಗಿದ್ದಿದ್ದು. ಕಡೆಗೆ ನನ್ನವರು ಧೈರ್ಯ ತುಂಬಿ ಯಾವುದೇ ಹೊಸ ಅನುಭವವನ್ನು ಭಯದಿಂದ ಎದುರು ನೋಡದೆ ಒಂದು ರೀತಿಯ ಚಾಲೆಂಜ್ ಆಗಿ ಭಾವಿಸಬೇಕೆಂದು ಬುದ್ಧಿವಾದ ಹೇಳಿದರು.&lt;br /&gt;   &lt;br /&gt;ಅಂತೂ ಹೊರಡುವ ದಿನ ಬಂದಿತು.ವಿದೇಶದಲ್ಲಿರುವ ಮಕ್ಕಳ ಮನೆಗೆ ಹೋಗುವಾಗ ತೆಗೆದುಕೊಂಡು ಹೋಗುವ ಸಾಮಗ್ರಿಗಳಲ್ಲಿ ಸಿಂಹಪಾಲು ತಿನ್ನುವ ಪದಾರ್ಥಗಳಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ . ಕೆಲವು ದಿನಗಳ ಮೊದಲಿನಿಂದಲೇ ತೆಗೆದು ಕೊಂಡೊಯ್ಯುವ ಸಾಮಾನುಗಳನ್ನು ಸಿದ್ಧಪಡಿಸಿಕೊಂಡಿದ್ದೆ. ವಿಮಾನ ನಿಲ್ದಾಣಕ್ಕೆ ಬರುತ್ತಲೇ ಮೊದಲನೆಯ ಆಘಾತ ಕಾದಿತ್ತು. ಹಿಂದಿನ ಬಾರಿ ಮಗ ಸೊಸೆಯರನ್ನು ಕಳಿಸಲು ಬಂದಾಗ ನಮ್ಮನ್ನೂ ಒಳಗೆ ಬಿಟ್ಟಿದ್ದರು. ಆದರೆ ಈ ಬಾರಿ ಪ್ರಯಾಣಿಕರನ್ನು ಮಾತ್ರ main entrance ನಲ್ಲಿ ಒಳಗೆ ಬಿಡುತ್ತಿದ್ದರು. ಮುಖ್ಯ ದ್ವಾರದಿಂದಲೇ ನಾನೊಬ್ಬಳೇ ಹೋಗುವುದಕ್ಕೆ ನಾನು ಮಾನಸಿಕವಾಗಿ ಸಿದ್ಧಳಿರಲಿಲ್ಲ. ಆದರೆ ಮಾಡುವುದೇನು? ಒಬ್ಬಳೇಟ್ರಾಲಿ ತಳ್ಳಿಕೊಂಡು ಒಳಹೋದೆ.ಮೊದಲಿನಂತಿರಲಿಲ್ಲ ಅಂತರಾಷ್ಟ್ರೀಯ ವಿಮಾನ ನಿಲ್ದಾಣ.ನಾನು ಮಾರ್ಕೆಟ್ಟಿಗೋ ಮೆಜೆಸ್ಟಿಕ್ಕಿಗೋ ಬಂದಿರುವೆನೇನೋ ಅನಿಸಲಾರಂಭಿಸಿತು.ಅಷ್ಟೊಂದು ನೂಕುನುಗ್ಗಲು. ತೂಕ ಚೆಕ್ ಮಾಡುವ ಕಡೆ ಮಾರುದ್ದ ಕ್ಯೂ. ಅಂತೂ ನನ್ನ ಸರದಿ ಬಂದಿತು. ಅಲ್ಲಿದ್ದ ಸುಂದರ ಯುವತಿ ಅವಳದೇ ಆದ ಇಂಗ್ಲೀಷಿನಲ್ಲಿ ಹಣ ಕಟ್ಟುವಂತೆ ಹೇಳುತ್ತಿದ್ದಾಳೆ. ನನಗೆ ಅರ್ಥವಾಗಿದ್ದು ...ಡಾಲರ್  ಪೇ.. ಎರಡೇ ಶಬ್ಧ. ನನ್ನೆದೆ ಡಗ್ ಎಂದಿತು. ಇದೇನಪ್ಪಾ ಗ್ರಹಚಾರ ಎಂದುಕೊಂಡೆ. ಆಗ ಹಿಂದೆ ಇದ್ದವರು ತೂಕ ಜಾಸ್ತಿ ಇರುವುದರಿಂದ ಹೆಚ್ಚಿಗೆ ಹಣ ಕಟ್ಟಲು ಹೇಳುತ್ತಿದ್ದಾರೆ ಎಂದರು.ಅಷ್ಟರಲ್ಲಿ ದೂರದಿಂದ ಅಮ್ಮಾ ಎಂದದ್ದು ಕೇಳಿಸಿತು. ನೋಡಿದರೆ ಇನ್ನೊಂದು ಕಡೆಯಿಂದ ಸರಳುಗಳ ಹಿಂದೆ ಕಳಿಸಿ ಕೊಡುವವರ ದಂಡೇ ಕಾಣುತ್ತಿದೆ. ನನ್ನವರ ಮುಖ ಕಂಡದ್ದೇ ಅಲ್ಲಿಯವರೆಗೆ ಓಡಿ ‘ತೂಕ ಜಾಸ್ತಿ ಇದೆಯಂತೆ’ ಎಂದೆ. ನಮ್ಮವರಿಗೆ ತಾಳ್ಮೆ ಜಾಸ್ತಿ.‘ ಗಾಬರಿ ಪಡಬೇಡ ’ಎಂದು ಹೇಳಿ ಸೆಕ್ಯುರಿಟಿಯವನ ಬಳಿ ಕೇಳಿಕೊಂಡು ಸಹಾಯ ಮಾಡಲು ಒಳಬಂದರು.ನಂತರ ಬಿಗದ ಕೈ ಕೊಡು ಕೆಲವು ಸಾಮಾನು ತೆಗೆಯೋಣ ಎಂದರು. ಅಲ್ಲವೇ ಮತ್ತೆ. ಯಾರು ಹೆಚ್ಚಿಗೆ ಡಾಲರ್ ಲೆಕ್ಕದಲ್ಲಿ ಹಣ ಕುಕ್ಕುತ್ತಾರೆ. ಮೂರು ಕೆಜಿ ತೂಕವನ್ನು ಕಡಿಮೆ ಮಾಡಬೇಕಿತ್ತು. ಪರ್ಸ್ ನಿಂದ ಬೀಗದ ಕೈ ಹೊರತೆಗೆಯಲು ಕೈ ಹಾಕಿದರೆ ಸಿಗುತ್ತಲೇ ಇಲ್ಲ. ಹುಷಾರಾಗಿ ಇಟ್ಟಿದ್ದೆನಲ್ಲಾ? ಹಾಳಾದ್ದು ಹುಷಾರಾಗಿ ಇಟ್ಟಿರುವ ವಸ್ತುಗಳೇ ಕೈಕೊಡುವುದು ಜಾಸ್ತಿ. ನನ್ನ ಧಾವಂತ ನೋಡಿ ನನ್ನವರು ‘ನಿಧಾನಕ್ಕೆ ಹುಡುಕು’ ಎಂದರು. ಅಂತೂ ಸಿಕ್ಕಿತು. ಕಿಷ್ಕಿಂದಾಕಾಂಡದಂತಿದ್ದ ಆ ಜಾಗದಲ್ಲಿ ಹೇಗೋ ಸೂಟ್ ಕೇಸ್ ಮಲಗಿಸಿ ಬೀಗ ತೆಗೆದೆ. ಒಳಗೆ ನೀಟಾಗಿ ಪ್ಯಾಕ್ ಮಾಡಿದ್ದ ವಸ್ತುಗಳು. ಹೆಚ್ಚಿಗೆ ಅಲ್ಲಾಡಿಸದೆ ಮೇಲೆ ಕೈಗೆಟುಕುವಂತೆ ಸಿಕ್ಕ ಒಂದೊಂದು ಕೆಜಿಯ ಮೂರು ಪ್ಯಾಕೆಟ್ ಗಳನ್ನು ಹೊರಹಾಕಿದೆವು. ನಾನು ಕಷ್ಟ ಪಟ್ಟು ತಯಾರಿಸಿದ್ದ ಕುಟ್ಟವಲಕ್ಕಿ, ಚಟ್ನಿಪುಡಿ ಮತ್ತು ಒಂದು ಕೆಜಿಯ ಬನ್ಸಿರವೆಯ ಪೊಟ್ಣಗಳು ಹೊರಬಂದವು. ಮನಸ್ಸಿಲ್ಲದ ಮನಸ್ಸಿನಿಂದ ಅವರ ಕೈಗೆ ಆ ಕವರ್ ಗಳನ್ನು ದಾಟಿಸಿದೆ. ಅಂತೂ ಮೊದಲ ಗಂಡಾಂತರ ದಾಟಿತು.&lt;br /&gt;   &lt;br /&gt;ಕಡೆಯದಾಗಿ ಇಬ್ಬರಿಗೂ Bye ಹೇಳೀ ಒಳ ಬಂದೆ.ಇಮಿಗ್ರೇಷನ್ ಕೌಂಟರ್ ಬಳಿ form fill ಮಾಡಿ ಕ್ಯೂಗೆ ಬಂದರೆ ಹನುಮಂತನಬಾಲದಂತಿದ್ದ ಕ್ಯೂ. ಮಧ್ಯ ರಾತ್ರಿ 12. 15ಕ್ಕೆ ಸರಿಯಾಗಿ ಬೋರ್ಡಿಂಗ್ ಪ್ರಾರಂಭವಾಯಿತು. ಟ್ರ್ಯಾವೆಲ್ ಏಜೆಂಟ್ ಹೇಳಿದಂತೆ ಕಿಟಕಿಯ ಪಕ್ಕದ ಸೀಟೇ ಸಿಕ್ಕಿತು.ಈ ಬಾರಿ ವಿಮಾನ ಟೇಕಾಫ್ ಆದಾಗ ಅಂತಹ ತೊಂದರೆಯಾಗಲಿಲ್ಲ. ಪ್ರಯಾಣ ಪ್ರಾರಂಭವಾದ ಸ್ವಲ್ಪ ಹೊತ್ತಿಗೇ ಯಥಾಪ್ರಕಾರ ಕಿತ್ತಲೆ ರಸ , ಕಡಲೆಕಾಯಿ ಪ್ಯಾಕೆಟ್ ಬಂದಿತು.ಕಾಲು ಗಂಟೆ ಅಂತರದಲ್ಲಿ ಊಟ ಬಂದಿತು.ವಿಮಾನಗಳಲ್ಲಿ ಕೊಡುವ ಊಟ ಒಂದು ರೀತಿಯ ಸಮತೋಲನ ಆಹಾರ. ಅಥವಾ ಒಂದು ಸಿದ್ಧಸೂತ್ರಕ್ಕೆ ಅಂಟಿಕೊಂಡಿರುವ ಊಟ.ಕೌಲಾಲಂಪೂರ್ ಗೆ ಹೋಗುವ ವಿಮಾನವಾದ್ದರಿಂದ ಒಳ್ಳೆಯ ಸಸ್ಯಾಹಾರಿ ಊಟ.ಎಣಿಸಿದ ಹಾಗೆ ನಾಲ್ಕು ರೀತಿಯ ಎಂಟು ದೊಡ್ಡ ಗಾತ್ರದ  ಹಣ್ಣಿನ ಹೋಳುಗಳು.ಸಸ್ಯಾಹಾರಿ ಊಟದಲ್ಲಿ ಒಂದು ಸಿಹಿ ಕಡ್ಡಾಯವಾಗಿ ಇರುತ್ತದೆ. ಈ ಬಾರಿ ರಸಗುಲ್ಲ ತರಹದ ಸಿಹಿ ಪದಾರ್ಥ.ಯಾವ ಪದಾರ್ಥವೂ ಬೇಡವೆನಿಸಲಿಲ್ಲ. ಅನ್ನ ಮತ್ತು ತರಕಾರಿಯ ನಂಜಿಕೆಯೂ ಚೆನ್ನಾಗಿತ್ತು. ಅಂತೂ ಸಮಯಕ್ಕೆ ಸರಿಯಾಗಿ ಕೌಲಾಲಂಪುರ ಸೇರಿದ್ದಾಯಿತು. ಅಲ್ಲಿ ವಿಮಾನ ಬದಲಿಸಲು ನಾಲ್ಕು ಗಂಟೆ ಸಮಯವಿತ್ತು.&lt;br /&gt;&lt;br /&gt;ಮೆಲ್ಬರ್ನ್ ಗೆ ಹೋಗುವ ವಿಮಾನ ಹತ್ತಲು ಒಂದು ರೈಲಿನಲ್ಲಿ ಹೊರಟು ಇನ್ನೊಂದು ನಿಲ್ದಾಣಕ್ಕೆ ಹೋಗಬೇಕಾಯಿತು. ನಾನು ಇಳಿದದ್ದು ಡೊಮೆಸ್ಟಿಕ್ ನಿಲ್ದಾಣ, ಈಗ ಹೊರಟಿರುವುದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಅನಂತರ ತಿಳಿಯಿತು.ಸೊಗಸಾದ ಸ್ವಚ್ಚವಾದ ವಿಮಾನ ನಿಲ್ದಾಣ. ಬೋರ್ಡಿಂಗ್ ಪಾಸ್ ತೆಗೆದುಕೊಳ್ಳುವಾಗ ಎಳೆಯ ಮಗುವನ್ನೆತ್ತಿಕೊಂಡಿದ್ದ ತಾಯಿಯೊಬ್ಬಳ ಪರಿಚಯವಾಯಿತು.ವಿಮಾನ ಪ್ರಯಾಣದಲ್ಲಿ ಎಳೆಯ ಮಕ್ಕಳಿರುವವರಿಗೆ ಮೊದಲ ಆದ್ಯತೆ ಇರುವುದರಿಂದ, ನನಗೂ ಅವಳ ಜೊತೆ ಮೊದಲು ವಿಮಾನ ಏರುವ ಅವಕಾಶ ಸಿಕ್ಕಿತು. ಈ ವಿಮಾನದಲ್ಲಿನ ಪ್ರಯಾಣ ಅತಿ ಸೊಗಸಾಗಿತ್ತು. ಪ್ರತಿಯೊಂದು ಸೀಟಿಗೂ ಒಂದು ಮಾನಿಟರ್. ಆ ಮಾನಿಟರ್ ಆಪರೇಟ್ ಮಾಡಲು ಸೀಟಿನ ಕೈ ಊರಲು ಇರುವ ಹ್ಯಾಂಡಲ್ ನಲ್ಲಿರುವ ಗುಂಡಿಗಳನ್ನು ಒತ್ತಿ ನೋಡಬೇಕಿತ್ತು. ಮಗ  ನಿತಾಂತನನ್ನು ನೆನಸಿಕೊಂಡು ಮಾನಿಟರ್ ಪೂರ್ತಿ ಆಪರೇಟ್ ಮಾಡಿ ನೋಡಿದರೆ ಎಷ್ಟೊಂದು ಚಾನೆಲ್ ಗಳು. ಅವುಗಳಲ್ಲಿ ನನಗೆ ಇಷ್ಟವಾದದ್ದು ಅದರಲ್ಲಿ Live ಆಗಿ ತೋರಿಸುವ chart. ನಾವು ಆಕಾಶದಲ್ಲಿ ಎಲ್ಲಿದ್ದೇವೆ, ನಾವು ತಲುಪುವ ಸ್ಥಳ ಎಷ್ಟು ದೂರವಿದೆ, ವಿಮಾನ ಎಷ್ಟು ವೇಗವಾಗಿ ಹೋಗುತ್ತಿದೆ, ಮುಂತಾದ ವಿವರಗಳನ್ನು ನೇರ ಚಿತ್ರದ ಮೂಲಕ ತೋರಿಸುತ್ತಿರುತ್ತಾರೆ.&lt;br /&gt;  &lt;br /&gt;ವಿಮಾನ ಹೊರಟ ಕೂಡಲೆ ಯಥಾಪ್ರಕಾರ ಜ್ಯೂಸ್ ಬಂದ ಸ್ವಲ್ಪಹೊತ್ತಿಗೇ ಊಟ ಬಂದಿತು.ಈ ವಿಮಾನದಲ್ಲಿ 6 ರೀತಿಯ ಸಸ್ಯಾಹಾರಿ ಊಟಗಳು. ಕುತೂಹಲ ಉಂಟಾಯಿತು.ಅವು ಯಾವುವು ಎಂದು ನೋಡಿದೆ.&lt;br /&gt;.&lt;br /&gt;1.VLML -  ಇದು ಪಾಶ್ಚಿಮಾತ್ಯರ ಹಾಲಿನ ಪದಾರ್ಥವಿರುವ ಸಸ್ಯಾಹಾರಿ ಊಟ.&lt;br /&gt;2.VGML-   ಇದು ವೇಗನ್ ವೆಜಿಟೇರಿಯನ್ ಊಟ.&lt;br /&gt;3.AVML-  ಇದು ಏಷ್ಯಾಟಿಕ್ ವೆಜಿಟೇರಿಯನ್ ಮೀಲ್  (ಇದು ನನ್ನ ಆಯ್ಕೆ)&lt;br /&gt;     4.OVML-  ಇದು ಓರಿಯಂಟಲ್  ವೆಜಿಟೇರಿಯನ್ ಮೀಲ್       &lt;br /&gt;5. RVML- ಇದು Raw Vegetable Meal ( ಅದನ್ನು ತಿನ್ನುತ್ತಿರುವವರನ್ನು ನೋಡಿದರೆ ಹಸಿ ತರಕಾರಿಗಳ ಗುಡ್ಡವೇ ಅವರ  ಮುಂದೆ ಇತ್ತು.)&lt;br /&gt;6.JNML - ಇದು ಜೈನರ ಸಸ್ಯಾಹಾರಿ ಊಟ.&lt;br /&gt;&lt;br /&gt;ನಾನು ಇದುವರೆಗೂ ಮಾಡಿದ ಮೂರು ವಿದೇಶ ಪ್ರಯಾಣಗಳಲ್ಲೆಲ್ಲಾ ಇದರಷ್ಟು ಅದ್ಭುತವಾದ ಊಟ ನನಗೆ ಸಿಕ್ಕಿರಲಿಲ್ಲ. ಊಟವನ್ನು ನೋಡುತ್ತಲೇ ಅಪ್ರಯತ್ನವಾಗಿ ನಿತಾಂತ್ ಮತ್ತು ನನ್ನವರು ನೆನಪಿಗ ಬಂದರು. ಸೊಗಸಾದ ಬಿಸಿಬಿಸಿ ಪೂರಿ ನಿತಾಂತನನ್ನು ನೆಪಿಸಿದರೆ Yogurt ( ಮೊಸರು ) ನನ್ನವರನ್ನು ನೆನಪಿಸಿತು. ಮೊಸರು ಮನೆಯದರಂತೆ ಗಟ್ಟಿಯಾಗಿಲ್ಲದಿದ್ದರೂ ( ಸ್ವಲ್ಪ ಕಂಡೆನ್ಸಡ್ ಮಿಲ್ಕ್ ತರಹ ಕಾಣುತ್ತಿತ್ತು ) ರುಚಿ ಮಾತ್ರ ಹದವಾಗಿತ್ತು.ಅಕ್ಕಿಯೋ ಸಬ್ಬಕ್ಕಿಯೋ ಹಾಕಿದ ಚಿಲ್ಡ್ ಪಾಯಸ, ದ್ರಾಕ್ಷಿ ಪಪಾಯ ಕಲ್ಲಂಗಡಿ ಸೇಬು ಹಣ್ಣಿನ ಮೂರು  ಮೂರು ದೊಡ್ಡ ಹೋಳುಗಳು, ಪೂರಿಗೆ ಹೆಸರು ಬೇಳೆ ತೊವ್ವೆಯಂತಹುದು ಅನ್ನದ ಜೊತೆ ಹುರುಳಿಕಾಯಿ, ಕ್ಯಾರೆಟ್, ಹೂಕೋಸು , ಆಲೂಗಡ್ಡೆ ಹಾಕಿ ಮಾಡಿದ ವ್ಯಂಜನ.ಮನೆಯವರನ್ನು ನೆನಸಿಕೊಳ್ಳುತ್ತಾ ಸೊಗಸಾದ ಊಟವನ್ನು ನಾನೊಬ್ಬಳೇ ತಿಂದು ಮುಗಿಸಿದೆ.ಊಟದ ಬಗ್ಗೆ ಇಷ್ಟೊಂದು ವಿವರ ನೋಡಿ ಯಾರಿಗಾದರೂ ಅಚ್ಚರಿಯಾಗಬಹುದು. ಮೊದಲ ಬಾರಿ ಅಂದರೆ ಎಂಟು ವರ್ಷಗಳ ಹಿಂದೆ ಅಮೆರಿಕಾಗೆ ಹೋಗುವಾಗ ಊಟದ ವಿಚಾರದಲ್ಲಿ ನಾವು ಸಾಕಷ್ಟು ತೊಂದರೆ ಎದುರಿಸಿದ್ದೆವು. ಆದ್ದರಿಂದ ಈ ಬಾರಿ ಊಟ ಅಷ್ಟೊಂದು ಮುಖ್ಯವೆನಿಸಿತು.&lt;br /&gt;  &lt;br /&gt;ಊಟ ಮುಗಿದ ನಂತರ ಕಿಟಕಿಯಿಂದ ಸುಂದರ ಆಗಸದ ಕ್ಷಣಕ್ಕೊಂದು ರೀತಿ ಬದಲಾಗುವ ದೃಶ್ಯ ವೈಭವ ನೋಡುತ್ತಾ ಸಮಯ ಸರಿದದ್ದೇ ತಿಳಿಯಲಿಲ್ಲ. ಎಂಟು ಗಂಟೆಗಳ ದೀರ್ಘ ಪಯಣದ ನಂತರ  ವಿಮಾನ ಕೆಳಗಿಳಿಯಿತು.ಅಲ್ಲಿ ಮತ್ತೊಂದು ಸಮಸ್ಯೆ ಎದುರಿಸ ಬೇಕಾಯಿತು.ಕಸ್ಟಮ್ಸ್ ನಲ್ಲಿ ಇಡೀ  ಸೂಟ್ ಕೇಸನ್ನೇ ತಲೆಕೆಳಗು ಮಾಡಿದ ಅಲ್ಲಿದ್ದ ಬಿಳಿಯ ಅಧಿಕಾರಿ. ನೋಡ ನೋಡುತ್ತಿದ್ದಂತೆ ಮನೆಯಿಂದ ಸಿದ್ಧಗೊಳಿಸಿ ತಂದಿದ್ದ ೧ ಕೆಜಿ ಚಟ್ನಿಪುಡಿಯ ಪಟ್ಟಣವನ್ನು ಕೈಗೆತ್ತಿಕೊಂಡವನೇ ಪಕ್ಕಕ್ಕಿಟ್ಟ. ಅದರೊಂದಿಗೆ ಮನೆಯಿಂದ ಸಿದ್ಧಗೊಳಿಸಿ ತಂದಿದ್ದ ಅಳಿದುಳಿದಿದ್ದ ಕುಟ್ಟವಲಕ್ಕಿ, ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಮೆಂತ್ಯೆ ಹಿಟ್ಟು, ಗೋದಿ ಹಿಟ್ಟು ಮುಂತಾದುವೆಲ್ಲವನ್ನೂ ಪಕ್ಕಕ್ಕಿಟ್ಟು , ಸೂಟ್ಕೇಸ್ ಮುಚ್ಚಿ ನಂತರ ಆ ಪ್ಯಾಕೆಟ್ ಗಳನ್ನೆಲ್ಲಾ ಒಟ್ಟಿಗೆ ಪಕ್ಕದಲ್ಲಿದ್ದ  ಕಸದ ಬುಟ್ಟಿಗೆ ಹಾಕಿದ. ನಾನು ಹೌಹಾರಿ ಹೋದೆ. ನಂತರ ಕಷ್ಟಪಟ್ಟು ಏಕೆ ಆ ಪದಾರ್ಥಗಳನ್ನು ಬಿಸಾಕಿದ್ದು ಎಂದು ಕೇಳಿದಾಗ ಅವನು ಕೊಟ್ಟ ಉತ್ತರ ಯೋಚಿಸುವಂತೆ ಮಾಡಿತು. ಅಮೆರಿಕಾಗಿಂತ ಆಸ್ಟ್ರೇಲಿಯಾದಲ್ಲಿ ಆರೋಗ್ಯದ ಬಗ್ಗೆ ಕಟ್ಟುನಿಟ್ಟಾದ ಕ್ರಮಗಳಿವೆ. ಹಿಂದಿನ ಬಾರಿ ನಾವೆಲ್ಲರೂ ಆಸ್ಟ್ರೇಲಿಯಾಕ್ಕೆ ಬಂದಾಗ ನಡೆದ ಒಂದು ಪ್ರಸಂಗ ಇಲ್ಲಿ ಪ್ರಸ್ತಾಪಿಸಲೇ ಬೇಕು.&lt;br /&gt;&lt;br /&gt;ಆಗ ಆಸ್ಟ್ರೇಲಿಯಾಕ್ಕೆ ಹೊರಟಾಗ ಬೆಂಗಳೂರಿನ Airport ನಲ್ಲಿ ನಾವೆಲ್ಲರೂ ಬಾಳೆಹಣ್ಣು , ಸೀಬೆಹಣ್ಣು ತಿಂದೆವು. ನಂತರ ಕೆಲವು  ಮಿಕ್ಕ ಹೋಳುಗಳನ್ನು ನನ್ನ Vanity bagನಲ್ಲಿ ಇಟ್ಟೆ. ಮುಂದೆ ಪ್ರಯಾಣದುದ್ದಕ್ಕೂ ಅದರ ವಿಷಯ ಮರೆತೇ ಹೋಗಿತ್ತು. ಕಸ್ಟಮ್ಸ್ ನವರು  ನನ್ನ ಬ್ಯಾಗ್ ಚೆಕ್ ಮಾಡಿ ಈ ರೀತಿ ಕತ್ತರಿಸಿದ ಹಣ್ಣು ತರುವುದು ತಪ್ಪೆಂದು ಗೊತ್ತಿಲ್ಲವೇ ?ಎಂದು ಅದೆಲ್ಲವನ್ನೂ ಕಸದಬುಟ್ಟಿಗೆ ಹಾಕಿದ್ದರು.ಹಾಗೆ ಹಣ್ಣುಗಳನ್ನು ತರಬಾರದೆಂದು ಹೇಳಿದ್ದರು.ಆದರೆ ಈ ಬಾರಿ ಹೀಗೇಕೆ ಮಾಡಿದರು.  ಅವರು ಹೇಳಿದ ಉತ್ತರ ಮೊದಲೇ ನನಗೆ ಗೊತ್ತಿದ್ದಿದ್ದರೆ ಈ ರೀತಿ ಪದಾರ್ಥಗಳನ್ನು ಹಾಳುಮಾಡಿಕೊಳ್ಳುವ ಪ್ರಮೇಯವೇ ಬರುತ್ತಿರಲಿಲ್ಲ.&lt;br /&gt;&lt;br /&gt;ಒಳ್ಳೆಯ fresh ಆದ ಪದಾರ್ಥಗಳೆಂದು ನಾವು ನಿರ್ಧರಿಸುವ ರೀತಿಗೂ ಅವರು ಯೋಚಿಸುವ ರೀತಿಗೂ ಅಜಗಜಾಂತರ. ವ್ಯತ್ಯಾಸ. ಸ್ವಚ್ಚತೆಯನ್ನು ನಿರ್ಧರಿಸುವ ಮಾನದಂಡಗಳೂ ಬೇರೆ. Home made ಪದಾರ್ಥಗಳನ್ನು ನಾವು ಹೆಚ್ಚು ಸ್ವಚ್ಚ ಹಾಗೂ ಒಳ್ಳೆಯ ಪದಾರ್ಥಗಳೆಂದರೆ ಅವರ ಪ್ರಕಾರ Supermarket ನಲ್ಲಿ ಮಾರಾಟ ಮಾಡುವ ಪದಾರ್ಥಗಳು ಹೆಚ್ಚು fresh ಹಾಗೂ hygenic. ಸರಳವಾಗಿ ಹೇಳಬೇಕೆಂದರೆ ಪ್ಯಾಕೆಟ್ ಮೇಲೆ ಪದಾರ್ಥದ ಹೆಸರು .. ತೂಕ..ಇತ್ಯಾದಿಗಳಿರುವ ವಸ್ತುಗಳು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.‘ ಒಹೋ ಹೀಗೋ ಸಮಾಚಾರ ’ಎಂದು ಬಿಸಾಕಿದ ಪದಾರ್ಥಗಳೆಡೆ ಕಣ್ಣು ಹೊರಳಿಸಿದೆ. ಅದಕ್ಕೇ MTR ಪದಾರ್ಥಗಳು, ಆನಂದಭವನ್ ಸಿಹಿ ಪದಾರ್ಥಗಳು ಜೀವ ಉಳಿಸಿಕೊಂಡಿವೆ. ಅಕಸ್ಮಾತ್ತಾಗಿ VIJAY ಅಕ್ಕಿಹಿಟ್ಟು ಎಂದು ಪ್ರಿಂಟ್ ಆಗಿರುವ ಕವರಿನಲ್ಲಿ ಲೋಕಲ್ ಮೇಡ್ ಕಾಫಿಪುಡಿ ಹಾಕಿದ್ದೆ. ಅದು ಸ್ವಚ್ಚಪದಾರ್ಥವೆಂಬ ಹಣೆಪಟ್ಟಿ ಹೊತ್ತಿದೆಯೆಂದು ನಿರ್ಧರಿಸಿ  ಆ ಕಸ್ಟಮ್ ನವನು  ಅದನ್ನು ಬಿಸಾಕಿರಲಿಲ್ಲ. ಮೊದಲೇ ಈ ವಿಷಯ ಗೊತ್ತಿದ್ದರೆ ಮನೆಯಲ್ಲಿ ತಯಾರಿಸಿದ ಎಲ್ಲ ಪುಡಿಗಳನ್ನೂ ಹೀಗೆ ಪ್ರಿಂಟ್ ಆಗಿರುವ ಕವರಿನಲ್ಲಿ ತುಂಬಿಸಿಕೊಂಡು ಬರಬಹ್ದಿತ್ತಲ್ಲಾ ಎಂದು ಹಳಹಹಳಿಸಿದೆ.  !!&lt;br /&gt;&lt;br /&gt;ಅಂತೂ ಏರ್ಪೋರ್ಟ್ ಗೆ ಬಂದಿದ್ದ ಮಗ, ಸೊಸೆ ಹಾಗೂ ಮುದ್ದು ಮೊಮ್ಮಗನೊಂದಿಗೆ ಮನೆ ಸೇರಿದಾಗ ರಾತ್ರಿ ಹನ್ನೆರಡು ಗಂಟೆ. ಅಲ್ಲಿಯ ಸಮಯಕ್ಕೆ ಗಡಿಯಾರವನ್ನು ಹೊಂದಿಸಿಕೊಂಡೆ.ಪ್ರಯಾಣದ ಆಯಾಸದಿಂದ ಚೆನ್ನಾಗಿ ನಿದ್ದೆ ಬಂದಿತು. ಬೆಳಿಗ್ಗೆ ಕಣ್ಣುಬಿಟ್ಟಾಗ ಎಂಟು ಗಂಟೆ. ನನ್ನ ಜನ್ಮದಲ್ಲೇ ಅಷ್ಟು ತಡವಾಗಿ ಎದ್ದವಳಲ್ಲ ನಾನು. ಆತುರದಲ್ಲಿಯೇ ಎದ್ದು ಹಾಲಿಗೆ ಬಂದರೆ ಮನೆ ನಿಶ್ಶಬ್ದವಾಗಿದೆ. ಇನ್ನೂ ಯಾರೂ ಎದ್ದಿಲ್ಲ. ಆಮೇಲೆ ತಿಳಿಯಿತು, ಅವರೆಲ್ಲಾ ರಾತ್ರಿ ತಡವಾಗಿ ಮಲಗಿ ತಡವಾಗಿ ಏಳುವವರೆಂದು.ಮರುದಿನದಿಂದ ನನಗೆ  ಅಭ್ಯಾಸಬಲದಿಂದ ಬೆಳಿಗ್ಗೆ ಬೇಗ ಎಚ್ಚರವಾಯಿತು. ಕಿಟಕಿಯಾಚೆ ನೋಡಿದರೆ ಇನ್ನೂ ಪೂರ್ಣಗತ್ತಲು. ಏನು ಮಾಡಲಿ? ನಿದ್ರೆ ಬರುತ್ತಿಲ್ಲ. ಎದ್ದು ಮಾಡುವ ಯಾವ ಕೆಲಸವೂ ಇರಲಿಲ್ಲ.ಅನಿಮಿತ್ತವಾಗಿ  ಬೆಂಗಳೂರಿನ ನನ್ನ ದಿನಚರಿ ನೆನಪಾಯಿತು.ಬೆಳಿಗ್ಗೆ ನಾಲ್ಕೂವರೆಗ ಕಣ್ಣು ಬಿಟ್ಟ ತಕ್ಷಣ ಆ ಕ್ಷಣದಲ್ಲಿ ಮಾಡಬೇಕಾದ ಕೆಲಸದ ಪಟ್ಟಿಯೇ ನನ್ನ ಮುಂದಿರುತ್ತಿತ್ತು. ಆರೂವರೆಗೆ ಕೆಲಸದವಳು ಬರುವ ಮುಂಚೆ ವಾಕಿಂಗ್ ಮುಗಿಸಿ, ಹಾಲಿನವನು ಬರುವಷ್ಟರಲ್ಲಿ ಟೋಕನ್ ಮತ್ತು ಬ್ಯಾಗ್ ನ್ನು ಗೇಟಿಗೆ ನೇತುಹಾಕಿ... ..ಬೆಳಗಿನ ಉಪಹಾರ ಅಡುಗೆಗೆ ತರಕಾರಿ ಹೆಚ್ಚಿ ಸಿದ್ಧಗೊಳಿಸಿ.... ಎಲ್ಲಕ್ಕಿಂತ ಹೆಚ್ಚಾಗಿ ಕೆಲಸದವಳು ಬೆಲ್ ಮಾಡುವ ಮುಂಚೆ ಸ್ನಾನ ಮುಗಿಸಿ.... ಹೀಗೆ ಬೆಳಿಗ್ಗೆ ನಾನು ಸಂಪೂರ್ಣ ಕೆಲಸದಲ್ಲಿ ಮುಳುಗಿರುತ್ತಿದ್ದೆ. ಆದರಿಲ್ಲಿ ? ಮಾಡುವ ಯಾವ ಕೆಲಸವೂ ಇಲ್ಲ. ಹಾಲು ದಿನಾ ತರಬೇಕಿಲ್ಲ. ಹಾಲನ್ನು ಮನೆಗೆ ತಂದುಕೊಡಲು ಅದೇನು ಬೆಂಗಳೂರಲ್ಲವಲ್ಲ!! ಇನ್ನು ಕೆಲಸದವರು ಬರುವ ಪ್ರಶ್ನೆಯೇ ಇಲ್ಲ. ಎಲ್ಲರೂ ನಿಧಾನವಾಗಿ ಏಳುವುದರಿಂದ ಅಡಿಗೆ ತಿಂಡಿಗೆ ಅವಸರವಿಲ್ಲ.ಇಲ್ಲಿಗೆ ಬರುವ ಮುಂಚೆ  ನನ್ನವರು " ನೋಡು ಸದಾಕಾಲ ಕೆಲಸದಲ್ಲಿ ಮುಳುಗಿರುವ ನಿನಗೆ, ಮಗನ ಮನೆಗೆ ಹೋದಾಗ ಬಿಡುವು ಸಿಗುತ್ತದೆ. ಅದನ್ನು ಚೆನ್ನಾಗಿ enjoy ಮಾಡು " ಎಂಬ ಮಾತು ನೆನಪಿಗೆ ಬಂದಿತು.. ಬೆಳಿಗ್ಗೆ ಕಣ್ಣುಬಿಟ್ಟಾಗ ಇಷ್ಟೆಲ್ಲಾ ಯೋಚನೆಗಳು ಸರಿದುಹೋಯಿತು. ಇನ್ನು ಉಳಿದಿರುವ ಒಂದೇ ಒಂದು ಕೆಲಸವೆಂದರೆ ವಾಕಿಂಗ್ ಹೋಗುವುದು. ಆದರೆ ಈ ಊರಿನಲ್ಲಿ ಅದೆಷ್ಟು ಹೊತ್ತಿಗೆ ಸೂರ್ಯ ಕಾಣಿಸಿಕೊಳ್ಳುತ್ತಾನೋ ತಿಳಿಯುತ್ತಲೇ ಇರಲಿಲ್ಲ. ಆದರೂ ಸ್ವಲ್ಪ ಬೆಳಕು ಹರಿದ ಕೂಡಲೇ ವಾಕಿಂಗ್ ಹೊರಟೆ. ಹಿಂದಿನ ಬಾರಿ ಬಂದಿದ್ದಾಗಲೇ ಇಲ್ಲಿ ವಾಕಿಂಗ್ ನೀಡುವ ಸಂತೋಷದ ಸವಿ ಅನುಭವಿಸಿದ್ದರಿಂದ ಅದನ್ನು ಬಿಡುವ ಪ್ರಶ್ನೆಯೇ ಇರಲಿಲ್ಲ.ಅಲ್ಲಿನ ಸ್ವಚ್ಚ ರಸ್ತೆಗಳು, ವಿಸ್ತಾರ ರಸ್ತೆಯ ಇಕ್ಕೆಲದಲ್ಲಿರುವ ಹುಲ್ಲಹಾಸು, ಅದರ ಪಕ್ಕದಲ್ಲಿರುವ ಪಾದಚಾರಿ ರಸ್ತೆ.. ಎಲ್ಲಕ್ಕಿಂತ ಹೆಚ್ಚಾಗಿ ರಸ್ತೆಯಲ್ಲಿ ಅತ್ಯಂತ ವಿರಳ ಜನಸಂಚಾರ.. ಸೊಗಸಾದ ಸ್ವಚ್ಚವಾದ ಮಾಲಿನ್ಯರಹಿತ ಬೆಳಗಿನ ತಂಗಾಳಿ...ಇವೆಲ್ಲಾ ವಾಯುಸಂಚಾರದ ಸೊಗಸನ್ನು ಮತ್ತಷ್ಟು ಹೆಚ್ಚಿಸುತ್ತಿತ್ತು. ಎಷ್ಟೇ ದೂರ ಸಂಚಾರ ಮುಗಿಸಿ ಬಂದರೂ ಆಯಾಸದ ಸೂಚನೆಯೇ ಇಲ್ಲ. ಬೆವರಂತೂ ಇಲ್ಲವೇ ಇಲ್ಲ. ಲೀಲಾಜಾಲವಾಗಿ  ಎರಡು ಗಂಟೆ ವಾಕ್ ಮಾಡಬಹುದು.&lt;br /&gt;&lt;br /&gt;ಇಂತಹ ಬೆಳಗಿನ ಸಂಚಾರ ಬೆಂಗಳೂರಿನ ಬೆಳಗಿನ ವಾಕ್ ಗಿಂತ ಬಲು ಭಿನ್ನ. ಯಾವುದೇ ರೀತಿಯ ಅಡೆತಡೆ ಇಲ್ಲದ್ದರಿಂದ ಹಾಗೆ ರಸ್ತೆಯ ಇಕ್ಕೆಲದ ಮನೆಗಳ ಕಡೆ ಕಣ್ಣು ಹಾಯಿಸುತ್ತಾ ಆ ಮನೆಗಳ ಸರಳತೆ, ಮನೆಯ ಮುಂದಿರುವ ಹೂಗಿಡಗಳ ಅಂದ ನೋಡುತ್ತಾ ಹೋಗುತ್ತಿದ್ದೆ. ಹಾಗೆ ಹೋಗುತ್ತಾ ಆ ಮನೆಗಳ ಮುಂದಿರುವ ಪೋಸ್ಟ್ ಬಾಕ್ಸ್ ಗಳನ್ನು ನೋಡಿದಾಗ ಕುತೂಹಲವಾಯಿತು.ಪೋಸ್ಟ್ ಹಾಕುವ ಅಂಚೆಯಣ್ಣ , ವೃತ್ತಪತ್ರಿಕೆ ಹಾಕುವ ಪೇಪರ್ ಬಾಯ್ ಗೆ ಒಳ್ಳೆಯ ಅನುಕೂಲ . ತನ್ನ ದ್ವಿಚಕ್ರವಾಹನದಿಂದ ಇಳಿಯದೆಯೇ ಪಾದಚಾರಿ ರಸ್ತೆಗೆ ಅಂಟಿಕೊಂಡಂತೆ ಪ್ರತಿಮನೆಯ ಮುಂದಿರುವ ಪೋಸ್ಟ್ ಬಾಕ್ಸಿಗೆ ಪೋಸ್ಟ್ ಹಾಕಬಹುದು.ಪತ್ರಿಕೆಗಳನ್ನು ಸುರುಳಿ ಸುತ್ತಿ  ಅದರ ಕೆಳಗಿರುವ ಒಂದು ವೃತ್ತಾಕಾರದ ತೆರದ ಬಾಯಲ್ಲಿ ತುರುಕಿದರೆ ಮುಗಿಯಿತು.ಎಲ್ಲಾ ಕೆಲಸಗಳನ್ನೂ ಸುಲಭ ಮತ್ತು ವ್ಯವಸ್ಥಿತವನ್ನಾಗಿಸಿಕೊಳ್ಳುವುದರಲ್ಲಿ ಈ ಪಾಶ್ಚಿಮಾತ್ಯರು ಬಹು ನಿಸ್ಸೀಮರು.&lt;br /&gt;&lt;br /&gt;ಪ್ರತಿದಿನದ ಕಸವಿಲೇವಾರಿಯ ವಿಷಯದಲ್ಲೂ ಅಷ್ಟೆ. ಪ್ರತಿ ಮನೆಯ ಮುಂದೆ ಸರ್ಕಾರ ನಿಗದಿಪಡಿಸಿದ ಒಂದೇ ರೀತಿಯ ಬೃಹದಾಕಾರದ ಡಸ್ಟ್ ಬಿನ್ ಗಳು. ಅದರೊಳಗೆ ನೇರವಾಗಿ ಕಸ ಹಾಕುವಂತಿಲ್ಲ. ಅದಕ್ಕಾಗಿಯೇ ನಿಗದಿಪಡಿಸಿದ ಪ್ಲ್ಯಾಸ್ಟಿಕ್ ಕವರ್ ಗಳನ್ನು ಕೊಂಡು ಅದರಲ್ಲಿ ಕಸ ಹಾಕಿ ಅದನ್ನು ಆ ಬಿನ್ ನಲ್ಲಿ ಹಾಕಬೇಕು. ಕಸ ತೆಗೆದುಕೊಂಡುಹೋಗುವ ವಾಹನ ಪ್ರತಿ ಮನೆಯ ಮುಂದೆ ಇರುವ ಬಿನ್ ಗಳನ್ನು ಯಂತ್ರದ ಕೈ ಮೂಲಕ ಎತ್ತಿ ಕಸದ ಕವರ್ ಗಳನ್ನು ತನ್ನೊಳಗೆ ಸುರುವಿಕೊಂಡು , ಖಾಲಿ ಬಿನ್ ನನ್ನು ವಾಪಸ್ ಇಡುತ್ತದೆ.ಯಾರೂ ಅದನ್ನು ಕೈಯಲ್ಲಿ ಮುಟ್ಟುವುದಿಲ್ಲ.ಕಸ ಹಾಕುವಾಗಲೂ ಅಷ್ಟೆ ತರಕಾರಿ ಸಿಪ್ಪೆ ಮುಂತಾದವುಗಳನ್ನೂ ಗಾಜಿನ ಅಥವಾ ಕೋಲಾ ಕ್ಯಾನ್ ಗಳನ್ನು ಒಂದೇ ಕವರಿನಲ್ಲಿ ಹಾಕುವಂತಿಲ್ಲ.ಹಾಗೆ ಹಾಕಿದರೆ ಅವರಿಗೆ ದಂಡ ವಿಧಿಸುತ್ತಾರೆ. ಅವರಿಗೆ ಹೇಗೆ ತಿಳಿಯುತ್ತದೆ ಎಂದು ನಾನಂದುಕೊಂಡಿದ್ದೆ. ಆದರೆ ಯಾವ ಮನೆಯ ಕಸ ಎಂಬುದನ್ನು ತಿಳಿದುಕೊಳ್ಳುವ ವ್ಯವಸ್ಥೆ ಅವರಲ್ಲಿದೆ.&lt;br /&gt;&lt;br /&gt;ಒಂದು ಒಂದು ದಿನ ವಾಕಿಂಗ್ ಹೊರಟಾಗ  ಒಂದುಕಡೆ ಮನೆ ಕಟ್ಟುವ ಕಾರ್ಯ ನಡೆಯುತ್ತಿತ್ತು. ಆದರೆ ಬೆಂಗಳೂರಿನಂತೆ ಕೆಲಸಗಾರರ ದಂಡು ಅಲ್ಲಿರಲಿಲ್ಲ. ಅಲ್ಲಿ ಮನೆಕಟ್ಟುವುದನ್ನು ನೋಡುವುದೇ ಒಂದು ಚಂದದ ಅನುಭವ. ಎಲ್ಲಾ ರೀತಿಯ ಕೇಬಲ್ ಗಳೂ ನೆಲದೊಳಗೇ. ಮನೆ ನಿರ್ಮಾಣದ ನಂತರ ರಸ್ತೆಗಳನ್ನು ಅಲ್ಲಲ್ಲಿ ಅಗೆಯುವುದು ಇಲ್ಲವೇ ಇಲ್ಲ. ಒಂದು Layout ಮಾಡುವಾಗಲೇ ಅಲ್ಲಿನ ರಸ್ತೆಮಾಡುವ ಹಂತದಲ್ಲೇ ಎಲ್ಲಾ ಕೇಬಲ್ ಗಳು ನೆಲದೊಳಗಿರುವಂತೆ ಮಾಡಿರುತ್ತಾರೆ. ಅನಂತರ ಅಲ್ಲಲ್ಲಿ ರಸ್ತೆ ಅಗೆಯುವುದು ಇಲ್ಲವೇ ಇಲ್ಲ ಎನ್ನಬಹುದು.ಮನೆ ಕಟ್ಟುವ ಚಂದದ ಪರಿ ನೋಡುತ್ತಾ ಮುಂದೆ ಹೊರಟೆ. ಅಲ್ಲಿಯೇ ಟ್ರಾಫಿಕ್ ಸಿಗ್ನಲ್ ದಾಟಬೇಕಿತ್ತು.ಮೊದಲ ಬಾರಿ ಅದನ್ನು ದಾಟುವುದು ಕಷ್ಟವೆನಿಸಿತ್ತು. ಕಾರಣ ವೇಗವಾಗಿ ಬರುವ ವಾಹನಗಳು. . ಆದರೆ ಪಾದಚಾರಿಗಳು ಸಿಗ್ನಲ್ ಬಳಿ ಒಂದು ಗುಂಡಿ ಒತ್ತಿದರೆ ಕೆಲವೇ ಸೆಕೆಂಡಿನಲ್ಲಿ ಸುತ್ತಲೂ ಕೆಂಪುದೀಪ ಬಂದು ನಾವು ನಿರಾಳವಾಗಿ ರಸ್ತೆ ದಾಟಬಹುದು. ಈ ವ್ಯವಸ್ಥೆಯನ್ನು ಅಮೆರಿಕದಲ್ಲಿ ನೋಡಿದ್ದರಿಂದ ಇದು ವಿಶೇಷ ಅನಿಸಲಿಲ್ಲ. ಆದರೆ ಗುಂಡಿ ಒತ್ತಿದ ಕೂಡಲೇ ಒಂದು ರೀತಿಯ ಕಟಕಟ ಧ್ವನಿ ಕೇಳಿಸಿತು.ಕುರುಡರು ರಸ್ತೆ ದಾಟುವಾಗ ಗುಂಡಿ ಒತ್ತಿದ ನಂತರ ಈ ದ್ವನಿ ಬಂದು ನಿಂತ  ಮೇಲೆ ರಸ್ತೆ ದಾಟಬಹುದು ಎಂಬುದರ ಸೂಚನೆ ಇದು!ಎಂದು ನಂತರ ತಿಳಿಯಿತು.&lt;br /&gt;ಇವೆಲ್ಲವನ್ನೂ ಗಮನಿಸುತ್ತಾ ನಡೆಯುವುದೇ ನನ್ನ ವಾಕಿಂಗ್ ನ ಸ್ವಾರಸ್ಯವನ್ನು ಹೆಚ್ಚಿಸುವ ಅಂಶಗಳಾಗಿದ್ದವು. ಇವೆಲ್ಲದರ ಜೊತೆ ಆ ಮನೆಗಳ ಮುಂದಿರುವ ಹೆಸರಿನ ಮೇಲೂ ಕಣ್ಣಾಡಿಸುತ್ತಾ ಹೊರಟಾಗ ಏನೋ ಹೆಚ್ಚುಕಡಿಮೆ ಇದೆಯಲ್ಲಾ ಎನಿಸಿತು. ಮತ್ತೆ ಗಮನವಿಟ್ಟು ಮನೆಯ ಸಂಖ್ಯೆಯನ್ನು ನೋಡುತ್ತಾ ಹೊರಟರೆ ಆ ಸಂಖ್ಯೆಗಳಲ್ಲಿ ನಿರಂತರತೆಯೇ ಇಲ್ಲ. ಕೆಲವು ದಿನಗಳು ತಲೆಕೆಡಿಸಿಕೊಂಡು ನೋಡಿದ ಮೇಲೆ ತೀಳಿಯಿತು. ಅಲ್ಲಿ ಬೆಸ ಸಂಖ್ಯೆಯ ಮನೆಗಳೆಲ್ಲಾ ರಸ್ತೆಯ ಒಂದು ಕಡೆ, ಸರಿ ಸಂಖ್ಯೆಯ ಮನೆಗೆಳೆಲ್ಲಾ ರಸ್ತೆಯ ಇನ್ನೊಂದು ಕಡೆ ಇರುತ್ತವೆ.ಹೊಸ ಮನೆಗಳನ್ನು ಹುಡುಕುವಾಗ ಬಹಳ ಸುಲಭ. ನಮಗೆ ಬೇಕಾದ ಸಂಖ್ಯೆ ಸರಿಯೋ ಬೆಸವೋ ಗಮನಿಸಿಕೊಂಡರೆ ಸಾಕು!. ಈ ರೀತಿಯ ಸರಿ , ಬೆಸ ಸಂಖ್ಯೆಗಳ ವಿಂಗಡಣೆ ವಿಮಾನ ನಿಲ್ದಾಣಗಳ ಒಳಗೂ ಇದೆ.&lt;br /&gt;&lt;br /&gt;ದಿನದಿನದ ವಾಕಿಂಗ್ ನಿಂದ ಈ ಎಲ್ಲ ವಿಚಾರಗಳೂ ತಿಳಿಯುತ್ತಾ ಹೋಯಿತು. ಇವೆಲ್ಲಕ್ಕಿಂತ ವಿಶೇಷಾದದ್ದು ಮತ್ತೊಂದು ಅಂಶ.ಅದು ನನಗಂತೂ ಬಹಳ ಅಚ್ಚರಿ ಹುಟ್ಟಿಸಿತು. ಎಂದಿನಂತೆ ಪ್ರತಿದಿನ ನಾನು ವಾಕಿಂಗ್ ಹೋಗುತ್ತಿದ್ದೆ. ಆಕಾಶದಲ್ಲಿ ಕಣ್ಣಾಮುಚ್ಚಾಲೆ ಆಡುವಂತೆ ಆಗೊಮ್ಮೆ, ಈಗೊಮ್ಮೆ ಸೂರ್ಯ ತನ್ನ ಇರುವಿಕೆಯನ್ನು ತೋರಿಸುತ್ತಿದ್ದ. ಸರಿಸುಮಾರು ಒಂದು ಒಂದೂವರೆ ಗಂಟೆ ವಾಕಿಂಗ್ ಮಾಡಿದರೆ ನಮ್ಮ ಬೆಂಗಳೂರಿನಲ್ಲಿ( ಭಾರತದಲ್ಲಿ ಅನ್ನಬಹುದು)ಸೂರ್ಯ ಎಷ್ಟು ದೂರ ಚಲಿಸಿರುತ್ತಾನೆ ಎಂಬುದು ನಮಗೆಲ್ಲಾ ಗೊತ್ತು. ಆದರೆ ಇಲ್ಲಿ ನನಗರ್ಥವಾಗದ ಒಂದು ಅಂಶ ನನ್ನ ತಲೆ ಕೊರೆಯುತ್ತಿತ್ತು. ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ ಸೂರ್ಯ ನೆತ್ತಿಯ ಮೇಲೆ ಬಂದದ್ದನ್ನು ನಾ ಕಾಣಲೇ ಇಲ್ಲ. ಅದ್ಯಾವ ಮಾಯೆಯಲ್ಲೋ ನನ್ನ ಕಣ್ಣಿಗೆ ಮಣ್ಣೆರಚಿ ಪೂರ್ವದಿಂದ ಸ್ವಲ್ಪ ಮೇಲೆ ಬಂದು ಇದ್ದಕ್ಕಿದ್ದಂತೆಪಶ್ಚಿಮ ಮತ್ತು ದಕ್ಷಿಣದ  ನಡುವಿನ ನೈರುತ್ಯ ದಿಕ್ಕಿನಲ್ಲಿ ಪ್ರತ್ಯಕ್ಷವಾಗುತ್ತಿದ್ದ. ನಾನೇ ಸರಿಯಾಗಿ ನೋಡುತ್ತಿಲ್ಲವೋ ಸೂರ್ಯನೇ ತನ್ನ ದಿನ ನಿತ್ಯದ ಚಲನೆ ಬೇಸರ ಬಂದು ಈ ರೀತಿ ದಿಕ್ಕು ತಪ್ಪುತ್ತಿರುವನೋ ? ಯಾರಲ್ಲಿ ಈ ವಿಷಯ ಹೇಳಿಕೊಳ್ಳುವುದು? ಕಡೆಗೆ ತಡೆಯಲಾರದೆ ನನ್ನ ಸೊಸೆಯನ್ನು ಕೇಳಿದಾಗ ಅವಳು ಆ ದೇಶದಲ್ಲಿ ಸೂರ್ಯನ ಚಲನೆ ಹಾಗೆಯೇ ಎಂದಳು. ಭೌಗೋಳಿಕವಾಗಿ ನಮ್ಮ ದೇಶ ಇರುವ ರೀತಿಗೂ ಆ ದೇಶ ಇರುವ ರೀತಿಗೂ ವ್ಯತ್ಯಾಸವಿದೆ ಎಂದಳು. ನಾವೂ ಭೂಗೋಳ ಓದಿದವಳೇ. ಆದರೆ ಅದನ್ನೆಂದೂ ವಿಶ್ಲೇಷಣೆ ಮಾಡಿದವಳಲ್ಲ. ಆ ಭೌಗೋಳಿಕ ಅಂಶಗಳು ನನಗೆ ಬೇಕಿಲ್ಲ. ಆದರೆ  ನೆತ್ತಿಯ ಮೇಲೆ ಸೂರ್ಯ ಬಾರದ ಆ ದೇಶದವರು ಎಷ್ಟೊಂದು ವಂಚಿತರು ಅನಿಸಿತು.ನೆತ್ತಿಯ ಮೇಲೆ ಸೂರ್ಯ ಬಂದ ಎನ್ನುವುದು ಹಿಂದಿನ ಕಾಲದಲ್ಲಿ ನಮ್ಮ ದೇಶದವರಿಗೆ ಎಷ್ಟೊಂದು ವಿಷಯ ತಿಳಿಸುತ್ತಿತ್ತು.ದಿನ ಅರ್ಧ ಕಳೆದಿದೆ., ರೈತನು ಹೊಲದಲ್ಲಿ ಊಟ ಮಾಡುವ ಸಮಯ., ಈ ಸಮಯದಲ್ಲಿ ನೆರಳು ನಮ್ಮ ಕಾಲಬುಡದಲ್ಲಿರುತ್ತದೆ ., ಇತ್ಯಾದಿ, ಇತ್ಯಾದಿ...ಆದರೆ ನೆತ್ತಿಯ ಮೇಲೆ ಬಾರದಿರುವ ಇಂತಹ ಒಂದು ದೇಶವಿದೆಯೆಂದೂ ಅದನ್ನು ನಾನು ನೋಡುತ್ತೇನೆಂದು ನಾನಂತೂ ಭಾವಿಸಿರಲಿಲ್ಲ.ವಿಪರ್ಯಾಸವೆಂದರೆ ಅದೇ ಊರಿನಲ್ಲಿರುವ ಕೆಲವು ಭಾರತೀಯರಲ್ಲಿ ಇದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದಾಗ ಅವರು ಕೊಟ್ಟ ಉತ್ತರ " ಹೌದಾ ಇಲ್ಲಿ ಸೂರ್ಯ ನೆತ್ತಿಯ ಮೇಲೆ ಬರುವುದಿಲ್ಲವಾ ?" ಎಂದು. ಪಾಪ, ಪ್ರತಿನಿತ್ಯ AC ಕಾರುಗಳಲ್ಲಿಯೇ ಓಡಡುವ ಅವರಿಗೆ ತಲೆ ಎತ್ತಿ ಆಕಾಶ ನೋಡುವ ಸಂದರ್ಭವಾದರೂ ಹೇಗೆ ಸಿಗುತ್ತದೆ?ಆಧುನಿಕ ಕಾಲದಲ್ಲಿ ಮನುಷ್ಯ ಪ್ರಕೃತಿಯಿಂದ ಎಷ್ಟೊಂದು ದೂರವಾಗುತ್ತಿದ್ದಾನೆ.ಈಗಾಗಲೇ ನಮ್ಮ ದೇಶದಲ್ಲಿಯೂ   ಬೆಳದಿಂಗಳಿನ ಸೌಂದರ್ಯ ನೋಡದ ಅನೇಕ ಮಕ್ಕಳು ಇದ್ದಾರೆ.ಮುಂದೊಂದು ದಿನ ಸೂರ್ಯನು ಯಾವ ದಿಕ್ಕಿನಲ್ಲಿ ಹುಟ್ಟಿ ಯಾವ ದಿಕ್ಕಿನಲ್ಲಿ ಮುಳುಗುತ್ತಾನೆಂದರೆ ಕಣ್ಣು ಕಣ್ಣು ಬಿಡುವ ಸ್ಥಿತಿ ತಲುಪಿದರೆ ಅಚ್ಚರಿಯೇನಿಲ್ಲ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8114402468197807042-8800895642670591595?l=battadatore.blogspot.com' alt='' /&gt;&lt;/div&gt;</content><link rel='replies' type='application/atom+xml' href='http://battadatore.blogspot.com/feeds/8800895642670591595/comments/default' title='Post Comments'/><link rel='replies' type='text/html' href='http://battadatore.blogspot.com/2009/02/blog-post.html#comment-form' title='28 Comments'/><link rel='edit' type='application/atom+xml' href='http://www.blogger.com/feeds/8114402468197807042/posts/default/8800895642670591595'/><link rel='self' type='application/atom+xml' href='http://www.blogger.com/feeds/8114402468197807042/posts/default/8800895642670591595'/><link rel='alternate' type='text/html' href='http://battadatore.blogspot.com/2009/02/blog-post.html' title='ನೆತ್ತಿಯ ಮೇಲೆ ಸೂರ್ಯ ಬರಲೇ ಇಲ್ಲ ...'/><author><name>ಚಂದ್ರಕಾಂತ ಎಸ್</name><uri>http://www.blogger.com/profile/00490264860537389455</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='25' src='http://3.bp.blogspot.com/_4wQW2-q8XsA/SVIw-U299dI/AAAAAAAAADY/T9mtUHgBZhU/S220/blogfile12.jpg'/></author><thr:total>28</thr:total></entry><entry><id>tag:blogger.com,1999:blog-8114402468197807042.post-7669095713737792722</id><published>2009-01-18T04:40:00.000+05:30</published><updated>2009-01-18T20:11:30.700+05:30</updated><title type='text'>" ಉತರನ್ " ಕಲರ್ಸ್ ಚಾನಲ್ಲಿನ ಮತ್ತೊಂದು ಬಣ್ಣದ ಗರಿ</title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_4wQW2-q8XsA/SXLn2fyBjTI/AAAAAAAAAD4/V7AhzxKZtNI/s1600-h/utaran.jpg"&gt;&lt;img style="margin: 0px auto 10px; display: block; text-align: center; cursor: pointer; width: 298px; height: 198px;" src="http://3.bp.blogspot.com/_4wQW2-q8XsA/SXLn2fyBjTI/AAAAAAAAAD4/V7AhzxKZtNI/s320/utaran.jpg" alt="" id="BLOGGER_PHOTO_ID_5292547435544022322" border="0" /&gt;&lt;/a&gt;&lt;br /&gt;ಕಲರ್ಸ್ ಚಾನೆಲ್ ಗೆ ಮತ್ತೊಂದು ಹೊಸ ಬಣ್ಣ ಮೂಡಿಸಿದ ಸುಂದರ ಧಾರಾವಾಹಿ ' ಉತರನ್ '&lt;br /&gt;&lt;br /&gt;ಉತರನ್ ಎಂದರೆ ಮತ್ತೊಬ್ಬರ ಎಂಜಲಿನಲ್ಲಿ ಎಂದರೆ ಅವರು ಬಳಸಿ ಬಿಸಾಕಿದ್ದರಲ್ಲಿ ಬದುಕುವುದೆಂದು ಅರ್ಥ.ಈ ಧಾರಾವಾಹಿಯ ಟೈಟಲ್ ಸಾಂಗ್ ಬಹಳ ಅರ್ಥಪೂರ್ಣವಾಗಿದೆ.&lt;br /&gt;&lt;br /&gt;&lt;br /&gt;ಬಾಲ್ಯ ವಿವಾಹದಂತಹ ಸಾಮಾಜಿಕ ಸಮಸ್ಯೆಯ ಎಲ್ಲ ಮುಖಗಳನ್ನೂ ಮನಮುಟ್ಟುವಂತೆ ಚಿತ್ರಿಸಿರುವ ಬಾಲಿಕಾ ವಧುವಿನ ನಂತರ ಕಲರ್ಸ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ‘ ಉತರನ್ ’ಕಲರ್ಸ್ ವಾಹಿನಿಯ ಬಣ್ಣವನ್ನು ಮತ್ತಷ್ಟು ಗಾಢವಾಗಿಸುತ್ತದೆ.ಮುಂಬಯಿಯ ಕೊಳಗೇರಿಯ ಹುಡುಗಿ ಇಚ್ಚಾ  ಈ  ಧಾರಾವಾಹಿಯ ಕೆಂದ್ರ ಪಾತ್ರ.&lt;span&gt; ಕೊಳಗೇರಿ ನಿವಾಸಿಯಾದ ಅವಳಿಗೆ ಮುಗಿಲೆತ್ತರದ ಕೈಗೆಟುಕದ ಕನಸುಗಳು. ಅವಳ ಬದುಕಿನಲ್ಲಿ ಪರಿಕಾಯವಾದ ಬಂಗಲೆಯಲ್ಲಿ&lt;/span&gt; ವಾಸಿಸುವ ಶ್ರೀಮಂತ ಹುಡುಗಿಯ ಸ್ನೇಹ ಯಾವ ಯಾವ ತಿರುವುಗಳನ್ನು ಪಡೆದುಕೊಳ್ಳುತ್ತದೆಂಬುದೇ ಧಾರಾವಾಹಿಯ ತಿರುಳು.ಸಾಮಾಜಿಕ ಅಸಮತೋಲನದಿಂದ ತುಂಬಿತುಳುಕುತ್ತಿರುವ ಈ ಸಮಾಜದಲ್ಲಿ ಅಂತಹ ನೈಜ ಸ್ನೇಹ ಯಾವ ರೂಪ ಪಡೆದುಕೊಳ್ಳುತ್ತದೆ,ಮಕ್ಕಳ ತಿಳಿಗೊಳದಂತಿರುವ ಮನಸ್ಸುಗಳನ್ನು ಸಮಾಜ ಮತ್ತು ಹಿರಿಯರು  ಕಲುಷಿತಗೊಳಿಸುವ ರೀತಿ &lt;span&gt;... ಮುಂತಾದ &lt;/span&gt;  ಅನೇಕ ಕಾರಣಗಳಿಂದ ಈ ಧಾರಾವಾಹಿ  ಮನಸೆಳೆಯುತ್ತದೆ. . ಈ ಧಾರಾವಾಹಿಯ ಕಿರುಪರಿಚಯ ಮುಂದೆ.&lt;br /&gt;&lt;br /&gt;ಇಚ್ಚಾ ಮುಂಬಯಿಯ ಕೊಳೆಗೇರಿ ನಿವಾಸಿ. ಅವಳ ತಾಯಿ  ದಾಮಿನಿ ಬಟ್ಟೆ ಹೊಲಿಯುತ್ತಾ ಕೆಲವು ಮನೆಗಳಲ್ಲಿ ಕಸಮುಸುರೆ ಮಾಡಿಕೊಂಡಿರುವ ಸಾಮಾನ್ಯ ಹೆಣ್ಣು. ಏಳೆಂಟು ವರ್ಷದ ಇಚ್ಚಾಳಿಗೆ ಸದಾಕಾಲ ಗೆಳೆಯರ ಗುಂಪು ಕಟ್ಟಿಕೊಂಡು ಬೀದಿ ಸುತ್ತುವುದೇ ಕೆಲಸ.ಅವಳ ಗೆಳೆಯರಾದರು ಯಾರು &lt;span&gt;? ಅವರೆಲ್ಲಾ ಟ್ರಾಫಿಕ್ ಸಿಗ್ನಲ್ ಗೆಳೆಯರು. ತಕ್ಲು, ಬಜ್ಜು,ಕುಕೀ - ಇವರೆಲ್ಲಾ ಟ್ರಾಫಿಕ್ ಸಿಗ್ನಲ್ ಬಳಿ ಕಾರು ಒರೆಸಿಯೋ , ಶೂ ಪಾಲಿಶ್ ಮಾಡಿಯೋ ,ಹೂ ಮಾರಿಯೋ ಜೀವನ ಸಾಗಿಸುವವರು. ಇಂತಹ&lt;/span&gt; ವಾತಾವರಣದಲ್ಲಿರುವ ಇಚ್ಛಾಳಿಗೆ ಸದಾಕಾಲ ಕೈಗೆಟುಕದ ಮುಗಿಲೆತ್ತರದ ಕನಸುಗಳು.  ಇವಳ ಕನಸುಗಳು ಅವಳ ಗೆಳೆಯರಿಗೆ ನಗೆ ಉಕ್ಕಿಸುತ್ತವೆ. ಇತರರಂತೆ ತಾವೇಕಿಲ್ಲ ? ಎಂಬುದೇ ಅವಳನ್ನು ಸದಾ ಕಾಡುವ ಪ್ರಶ್ನೆ.ಅವಳ ತಾಯಿ ಇದಕ್ಕೆ ಕೊಡುವ ಉತ್ತರ ಬಹು ಸರಳ. ಅವರಿಗೆ ಅದೃಷ್ಟವಿದೆ. ನಮಗಿಲ್ಲ. ಇಷ್ಟಕ್ಕೇ ಸುಮ್ಮನಿರದ ಇಚ್ಛಾ ಆ‘ ಅದೃಷ್ಟ’  ಸಿಗುವುದೆಲ್ಲಿ &lt;span&gt;? ಎಂದು&lt;/span&gt; ಮುಗ್ಧಳಾಗಿ ಸಿಕ್ಕ ಸಿಕ್ಕವರನ್ನೆಲ್ಲಾ ಪ್ರಶ್ನಿಸುತ್ತಾಳೆ.ಒಬ್ಬಾಕೆಯಂತೂ ' ಆ ದೇವರು ಕೊಟ್ಟರೆ ನಮ್ಮ ಕೈಗೆ ಅದೃಷ್ಟ ಸಿಗುತ್ತದೆ' ಎಂದು ತತ್ವ ಜ್ಞಾನಿಯಂತೆ ಹೇಳುತ್ತಾಳೆ.ಅಷ್ಟಕ್ಕೇ ಸುಮ್ಮನಿರದ ಇಚ್ಚಾ ಶ್ರೀಮಂತ ಹುಡುಗಿಯೊಬ್ಬಳ ಕೈಯಲ್ಲಿರುವ ಟ್ಯಾಟೂ ನೋಡಿ ಅದೇ ಅದೃಷ್ಟವೆಂದು ಭಾವಿಸಿ  &lt;span&gt;`ಅದು&lt;/span&gt; ಎಲ್ಲಿ &lt;span&gt;ಸಿಗುತ್ತದೆ '&lt;/span&gt; ಎಂದು ತನ್ನ ಟ್ರ್ಯಾಫಿಕ್ ಸಿಗ್ನಲ್ ಗೆಳೆಯರನ್ನು ಕೇಳುತ್ತಾಳೆ.ಶ್ರೀಮಂತರಂತೆ ಇರಬೇಕೆಂಬ ತಮ್ಮಂತವರ ಕೈಗೆಟುಕದ  ಇವಳ  ಆಸೆಯನ್ನು  ನೋಡಿ ಆ  ಸ್ನೇಹಿತರು ಅವಳಿಗೆ ಕೀಟಲೆ ಮಾಡಬೇಕೆಂದು ಹಚ್ಚೆ ಹೊಯ್ಯುವವನ ಹೆಸರನ್ನು ಹೇಳಿ ಅವನೇ ಅದೃಷ್ಟ ಕೊಡುವವನೆನ್ನುತ್ತಾರೆ. ಅವರ ಮಾತನ್ನು  ನಿಜವೆಂದೇ ಭಾವಿಸಿದ ಮುಗ್ಧ  ಇಚ್ಛಾ ಅವನ ಇರುವಿಕೆಯನ್ನು ಪತ್ತೆ ಮಾಡಿ ಹಚ್ಚೆ ಹಾಕುವಂತೆ ಕೇಳುತ್ತಾಳೆ. ಅವಳ ವಯಸ್ಸು, ಎಳೆಯ ಕೈಗಳನ್ನು ನೋಡಿ ಅವನು ಹಿಂಜರಿದು ಅವರ ತಾಯಿಯನ್ನು ಕರೆತರುವಂತೆ ಹೇಳಿದರೆ ಒಪ್ಪದ ಹುಡುಗಿ ಹಠ ಮಾಡಿ ಹಚ್ಚೆ ಹಾಕಿಸಿಕೊಳ್ಳುತ್ತಾಳೆ. ಆದರೆ ಹಾಕಿಸಿಕೊಳ್ಳುವಾಗಲೇ ಪ್ರಜ್ಞೆ ತಪ್ಪಿ ಬೀಳುತ್ತಾಳೆ.ಮಗಳ ಈ ಸ್ಥಿತಿಯನ್ನು ಕಂಡು ರೋಧಿಸುವ ತಾಯಿ  ಮುಖಕ್ಕೆ ನೀರು ಚಿಮುಕಿಸಿ ಎಚ್ಚರಿಸಿದಾಗ ಅವಳು ಹೇಳುವ ಮೊದಲ ಮಾತೇ ' ಅಮ್ಮಾ ನೋಡು ಅದೃಷ್ಟ ನನ್ನ ಕೈಗೆ ಸಿಕ್ಕಿದೆ' . ಮಗಳ ಈ ಆಸೆಯನ್ನು ನೋಡಿ ದಾಮಿನಿ ಹೇಗಾದರೂ ಮಾಡಿ ಇಚ್ಛಾಳಿಗೆ ಉತ್ತಮ ಬದುಕು ಕೊಡಲೇ ಬೇಕೆಂದು  ತೀರ್ಮಾನಿಸುತ್ತಾಳೆ.&lt;br /&gt;&lt;br /&gt;ಇಲ್ಲಿಂದ ಇಚ್ಚಾಳ ಬದುಕು ಮತ್ತೊಂದು ತಿರುವು ಪಡೆಯುತ್ತದೆ.ಇಚ್ಚಾಳ  ತಾಯಿ ದಾಮಿನಿಗೆ ಬಂಗಲೆಯಲ್ಲಿ ವಾಸಿಸುವ ಶ್ರೀಮಂತರ ಮನೆಯಲ್ಲಿ ಅವರ ಏಕಮಾತ್ರ &lt;span&gt;&lt;/span&gt;ಪುತ್ರಿಯನ್ನು ನೋಡಿಕೊಳ್ಳುವ ಕೆಲಸ ಸಿಗುತ್ತದೆ.ಆದರೆ.ದಾಮಿನಿಯೊಬ್ಬಳೇ ಬಂಗಲೆಯಲ್ಲಿದ್ದುಕೊಂಡು ಹುಡುಗಿಯನ್ನು ನೋಡಿಕೊಳ್ಳಬೇಕು.... ಇವಳ ಕಡೆಯವರಾರೂ ಅವಳನ್ನು ನೋಡಲು ಬರಬಾರದು.&lt;span&gt;.. ಇಂತಹ ಶರತ್ತುಗಳು ದಾಮಿನಿ&lt;/span&gt; ದ್ವಂದ್ವಕ್ಕೆ ಸಿಲುಕುತ್ತಾಳೆ. ಒಂದು ಕಡೆ ಮಗಳಿಗೆ ಬೇಕಾಗುವಷ್ಟು ಹಣ ಸಂಪಾದಿಸಬಹುದಾದ ಅವಕಾಶ, ಮತ್ತೊಂದೆಡೆ  ತನಗೆ ಒಬ್ಬ ಮಗಳಿದ್ದಾಳೆಂದು ಹೇಳಿದರೆ ಕೆಲಸಕ್ಕೆ ಎಲ್ಲಿ ಸಂಚಕಾರ ಬರಬಹುದೋ ಎಂಬ ಭಯ.  &lt;span&gt;&lt;/span&gt;ಆದರು ಈ ಕೆಲಸಕ್ಕೆ ಸೇರಿಯೇ ಬಿಡುತ್ತಾಳೆ. ಇಚ್ಚಾ ತಾಯಿಯನ್ನು ಬಿಟ್ಟಿರಲಾರದೆ ತಾಯಿಯ ಬಳಿ ಓಡಿ ಬರುತ್ತಾಳೆ. ಹವೇಲಿಯ ಒಡತಿ ಕೋಪಗೊಂಡು ಅವರಿಬ್ಬರನ್ನೂ ಓದಿಸಬೇಕೆನ್ದು ನಿರ್ಧರಿಸುತ್ತಾಳೆ. ಆದರೆ.. ಒಡತಿಯ ಮಗಳು ತಪಸ್ಯಾ ಈಗಾಗಲೇ ಇಚ್ಚಾಳ ಸ್ನೇಹದ ಸವಿಯನ್ನು ಕಂಡು ಅವಳನ್ನು ಬಿಟ್ಟಿರಲಾರದ ಸ್ಥಿತಿಗೆ ತಲುಪಿರುತ್ತಾಳೆ.ಅವಳ ಹಠ, ಅನಾರೋಗ್ಯ ಮತ್ತೆ ಇಚ್ಚಾ ಅಲ್ಲಿಯೇ ಇರುವಂತೆ ಮಾಡುತ್ತದೆ.&lt;span&gt; ತಪಸ್ಯಾ&lt;/span&gt; ಮತ್ತು &lt;span&gt;ಇಚ್ಚಾ &lt;/span&gt; ಇವರ ನಡುವಿನ ತರತಮ  ಭಾವವಿಲ್ಲದ ಸ್ನೇಹ ನೋಡುಗರಲ್ಲಿ ಆಸಕ್ತಿ ಉಂಟುಮಾಡಿದರೆ ತಪಸ್ಯಾಳ ತಾಯಿಯ ಅಸಹನೆ ಮುಗಿಲು ಮುಟ್ಟುತ್ತದೆ. ಅದೇ ಸಮಯಕ್ಕೆ ಅವರ ಆಗಮಿಸುವ ಅಜ್ಜಿ ತಪಸ್ಯಾ ಮತ್ತು ಇಚ್ಚಾ ನಡುವೆ ಕಂದರ ಹುಟ್ಟುಹಾಕಲು ಕುತಂತ್ರ ನಡೆಸುತ್ತಾಳೆ. ಇಚ್ಚಾ ಕೆಲಸದವಳ ಮಗಳಾದ್ದರಿಂದ ಅವಳ ಸ್ಥಾನ ತಪಸ್ಯಾಳ ಮಟ್ಟಕ್ಕಿರಲು ಸಾಧ್ಯವಿಲ್ಲವೆಂಬ ಬೇಧಭಾವವನ್ನು ಉಂಟು ಮಾಡುತ್ತಾಳೆ. ಮೇಲು ಕೀಳಿನ ಅರಿವೇ ಇಲ್ಲದ ಇಚ್ಚಾಳಿಗೆ ಉಸಿರುಕಟ್ಟಿಸುವ ವಾತಾವರಣ ನಿರ್ಮಾಣವಾಗುತ್ತದೆ .&lt;span&gt; ಸದಾಕಾಲ&lt;/span&gt; ಉತ್ಸಾಹದ ಬುಗ್ಗೆಯಂತಿದ್ದ ಮಗಳ ಸಪ್ಪೆ &lt;span&gt;ಮುಖ &lt;/span&gt; ನೋಡಿದ ದಾಮಿನಿ ರಜೆ ಪಡೆದು ಮತ್ತೆ ತನ್ನ ಕೊಳಗೇರಿನಿವಾಸಕ್ಕೆ ಮಗಳನ್ನು ಕರೆದೊಯ್ಯುತ್ತಾಳೆ.&lt;br /&gt;&lt;br /&gt;ತನ್ನ ಹಳೆಯ ಗೆಳೆಯರಾದ ಟಕ್ಲು, ಬಜ್ಜು ಮತ್ತು ಕುಕಿಯರೊಂದಿಗೆ ಇಚ್ಚಾ ಮತ್ತೆ ಮೊದಲಿನ ಸಂಭ್ರಮದ ಸ್ಥಿತಿಗೆ ತಲುಪುತ್ತಾಳೆ &lt;span&gt;&lt;/span&gt; ಅವರ ನಿಷ್ಕಲ್ಮಷ ಸ್ನೇಹ &lt;span&gt;,ಇಚ್ಚಾಳ&lt;/span&gt; ಮೊದಲಿನ ಉತ್ಸಾಹ ಎಲ್ಲವನ್ನೂ ನೋಡಿದ ದಾಮಿನಿ ಹಣದ ಆಸೆಗಾಗಿ ಮತ್ತೆ ಆ &lt;span&gt;ಬಂಗಲೆಗೆ &lt;/span&gt; ಹೋಗುವುದು ಬೇಡವೆಂದು ತೀರ್ಮಾನಿಸುತ್ತಾಳೆ.ಶ್ರೀಮಂತರ ಮನೆಯ ಉಸಿರುಕಟ್ಟಿಸುವ ವಾತಾವರಣಕ್ಕಿಂತ ಕೊಳಗೇರಿಯ ಆತ್ಮೀಯ ವಾತಾವರಣವೇ ಸರಿಯೆಂದುಕೊಳ್ಳುವಷ್ಟರಲ್ಲಿ ಇಚ್ಚಾಳ ಕೊಳಗೇರಿಯ ಗೆಳತಿ ರಸ್ತೆ ಅಪಘಾತಕ್ಕೆ ತುತ್ತಾಗಿ  ಕಾಲು ಕಳೆದುಕೊಳ್ಳುತ್ತಾಳೆ.. ಅವಳಿಗೆ ಹಣ ಹೊಂದಿಸುವರಾರು ? ತಾಯಿ ತಂದೆಯರಿಲ್ಲದ ಅವಳಿಗೆ ಕುಡಿತದ ಚಟಕ್ಕೆ ಗುರಿಯಾಗಿರುವ ಚಿಕ್ಕಪ್ಪನೊಬ್ಬನೇ ಆಶ್ರಯ.ಮಾನವೀಯತೆಯ ದೃಷ್ಟಿಯಿಂದ ದಾಮಿನಿ, ಮನೆಯೊಡತಿ  ತಮ್ಮ ತಮ್ಮಲ್ಲಿರುವ ಹಣ ಸುರಿದರೂ ಅದು ಸಾಲುವುದಿಲ್ಲ. ದಾಮಿನಿ ತನ್ನ ಬಂಗಲೆಯ ಯಜಮಾನರ ಬಳಿ ಹೇಗೋ ಹಣ ಹೊಂದಿಸಿ ತರುತ್ತಾಳೆ. ಈಗ ಹಣ ತೀರಿಸುವುದಕ್ಕಾದರೂ ಮತ್ತೆ ಬಂಗಲೆಗೆ ಹೋಗಲೇ ಬೇಕಾದ ಅನಿವಾರ್ಯತೆ ಅವಳಿಗೆದುರಾಗುತ್ತದೆ.ಇದಕ್ಕೆ ಬಿಲ್ ಕುಲ್ ಒಪ್ಪದ ಇಚ್ಚಾಳಿಗೆ ತಿಳಿ ಹೇಳುವಷ್ಟರಲ್ಲಿ ದಾಮಿನಿ ತನ್ನ  ಬುದ್ದಿಯೆಲ್ಲವನ್ನೂ  ಖರ್ಚು  ಮಾಡಬೇಕಾಗುತ್ತದೆ.&lt;br /&gt;&lt;br /&gt;ಈಗ ಮತ್ತೊಮ್ಮೆ ಇಚ್ಚಾಳ ಬದುಕು ಬಂಗಲೆಗೆ ಬಂದಿದೆ. ಆದರೆ ದಾಮಿನಿ ಮತ್ತು ಇಚ್ಚಾರ ಇರುವಿಕೆಯನ್ನು ಸಹಿಸದು ಮನೆಯೊಡತಿ ಹಾಗೂ ಅಜ್ಜಿ ಉಪಾಯಹುಡುಕುತ್ತಿದ್ದಾರೆ. ಅದರ ಪರಿಣಾಮ ಮತ್ತೊಬ್ಬ ಹುಡುಗಿ ಹವೇಲಿಯನ್ನು ಪ್ರವೇಶಿಸುತ್ತಾಳೆ.&lt;br /&gt;&lt;br /&gt;ಮುಂದೆ ಇಚ್ಚಾಳ ಬದುಕು ? ಕಾದು ನೋಡಬೇಕಿದೆ. ಇಚ್ಚಾಳ ಪತ್ರ ನಿರ್ವಹಿಸಿರುವ ಸ್ಪರ್ಶ ಅತ್ಯಂತ ಲವಲವಿಕೆಯ ಅಭಿನಯ ನೀಡಿದ್ದಾಳೆ. ಅವಳ ವೇಷ ಭೂಷಣ, ಆಂಗಿಕ ಅಭಿನಯ ಎಲ್ಲವೂ ಪಕ್ಕಾ ಕೊಳಗೇರಿ ಹುಡುಗಿಯ ಹಾಗೇ ಇದೆ. ಆದರೆ ಅವಳ ಕಣ್ಣುಗಳ ಹೊಳಪಿಗೆ ಯಾರಾದರೂ ಅಚ್ಚರಿ ಪಡಬೇಕು. ಮುಂಬಯಿಯ ಕೊಳಗೇರಿಯಲ್ಲಿಯೆ ಚಿತ್ರಣವಾಗಿರುವುದು ಇದರ ಮತ್ತೊಂದು ವಿಶೇಷ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8114402468197807042-7669095713737792722?l=battadatore.blogspot.com' alt='' /&gt;&lt;/div&gt;</content><link rel='replies' type='application/atom+xml' href='http://battadatore.blogspot.com/feeds/7669095713737792722/comments/default' title='Post Comments'/><link rel='replies' type='text/html' href='http://battadatore.blogspot.com/2009/01/blog-post_17.html#comment-form' title='30 Comments'/><link rel='edit' type='application/atom+xml' href='http://www.blogger.com/feeds/8114402468197807042/posts/default/7669095713737792722'/><link rel='self' type='application/atom+xml' href='http://www.blogger.com/feeds/8114402468197807042/posts/default/7669095713737792722'/><link rel='alternate' type='text/html' href='http://battadatore.blogspot.com/2009/01/blog-post_17.html' title='&quot; ಉತರನ್ &quot; ಕಲರ್ಸ್ ಚಾನಲ್ಲಿನ ಮತ್ತೊಂದು ಬಣ್ಣದ ಗರಿ'/><author><name>ಚಂದ್ರಕಾಂತ ಎಸ್</name><uri>http://www.blogger.com/profile/00490264860537389455</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='25' src='http://3.bp.blogspot.com/_4wQW2-q8XsA/SVIw-U299dI/AAAAAAAAADY/T9mtUHgBZhU/S220/blogfile12.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_4wQW2-q8XsA/SXLn2fyBjTI/AAAAAAAAAD4/V7AhzxKZtNI/s72-c/utaran.jpg' height='72' width='72'/><thr:total>30</thr:total></entry><entry><id>tag:blogger.com,1999:blog-8114402468197807042.post-8844362436513840679</id><published>2009-01-06T18:03:00.000+05:30</published><updated>2009-01-18T12:25:16.686+05:30</updated><category scheme='http://www.blogger.com/atom/ns#' term='ಕತೆ'/><title type='text'>ಚಂದ್ರಮತಿಯ ಅಂತರಂಗ</title><content type='html'>&lt;u style="font-family: arial black,sans-serif; color: rgb(153, 0, 0);"&gt;&lt;i&gt;&lt;b&gt;&lt;/b&gt;&lt;/i&gt;&lt;/u&gt; &lt;div style="font-family: arial black,sans-serif; color: rgb(153, 0, 0);"&gt;&lt;u&gt;&lt;i&gt;&lt;b&gt; &lt;/b&gt;&lt;/i&gt;&lt;/u&gt;&lt;/div&gt; &lt;div&gt;ಕಷ್ಟದ  ದಿನಗಳೆಲ್ಲಾ ಕಳೆದು ಹೋಗಿದ್ದವು. ಬದುಕಿನ ಕರಾಳ ಅಧ್ಯಾಯ ಅಂತ್ಯ ಕಂಡಿತ್ತು. ಕಡೆಯೇ ಇಲ್ಲವೇನೋ ಎಂಬ ನಂಬಿಕೆಗೆಡೆಮಾಡಿದ್ದ ಕಷ್ಟಕಾರ್ಪಣ್ಯಗಳ ಹೊರೆ ಇಳಿದಿತ್ತು.ಹರಿಶ್ಚಂದ್ರನು ಮತ್ತೆ ಪ್ರಜೆಗಳ ಮೆಚ್ಚಿನ ರಾಜನಾಗಿ ಪಟ್ಟಾಭಿಷಿಕ್ತನಾಗಿ ವಾರ ಕಳೆದಿತ್ತು. ಸಕಲ ರಾಜರಿಂದ .ಋಷಿಮುನಿಗಳಿಂದ , ಪ್ರಜೆಗಳಿಂದ 'ಭಲೇ ಹರಿಶ್ಚಂದ್ರ, ಕಡೆಗೂ ನಿನ್ನ  ಸತ್ಯಗುಣಕ್ಕೆ ಜಯ ಸಿಕ್ಕಿತು' ಎಂಬ ಮೆಚ್ಚಿಗೆಯ ಮಾತುಗಳನ್ನು ಕೇಳಿ ಹರಿಶ್ಚಂದ್ರನಿಗೆ ಜೀವನ ಸಾರ್ಥಕವೆಂಬ ಭಾವ ಮೂಡಿತು.ಆದರೆ ಏಕೋ ಏನೋ ತನ್ನ ಮನಸ್ಸು ಅರಳಲು, ಹಿಗ್ಗಲು ನಿರಾಕರಿಸುತ್ತಿದೆ. ಹರಿಶ್ಚಂದ್ರನು ಮತ್ತೆ ತನ್ನ ಸಾಮ್ರಾಜ್ಯ, ಪದವಿ ಎಲ್ಲವನ್ನೂ ಪಡೆದು ,ತಾನು ಮಹಾರಾಣಿಯ ಸ್ಥಾನ ಅಲಂಕರಿಸಿದ್ದರೂ ತನಗೇಕೆ ಈ ತಳಮಳ? ಬೇಡವೆಂದರೂ ಏಕೆ ಘೋರ ನೆನಪುಗಳು ಮನಸ್ಸನ್ನು  ಘಾ&lt;span&gt;ಸಿಗೊಳಿಸುತ್ತಿವೆ&lt;br /&gt;&lt;br /&gt;&lt;br /&gt;&lt;/span&gt; &lt;/div&gt; &lt;div&gt; &lt;/div&gt; &lt;div&gt;ಹರಿಶ್ಚಂದ್ರನ ವಧುವಾಗಿ ಈ ನಾಡಿನ ಪಟ್ಟದರಾಣಿಯಾಗಿ ಬಂದಾಗ ತಾನೆಷ್ಟು ಮುಗ್ಧಳಾಗಿದ್ದೆ. ಚಕ್ರವರ್ತಿಯ ಪತ್ನಿಯಾಗುವೆನೆಂಬ ನೆನಪೇ ರೋಮಾಂಚನ ಉಂಟುಮಾಡುತ್ತಿತ್ತು. ಮದುವೆಯಾಗಿ ಬಂದಾಗ ಎಲ್ಲರೂ ಅವನನ್ನು 'ರಾಜಾ ಹರಿಶ್ಚಂದ್ರ  ' ಎಂದೇ ಕರೆಯುತ್ತಿದ್ದರು. ಅವನನ್ನು 'ಸತ್ಯ ಹರಿಶ್ಚಂದ್ರ' ಎಂದು ಕರೆಯಲಾರಂಭಿಸಿದ್ದು ಯಾವಾಗ ಎಂಬ ಪ್ರಶ್ನೆ ತನ್ನನ್ನು ಇತ್ತೀಚೆಗೆ ತೀವ್ರವಾಗಿ ಕಾಡುತ್ತಿದೆ. ಬೇಡವೆಂದರೂ ಮನಸ್ಸು ಆ ಪ್ರಸಂಗವನ್ನೇ ಮೆಲುಕು ಹಾಕುತ್ತಿದೆ.  &lt;/div&gt; &lt;div&gt; &lt;/div&gt; &lt;div&gt;ಮದುವೆಯಾಗಿ ಎಷ್ಟೋವರ್ಷಗಳಾದಾರೂ ತಮಗೆ ಮಕ್ಕಳಾಗದಿದ್ಡಾಗ ಹರಿಶ್ಚಂದ್ರನ ಮನಶ್ಯಾಂತಿ ಕದಡಿಹೋಗಿತ್ತು.ಆ ಮನಸ್ಠಿತಿಯಲ್ಲಿ ಮಕ್ಕಳಾಗುವುದೆಂದು ಯಾರು ಏನೇ ಹೇಳಿದರೂ ಮಾಡಲು ಸಿದ್ಧನಾದ. ಸರಿಯೇ ತಪ್ಪೇ ಎಂದು ಯೋಚಿಸಲಾರದಷ್ಟು ದುರ್ಬಲವಾಗಿತ್ತು ಅವನ  ಮನಸ್ಸು.  ಆದರೂ ಪ್ರಯೋಜನಾವಾಗಲಿಲ್ಲ. ಇಂತಹ ಸಂದರ್ಭದಲ್ಲಿಯೇ ನಾರದರ ಆಗಮನವಾದದ್ದು . ವರುಣ ದೇವನನ್ನು ಪ್ರಾರ್ಥಿಸಿದರೆ ಖಂಡಿತ ಪುತ್ರ ಸಂತಾನವಾಗುವುದೆಂಬ ಆಸೆಯ ಬೀಜ ಬಿತ್ತಿಯೇ ಹೋದರು ನಾರದರು. ಅವರ ಮಾತು ಸುಳ್ಳಾಗಲಿಲ್ಲ!!&lt;br /&gt;&lt;br /&gt;&lt;br /&gt;&lt;/div&gt; &lt;div&gt; &lt;/div&gt; &lt;div&gt;ಪ್ರಾರ್ಥನೆಗೆ ಒಲಿದ ವರುಣ ಪುತ್ರಸಂತಾನ ಭಾಗ್ಯ ಒದಗಿಸುವುದಾಗಿ ವರವಿತ್ತ, ಜತೆಗೊಂದು ಷರತ್ತನ್ನೂ ಮುಂದಿಟ್ಟ.ಅದೂ ಎಂತಹ ಷರತ್ತು, ಹುಟ್ಟುವ ಮಗುವನ್ನು ಅವನ ಯಾಗಕ್ಕೆ ಬಲಿಪಶುವನ್ನಾಗಿಸುವುದು! ವಂಶೋದ್ದಾರಕ ಹುಟ್ಟಿದರೆ ಸಾಕೆಂದು ಹಂಬಲಿಸುತ್ತಿದ್ದ ಹರಿಶ್ಚಂದ್ರ  ತನ್ನೊಡನೆ  ಸಮಾಲೋಚಿಸದೆ, ತನಗೊಂದು ಮಾತೂ ತಿಳಿಸದೆ ಕೂಡಲೇ ಒಪ್ಪಿಕೊಂಡ. ಮುಂದೆ ನಡೆದದ್ದು, ಲೋಹಿತಾಶ್ವನ ಜನನ. ಈ ಸಂತೋಷದಲ್ಲಿ ಪ್ರಪಂಚವನ್ನೇ ಮರೆತ ರಾಜ ವರುಣನಿಗೆ ಕೊಟ್ಟ ಮಾತನ್ನೂ ಮರೆತುಬಿಟ್ಟ. ಆದರೆ ಮರೆಯದವನು ವರುಣಮಾತ್ರ !&lt;br /&gt;&lt;br /&gt;&lt;br /&gt;&lt;/div&gt; &lt;div&gt; &lt;/div&gt; &lt;div&gt;ಮಗುವಿನೊಡನೆ ಸಂತಸ ಸಂಭ್ರಮದಲ್ಲಿ ಮೈಮರೆತಿದ್ದಾಗಲೇ ವರುಣನು  ಧುತ್ತೆಂದು ಬಂದು  ಬಾಗಿಲು ತಟ್ಟಿದ್ದಾಗಿತ್ತು. ಮಗನನ್ನು ತಮ್ಮ ಬಳಿಯೇ ಉಳಿಸಿಕೊಳ್ಳಲು ಸುಳ್ಳಿನ ಸರಮಾಲೆಯನ್ನೇ ಹೆಣೆದ ಹರಿಶ್ಚಂದ್ರ. ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕು ಎಂಬಂತೆ ಒಂದೊಂದು ಬಾರಿ ಒಂದೊಂದು ನೆಪ ಒಡ್ದಿ ಲೋಹಿತಾಶ್ವನನ್ನು ತಮ್ಮ ಬಳಿಯೆ ಉಳಿಸಿಕೊಂಡ.  ಮಗುವಿನ ಹಲ್ಲು ಮೂಡಿದ ಮೇಲೆ ಕೊಡುವೆನೆಂದೊಮ್ಮೆ, ನಡೆಯಲು  ಬಂದ ಮೇಲೆ ಎಂದು ಮತ್ತೊಮ್ಮೆ. ಈ ಮಧ್ಯೆ ಎಲ್ಲವೂ ಅರ್ಥವಾಗುತ್ತಿದ್ದ ಲೋಹಿತ , ಕಡೆಯ ಬಾರಿ ವರುಣ ಬಂದಾಗ ಮನೆಯಿಂದ ಓಡಿಹೋಗಿ ಎಲ್ಲಿಯೋ ಅವಿತಿಟ್ಟುಕೊಂಡ .ಮಗನನ್ನು  ಹರಿಶ್ಚಂದ್ರನೇ  ಬಚ್ಚಿಟ್ಟಿರುವನೆಂದು ಕೋಪಗೊಂಡ ವರುಣ ಹರಿಶ್ಚಂದ್ರನಿಗೆ ಜಲೋದರ ಶಾಪವನ್ನೂ ಕೊಟ್ಟಾಯಿತು. ವಿಧಿಯಿಲ್ಲದೆ ಅರಸನು ಮಗನ ಬದಲು ಮತ್ತಾರನ್ನಾದರೂ ವರುಣನಿಗೆ ಕೊಡಲು ನಿರ್ಧರಿಸಿದ. ಬಡತನದ ಬೇಗೆ ತಾಳಲಾರದೆ ಮುನಿಯೊಬ್ಬ ತನ್ನ ಮಗನನ್ನೇ ಕೆಲವು ಹಸುಗಳಿಗಾಗಿ ಮಾರಿಕೊಂಡ.ಮುಂದೊಂದು ದಿನ ತಾನೂ ಇಂತಹ ಮಾರಾಟದ ವಸ್ತುವಾಗುತ್ತೇನೆಂದು ಆಗ ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಈ ಎಲ್ಲ ಘಟನೆಗಳನ್ನು ದಿಗ್ಭ್ರಾಂತಳಾಗಿ  ನೋಡುತ್ತಿದ್ದ  ತನಗೆ  ಅದು  ತಪ್ಪೆಂದು  ಪ್ರತಿಭಟಿಸುವ  ಶಕ್ತಿಯಿರಲಿಲ್ಲ..  ಮಗನನ್ನು  ಕಳೆದುಕೊಂಡ ನೋವು  ಒಂದೆಡೆಯಾದರೆ  , ಸುಳ್ಲಿನ  ಕೆಸರಲ್ಲಿ  ಮುಳುಗಿಹೋದ ಹರಿಶ್ಚಂದ್ರನ  ಬಗ್ಗೆ  ಆಕ್ರೋಶ,  ಜಿಗುಪ್ಸೆ  ಮತ್ತೊಂದೆಡೆ. ಅಂತೂ  ವರುಣನ ಶಾಪದಿಂದ  ಮುಕ್ತನಾದ  ಹರಿಶ್ಚಂದ್ರ.  ಸುಳ್ಲುಗಾರನೆಂಬ  ಈ  ಕಳಂಕ ತೊಳೆದುಕೊಳ್ಳಲು  ಅರಸನು  ಬಾರಿ  ಬೆಲೆಯನ್ನೇ  ತೆರಬೇಕಾಯಿತು. ಲೋಹಿತಾಶ್ವನೇನೋ  ಕಂಟಕ  ತಪ್ಪಿತೆಂದು  ಊರಿಗೆ  ಹಿಂತಿರುಗಿದ್ದ.   ಪಾಪ ಕುಲಗುರು  ವಸಿಷ್ಟರಂತೂ  ಹರಿಶ್ಚಂದ್ರನು   ಸತ್ಯವಂತ  ಎಂದು  ನಿರೂಪಿಸಲು  ತೀವ್ರ  ಹೋರಾಟ  ನಡೆಸಬೇಕಾಯಿತು.&lt;br /&gt;&lt;br /&gt;&lt;br /&gt;&lt;/div&gt; &lt;div&gt; &lt;/div&gt; &lt;div&gt;  &lt;/div&gt; &lt;div&gt;ವಸಿಷ್ಟರ ಪುಣ್ಯವೆಂಬಂತೆ   ಅರಸನು  ಸತ್ಯವಂತನೆಂದು  ಜಗತ್ತಿಗೆ  ತೋರಿಸುವ  ಸುವರ್ಣಾವಕಾಶ ದೇವೇಂದ್ರನ  ಸಭೆಯಲ್ಲಿ  ಒದಗಿಬಂದಿತು. "  ಭೂಲೋಕದಲ್ಲಿ  ಸೂರ್ಯವಂಶದ ಅರಸರಲ್ಲಿ  ಅತಿ ಶ್ರೇಷ್ಟ  ಸತ್ಯವಂತನಾರು  ?"  ಎಂದು ಇಂದ್ರನು ಕೇಳಿದ್ಡೇ  ತಡ ವಸಿಷ್ಟರು ಸ್ವಲ್ಪವೂ  ಹಿಂಜರಿಯದೆ " ಹರಿಶ್ಚಂದ್ರನೇ ಎಲ್ಲರಿಗಿಂತ  ಸತ್ಯವಂತ  "  ಎಂದು  ಘೋಷಿಸಿಬಿಟ್ಟರು.  ವರುಣನಿಗೆ  ಬಲಿಯಾಗಬೇಕಿದ್ದ  ಋಷಿಪುತ್ರನನ್ನು ತಮ್ಮ  ಮಗನೆಂದು ಸ್ವೀಕರಿಸಿದ್ದ  ವಿಶ್ವಾಮಿತ್ರರು  ಸುಮ್ಮನಿರುತ್ತಾರೆಯೇ? ಶೀಘ್ರಕೋಪಿಯೂ&lt;wbr&gt;, ನೇರ ಸ್ವಭಾವದವರೂ  ಆದ  ಅವರು  ಎದ್ದು  ನಿಂತು-- ಯಾವುದನ್ನು  ಹರಿಶ್ಚಂದ್ರನ  ವ್ಯಕ್ತಿತ್ವದಿಂದ  ಅಳಿಸಿಹಾಕಬೇಕೆಂದು  ವಸಿಷ್ಟರು  ಹಗಲಿರುಳೂ  ಶ್ರಮಿಸುತ್ತಿದ್ದರೋ--  ಅದೇ ಪ್ರಸಂಗವನ್ನು  ಚಾಚೂ  ತಪ್ಪದೆ  ಇಡೀ ಸಭೆಯಲ್ಲಿ  ತೆರೆದಿಟ್ಟರು. ಒಂದು ಹಂತದಲ್ಲಿ  ಇಬ್ಬರು  ಋಷಿಗಳಿಗೂ ವಾಗ್ಯುದ್ಧ  ನಡೆದು  "  ಹರಿಶ್ಚಂದ್ರನು  ಸತ್ಯವಂತನಲ್ಲ  ಎಂಬುದನ್ನು  ತೋರಿಸಿಕೊಡುತ್ತೇನೆ "  ಎಂದು  ವಿಶ್ವಾಮಿತ್ರರು  ಪ್ರತಿಜ್ಞೆ  ಮಾಡುವ  ಮಟ್ಟಕ್ಕೆ  ಹೋಯಿತು.  ಒಟ್ಟಾರೆಯಾಗಿ  ನೋಡಿದರೆ  ಮಾಸಿಹೋದ  ಹರಿಶ್ಚಂದ್ರನ  ಕೀರ್ತಿಪತಾಕೆಯನ್ನು  ಎತ್ತಿ  ಹಿಡಿಯುವ  ಕಾರ್ಯ  ಮಾಡಿದ್ದು  ವಿಶ್ವಾಮಿತ್ರ  ಎನ್ನಲಡ್ಡಿಯಿಲ್ಲ.      &lt;/div&gt; &lt;div&gt; &lt;/div&gt; &lt;div&gt; &lt;/div&gt; &lt;div&gt;ಇದಾವುದೂ  ತಮಗೆ  ತಿಳಿಯಲೇ  ಇಲ್ಲ.  ಸಂತೋಷದಿಂದ ಇಡೀ ಪರಿವಾರವು  ಜೈತ್ರಯಾತ್ರೆ  ಮಾಡುತ್ತಿದ್ದ  ಸಂದರ್ಭದಲ್ಲಿ  ಆಕಸ್ಮಿಕವಾಗಿ  ತಮ್ಮ  ರಥ  ವಿಶ್ವಾಮಿತ್ರಮುನಿಯ  ಆಶ್ರಮವನ್ನು  ಪ್ರವೇಶಿಸಿತು.  ಕುಲಗುರು ವಸಿಷ್ಟರು  'ವಿಶ್ವಾಮಿತ್ರನ  ಆಶ್ರಮ ಪ್ರವೇಶಿಸಬೇಡಿ'  ಎಂದು  ನೀಡಿದ್ದ  ಎಚ್ಚರಿಕೆ  ನೆನಪಾಗಿ  ಅರಸನು  ಅಪರಾಧಿ ಮನೋಭಾವದಿಂದ  ತೊಳಲಿದ.  ಭಯ ,ಗಾಬರಿ, ಆಯಾಸಗಳಿಂದ  ತನ್ನ  ತೊಡೆಯ  ಮೇಲೆ  ತಲೆಯಿಟ್ಟು  ಮಲಗಿದ್ದ  ಹರಿಶ್ಚಂದ್ರನಿಗೆ  ಹೆದರಿದವರ  ಮೇಲೆ ಕಪ್ಪೆ  ಬಿದ್ದಿತು'  ಎಂಬಂತೆ  ದುಃಸ್ವಪ್ನ ಬೇರೆ  ಬೀಳಬೇಕೆ?  ಆ ಕನಸಿನಿಂದ ಮತ್ತಷ್ಟು  ಗಾಬರಿಗೊಂಡು  ಎಚ್ಚತ್ತ  ಹರಿಶ್ಚಂದ್ರ  ತೀರ ಅಸಹಾಯಕನಾಗಿ ಕಂಡ.ಭಯದಿಂದಲೇ  ತನ್ನ  ಕನಸನ್ನು  ವರ್ಣಿಸಿದ. ಕೋಪಗೊಂಡ  ಋಷಿಯೊಬ್ಬ  ರಾಜನನ್ನು  ಸಿಂಹಾಸನದಿಂದ  ಕೆಳಕ್ಕೆ  ತಳ್ಳಿ  ಸಿಂಹಾಸನವನ್ನು  ಎಳೆದೊಯ್ದನಂತೆ.  ಸದಾಕಾಲ  ತಮ್ಮ  ಸಿಂಹಾಸನವನ್ನು  ಕಾಪಾಡಿಕೊಳ್ಳಬೇಕೆಂಬ  ಯೋಚನೆಯಲ್ಲಿಯೇ ಮುಳುಗಿರುವ  ಇತರ  ರಾಜರಿಗಿಂತ ಹರಿಶ್ಚಂದ್ರನೂ  ಬಿನ್ನನೇನಲ್ಲ  ಎಂದು  ತನಗೆ  ತಿಳಿದಿದ್ದು  ಆಗಲೆ. ತಾನು  ಅವನನ್ನು  ಸಮಾಧಾನ  ಪಡಿಸಿ  " ರಾಜಾ,  ನೀನು  ರಾಜ್ಯ , ಐಶ್ವರ್ಯ,  ಅಂತಸ್ತು ,ಅಧಿಕಾರ  ಯಾವುದನ್ನು  ಕಳೆದುಕೊಂಡರೂ ಪರವಾಗಿಲ್ಲ , ಸತ್ಯಗುಣ  ಮಾತ್ರ  ಬಿಡಬೇಡ "  ಎಂದು ನಯವಾಗಿ  ಅವನ  ಹೊಣೆಗಾರಿಕೆಯ  ಬಗ್ಗೆ ಎಚ್ಚರಿಸಿದ  ಮಾತು  ಮುಂದೆ ಅವನ  ಕಷ್ಟಕಾಲದುದ್ದಕ್ಕೂ ಶ್ರೀರಕ್ಷೆಯಾಯಿ&lt;wbr&gt;ತು.&lt;br /&gt;&lt;br /&gt;&lt;br /&gt;&lt;/div&gt; &lt;div&gt; &lt;/div&gt; &lt;div&gt;      ಮುಂದಿನದೆಲ್ಲಾ  ಕೆಟ್ಟ  ಕನಸಿನಂತೆ  ಸಾಗಿಹೋಯಿತು.  ವಿಶ್ವಾಮಿತ್ರನ  ಆಶ್ರಮದಲ್ಲಿ  ಸುಂದರಿಯರಾದ  ಇಬ್ಬರು ಹೊಲತಿಯರು  ಬಂದು  ಸೊಗಸಾದ  ಸಂಗೀತ , ನೃತ್ಯಗಳಿಂದ  ನಮ್ಮೆಲ್ಲರ  ಮನತಣಿಸಿದರು.  ವಿಶೇಷವಾಗಿ  ಅರಸನ  ದಿಕ್ಕೆಟ್ಟ  ಮನಸ್ಸು  ತಿಳಿಯಾಗಿ  ಎಂದಿನ  ಆತ್ಮವಿಶ್ವಾಸ  ಮರಳಿ , ಆ  ಹೊಲತಿಯರಿಗೆ  ಮುತ್ತಿನ  ಹಾರವನ್ನು  ಮೆಚ್ಚುಗೆಯ  ಕುರುಹಾಗಿ  ನೀಡಿದ.  ಅದು ಒಂದು  ದೊಡ್ಡ ಪ್ರಮಾದವಾಗಿ   ಮಾರ್ಪಟ್ಟಿದ್ದು  ಮಾತ್ರ  ತೀರ ಅನಿರೀಕ್ಷಿತ  ಹಾಗೂ  ಆಘಾತಕಾರಿ.  ಏನೇ  ಆಗಲಿ  ಆ  ಯುವತಿಯರ  ಸೌಂದರ್ಯ,  ಸಂಗೀತ ಮತ್ತು  ನೃತ್ಯ  ಕಲೆಯಲ್ಲಿ  ಅವರಿಗಿದ್ದ  ಪರಿಣತಿಯನ್ನು  ಯಾರೇ  ಆಗಲಿ  ಮೆಚ್ಚಲೇ  ಬೇಕು.ಜೊತೆಗೆ  ಹರಿಶ್ಚಂದ್ರನೊಂದಿಗೆ  ಅವರು  ವಾದ  ಮಾಡುತ್ತಿದ್ದ  ವೈಖರಿ  ದಂಗುಬಡಿಸುವಂತಿತ್ತು.  ಅವರ  ಮಾತಿನಲ್ಳೂ  ಸತ್ಯಾಂಶವಿದೆಯಲ್ಲವೇ  ಎಂಬ  ಭಾವನೆ  ತನ್ನಲ್ಲಿ ಸಣ್ಣಗೆ ಮೊಳಕೆಯೊಡೆದಿತ್ತು.ಮುತ್ತಿನ ಹಾರವನ್ನು  ನಿರಾಕರಿಸಿದ  ಯುವತಿಯರು   ಬೆಳ್ಗೊಡೆ  ಕೇಳಿದಾಗ  ಆರಸನಿಗೆ  ಕಿರಿಕಿರಿಯಾಗಿದ್ದು  ನಿಜ   "  ಹುಟ್ಟಿನಲ್ಲಿ  ಹೊಲತಿಯರಾದ  ಮಾತ್ರಕ್ಕೆ   ತಮ್ಮನ್ನೇಕೆ   ತಿರಸ್ಕರಿಸಬೇಕು ? ಪಂಚೇಂದ್ರಿಯಗಳಲ್ಲಿ  ನಾಲ್ಕು  ಅಧಮ,  ಒಂದು  ಅಧಿಕವೇ?  "  ಎಂಬ  ಅವರ  ದಿಟ್ಟ  ಪ್ರಶ್ನೆಗೆ  ಅರಸನು ಉತ್ತರವನ್ನೇನೋ  ಕೊಟ್ಟ. ಅದರಲ್ಲಿ  ಜಾಣತನವಿತ್ತೇ ಹೊರತು  ಸಮರ್ಪಕವಾಗಿರಲಿಲ್ಲ. ಅವರ  ತರ್ಕಬಧ್ಧ  ವಾದಮಂಡನೆಗೆ  ಹರಿಶ್ಚಂದ್ರ  ನಖಶಿಖಾಂತ  ಕೋಪಗೊಂಡ.. ಕೋಪದ ಭರದಲ್ಲಿ  ಅರಸನಾಡಿದ   ಒಂದು  ಮಾತು  ನೇರವಾಗಿ  ತನ್ನನ್ನೇ  ಅವಮಾನಿಸುವಂತಿತ್ತು.  ಆದರೆ  ಆ  ಹೊಲತಿಯರಂತೆ  ವಾದಮಾಡಲು ತನಗಂತೂ ಸಾಧ್ಯವಾಗಲಿಲ್ಲ. ಬೆಳ್ಗೊಡೆಯ  ಒಡೆಯನಾದ ನೀನೇ ನಮಗೆ  ಒಡೆಯನಾಗು "  ಎಂದು ಅವರೆಂದಾಗ  ಸೂರ್ಯವಂಶದ  ಬಗೆಗಿನ ಅತಿಯಾದ  ಅಭಿಮಾನದಿಂದ ( ದುರಭಿಮಾನ  ಎಂದರೂ  ಸರಿ ) "  ನನ್ನ  ವಂಶಜರಿಗೆ  ಹೆಣ್ಣು  ಕೊಡಲು  ಸಮರ್ಥರಾದ  ಅರಸರು  ಈ  ಪ್ರಪಂಚದಲ್ಲಿಯೇ  ಇಲ್ಲ "  ಎಂದನಲ್ಲ.  ಈ  ಮಾತುಗಳು ಅವನ ಪಟ್ಟದ  ರಾಣಿಯಾದ  ನನ್ನ  ಮನಸ್ಸಿನ  ಮೇಲೆ ಬೀರುವ  ಪರಿಣಾಮದ  ಬಗ್ಗೆ ಅವನು  ಚಿಂತಿಸಲೇ  ಇಲ್ಲ.ನನಗಾದ  ಅವಮಾನ  ತನ್ನದೆಂದು  ಅವನಿಗೆ  ಅನ್ನಿಸಲೇ ಇಲ್ಲ. ಅದರ  ಬದಲು  ತಾನು  ಏಕಪತ್ನೀವ್ರತಸ್ಥ  ಎನ್ನಬಹುದಿತ್ತಲ್ಲವೇ ?&lt;br /&gt;&lt;br /&gt;&lt;br /&gt;&lt;/div&gt; &lt;div&gt; &lt;/div&gt; &lt;div&gt;ಕಡೆಗೆ  ಆದದ್ದಾದರೂ  ಏನು ? ಅರಸನ ಉತ್ತರದಿಂದ  ತೃಪ್ತರಾಗದ ಆ  ಹೊಲತಿಯರು ಅರಸನನ್ನು  ಅವನು  ಎಲ್ಲಿಗೆ  ಹೊರಟರಲ್ಲಿಗೆ  ಹಿಂಬಾಲಿಸುವುದಾಗಿ  ಘಂಟಾಘೋಷವಾಗಿ  ಹೇಳಿದಾಗ , ಸಂಯಮ ಕಳೆದುಕೊಂಡ ಅರಸನು ವರ್ತಿಸಿದ ರೀತಿ ಮಾತ್ರ ಅಕ್ಷಮ್ಯ.ತನ್ನೆಲ್ಲ ಶಿಷ್ಟಾಚಾರವನ್ನುಮರೆತು ಅವರು ಹೆಣ್ಣುಗಳೆಂಬುದನ್ನೂ ಮರೆತು ಚಾಟಿಯಿಂದ ಅಟ್ಟಾಡಿಸಿಕೊಂಡುಹೊಡೆದ ದೃಶ್ಯ ತನ್ನ ಕಣ್ಣಿನಿಂದ ಮರೆಯಾಗಿಲ್ಲ.ತನ್ನ ಅರಸನಲ್ಲಿ ಇಷ್ಟೊಂದು ಕ್ರೌರ್ಯ ತುಂಬಿದೆಯೇ ? ಅದುತನಕ ಅವನ ವ್ಯಕ್ತಿತ್ವದ ಈ ಮುಖ ತನಗೆ ತಿಳಿದಿರಲೇ ಇಲ್ಲ.&lt;br /&gt;&lt;br /&gt;&lt;br /&gt;ಆ ಮುಖ ಮಾತ್ರವಲ್ಲ ಅವನ ವ್ಯಕ್ತಿತ್ವದ ಇನ್ನೊಂದು ಘೋರ ಮುಖ ಪರಿಚಯವಾದದ್ದು ಕಾಡಿನಲ್ಲಿ ಆ ಅವಮಾನಕರ ಪ್ರಸಂಗವನ್ನು ಮರೆಯಬೇಕೆಂದು ಶತಪ್ರಯತ್ನ ಮಡಿದರೂ ಮತ್ತೆ ಮತ್ತೆ ನೆನಪಿಗೆ ಬಂದು ಚಿತ್ರಹಿಂಸೆ ನೀಡುತ್ತದೆ. ಕಾಡಿನಲ್ಲಿ ತಾವು ನಡೆಯುತ್ತಿರುವಾಗ ಇದ್ದಕ್ಕಿದ್ದಂತೆ ಆವರಿಸಿದ ಕಾಡ್ಗಿಚ್ಚಿನ ತೀವ್ರತೆ ಎಲ್ಲರನ್ನೂ ದಿಗ್ಭ್ರಮೆಗೊಳಿಸಿತು.ಅರಸನು ತಾನೆ ಮೊದಲು ಬೆಂಕಿಗಾಹುತಿಯಾಗುವೆನೆಂದು ಮುಂದೆ ಸಾಗಿದಾಗ ತಾನು " ಅರಸ, ಎಲ್ಲ ವಿಷಯದಲ್ಲೂ ಹೆಣ್ಣು ಗಂಡನನ್ನು ಹಿಂಬಾಲಿಸಬೇಕು.ಆದರೆ ಸಾವಿನ ವಿಷಯದಲ್ಲಿ ಮಾತ್ರ ಹೆಣ್ಣು ಮುನ್ನಡೆಯಬೇಕಾದ್ದು ಧರ್ಮವಲ್ಲವೇ ? " ಎಂದು ಪತಿವ್ರತಾಧರ್ಮವನ್ನು ನೆನಪಿಸಿ ಅಗ್ನಿಗೆ ನಮಸ್ಕರಿಸಿ " ತಾನು ಪತಿವ್ರತೆಯಾಗಿರುವುದು ಸತ್ಯವೇ ಆಗಿರುವುದಾದರೆ ಅಗ್ನಿ ತನ್ನನ್ನು ಸುಡದಿರಲಿ" ಎಂದು ಹೇಳಿ ಬೆಂಕಿಯಲ್ಲಿ ನಡೆದಾಗ ಅಗ್ನಿ ಶಾಂತವಾಯಿತು.ಆ ಬೆಂಕಿ ನಂದಿದರೂ ಹರಿಶ್ಚಂದ್ರನ ಮಾತಿನ ಬೆಂಕಿ ಈಗಲೂ ತನ್ನನ್ನು ಸುಡುತ್ತಿದೆ. " ಚಂದ್ರಮತಿ ಬೆಂಕಿಯ ನೆಪದಿಂದ ನಿನ್ನ ಪಾತಿವ್ರತ್ಯದ ಪರೀಕ್ಷೆಯಾಯಿತು. "&lt;br /&gt;&lt;br /&gt;&lt;br /&gt;ತನ್ನ ಪಾತಿವ್ರತ್ಯ ಪರೀಕ್ಷೆಗೊಳಪಡಬೇಕಿತ್ತೆಂದು ಹರಿಶ್ಚಂದ್ರ ಕಾಯುತ್ತಿದ್ದನೇ ? ಅದಕ್ಕೆ ಬೆಂಕಿಯ ಸಾಕ್ಷ್ಯ ಬೇಕಿತ್ತೇ ? ದಾಂಪತ್ಯದಲ್ಲಿ ಸತಿಪತಿಯರ ನಡುವಿನ ನಂಬಿಕೆ ವಿಶ್ವಾಸಗಳೆ ಭದ್ರ ಬುನಾದಿ ಎಂಬ ಅರಿವಿಲ್ಲದ ವ್ಯಕ್ತಿಯೇ ಆತ ? ಅವನ ಮಾತುಗಳು ಶೂಲದಂತೆ ಚುಚ್ಚಿದರೂ ಮಾತು ಮೂಕವಾಯಿತು. ಇತರ ಕ್ಷತ್ರಿಯ ರಾಜರಂತಲ್ಲದೆ - "ರಾಜಾ ಬಹುವಲ್ಲಭಾ" ಎಂಬ ಮಾತನ್ನು ಸುಳ್ಳು ಮಾಡಿ " ಏಕಪತ್ನೀವ್ರತಸ್ತ"ನಾದನೆಂದು ಅವನನ್ನು ಗೌರವಿಸಬೇಕೇ ಅಥವಾ ಪತ್ನಿಯನ್ನು ಪರೀಕ್ಷಿಸುವ ಸಂದರ್ಭ ಹೇಗಾದರೂ ಒದಗಿತಲ್ಲ ಎಂದು ಸಂಭ್ರಮಿಸುತ್ತಿರುವ ಅವನ ಸಂಕುಚಿತ ವ್ಯಕ್ತಿತ್ವವನ್ನು ಕಂಡು ಖಿನ್ನಳಾಗಬೇಕೋ ? ತಿಳಿಯಲಿಲ್ಲ.&lt;br /&gt;&lt;br /&gt;&lt;br /&gt;ಹೀಗೆ ತೊಳಲಾಡುತ್ತಿರುವಾಗಲೇ ಬಳಿಗೆ ಬಂದ ದಾಸಿ " ಮಹಾರಾಣಿ, ಮಹಾರಾಜರೂ ಮತ್ತು ಯುವರಾಜರೂ ನಿಮ್ಮ ನಿರೀಕ್ಷೆಯಲ್ಲಿದ್ದಾರೆ " ಎಂದಾಗ "ಈ ದಿನದ ಸಭೆ ವಿಶೇಷವಾದದ್ದು, ನಾಡಿನ ಪಟ್ಟಮಹಿಷಿಯಾದ ತಾವು ಬರಬೇಕು " ಎಂದು ಅರಸನು ಹೇಳಿದ ಮಾತು ನೆನಪಾಗಿ ಮುಖದಲ್ಲಿ ಕೃತಕ ಗಾಂಭೀರ್ಯ ಹಾಗು ಕೃತಕ ಸಂತೋಷವನ್ನು ತಂದುಕೊಂಡು ಅಲ್ಲಿಂದ ಹೊರಟಳು&lt;br /&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8114402468197807042-8844362436513840679?l=battadatore.blogspot.com' alt='' /&gt;&lt;/div&gt;</content><link rel='replies' type='application/atom+xml' href='http://battadatore.blogspot.com/feeds/8844362436513840679/comments/default' title='Post Comments'/><link rel='replies' type='text/html' href='http://battadatore.blogspot.com/2009/01/blog-post.html#comment-form' title='22 Comments'/><link rel='edit' type='application/atom+xml' href='http://www.blogger.com/feeds/8114402468197807042/posts/default/8844362436513840679'/><link rel='self' type='application/atom+xml' href='http://www.blogger.com/feeds/8114402468197807042/posts/default/8844362436513840679'/><link rel='alternate' type='text/html' href='http://battadatore.blogspot.com/2009/01/blog-post.html' title='ಚಂದ್ರಮತಿಯ ಅಂತರಂಗ'/><author><name>ಚಂದ್ರಕಾಂತ ಎಸ್</name><uri>http://www.blogger.com/profile/00490264860537389455</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='25' src='http://3.bp.blogspot.com/_4wQW2-q8XsA/SVIw-U299dI/AAAAAAAAADY/T9mtUHgBZhU/S220/blogfile12.jpg'/></author><thr:total>22</thr:total></entry><entry><id>tag:blogger.com,1999:blog-8114402468197807042.post-2492713070814527744</id><published>2008-12-12T18:47:00.000+05:30</published><updated>2009-01-21T16:11:52.079+05:30</updated><title type='text'>ನೆನಪು....ಸವಿ ಸವಿ !!!??</title><content type='html'>ಹೊಸ ಬಟ್ಟೆ ಧರಿಸಿ , ನಗೆಚೆಲ್ಲುತ್ತಾ ಸಂಭ್ರಮದಿಂದ ಮನೆಯೆಲ್ಲಾ ಓಡಾಡುತ್ತಿರುವ ಹತ್ತು ವರ್ಷದ ಆ ಬಾಲೆಯ ಚಿತ್ರ ಸುಮಾರು ಮೂವತ್ತು ವರ್ಷಗಳಿಂದ ಪ್ರತಿ ದೀಪಾವಳಿಯಂದು ಅವಳ ಕಣ್ಮುಂದೆ ತಪ್ಪದೆ ಮೂಡುತ್ತದೆ..ಆ ಬಾಲೆಯ ಹೆಸರು ಶಶಿ.ಆ ದಿನ ಅವಳು ಹುಟ್ಟಿದ ದಿನವೂ ಹೌದು...&lt;br /&gt;&lt;br /&gt;     ಹತ್ತು ವರ್ಷದ ಶಶಿಯ ಸಂಭ್ರಮಕ್ಕೆ ಮತ್ತೊಂದು ಕಾರಣವೂ ಇದೆ.ಪಟ್ಟಣದಲ್ಲಿ ಓದುತ್ತಿದ್ದ ಹಿರಿಯಣ್ಣ ಉತ್ತರ ಭಾರತ ಪ್ರವಾಸ ಮುಗಿಸಿಕೊಂಡು, ಊರಿಗೆ ಬಂದಿದ್ದಾನೆ.  ಹಬ್ಬ ಮುಗಿಸಿಕೊಂಡು ಪಟ್ಟಣಕ್ಕೆ ಹಿಂತಿರುಗುವ ಕಾರ್ಯಕ್ರಮ ಅವನದು.ಮನೆಯವರಿಗೆಲ್ಲ ಸಿಹಿ ತಿನಿಸು, ಪುಟ್ಟ ತಂಗಿ ಶಶಿಗಾಗಿ ಬಣ್ಣದ ಮಣಿಸರ, ಹಾಗೂ ಬಳೆಗಳನ್ನು ತಂದಿದ್ದಾನೆ. ಅಪ್ಪ ತಂದಿರುವ ಮತಾಪು ,ಸುರ್ ಸುರ್ ಬತ್ತಿ, ಹೂವಿನ ಕುಂಡಗಳು,ಭೂಚಕ್ರ, ವಿಷ್ಣು ಚಕ್ರಗಳ ದೊಡ್ಡ ಬುಟ್ಟಿಯೇ ಮನೆಯಲ್ಲಿದೆ.ಉಹೂ, ಅವಳ ವಿಶೇಷ ಸಂಭ್ರಮಕ್ಕೆ ಇದು ಕಾರಣವಲ್ಲೇ ಅಲ್ಲ. ಇವೆಲ್ಲ ಪ್ರತಿ ದೀಪಾವಳಿಯಂದು ಇದ್ದದ್ಡೇ. ಆದರೆ ಅವಳ ಸಂಭ್ರಮಕ್ಕೆ ಅವಳೊಬ್ಬಳಿಗೇ ತಿಳಿದ ರಹಸ್ಯವೊಂದಿದೆ.&lt;br /&gt;&lt;br /&gt;     ಹಿಂದಿನ ದಿನ ಅಕಸ್ಮಾತ್ತಾಗಿ ಅಣ್ಣನ ಕೋಣೆಯ ಮುಂದೆ ಹೋಗುತ್ತಿದ್ದಾಗ ಕೋಣೆಯ ತುಂಬಾ ಚೆಲ್ಲಾಪಿಲ್ಲಿಯಾಗಿ ಹರಡಿದ್ದ ಅವನ ಸಾಮಾನುಗಳ ನಡುವೆ ಒಂದು ಸುಂದರವಾದ, ನುಣುಪಾದ, ವೆಲ್ವೆಟ್ಟಿನಷ್ಟೇ ಮೃದುವಾದ ಫಳ ಫಳ ಹೊಳೆಯುತ್ತಿರುವ ತಿಳಿಗುಲಾಬಿ ಬಣ್ಣದ ಫ್ರಾಕ್ ಶಶಿಯ ಕಣ್ಣಿಗೆ ಬಿತ್ತು. ಕುತೂಹಲ ತಡೆಯಲಾರದೆ ಹತ್ತಿರಹೋಗಿ ಕಣ್ಣರಳಿಸಿನೋಡುತ್ತಾಳೆ , ಅದು ತನಗಾಗಿ ಅಣ್ಣ ತಂದ ಹುಟ್ಟುಹಬ್ಬದ ಉಡುಗೊರೆ.! ಅದು ಸಾಮಾನ್ಯ ಫ್ರಾಕ್ ಆಗಿರಲಿಲ್ಲ, ತನ್ನ ತರಗತಿಯ ಅತ್ಯಂತ ಶ್ರೀಮಂತ ಹುಡುಗಿ ಮಾಲಿನಿ ಧರಿಸುವ ಡ್ರೆಸ್ ಗಳಿಗಿಂತ ಆಕರ್ಷಕವಾಗಿ ಕಾಣುತ್ತಿತ್ತು. ಶಶಿಯ ಮನಸ್ಸು ಸಂತಸದಲೆಯ ಮೇಲೆ ತೇಲಿತು. ಎಷ್ಟು ಒಳ್ಳೆಯ ಅಣ್ಣ! ಹುಟ್ಟುಹಬ್ಬಕ್ಕಾಗಿ ಇಷ್ಟು ಒಳ್ಳೆಯ ಉಡುಗೊರೆ ಇದುವರೆಗೆ ಸಿಕ್ಕಿರಲಿಲ್ಲ. ಓಡಿಹೋಗಿ ಅಮ್ಮನಿಗೆ ತಿಳಿಸಬೇಕು. ಆದರೆ ಕಾಲುಗಳು ಮುಂದೆ ಚಲಿಸಲಿಲ್ಲ. ಅಣ್ಣನಿಲ್ಲದಾಗ ಅವನ ಸಾಮಾನುಗಳನ್ನು ಸರಿಸಿನೋಡಿದೆನೆಂದರೆ ಅಮ್ಮ ಖಂಡಿತ ಬೈಯುತ್ತಾಳೆ. ಅಣ್ಣ ತನಗೆ ಕೊಡುವಾಗಲೆ ಎಲ್ಲರಿಗೂ ತಿಳಿಯಲೆಂದು ಸುಮ್ಮನಾದಳು.ಅಣ್ಣ ಏಕೆ ಇನ್ನೂ ಯಾರಿಗೂ ತೋರಿಸಿಲ್ಲ? ನಾಳೆ ಬೆಳಿಗ್ಗೆಯೇ ತೋರಿಸಬೇಕೆಂದಿರುವನೇನೋ?&lt;br /&gt;&lt;br /&gt;     ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನಾರಾಯಣರಾಯರ ಐದು ಜನ ಮಕ್ಕಳಲ್ಲಿ ಶಶಿಯೇ ಕೊನೆಯವಳು. ನಾಲ್ಕು ಜನ ಅಣ್ಣಂದಿರ ಮುದ್ದಿನ ತಂಗಿ. ಮನೆಯವರೆಲ್ಲರ ಕಣ್ಮಣಿ. ನಾರಾಯಣರಾಯರ ತಂದೆ, ತಾಯಿ ,ತಮ್ಮ,ತಂಗಿಯರೆಲ್ಲರೂ ಇದ್ದ ಈ ಕುಟುಂಬದಲ್ಲಿ ದುಡಿಯುವ ಏಕೈಕ ವ್ಯಕ್ತಿ ರಾಯರು. ಆದ್ದರಿಂದಲೇ ಸಹಜವಾಗಿಯೇ, ರಾಯರು ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರುತ್ತಿದ್ದರು. ಉಣ್ಣುವುದಕ್ಕೆ, ಉಡುವುದಕ್ಕೆ ಕೊರತೆ ಇಲ್ಲದಿದ್ದರೂ ಅನವಶ್ಯಕ ವೆಚ್ಚಗಳೆಲ್ಲಾ ಅವರ ಪಾಲಿಗೆ ದುಂದುವೆಚ್ಚಗಳೇ. ಇದರ ಬಿಸಿ ಮನೆಯಲ್ಲಿ ಎಲ್ಲರಿಗೂ ತಟ್ಟಿತ್ತು. ಆದರೆ ಯಾರೂ ಅದನ್ನು ಮಾತಿನಲ್ಲಿ ವ್ಯಕ್ತ ಪಡಿಸುವ ಸಾಹಸಕ್ಕೆ ಕೈ ಹಾಕುತ್ತಿರಲಿಲ್ಲ. ಅಂತಹ ಅತೃಪ್ತ ಅನುಭವ ಪುಟ್ಟ ಶಶಿಗೂ ಇತ್ತು.&lt;br /&gt;&lt;br /&gt;     ಶಶಿಗೆ ಚಿಕ್ಕಂದಿನಿಂದಲೂ ಬಣ್ಣ ಬಣ್ಣದ ಉಡುಪುಗಳೆಂದರೆ ಪ್ರಾಣ. ಅದರಲ್ಲಿಯೂ ಮಾಲಿನಿ ಧರಿಸುವ ರೆಡಿಮೇಡ್ ಫ್ರಾಕುಗಳನ್ನು ನೋಡಿದಾಗಲೆಲ್ಲ ತನಗೂ ಅಂತಹ ಒಂದು ಫ್ರಾಕ್ ಬೇಕೆಂಬ ಆಸೆಯಾಗುತ್ತಿತ್ತು.ಅವರಮನೆಯಲ್ಲಿ ವರ್ಷಕ್ಕೆ ಮೂರು( ೩) ಬಾರಿ ಎಲ್ಲರಿಗೂ ಹೊಸಬಟ್ಟೆ ಸಿಗುತ್ತಿತ್ತು.ರಾಯರೇ ಅಂಗಡಿಯಿಂದ ಎಲ್ಲರಿಗೂ ಚೀಟಿ ಬಟ್ಟೆ ತರುತ್ತಿದ್ದರು. ಮನೆಗೇ ಒಬ್ಬ ದರ್ಜಿ ಬರುತ್ತಿದ್ದ. ಎಲ್ಲರ ಅಳತೆ ತೆಗೆದುಕೊಳ್ಳುತ್ತಿದ್ದ. ಎಲ್ಲರಿಗೂ ಅವರ ಅಳತೆಗಿಂತ ಒಂದೆರಡಿಂಚು ಸುತ್ತಳತೆ ಜಾಸ್ತಿ ಇರುವಂತೆ ಹೊಲಿಸುತ್ತಿದ್ದರು. ಅದಕ್ಕೆ ಅವರು ಕೊಡುತ್ತಿದ್ದ ಕಾರಣ ಬೆಳೆಯುವ ಮಕ್ಕಳಿಗೆ ಬಿಗಿಬಟ್ಟೆ ಹಾಕುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ! ತನಗಂತೂ ಯಾವಾಗಲೂ ಲಂಗ ರವಿಕೆಯನ್ನೇ ಹೊಲಿಸುತ್ತಿದ್ದರು. ಎರಡು ವರ್ಷದ ಹಿಂದೆ ಹೊಲಿಸಿದ ಫ್ರಾಕೇ  ಕಡೆಯದು. ಬಟ್ಟೆ ಹೊಲಿಸುತ್ತಿದ್ದ ಪುರಾಣ ಅಲ್ಲಿಗೇ ಮುಗಿಯುತ್ತಿರಲಿಲ್ಲ.ದರ್ಜಿ ಬಟ್ಟೆಗಳನ್ನು ಹೊಲಿದು ಮನೆಗೆ ತಂದಾಗ ಖುದ್ದು ರಾಯರು ಒಂದೊಂದು ಬಟ್ಟೆಯ ಎಲ್ಲ ಹೊಲಿಗೆಗಳನ್ನೂ ಪರಿಶೀಲಿಸುತ್ತಿದ್ದರು  . ಅವರ ಮನಸ್ಸಿಗೆ ಸರಿಯಿಲ್ಲ ಅನಿಸಿದರೆ ಮತ್ತೆ ಹಿಂತಿರುಗಿಸುತ್ತಿದ್ದರು. ಹೀಗಾಗಿ ಒಂದೆರಡು ಬಾರಿ ರಿಪೇರಿ ಬಟ್ಟೆಗಳನ್ನು ( ಬಹುಮಟ್ಟಿಗೆ ಹೊಲಿದ ಬಟ್ಟೆಗಳೆಲ್ಲ ಅದರಲ್ಲಿದ್ದವು !) ಮನೆಗೊಯ್ದ ದರ್ಜಿ ನಂತರ ಎಲ್ಲವನ್ನೂ ಅಚ್ಚುಕಟ್ಟಾಗಿ ಹೊಲಿದು ತರುತ್ತಿದ್ದ&lt;br /&gt;&lt;br /&gt;     ಈ ಹಿನ್ನೆಲೆಯಲ್ಲಿ ಶಶಿಗೆ ಅಣ್ಣ ತಂದ ಫ್ರಾಕ್ ದಿವ್ಯ ವಸ್ತ್ರದಂತೆ ಕಂಡಿದ್ದರೆ ಆಶ್ಚರ್ಯವೇನು? ಆ ಇಡೀ ರಾತ್ರಿ ಶಶಿಗೆ ಸಂತೋಷದಿಂದ ನಿದ್ದೆ ಬರಲಿಲ್ಲ. ನಿದ್ದೆ ಬಂದಿದ್ದರೂ ಅದರ ತುಂಬಾ ಸುಂದರ ಕನಸುಗಳೇ ತುಂಬಿದ್ದವು. ಮರುದಿನ ಎಲ್ಲರೆದುರಿಗೆ ಅಣ್ಣ ಫ್ರಾಕ್ ಕೊಡುವುದನ್ನೇ ಅವಳ ಮನಸ್ಸು ನೆನಪಿಸಿಕೊಂಡು ಪುಲಕಗೊಳ್ಲುತ್ತಿದೆ.ಅಂತೂ ಆ ಬೆಳಗು ಮೂಡಿತು. ತಲೆಗೆ ಎಣ್ಣೆಸ್ನಾನವೂ ಆಯಿತು. ರಾಯರು ಪೂಜೆ ಮುಗಿಸಿ ಮಂಗಳಾರತಿ ಕೊಡುವ ಶುಭ ಗಳಿಗೆಯೂ ಬಂದಿತು. ಅವರ ಮನೆಯ ಮತ್ತೊಂದು ಪದ್ಧತಿ ಎಂದರೆ ರಾಯರು ಪೂಜೆ ಮುಗಿಸಿ ಮಂಗಳಾರತಿ ಕೊಡುವಾಗ ಎಲ್ಲರೂ ಹಾಜರಿರಲೇಬೇಕು. ಆ ದಿನದ ಆಕರ್ಷಣೆ ಶಶಿ! ಮೊದಲೇ ಮುದ್ದಾಗಿದ್ದ ಹುಡುಗಿ ರಹಸ್ಯ ಸಂತೋಷದಿಂದ ಇನ್ನಷ್ಟು ಮುದ್ದಾಗಿ ಕಾಣುತ್ತಿದ್ದಳು. ಅಣ್ಣ ಕೊಟ್ಟ ಬಳೆ, ಸರಗಳು ಅವಳನ್ನು ಅಲಂಕರಿಸಿದ್ದವು. ರಾಯರು ಅವಳನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಎಂದಿನಂತೆ ದೇವರಿಗೆ ನೈವೇದ್ಯಕ್ಕೆ ಇಟ್ಟಿದ್ದ ದ್ರಾಕ್ಷಿ ಕೊಟ್ಟು ಅವಳ ತಲೆ ನೇವರಿಸಿ ಬಟ್ತೆ ತುದಿಗೆ ಅರಿಶಿನ ಹಚ್ಚಿದ್ದ ಹೊಸ ಬಟ್ಟೆ ಕೊಟ್ಟು ಹಾಕಿಕೊಳ್ಳುವಂತೆ ಹೇಳಿದರು. ಅವಳು ಹೂ ಎಂದು ತಲೆ ಆಡಿಸಿದರೂ ಅವಳ ಕಣ್ಣು ಅಣ್ಣನ ಮೇಲೇ ಇತ್ತು. ಅವನು ಅವಳನ್ನು ನೋಡಿ ನಕ್ಕ. ಅವಳು ನಿರೀಕ್ಷಿಸಿದಂತೆ ಅವನ ಕೈಯಲ್ಲಿ ಫ್ರಾಕ್ ಇರಲಿಲ್ಲ. ಓಹೊ ಅಪ್ಪನ ಎದುರಿಗೆ ಕೊಡಲು ಹಿಂಜರಿಯುತ್ತಿದ್ದಾನೆ! ಕಡೆಗೆ ಆವನ ಬಳಿ ಹೋಗಿ ತರುವುದೆಂದು ತೀರ್ಮಾನಿಸಿದಳು.&lt;br /&gt;&lt;br /&gt;     ನಂತರ ಎಲ್ಲರೂ ಒಟ್ಟಾಗಿ ಕುಳಿತು ಹಬ್ಬದೂಟ ಮಾಡಿದರು.ಅಷ್ಟರಲ್ಲಿ  ಶಶಿಯ ಗೆಳತಿ ಜಯಾ ಬಂದು  ಅವಳನ್ನು ತನ್ನ ಮನೆಗೆ ಕರೆದು ಕೊಡುಹೋದಳು. ಮತ್ತೆ ಮನೆಗೆ ಬಂದಾಗಲೇ ಅವಳಿಗೆ ಅಣ್ಣ ತಂದ ಫ್ರಾಕ್ ನೆನಪಾಗಿದ್ದು. ಓಡುವ ನಡಿಗೆಯಲ್ಲಿ ಅಣ್ಣನ ಕೋಣೆಯ ಬಳಿ ಬಂದಾಗ ಒಳಗೆ ಅಮ್ಮ ಮತ್ತು ಅಣ್ಣ ಮಾತನಾಡುತ್ತಿದ್ದುದು ಕಿವಿಗೆ ಬಿತ್ತು.&lt;br /&gt;&lt;br /&gt;"ಮೂರ್ತಿ, ಏನೋ ಇದು, ನಾಳೆ ಊರಿಗೆ ಹೋಗ್ಬೇಕು, ಆದರೂ ಸಾಮಾನೆಲ್ಲ ಈ ತರ ಹರಡಿಕೊಂಡಿದ್ದೀಯಲ್ಲ, ಇದೇನೋ ಇದು! ಯಾರದೋ ಈ ಫ್ರಾಕು!"&lt;br /&gt; ಶಶಿ ತಲೆ ಚಚ್ಚಿಕೊಂಡಳು. ಅಮ್ಮನಿಗೆ ಗೊತ್ತಾಗೋದು ಬೇಡ್ವೆ? ಅದು ನನಗಲ್ಲದೆ ಇನ್ಯಾರಿಗೆ? ಅರೆ ಇದೇನು ಅಣ್ಣ ಬೇರೇನೋ ಹೇಳುತ್ತಿದ್ದಾನೆ.&lt;br /&gt;" ಬೆಂಗಳೂರಿನಲ್ಲಿ ನನಗೆ ಹಾಸ್ಟೆಲ್ ಸೀಟ್ ಕೊಡಿಸಿದರಲ್ಲಾ ಕೃಷ್ಣ ಸ್ವಾಮಿ , ಅವರ ಹೆಂಡತಿ ದುಡ್ದುಕೊಟ್ಟು ಅವರ ಮಗಳು ಸೀಮಾಗೆ ಬಾಂಬೆಯಿಂದ ಫ್ರಾಕ್ ತರೋಕೆ ಹೇಳಿದ್ದರು"&lt;br /&gt;" ಹೌದಪ್ಪ, ಅವರು ಇಲ್ಲದೇ ಇದ್ದಿದ್ದರೆ ಅಥವಾ ಅವರು ಸಹಾಯ ಮಾಡದೆಇ ದ್ದಿದ್ದರೆ ನಿನಗ ಫ್ರೀ ಹಾಸ್ಟೆಲ್ ಎಲ್ಲಿ ಸಿಗುತ್ತಿತ್ತು? ಅವರ ಸೀಮಾ ನಮ್ಮ ಶಶಿ ವಾರಿಗೆ ಹುಡುಗಿ ಅನ್ನಿಸುತ್ತೆ ಅಲ್ವಾ?"&lt;br /&gt; "ಶಶಿಗಿಂತ ಒಂದು ವರ್ಷ ಚಿಕ್ಕವಳು. ಆದರೆ ನಮ್ಮ ಶಶಿಯಷ್ಟು ಬಣ್ಣಾನೂ ಇಲ್ಲ ಲಕ್ಷಣಾನೂ ಇಲ್ಲ."&lt;br /&gt;" ನಮ್ಮ ಶಶಿಗೂ ಇಂಥಾ ಒಂದು ಫ್ರಾಕ್ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು.. ಅಂದ ಹಾಗೆ ಈ ಫ್ರಾಕ್ ಶಶಿ ಕಣ್ಣಿಗೆ ಬೀಳದ ಹಾಗೆ ನೋಡ್ಕೋ. ಆಮೇಲೆ ಹುಟ್ಟು ಹಬ್ಬದ ದಿನ ಅವಳು ಅಳೋ ಹಾಗೆ ಆಗುತ್ತೆ. "   '  &lt;br /&gt;  ಬಾಗಿಲಿನಿಂದಾಚೆ ನಿಂತು ಕೇಳುತ್ತಿದ್ದ ಪುಟ್ಟ ಶಶಿಯ ಕಣ್ಣುಗಳಲ್ಲಿ ಧಾರಕಾರ ಕಂಬನಿ ಸುರಿಯುತ್ತಿತ್ತು. ಅದರ ಬಗ್ಗೆ ಕಟ್ಟಿದ್ದ ಸುಂದರ ಕನಸಿನ ಗೋಪುರ ಕುಸಿಯಿತು.&lt;br /&gt;&lt;br /&gt;    ಮೂವತ್ತು ವರ್ಷಗಳ ಹಿಂದಿನ ಆ ದಿನ, ಆ ಫ್ರಾಕ್ ಈಗಲೂ ಶಶಿಯ ಕಣ್ಮುಂದೆ ಬರುತ್ತದೆ. ಈಗವಳು ಶ್ರೀಮತಿ ಶಶಿ ರಾವ್, ಶ್ರೀಮಂತ ಉದ್ಯಮಿಯ ಪತ್ನಿ. ಮನೆಯಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಆದರೂ... .&lt;br /&gt;   "ಅಮ್ಮಾ" ಮಗಳು ರಶ್ಮಿಯ ಕೂಗು.&lt;br /&gt;  " ಏನು ಮಾಡ್ತಾ ಇದ್ದೀಯಾ? ಅಪ್ಪ ನಮಗೆಲ್ಲಾ ಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್ ತಂದಿದ್ದಾರೆ . ಬಾಮ್ಮ ನೋಡೋಣಾ."&lt;br /&gt;&lt;br /&gt;     ಅಷ್ಟರಲ್ಲಿ ಅಲ್ಲಿಗೆ ಬಂದ ರಾವ್ ಕೈಯಲ್ಲಿ ತನಗಿಷ್ಟವಾದ ಕಡು ನೀಲಿವರ್ಣದ ಮೈಸೂರ್ ಸಿಲ್ಕ್ ಸೀರೆ ಕಂಡಿತು.&lt;br /&gt;    ಅದನ್ನು ನೋಡಿ ತನ್ನ ಮನಸ್ಸಿಗೆ ಸಂತೋಷವಾಯಿತು. ಆದರೂ ಆಗ ತನ್ನ ಮನದಲ್ಲಿ ಉಕ್ಕಿ ಹರಿದ ಸಂತಸ ಈಗಿಲ್ಲ. ಶಶಿಯ ಮುಖ ನೋಡುತ್ತಲೇ ಅವರಿಗೆ ಎಲ್ಲಾ ಅರ್ಥವಾಯಿತು.&lt;br /&gt;&lt;br /&gt;   " ಕೆಲವರಿಗೆ ಬಾಲ್ಯದ ಘಟನೆಗಳನ್ನು ನೆನೆಪಿಸಿಕೊಳ್ಳುವುದೆಂದರೆ ತುಂಬಾ ಇಷ್ಟ. ಆದರೆ ಭೂತಕಾಲದ ನೆನಪು, ಭವಿಷ್ಯದ ಕನಸು ವರ್ತಮಾನದ ಸಂತೋಷವನ್ನು  ಮರೆಸುವಂತಾಗಬಾರದು." ಎಂದು ಶಶಿಯನ್ನು ನೋಡುತ್ತಾ ರಶ್ಮಿಗೆ ಹೇಳಿದಾಗ ಅವಳಿಗೆ ಏನೂ ಅರ್ಥವಾಗಲಿಲ್ಲ. ತನ್ನ        ಕೈಯಲ್ಲಿದ್ದ ಗಿಫ್ಟ್ ನ್ನು ಬಿಚ್ಚಿ ನೋಡುವುದರಲ್ಲಿ ಮಗ್ನಳಾಗಿ ವರ್ತಮಾನದ ಸಂತೋಷ ಸವಿಯಲು ತೊಡಗಿದ್ದಳು.&lt;br /&gt;&lt;br /&gt;  ಶಶಿಯ ಸೂಕ್ಷ್ಮ ಮನಸ್ಸಿನ ಪರಿಚಯ ರಾವ್ ಗೆ ಚೆನ್ನಾಗಿಯೆ ಇತ್ತು. ಈಗ ಪತಿಯ ಮಾತುಗಳು ಶಶಿಯನ್ನು ಮತ್ತಷ್ಟು ಗೊಂದಲಕ್ಕೆ ದೂಡಿತು. ತಾನು ಇಷ್ಟಪಡುತ್ತಿರುವುದು ಬಾಲ್ಯದ ಆ ಘಟನೆಯೇ ಅಥವಾ ಆ ನೆನಪೇ? ಎರಡೂ ಬೇರೆಯೇ? ಅವಳ ಮನಸ್ಸು ಗೊಂದಲದ ಗೂಡಾಯಿತು.      ಕಣ್ಣೆದುರಿದ್ದ ರೇಷ್ಮೆ ಸೀರೆ ತನ್ನತ್ತ ಕೈಚಾಚು ಎಂದು ಕರೆದಂತಾಯಿತು. ಇಷ್ಟು ದಿನ ತನ್ನೆದುರಿದ್ದ ಸುಂದರ ವರ್ತಮಾನವನ್ನು ನಿರ್ಲಕ್ಷಿಸಿದ್ದು ಎಷ್ಟರ ಮಟ್ಟಿಗೆ ಸರಿ? ಎಂದು ಚಿಂತಿಸುವಂತಾಯಿತು.  ಸದಾ  ಕಲ್ಪನಾಲೋಕದಲ್ಲಿಯೇ ಮುಳುಗಿರುವ ಯುವಕರಿಗೂ , ನೆನಪಿನ ಚಿಪ್ಪಿನಲ್ಲಿಯೇ         ಮುಳುಗಿ ಕೊರುಗುತ್ತಿರುವ ತನ್ನಂತವರಿಗೂ ಏನು ವ್ಯತ್ಯಾಸ? ಇಬ್ಬರೂ ವರ್ತಮಾನದ ಗಳಿಗೆಯನ್ನು ಮರೆಯುತ್ತಿದ್ಡೇವೆ.    ಇನ್ನು ಮುಂದೆ ತನ್ನ ನೆನಪುಗಳು ತನ್ನನ್ನಾಳಲು ಬಿಡಬಾರದೆಂದು ನಿರ್ಧರಿಸಿ ಸೀರೆಯನ್ನು ಕೈಗೆತ್ತಿಕೊಂಡು ಪತಿಯತ್ತ ದೃಷ್ಟಿ ಬೇರಿದಳು. ರಾವ್ ನೆಮ್ಮದಿಯ      ನಿಟ್ಟುಸಿರು ಬಿಟ್ಟರು.&lt;br /&gt;&lt;br /&gt;      -----------------&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8114402468197807042-2492713070814527744?l=battadatore.blogspot.com' alt='' /&gt;&lt;/div&gt;</content><link rel='replies' type='application/atom+xml' href='http://battadatore.blogspot.com/feeds/2492713070814527744/comments/default' title='Post Comments'/><link rel='replies' type='text/html' href='http://battadatore.blogspot.com/2008/12/blog-post.html#comment-form' title='23 Comments'/><link rel='edit' type='application/atom+xml' href='http://www.blogger.com/feeds/8114402468197807042/posts/default/2492713070814527744'/><link rel='self' type='application/atom+xml' href='http://www.blogger.com/feeds/8114402468197807042/posts/default/2492713070814527744'/><link rel='alternate' type='text/html' href='http://battadatore.blogspot.com/2008/12/blog-post.html' title='ನೆನಪು....ಸವಿ ಸವಿ !!!??'/><author><name>ಚಂದ್ರಕಾಂತ ಎಸ್</name><uri>http://www.blogger.com/profile/00490264860537389455</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='25' src='http://3.bp.blogspot.com/_4wQW2-q8XsA/SVIw-U299dI/AAAAAAAAADY/T9mtUHgBZhU/S220/blogfile12.jpg'/></author><thr:total>23</thr:total></entry><entry><id>tag:blogger.com,1999:blog-8114402468197807042.post-5959824905603277411</id><published>2008-11-28T17:03:00.000+05:30</published><updated>2009-01-23T06:27:37.485+05:30</updated><title type='text'>ಪುಟ್ಟಿಯ ತರ್ಕ</title><content type='html'>ಪುಟ್ಟಿಗೆ ಆ ದಿನ ಸಂಭ್ರಮವೋ ಸಂಭ್ರಮ, ಇನ್ನೂ ನರ್ಸರಿಯಲ್ಲಿ ಓದುತ್ತಿರುವ ಪುಟ್ಟಿಗೆ ಅವಳ ಸುತ್ತ ಯಾವಾಗಲೂ ಜನರ ಗುಂಪಿರಬೇಕು.ಅದು ಗೆಳತಿಯರು ಅಥವಾ ಸಮವಯಸ್ಕರೇ ಆಗಬೇಕೆಂದಿಲ್ಲ,ಅವಳೊಂದಿಗೆ ಮಾತನಾಡುತ್ತಾ , ಅವಳ ಪ್ರಶ್ನೆಗಳನ್ನು ಸಹಿಸಿಕೊಳ್ಳುವ ಯಾರಾದರೂ ಸರಿಯೆ. ಅಪ್ಪ ಅಮ್ಮಂದಿರಿಬ್ಬರೂ ದುಡಿಯುವವರಾದ್ದರಿಂದ ಮನೆಯಲ್ಲಿರುವ ಅಜ್ಜಿಯೇ ಅವಳಿಗೆ ಸರ್ವಸ್ವ. ಈ ಕಾರಣದಿಂದಲೇ ಪುಟ್ಟಿ ಶಾಲೆಗೆ ಸೇರುವಾಗ ಇತರ ಮಕ್ಕಳಂತೆ ಅತ್ತು ರಗಳೆ ಮಾಡಲಿಲ್ಲ. ಮೊದಲ ದಿನ ಶಾಲೆಗೆ ಕರೆದೊಯ್ದಾಗ ಶಾಲೆಯ ತುಂಬಾ ಓಡಾಡುತ್ತಿದ್ದ ಎಲ್ಲ ವಯಸ್ಸಿನ ಮಕ್ಕಳನ್ನೂ ಕಣ್ಣರಳಿಸಿಕೊಂಡು ಆಶ್ಚರ್ಯದಿಂದ ನೋಡುತ್ತಾ ನಿಂತುಕೊಂಡುಬಿಟ್ಟಳು ಪುಟ್ಟಿ..ಅಂತಹ ಪುಟ್ಟಿಗೆ ಈ ದಿನ ಸಂಭ್ರಮ ಉಂಟಾಗುವುದಕ್ಕೆ ಕಾರಣವೂ ಇದೆ.ಈ ದಿನ ಅವಳ ತರಗತಿಯ ನೇಹಾಳ ಹುಟುಹಬ್ಬ. ಮೊದಲೇ ನಿಗದಿಯಾಗಿದ್ದಂತೆ  ಅವಳ ತಂದೆ ಈ ದಿನ ಶಾಲೆಗೆ ಬಂದು ಎಲ್ಲ ಮಕ್ಕಳನ್ನೂ ಅವರ  ತೋಟದ ಮನೆಗೆ ಕರೆದೊಯ್ಯುವವರಿದ್ದರು.ಸಂಜೆ ಮಕ್ಕಳೆಲ್ಲರನ್ನೂ ತಾವೇ ಶಾಲೆಯ ಬಳಿ ಬಿಡುವುದಾಗಿ ತಿಳಿಸಿದ್ದರು . ಇನ್ನು ಪುಟ್ಟಿಯನ್ನು ಹಿಡಿಯುವವರುಂಟೇ ?&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_4wQW2-q8XsA/STAFk9U1EOI/AAAAAAAAADM/kjZAa_TB49U/s1600-h/%E0%B2%AC%E0%B2%BF%E0%B2%B0%E0%B3%8D%E0%B2%A5%E0%B3%8D%E0%B2%A6%E0%B2%AF%E0%B3%8D%E0%B3%A7.JPG"&gt;&lt;img style="margin: 0px auto 10px; display: block; text-align: center; cursor: pointer; width: 320px; height: 239px;" src="http://3.bp.blogspot.com/_4wQW2-q8XsA/STAFk9U1EOI/AAAAAAAAADM/kjZAa_TB49U/s320/%E0%B2%AC%E0%B2%BF%E0%B2%B0%E0%B3%8D%E0%B2%A5%E0%B3%8D%E0%B2%A6%E0%B2%AF%E0%B3%8D%E0%B3%A7.JPG" alt="" id="BLOGGER_PHOTO_ID_5273721296146206946" border="0" /&gt;&lt;/a&gt;&lt;br /&gt;ಅಂತೂ ಅವಳು ಸಂಭ್ರಮದಿಂದ ಕಾಯುತ್ತಿದ್ದ ಕ್ಷಣ ಬಂದೇ ಬಿಟ್ಟಿತು.ಎಲ್ಲ ಮಕ್ಕಳನ್ನೂ ನೇಹಾಳ ತಂದೆ ತೋಟದ ಮನೆಗೆ ಕರೆತಂದರು.ಅಂತಹ ಮನೆಯನ್ನು ಟಿವಿಯ ಪರದೆಯ ಮೇಲೆ ಮಾತ್ರ ಕಂಡಿದ್ದ ಪುಟ್ಟಿಗೆ ರೋಮಾಂಚನವಾಯಿತು. ಅವಳೊಬ್ಬಳೇ ಅಲ್ಲ ಎಲ್ಲ ಮಕ್ಕಳೂ ಸ್ವತಂತ್ರ ಹಕ್ಕಿಗಳಂತೆ ತೋಟದ ತುಂಬೆಲ್ಲಾ ಓಡಾಡಿದರು.ನೇಹಾಳ ತಂದೆ ತಾಯಿಯರು ಅತ್ಯಂತ ಸರಳ ಸ್ವಭಾವದ ಸ್ನೇಹ ಜೀವಿಗಳು, ತಮ್ಮ ಮಗಳ ಸಂತೋಷದಲ್ಲಿಯೇ ಅವರು ಸಂತೋಷ ಕಾಣುತ್ತಿದ್ದರು.ನೇಹಳ ತಂದೆಯಂತೂ ಮಕ್ಕಳೊಡನೆ ಮಗುವಾಗಿ ಬೆರೆತು ಕೀಟಲೆ ಮಾಡುತ್ತಾ, ಕತೆ ಹೇಳುತ್ತಾ ಮಕ್ಕಳನ್ನು ತೋಟದಲ್ಲೆಲ್ಲಾ  ಸುತ್ತಿಸಿದರು. ಅವರ ತೋಟದ ಮನೆಯಲ್ಲಿ ಮಕ್ಕಳಿಗಾಗಿ ಆಟವಾಡಲು ಅನೇಕ ಸಾಮಗ್ರಿಗಳಿದ್ದವು. ಅದರ ಜೊತೆ ಯಾವ ನಿರ್ಬಂಧವೂ ಇರಲಿಲ್ಲ.&lt;br /&gt;&lt;br /&gt;’ ಅದನ್ನು ಮುಟ್ಟಬೇಡ, ಅದು ಹಾಳಾಗುತ್ತದೆ"&lt;br /&gt;&lt;br /&gt;" ಹಾಗೆ ಓಡಬೇಡ ಬೀಳುತ್ತೀಯಾ "&lt;br /&gt;&lt;br /&gt;ಎಂದು ಗಳಿಗೆ ಗಳಿಗೆಗೆ ಎಚ್ಚರಿಸುವವರಿರಲಿಲ್ಲ.&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_4wQW2-q8XsA/STAFJWK51xI/AAAAAAAAADE/o94Mjs34OyI/s1600-h/birthday3.gif"&gt;&lt;img style="margin: 0px auto 10px; display: block; text-align: center; cursor: pointer; width: 320px; height: 212px;" src="http://1.bp.blogspot.com/_4wQW2-q8XsA/STAFJWK51xI/AAAAAAAAADE/o94Mjs34OyI/s320/birthday3.gif" alt="" id="BLOGGER_PHOTO_ID_5273720821779126034" border="0" /&gt;&lt;/a&gt;&lt;br /&gt;ತೋಟದ ಇನ್ನೊಂದು ಪಾರ್ಶ್ವದಲ್ಲಿ ಸಾಲಾಗಿ ಜೋಡಿಸಿಟ್ಟ ಸಿಹಿತಿಂಡಿ, ಹಣ್ಣುಗಳ ರಾಶಿ ಎಲ್ಲವನ್ನೂ ಪುಟ್ಟಿ ಅಚ್ಚರಿಯ ಕಂಗಳಿಂದ ನೋಡುತ್ತಿದ್ದಳು. ಹಣ್ಣುಗಳ ರಾಶಿ ನೋಡಿದ ಕೂಡಲೇ ಅವಳ ಮುಖ ಮೊರದಗಲವಾಯಿತು. ಮೊದಲೇ ಅವಳಿಗೆ ಹಣ್ಣುಗಳೆಂದರೆ ಪಂಚಪ್ರಾಣ.ಹೆಚ್ಚಿಟ್ಟ ಹಣ್ಣುಗಳನ್ನು ತಿನ್ನುವುದಕ್ಕಿಂತ ಅವುಗಳನ್ನಿ ಹಾಗೇ ಕಚ್ಚಿ ತಿನ್ನುವುದೆಂದರೆ ಅವಳಿಗಿಷ್ಟ. ಅವಳು ಬಾಳೆಹಣ್ಣನ್ನು ತಿನ್ನುವುದನ್ನು ನೋಡುವುದೇ ಒಂದು ಅಪೂರ್ವ ದೃಶ್ಯ. ತನ್ನ ಪುಟ್ಟ ಪುಟ್ಟ ಕೈಗಳಿಂದ ತಾನೇ ಸಿಪ್ಪೆಬಿಡಿಸಿ ಕಚ್ಚಿ ಕಚ್ಚಿ ತಿನ್ನುವುದು  ಅವಳಿಗೆ ಅಚ್ಚುಮೆಚ್ಚು.ಅಂತಹ ಪುಟ್ಟಿಯ ಎದುರು ಈಗ ಹಣ್ಣುಗಳ ರಾಶಿ ! ತನ್ನ ಕಣ್ಣೆದುರಿಗೆ ಹಣ್ಣುಗಳ ರಾಶಿ ನೋಡಿ ಯಾವುದನ್ನು ಮೊದಲು ತಿನ್ನಬೇಕೆಂಬ ಗಲಿಬಿಲಿಗೆ ಬಿದ್ದಳು ಪುಟ್ಟಿ .ಅಲ್ಲಿಯೇ ಇದ್ದ  ನೇಹಾಳ ಅಮ್ಮ ಸೊಗಸಾದ ಕಲ್ಲಂಗಡಿ ಹಣ್ಣನ್ನು ಹೆಚ್ಚುತ್ತಿದ್ದರು. ರಸ ತೊಟ್ಟಿಕ್ಕುತ್ತಿದ್ದ ಕೆಂಪನೆಯ ಹಣ್ಣು. ಕೂಡಲೇ ಕೈಚಾಚಿ ಒಂದು ದೊಡ್ಡ ತುಂಡನ್ನು ಎರಡೂ ಕೈಯಲ್ಲಿ ಹಿಡಿದು ಕಚ್ಚಿ ತಿನ್ನಲಾರಂಭಿಸಿದಳು.&lt;br /&gt;&lt;br /&gt;ಅದೇ ಸಮಯಕ್ಕೆ ಇತರ ಮಕ್ಕಳೆಲ್ಲರೂ ನೇಹಾಳ ತಂದೆ ರಾಮಮೂರ್ತಿಯೊಡನೆ ಅಲ್ಲಿಗೆ ಬಂದರು. ರಾಮಮೂರ್ತಿಯ ದೃಷ್ಟಿ ಪುಟ್ಟಿಯತ್ತ ಹೊರಳಿತು. ಎರಡೂ ಕೈಯಲ್ಲಿ ಹಣ್ಣನ್ನು ಹಿಡಿದು ಬಾಯಲ್ಲಿ ಅದನ್ನು ಕಚ್ಚುತ್ತಿದ್ದ  ರೀತಿ , ಕೈ ಬಾಯಿಗಳಿಂದ ಸಣ್ಣಗೆ ತೊಟ್ಟಿಕ್ಕುತ್ತಿದ್ದ ಹಣ್ಣಿನ ರಸ, ಮಧ್ಯೆ ಮಧ್ಯೆ ಬಾಯಿಗೆ ಸಿಕ್ಕ ಬೀಜವನ್ನು ಪಕ್ಕದಲ್ಲಿದ್ದ ಪುಟ್ಟ ಬಟ್ಟಲಿನಲ್ಲಿ ಉಗಿಯುತ್ತಿದ್ದ ರೀತಿ, ತಿನ್ನುವುದರಲ್ಲಿ ಅವಳಿಗಿದ್ದ ಏಕಾಗ್ರತೆ , ಮತ್ತೆ ಮತ್ತೆ ಅವಳನ್ನು ನೋಡುವಂತೆ ಮಾಡಿತು. ಇದ್ದಕ್ಕಿದ್ದಂತೆ ತಲೆಯೆತ್ತಿ ತಮ್ಮನ್ನು ನೋಡಿದ ಪುಟ್ಟಿ " ಅಂಕಲ್ , ಅಂಕಲ್ "ಎಂದು ಓಡಿ ಬಂದಳು.ಏನೆಂದು ಕೇಳಿದಾಗ ಕಣ್ಣನ್ನು ಇಷ್ಟಗಲ ಅರಳಿಸಿ ,&lt;br /&gt;&lt;br /&gt;" ಅಂಕಲ್ ಒಂದು ಬೀಜ ನುಂಗಿಬಿಟ್ಟೆ" ಎಂದು ಗಾಬರಿಯಿಂದ ನುಡಿದಳು.ಏಕೋ ರಾಮಮೂರ್ತಿಯವರಿಗೆ ಅವಳನ್ನು ಸ್ವಲ್ಪ ಕೀಟಲೆ ಮಾಡಬೇಕೆನಿಸಿತು.&lt;br /&gt;&lt;br /&gt;" ಹಾಗೆಲ್ಲಾ ಬೀಜ ನುಂಗಬಾರದು ಪುಟ್ಟಿ, ನುಂಗಿದರೆ ನಿನ್ನ ಹೊಟ್ಟೆಯಲ್ಲಿ ಕಲ್ಲಂಗಡಿ ಗಿಡ ಹುಟ್ಟುತ್ತೆ " ಎಂದರು.ತಾವಂದುಕೊಂಡಂತೆ ಪುಟ್ಟಿ ಗಾಬರಿಗೊಳ್ಳಲಿಲ್ಲ. ಬದಲಿಗೆ ಕಣ್ಣು ಮಿನುಗಿಸುತ್ತಾ&lt;br /&gt;&lt;br /&gt;" ಹಾಗಾದರೆ ಯಾವಾಗ ಬೇಕಾದರೂ ಆ ಗಿಡದಿಂದ ಹಣ್ಣು ಕಿತ್ತು ತಿನ್ನಬಹುದಲ್ವಾ ಅಂಕಲ್ " ಎಂದಳು.ಅವಳ ಮಾತಿನಲ್ಲಿಮುಗ್ಧತೆ ತುಂಬಿ ತುಳುಕುತ್ತಿತ್ತು.&lt;br /&gt;&lt;br /&gt;" ಪಪ್ಪಾ, ಬೇಗ ಬಾ. ಅಂಜು ಬಿದ್ದುಹೋದಳು " ಎಂದು ಅಲ್ಲಿಗೆ ಬಂದ ನೇಹಾ ಅಪ್ಪನ ಕೈಹಿಡಿದು ಕರೆದೊಯ್ದಳು ಅಂತೂ ಸಂಭ್ರಮದ ಆ ದಿನ ಮುಗಿಯಿತು.ಆ ರಾತ್ರಿ ಪುಟ್ಟಿಯ ಕನಸಿನಲ್ಲಿ ಕಲ್ಲಂಗಡಿಯದೇ ರಾಜ್ಯಭಾರ.ಮರುದಿನ ಭಾನುವಾರ. ಅವಳು ಈ ರಾತ್ರಿ ಎಷ್ಟು ಹೊತ್ತು ಬೇಕಾದರೂ ಮಲಗಬಹುದು&lt;br /&gt;&lt;br /&gt;ಬೆಳಿಗ್ಗೆ ಕಣ್ಣು ಬಿಡುವಷ್ಟರಲ್ಲಿ ಚಿಕ್ಕಿ, ಚಿಕ್ಕಪ್ಪ, ಅಪ್ಪ, ಅಮ್ಮ , ಅಜ್ಜಿ ಎಲ್ಲರ ಧ್ವನಿ ಕಿವಿಯ ಮೇಲೆ ಬಿತ್ತು.. ಭಾನುವಾರಗಳೆಂದರೆ ಪುಟ್ಟಿಗೆ ಎಲ್ಲಿಲ್ಲದ ಆನಂದ. ಆ ದಿನ ಮನೆಗೆ ಬರುವ ಚಿಕ್ಕಿಯ ಜೊತೆ ಆಟವಾಡುತ್ತಾ, ಮಾತನಾಡುತ್ತಾ ಕಾಲ ಕಳೆಯುವುದೆಂದರೆ ಅವಳಿಗೆ ಪರಮಾನಂದ.ಚಿಕ್ಕಿಯ ನೆನಪಾಗುತ್ತಲೇ ಚಕ್ಕನೆ ಹಾಸಿಗೆಯಿಂದ ಎದ್ದು ಅವಳ ಬಳಿ ಓಡಿದಳು. ಅವಳೊಂದಿಗೆ ಮಾತನಾಡಲು ಬೇಕಾದಷ್ಟು ವಿಷಯಗಳಿದ್ದವು. ಶಾಲೆಯಲ್ಲಿ ರೂಪಾ ಮ್ಯಾಮ್ ತನ್ನನ್ನು ಗುಡ್ ಗರ್ಲ್ ಎಂದದ್ದು, ನೇಹಾಳ ಬರ್ತ್ ಡೇ ಪಾರ್ಟಿ- ಎಲ್ಲವನ್ನೂ ಹೇಳಬೇಕಿತ್ತು.ಅಂತೂ ಬೇಗ ಬೇಗ ಹಲ್ಲುಜ್ಜಿ, ಸ್ನಾನ ಮಾಡಿ ಚಿಕ್ಕಿಯ ಬಳಿ ಓಡಿ ಅವಳ ತೊಡೆಯೇರಿದಳು.ಇನ್ನೂ ಸರಿಯಾಗಿ ಕುಳಿತಿರಲಿಲ್ಲ, ಅಷ್ಟರಲ್ಲಿ ಅಮ್ಮ ಬಳಿ ಬಂದು ಅವಳನ್ನೆತ್ತಿ ಪಕ್ಕದಲ್ಲಿ ಕೂರಿಸಿದಳು.ಪುಟ್ಟಿಗೆ ಅಚ್ಚರಿ, ತನ್ನ ಮೆಚ್ಚಿನ ಚಿಕ್ಕಿಯ ತೊಡೆಯೇರಲು ಅಮ್ಮನೇಕೆ ಅಡ್ಡಿಪಡಿಸಬೇಕು?ಸಹಾಯಕ್ಕಾಗಿ ಚಿಕ್ಕಿಯ ಮುಖ ನೋಡಿದರೆ ಅವಳು ತನ್ನದೇ ಲೋಕದಲ್ಲಿ ಮೈಮರೆತಂತಿತ್ತು.ತನ್ನ ರಕ್ಷಣೆ ತಾನೇ ಮಾಡಿಕೊಳ್ಳುವಂತೆ ಮತ್ತೆ ತೊಡೆಯೇರಲುತೊಡಗುತ್ತಾ " ನಾನು ಅಲ್ಲೇ ಕೂತ್ಕೋಬೇಕು" ಎಂದು ರಾಗ ಎಳೆದಳು.&lt;br /&gt;&lt;br /&gt;" ಬೇಡ ಪುಟ್ಟಿ ಚಿಕ್ಕಿಗೆ ನೋವಾಗುತ್ತೆ" ಅಮ್ಮನ ಉತ್ತರ.&lt;br /&gt;&lt;br /&gt;" ನಾನು ಯಾವಾಗ್ಲೂ ಇಲ್ಲೇ ಕೂರೋದು." ಹಟದ ದ್ವನಿಯಲ್ಲಿ ಪುಟ್ಟಿ ಹೇಳಿದಳು.&lt;br /&gt;&lt;br /&gt;ಅಷ್ಟರಲ್ಲಿ ಅಲ್ಲಿಗೆ ಬಂದ ಅಜ್ಜಿಯೂ ಅಲ್ಲಿ ಕೂರಬೇಡವೆಂದು ಅನುನಯಿಸತೊಡಗಿದಳು.&lt;br /&gt;&lt;br /&gt;" ಅಲ್ಲಿ ಕೂತರೆ ಪಾಪಂಗೆ ನೋವಾಗುತ್ತೆ ಪುಟ್ಟಿ "&lt;br /&gt;&lt;br /&gt;" ಇಲ್ಲಿ ಪಾಪಾನೂ ಇಲ್ಲ ಏನೂ ಇಲ್ಲ, ನೀನು ಸುಳ್ಳು ಸುಳ್ಳೇ ಹೇಳ್ತೀಯಾ "ಎಂದು ಹೇಳಿ ಗಟ್ಟಿಯಾಗಿ ಅಳಲು ಪ್ರಾರಂಭಿಸಿದಳು.&lt;br /&gt;&lt;br /&gt;" ಇಲ್ಲ ಪುಟ್ಟಿ, ಚಿಕ್ಕಿ ಹೊಟ್ಟೇಲಿ ಪಾಪ ಇದೆ ಅದಕ್ಕೆ ನೋವಾಗುತ್ತಲ್ವಾ"&lt;br /&gt;&lt;br /&gt;ಅದುವರೆಗೂ ಚಿಕ್ಕಿಯ ತೊಡೆಯನ್ನು ತನ್ನ ಪುಟ್ಟ ಕೈಗಳಿಂದ ಬಳಸಿ ಹಿಡಿದಿದ್ದ ಪುಟ್ಟಿ ಆಘಾತವಾದಂತೆ ಕೈಬಿಟ್ಟು ಎರಡು ಹೆಜ್ಜೆ ಹಿಂದೆ ಸರಿದಳು.ನಂತರ ಚಿಕ್ಕಿಯ ಮುಖವನ್ನೇ ದುರುಗುಟ್ಟಿ ನೋಡುತ್ತಾ&lt;br /&gt;" ಚಿಕ್ಕಿ , ನೀನು ತುಂಬಾ ಕೆಟ್ಟೋಳು.. " ಎಂದು ಗಟ್ಟಿಯಾಗಿ ಕಿರುಚಿದಳು.&lt;br /&gt;&lt;br /&gt;ಅಲ್ಲಿ ಕುಳಿತಿದ್ದ ಹಿರಿಯರಿಗೆಲ್ಲಾ ಅವಳ ಪ್ರತಿಕ್ರಿಯೆ ವಿಚಿತ್ರ ಎನಿಸಿತು.  ಕಸಿವಿಸಿಗೊಂಡ ಅಮ್ಮ ಪುಟ್ಟಿಯ ಬಳಿ ಬಂದು " ಹಾಗೆಲ್ಲಾ ಅನ್ನಬಾರದು, ಚಿಕ್ಕಿಗೆ ಸಾರಿ ಹೇಳು ಪುಟ್ಟಿ " ಎಂದಳು.&lt;br /&gt;ಪುಟ್ಟಿಯದು ಮಾತ್ರ ಒಂದೇ ರಾಗ. " ಚಿಕ್ಕಿ ಕೆಟ್ಟೋಳು "ಇದುವರೆಗೂ ಸುಮ್ಮನಿದ್ದ ಪುಟ್ಟಿಯ ಅಪ್ಪ ಅವಳ ಬಳಿ ಬಂದು ಅವಳನ್ನು ಮಮತೆಯಿಂದ ಎತ್ತಿಕೊಂಡು ರಮಿಸುತ್ತಾ ಅವಳ ಕಣ್ಣೊರೆಸಿ,,&lt;br /&gt;&lt;br /&gt;" ಯಾಕೆ ಪುಟ್ಟಿ ಚಿಕ್ಕಿ ಕೆಟ್ಟೋಳು " ಎಂದು ಕೇಳಿದರು.&lt;br /&gt;&lt;br /&gt;ಅವಳು ಕೊಟ್ಟ ಉತ್ತರ ಎಲ್ಲರನ್ನೂ ದಂಗುಬಡಿಸಿತು.&lt;br /&gt;&lt;br /&gt;" ಮತ್ತೆ ಮತ್ತ್ರೆ ಚಿಕ್ಕಿ ಪಾಪನ್ನ ತಿಂದು ಬಿಟ್ಟಿದ್ದಾಳೆ. ಪಾಪನ್ನ ತಿನ್ನೋವರು ಕೆಟ್ಟೋರಲ್ವಾ ?&lt;br /&gt;&lt;br /&gt;ಅವಳ ಅಸಂಬದ್ಧ ಉತ್ತರ ಕೇಳಿ ಕೋಪಗೊಂಡ ಅಮ್ಮ  " ಏನೆ ನಿನ್ನ ತಲೆಹರಟೆ ಮಾತು. ಯಾರು ಹೇಳಿದ್ದು ಚಿಕ್ಕಿ ಪಾಪೂನ ತಿಂದಿದ್ದಾಳೆ ಅಂತ "&lt;br /&gt;&lt;br /&gt;" ನಂಗೆಲ್ಲಾ ಗೊತ್ತು. ನೇಹ ಡ್ಯಾಡಿ ಹೇಳಿದ್ದಾರೆ ಹಣ್ಣಿನ ಬೀಜ ತಿಂದರೆ ಗಿಡ ಬೆಳೆಯುತ್ತೆ ಅಂತ.ಚಿಕ್ಕಿ ಪಾಪೂನ ತಿಂದಿದ್ದಾಳೆ. ಅದಕ್ಕೆ ಅವಳ ಹೊಟ್ಟೆಯಲ್ಲಿ ಪಾಪೂ ಇರೋದು "&lt;br /&gt;&lt;br /&gt;ಅಳುತ್ತಾ ಪುಟ್ಟಿ ಹೇಳಿದ ಮಾತು ಕೇಳಿ ಯಾರಿಗೂ ಮಾತು ಹೊರಡಲಿಲ್ಲ. ಅವಳಿಗೆ ಸಮಾಧಾನವಾಗುವ ಹಾಗೆ ಹೇಗಪ್ಪಾಅವಳಿಗೆ  ಹೇಳೋದು ಎಂಬ ಚಿಂತೆ ಪುಟ್ಟಿಯ ಅಪ್ಪನ ತಲೆ ಕೊರೆಯಲಾರಂಭಿಸಿತು. ಈಗಾಗ್ಲೇ ಅವಳ ತರ್ಕ ಅವರ ತಲೆಯನ್ನು ಅರ್ಧ ತಿಂದುಹಾಕಿತ್ತು.!!&lt;br /&gt;&lt;br /&gt;-------&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8114402468197807042-5959824905603277411?l=battadatore.blogspot.com' alt='' /&gt;&lt;/div&gt;</content><link rel='replies' type='application/atom+xml' href='http://battadatore.blogspot.com/feeds/5959824905603277411/comments/default' title='Post Comments'/><link rel='replies' type='text/html' href='http://battadatore.blogspot.com/2008/11/blog-post_28.html#comment-form' title='18 Comments'/><link rel='edit' type='application/atom+xml' href='http://www.blogger.com/feeds/8114402468197807042/posts/default/5959824905603277411'/><link rel='self' type='application/atom+xml' href='http://www.blogger.com/feeds/8114402468197807042/posts/default/5959824905603277411'/><link rel='alternate' type='text/html' href='http://battadatore.blogspot.com/2008/11/blog-post_28.html' title='ಪುಟ್ಟಿಯ ತರ್ಕ'/><author><name>ಚಂದ್ರಕಾಂತ ಎಸ್</name><uri>http://www.blogger.com/profile/00490264860537389455</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='25' src='http://3.bp.blogspot.com/_4wQW2-q8XsA/SVIw-U299dI/AAAAAAAAADY/T9mtUHgBZhU/S220/blogfile12.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_4wQW2-q8XsA/STAFk9U1EOI/AAAAAAAAADM/kjZAa_TB49U/s72-c/%E0%B2%AC%E0%B2%BF%E0%B2%B0%E0%B3%8D%E0%B2%A5%E0%B3%8D%E0%B2%A6%E0%B2%AF%E0%B3%8D%E0%B3%A7.JPG' height='72' width='72'/><thr:total>18</thr:total></entry><entry><id>tag:blogger.com,1999:blog-8114402468197807042.post-3547405294959364687</id><published>2008-11-23T09:49:00.001+05:30</published><updated>2008-11-23T22:05:30.399+05:30</updated><title type='text'></title><content type='html'>&lt;span style="font-weight: bold; color: rgb(153, 0, 0);font-size:180%;" &gt;                                        ಕ್ಯಾಮರಾ ಕಣ್ಣಲ್ಲಿ......&lt;/span&gt;&lt;br /&gt;&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_4wQW2-q8XsA/SSmFUz_AoqI/AAAAAAAAAC8/h6hxh1rIRSU/s1600-h/Alex%27s.jpg"&gt;&lt;img style="margin: 0px auto 10px; display: block; text-align: center; cursor: pointer; width: 283px; height: 189px;" src="http://3.bp.blogspot.com/_4wQW2-q8XsA/SSmFUz_AoqI/AAAAAAAAAC8/h6hxh1rIRSU/s320/Alex%27s.jpg" alt="" id="BLOGGER_PHOTO_ID_5271891431412245154" border="0" /&gt;&lt;/a&gt;&lt;br /&gt;                                &lt;br /&gt;                                            &lt;span style="color: rgb(153, 0, 0);font-size:180%;" &gt;&lt;span style="font-weight: bold;"&gt;                                &lt;span&gt;                                 &lt;span&gt;ಕುಂಚದಲ್ಲಿ&lt;/span&gt;&lt;/span&gt;  ಮೂಡಿಬಂದ &lt;/span&gt;&lt;/span&gt;&lt;span style="font-weight: bold; color: rgb(153, 0, 0);font-size:180%;" &gt;ಕಂದ - ೧&lt;/span&gt;&lt;br /&gt;&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_4wQW2-q8XsA/SSjbnGuUNnI/AAAAAAAAACc/EwrdKd_4ARk/s1600-h/Alex.jpg"&gt;&lt;img style="margin: 0px auto 10px; display: block; text-align: center; cursor: pointer; width: 320px; height: 238px;" src="http://3.bp.blogspot.com/_4wQW2-q8XsA/SSjbnGuUNnI/AAAAAAAAACc/EwrdKd_4ARk/s320/Alex.jpg" alt="" id="BLOGGER_PHOTO_ID_5271704828703422066" border="0" /&gt;  &lt;/a&gt;&lt;br /&gt;&lt;span style="font-weight: bold; color: rgb(153, 0, 0);font-size:180%;" &gt;                                &lt;span&gt;                              &lt;br /&gt;                               ಕುಂಚದಲ್ಲಿ&lt;/span&gt; ಮೂಡಿಬಂದ ಕಂದ - ೨&lt;/span&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_4wQW2-q8XsA/SSkhKf1SosI/AAAAAAAAACs/8hYBTZpl3eM/s1600-h/Sony1.jpg"&gt;&lt;img style="margin: 0px auto 10px; display: block; text-align: center; cursor: pointer; width: 320px; height: 240px;" src="http://3.bp.blogspot.com/_4wQW2-q8XsA/SSkhKf1SosI/AAAAAAAAACs/8hYBTZpl3eM/s320/Sony1.jpg" alt="" id="BLOGGER_PHOTO_ID_5271781303041303234" border="0" /&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8114402468197807042-3547405294959364687?l=battadatore.blogspot.com' alt='' /&gt;&lt;/div&gt;</content><link rel='replies' type='application/atom+xml' href='http://battadatore.blogspot.com/feeds/3547405294959364687/comments/default' title='Post Comments'/><link rel='replies' type='text/html' href='http://battadatore.blogspot.com/2008/11/blog-post_8523.html#comment-form' title='15 Comments'/><link rel='edit' type='application/atom+xml' href='http://www.blogger.com/feeds/8114402468197807042/posts/default/3547405294959364687'/><link rel='self' type='application/atom+xml' href='http://www.blogger.com/feeds/8114402468197807042/posts/default/3547405294959364687'/><link rel='alternate' type='text/html' href='http://battadatore.blogspot.com/2008/11/blog-post_8523.html' title=''/><author><name>ಚಂದ್ರಕಾಂತ ಎಸ್</name><uri>http://www.blogger.com/profile/00490264860537389455</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='25' src='http://3.bp.blogspot.com/_4wQW2-q8XsA/SVIw-U299dI/AAAAAAAAADY/T9mtUHgBZhU/S220/blogfile12.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_4wQW2-q8XsA/SSmFUz_AoqI/AAAAAAAAAC8/h6hxh1rIRSU/s72-c/Alex%27s.jpg' height='72' width='72'/><thr:total>15</thr:total></entry><entry><id>tag:blogger.com,1999:blog-8114402468197807042.post-6340169376774317617</id><published>2008-11-14T17:27:00.000+05:30</published><updated>2008-11-14T22:19:38.452+05:30</updated><title type='text'></title><content type='html'>&lt;span style="font-size:100%;"&gt;&lt;br /&gt;&lt;span style="font-weight: bold; color: rgb(153, 0, 0);font-size:130%;" &gt;&lt;span style="font-size:130%;"&gt;ಯಾವ   ಬೃಂದಾವನವು  ಸೆಳೆಯಿತು    ನಿನ್ನ ಮಣ್ಣಿನ  ಕಣ್ಣನು !&lt;/span&gt;&lt;br /&gt;&lt;br /&gt;&lt;/span&gt;&lt;/span&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_4wQW2-q8XsA/SR1ptruECiI/AAAAAAAAACU/cNNz3rLpiWw/s1600-h/Sony2.jpg"&gt;&lt;img style="margin: 0pt 10px 10px 0pt; float: left; cursor: pointer; width: 320px; height: 240px;" src="http://2.bp.blogspot.com/_4wQW2-q8XsA/SR1ptruECiI/AAAAAAAAACU/cNNz3rLpiWw/s320/Sony2.jpg" alt="" id="BLOGGER_PHOTO_ID_5268483372644305442" border="0" /&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8114402468197807042-6340169376774317617?l=battadatore.blogspot.com' alt='' /&gt;&lt;/div&gt;</content><link rel='replies' type='application/atom+xml' href='http://battadatore.blogspot.com/feeds/6340169376774317617/comments/default' title='Post Comments'/><link rel='replies' type='text/html' href='http://battadatore.blogspot.com/2008/11/blog-post_14.html#comment-form' title='33 Comments'/><link rel='edit' type='application/atom+xml' href='http://www.blogger.com/feeds/8114402468197807042/posts/default/6340169376774317617'/><link rel='self' type='application/atom+xml' href='http://www.blogger.com/feeds/8114402468197807042/posts/default/6340169376774317617'/><link rel='alternate' type='text/html' href='http://battadatore.blogspot.com/2008/11/blog-post_14.html' title=''/><author><name>ಚಂದ್ರಕಾಂತ ಎಸ್</name><uri>http://www.blogger.com/profile/00490264860537389455</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='25' src='http://3.bp.blogspot.com/_4wQW2-q8XsA/SVIw-U299dI/AAAAAAAAADY/T9mtUHgBZhU/S220/blogfile12.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_4wQW2-q8XsA/SR1ptruECiI/AAAAAAAAACU/cNNz3rLpiWw/s72-c/Sony2.jpg' height='72' width='72'/><thr:total>33</thr:total></entry><entry><id>tag:blogger.com,1999:blog-8114402468197807042.post-1614626316181167477</id><published>2008-11-05T21:12:00.000+05:30</published><updated>2009-01-21T16:16:36.634+05:30</updated><title type='text'>ಬಾಲಿಕಾವಧು</title><content type='html'>&lt;span style="font-style: italic;"&gt;&lt;span style="font-weight: bold;"&gt;&lt;span style="color: rgb(153, 0, 0);"&gt;&lt;/span&gt;&lt;/span&gt;&lt;/span&gt;&lt;br /&gt;&lt;br /&gt;ಇತ್ತೀಚೆಗೆ ಪ್ರಾರಂಭವಾದ ಹೊಸ ಚಾನಲ್ ನಲ್ಲಿ ಪ್ರಸಾರವಾಗುತ್ತಿರುವ , ಎಪ್ಪತ್ತನೆಯ ಕಂತಿನ ಆಸುಪಾಸಿನಲ್ಲಿರುವ " ಬಾಲಿಕಾವಧು"  ಧಾರಾವಾಹಿ ಜನಪ್ರಿಯತೆಯ ಪಟ್ಟಿಯಲ್ಲಿ ಐದನೆಯ ಸ್ಥಾನವನ್ನು ಗಳಿಸಿರುವುದು ಭಾರತದ ಟೆಲಿವಿಷನ್ ಇತಿಹಾಸದಲ್ಲಿಯೇ ಪ್ರಾಯಶಃ ಮೊದಲನೆಯದು. ಘಟಾನುಘಟಿ ಅತ್ತೆ-ಸೊಸೆಯರ ಮಧ್ಯದಲ್ಲಿ  ಈ ಪುಟ್ಟ ಸೊಸೆ ಹೇಗೆ ತಾನೆ ಜಾಗ ಗಿಟ್ಟಿಸಿಕೊಂಡಳು ? ಈ ಧಾರಾವಾಹಿಯ ವೈಶಿಷ್ಟ್ಯವೇನು ? ಈ ಎಲ್ಲ ವಿಷಯಗಳ ಬಗ್ಗೆ ಸ್ಟಾರ್ ಸಮೂಹದ ಚಾನೆಲ್ ಒಂದರಲ್ಲಿ  ಇತ್ತೀಚೆಗೆ ಬಿಸಿಬಿಸಿ ಚರ್ಚೆ ನಡೆಯಿತು. ಆ ಸಂದರ್ಭದಲ್ಲಿ ಈ ಧಾರಾವಾಹಿಯ ಅತ್ತೆ-ಸೊಸೆ ( ಸುಮಿತ್ರ ಮತ್ತು ಆನಂದಿ ) ಇವರ ಸಂದರ್ಶನವೂ ಪ್ರಸಾರವಾಯಿತು.ಇದು ಕೇವಲ ಭಾರತದಲ್ಲಿ ಮಾತ್ರವಲ್ಲ ದುಬಾಯಿ, ನೆದರ್ಲ್ಯಾಂಡ್ ಅಮೆರಿಕ, ಕೆನಡ, ಮುಂತಾದ ಕಡೆಗಳಲ್ಲಿರುವ  ಭಾರತೀಯರ ಮನಸ್ಸನ್ನೂ ಸೂರೆಗೊಂಡಿದೆ.ಹಾಗಾದರೆ ಈ ಧಾರಾವಾಹಿಯ ವಿಶೇಷವೇನು ?&lt;br /&gt;&lt;br /&gt;ಈ ಧಾರಾವಾಹಿಯನ್ನು ವೀಕ್ಷಿಸುತ್ತಿರುವ ನನಗೆ ಅದರ ಬಗ್ಗೆ ಅನಿಸಿದ್ದನ್ನು ಮುಕ್ತವಾಗಿ ಇಲ್ಲಿ ಬರೆದಿದ್ದೇನೆ. ಚರ್ಚೆ,  ಕಾಮೆಂಟ್ ಗಳಿಗೆ ಸ್ವಾಗತ!&lt;br /&gt;&lt;br /&gt;ಬಾಲಿಕಾವಧು- ಹೆಸರೇ ಸೂಚಿಸುವಂತೆ ಬಾಲ್ಯವಿವಾಹದ ಕರಾಳ ಮುಖವನ್ನು ಪರಿಚಯಿಸುವ ಧಾರಾವಾಹಿ. ಈಗಲೂ ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ಬಾಲ್ಯವಿವಾಹಗಳು ನಡೆಯುತ್ತಿರುವ ರಾಜಾಸ್ಥಾನದ ಹಳ್ಳಿಯೊಂದರ ಸಂಸಾರದ ಸುತ್ತ ಈ ಕತೆ ಸಾಗುತ್ತದೆ. ಎಂಟು ಹತ್ತು ವಯಸ್ಸಿನ ಬಾಲಕಿ ಆನಂದಿಯ ವಿವಾಹದೊಂದಿಗೆ ಧಾರಾವಾಹಿ ಪ್ರಾರಂಭವಾಗುತ್ತದೆ. ಒಂದು ಬಡ ಕುಟುಂಬದ ತಂದೆತಾಯಿಯರ ಏಕೈಕ ಸಂತಾನ ಆನಂದಿ. ಶಾಲೆಯಲ್ಲಿ ಅತಿ ಚುರುಕಿನ ಹುಡುಗಿ. ಅಲ್ಲಿಯ ಶಿಕ್ಷಕಿಯ ಬಳಿ ತನ್ನ ಮುಗ್ಧ ಪ್ರಶ್ನೆಗಳನ್ನು ಕೇಳುತ್ತಾ ಓದಿನಲ್ಲಿ ಅತೀವ ಆಸಕ್ತಿ ಹೊಂದಿರುವ ಬಾಲಕಿ ಆನಂದಿ. ಅವಳ ಮದುವೆ ಮತ್ತೊಂದು ಹಳ್ಳಿಯ ಶ್ರೀಮಂತ ಕುಟುಂಬದ ಕಲ್ಯಾಣಿಯಮ್ಮನ ಮೊಮ್ಮಗ ಜಗದೀಶನೊಂದಿಗೆ ನಿಶ್ಚಯವಾಗುತ್ತದೆ.ಶಿಕ್ಷಕಿಯು ಆನಂದಿಯ ತಂದೆಯ ಬಳಿ ಈ ವಯಸ್ಸಿಗೆ ಮದುವೆ ಮಾಡುವುದು ಕಾನೂನು ರೀತ್ಯಾ ತಪ್ಪೆಂದು ಇನ್ನಿಲ್ಲದಂತೆ ಹೇಳುತ್ತಾಳೆ.ಆದರೆ ಈ ಮಾತುಗಳನ್ನು ಅವರು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.ಮದುವೆಯ ಕಾರ್ಯಗಳು ಪ್ರಾರಂಭವಾಗುತ್ತವೆ. ವರ ಜಗದೀಶನ ವಯಸ್ಸು ಕೆವಲ ಹತ್ತು ವರ್ಷ!. ಮೈತುಂಬಾ ಒಡವೆ, ಸೊಗಸಾದ ಮದುವೆಹೆಣ್ಣಿನ ಅಲಂಕಾರದಿಂದ ಆನಂದಿ ಸಂಭ್ರಮಿಸುತ್ತಾಳೆ.ಆದರೆ ಮದುವೆಯ ಸುದ್ದಿ ಕೇಳಿ ಶಿಕ್ಷಕಿ ಆ ಊರಿನ ಪೊಲಿಸ್ ಅಧಿಕಾರಿಗೆ ದೂರು ಕೊಟ್ಟು ಮದುವೆಯನ್ನು ನಿಲ್ಲಿಸುವಂತೆ ಹೇಳುತ್ತಾಳೆ. ಆದರೆ ಅವನೂ ಸಹ ಈ ಮದುವೆಯ ಒಂದು ಭಾಗವಾಗಿ ಸಂಭ್ರಮಿಸುತ್ತಿರುವುದನ್ನು ನೋಡಿ ಆಕೆ ಮೇಲಧಿಕಾರಿಗಳ ಬಳಿ ದೂರು ಕೊಟ್ಟು ಮದುವೆ ನಿಲ್ಲಿಸಿ ಅವರೆಲ್ಲರನ್ನೂ ಜೈಲಿಗೆ ಕಳಿಸುವೆನೆಂದಾಗ ಆನಂದಿಗೆ ದಿಗ್ಭ್ರಮೆಯಾಗಿ ಅವಳು ಕೇಳುವ ಪ್ರಶ್ನೆ " ಮದುವೆ ನಿಂತರೆ ಈ ಒಡವೆ ವಸ್ತ್ರ ಎಲ್ಲಾ ನನ್ನಿಂದ ದೂರವಾಗುತ್ತದೆಯೇ " ಎಂದು. ಮದುವೆಯ ಬಗ್ಗೆ ಅವಳಿಗಿರುವ ಕಲ್ಪನೆ ಅಷ್ಟೆ..&lt;br /&gt;&lt;br /&gt;ಒಂದು ಸಾಮಾಜಿಕ ಪಿಡುಗನ್ನು ಸರ್ವತೋಮುಖವಾಗಿ ಪರಿಚಯಿಸಿ ಅದರ ದುಷ್ಪರಿಣಾಮವನ್ನು ಮನರಂಜನೆಯ ಮಾಧ್ಯಮದ ಮೂಲಕ  ಚಿತ್ರಿಸಿರುವ ರೀತಿ ಅಚ್ಚರಿ ಹುಟ್ಟಿಸುತ್ತದೆ.&lt;span style="font-weight: bold; font-style: italic;"&gt;Education through Entertainment&lt;/span&gt;&lt;span style="font-style: italic;"&gt; &lt;/span&gt;ಎಂಬ ತತ್ವ ಇಲ್ಲಿ ನೂರಕ್ಕೆ ನೂರರಷ್ಟು ನಿಜವಾಗಿದೆ. ಎಲ್ಲಿಯೂ ಘೋಷಣೆಗಳಿಲ್ಲ.ಸಮಸ್ಯೆಯ ವೈಭವೀಕರಣವಿಲ್ಲ, ಆ ಜನರ ಸಂಸ್ಕೃತಿ,ಸಹಜ ಜೀವನ ಶೈಲಿ ಇವುಗಳ ಮೂಲಕವೇ ಸಮಸ್ಯೆಯ ಆಳಕ್ಕೆ ನೋಡುಗರನ್ನು ಕರೆದೊಯ್ಯುವ ರೀತಿ ಮನೋಜ್ಞವಾಗಿದೆ.  ಸಂಭ್ರಮದಿಂದ ಮದುವೆಯಾಗುವ ಆನಂದಿ ಅತಿ ಶೀಘ್ರದಲ್ಲಿಯೇ ತನ್ನ ತಾಯ್ನೆಲವನ್ನು, ತನ್ನ ಮಮತೆಯ ತಾಯ್ತಂದೆಯರನ್ನು, ತನ್ನ ಗೆಳತಿಯರನ್ನೆಲ್ಲಾ ಅಗಲಲೇ ಬೇಕಾದ ವಾಸ್ತವವನ್ನು ಅರಗಿಸಿಕೊಳ್ಳಬೇಕಾಗುತ್ತದೆ. ಆ ಪುಟ್ಟ ವಯಸ್ಸಿಗೇ  ಬಾಲ್ಯ ಸಹಜ ಆಟಪಾಟಗಳನ್ನು ಮರೆತು ದೊಡ್ಡ ಹೆಂಗಸಿನಂತೆ ಗೃಹಿಣಿಯ ಕರ್ತವ್ಯಗಳನ್ನು ನಿಭಾಯಿಸುವುದನ್ನೂ ಕಲಿಯಬೇಕಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ತಾನು ಪ್ರೀತಿಸುತ್ತಿದ್ದ ಪುಸ್ತಕಗಳನ್ನು ಮುಟ್ಟಲೇಬಾರದೆಂಬ ದಾದಿಸಾ ( ಆನಂದಿಯ ಅತ್ತೆಯ ಅತ್ತೆ !!) ಆಜ್ಞೆಯನ್ನು ಒತ್ತಾಯದಿಂದ ಪಾಲಿಸಬೇಕಾಗುತ್ತದೆ.&lt;br /&gt;&lt;br /&gt;ಧಾರಾವಾಹಿಯ ಪ್ರಾರಂಭದಲ್ಲಿ ಆನಂದಿಯ ಪಾತ್ರವೊಂದೇ ಪ್ರಧಾನವಾಗಿದ್ದರೂ ಕ್ರಮೇಣ ಬಾಲ್ಯವಿವಾಹಕ್ಕೊಳಗಾಗಿ ಬಾಲ ವಿಧವೆಯಾದ ಆನಂದಿಯ ಗೆಳತಿ ಫುಲೀಯ ಕತೆ, ಚಿಕ್ಕ ವಯಸ್ಸಿಗೇ ತನ್ನ ವಯಸ್ಸಿನ ಹುಡುಗನೊಂದಿಗೆ ಮನೆ ಬಿಟ್ಟು ಓಡಿಹೋಗಿ, ಅವನು ಕೈಕೊಟ್ಟು ಗರ್ಭಿಣಿಯಾಗಿ ಮನೆಗೆ ಹಿಂತಿರುಗಿ ಊರವರಿಂದ ಸಾವಿನ ಶಿಕ್ಷೆ ಎದುರಿಸಬೇಕಾದ ಚಂಪಾಳ ಕತೆ, ಬಡತನದ ಕಾರಣದಿಂದ ತಂದೆಯ ವಯಸ್ಸಿನ ವರನೊಂದಿಗೆ ಎರಡನೆಯ ಪತ್ನಿಯಾದ ಹದಿನೆಂಟರ ಹರಯದ  ಗೆಹನಾಳ ಕತೆ, ಹೀಗೆ ಅನೇಕ ಕವಲುಗಳೊಂದಿಗೆ ಕತೆ ಬೆಳೆಯುತ್ತಿದೆ. ಬಾಲ್ಯ ವಿವಾಹದಷ್ಟೇ ಭೀಕರವಾದದ್ದು ಅಗಾಧ ವಯಸ್ಸಿನ ಅಂತರದ ವಿವಾಹ ಎಂಬುದನ್ನೂ ಈ ಧಾರಾವಾಹಿ ಒತ್ತಿ ಒತ್ತಿ ಹೇಳುತ್ತಿದೆ.&lt;br /&gt;&lt;br /&gt;ಶಿಕ್ಷಕಿಯೊಬ್ಬಳು ಬಾಲ್ಯವಿವಾಹವನ್ನು ತಡೆಯಲು ಪ್ರಯತ್ನಿಸಿದಾಗ ಅವಳನ್ನು ದೂರದ ಊರಿಗೆ ವರ್ಗ ಮಾಡಿಸುವ ಹುನ್ನಾರ ಅವಳ ಪ್ರಯತ್ನಕ್ಕೆ ಮಣ್ಣೆರಚುತ್ತದೆ. ಆದರೆ ತನ್ನ ತಂದೆಯ ವಯಸ್ಸಿನ ವ್ಯಕ್ತಿಯೊಂದಿಗೆ ವಿವಾಹವಾದ ಗೆಹನಾ ಪ್ರತಿಭಟನೆಯ ಕಿಡಿಹೊತ್ತಿಸುವ ಮೂಲಕ ಕ್ರಾಂತಿ ಮನೆಯಿಂದಲೇ ಪ್ರಾರಂಭವಾಗಬೇಕೆಂಬ ಸೂಚನೆಯನ್ನೂ ನೀಡುತ್ತದೆ.ವಯಸ್ಸಾದ ಪತಿಯ ಸಹವಾಸದಿಂದ ನೋವುಣ್ಣುತ್ತಿದ್ದ ಗೆಹನಾ ಕಡೆಗೊಮ್ಮೆ ಧೈರ್ಯದಿಂದ " ನಿನ್ನ ಮಗಳ ವಯಸ್ಸಿಗಿಂತ  ಚಿಕ್ಕವಳಾದ ನನ್ನನ್ನು ಮದುವೆಯಾಗಲು ನಾಚಿಕೆಯಾಗಲಿಲ್ಲವೇ ?" ಎಂದು ಪ್ರಶ್ನಿಸುವುದನ್ನು ಕಂಡಾಗ ನಮ್ಮ ಹೃದಯವನ್ನೇ ಇರಿದಷ್ಟು ನೋವಾಗುತ್ತದೆ.&lt;br /&gt;&lt;br /&gt;ಅವಿಕಾ ಗೋರ್ ಆನಂದಿಯ ಪಾತ್ರದಲ್ಲಿ ಸರ್ವರ ಮನಸೂರೆಗೊಂಡಿದ್ದಾಳೆ. ಅವಳ ಅಭಿನಯ ಎಂಥವರಲ್ಲಿಯೂ ಬೆರಗು ಮೂಡಿಸುವಂತದ್ದು. ಅವಳಿಗೆ ಸರಿಸಾಟಿಯಾಗಿ ಬಾಲವರನಾಗಿ ಜಗದೀಶನ ಪಾತ್ರದಲ್ಲಿ ಅವಿನಾಶ್ ಮುಖರ್ಜಿಯ ಅಭಿನಯವೂ ಮೆಚ್ಚುಗೆಗೆ ಪಾತ್ರವಾಗುತ್ತದೆ. ಹೀಗೆ ಹೇಳಿದರೆ ಇತರ ಪಾತ್ರಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಪ್ರಾದೇಶಿಕತೆಯನ್ನು ಅದರ ಎಲ್ಲ ಸೂಕ್ಷ್ಮ ವಿವರಗಳ ಮೂಲಕ,ಧಾರಾವಾಹಿಯನ್ನು ನಿರ್ದೇಶಿಸುತ್ತಿರುವ ನಿರ್ದೇಶಕರ ಅದ್ಭುತ ಸಾಮರ್ಥ್ಯ ಅನೇಕ ಕಡೆಗಳಲ್ಲಿ ಗೃಹಭಂಗ ನಿರ್ದೇಶಿಸಿದ ಗಿರೀಶ್ ಕಾಸರವಳ್ಳಿಯವರನ್ನು ನೆನಪಿಗೆ ತರುತ್ತದೆ.ಈ ಧಾರಾವಾಹಿಯ ಮತ್ತೊಂದು ಪ್ಲಸ್ ಅಂಶವೆಂದರೆ ಅದರ ಶೀರ್ಷಿಕೆ ಗೀತೆ.ಆ ಗೀತೆಯನ್ನು ಕೇಳಿದ ಯಾರೂ ಅದನ್ನು ಪೂರ್ತಿ ಕೇಳದೆ ಇರುವುದಿಲ್ಲ. ರಾಜಾಸ್ಥಾನಿ ಹಿಂದಿಯ ಆ ಜಾನಪದಹಾಡು ಹೃದಯಸ್ಪರ್ಶಿಯಾಗಿದೆ. ಈ ಧಾರಾವಾಹಿಯ ಪಾತ್ರಗಳ ವಸ್ತ್ರ ವಿನ್ಯಾಸವಂತೂ ಸಂಪೂರ್ಣ ರಾಜಾಸ್ಥಾನೀ ಸೊಗಡಿನಿಂದ ಕೂಡಿದೆ.ಎಲ್ಲಾ ಪಾತ್ರಗಳು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿವೆ.ಇನ್ನೂ ಎಪ್ಪತ್ತರ ಆಸುಪಾಸಿನ ಕಂತಿನಲ್ಲಿರುವುದರಿಂದ ಮೆಗಾಧಾರಾವಾಹಿಗಳ ದುರ್ಗುಣ ( ರಬ್ಬರಿನಂತೆ ಎಳೆಯುವುದು ) ಇನ್ನೂ ಇದಕ್ಕೆ ಅಂಟಿಕೊಂಡಿಲ್ಲ.&lt;br /&gt;&lt;br /&gt;ಬಾಲನಟರನ್ನು ಅನೇಕ ಧಾರಾವಾಹಿಗಳಲ್ಲಿ ನೋಡುತ್ತೇವೆ. ಆದರೆ ಬಹುತೇಕ ಪಾತ್ರಗಳು ದೊಡ್ಡವರಂತೆಯೇ ಮಾತನಾಡುವುದು, ದೊಡ್ಡವರಂತೆ ತಮ್ಮನ್ನು ತಾವು project ಮಾಡಿಕೊಳ್ಳುವುದನ್ನು ನೋಡಿ ನೋಡಿ ಬೇಸತ್ತಿರುವ ಮನಸುಗಳಿಗೆ ನಿಜವಾದ ಅರ್ಥದಲ್ಲಿ ಬಾಲ್ಯ ಎಂದರೇನು ? ಮುಗ್ಧತೆ ಎಂದರೇನು ? ಅವು ಸಹಜವಾಗಿ ಕಳೆಯುವುದೆಂದರೇನು ? ಇದೆಲ್ಲದರ ಅನುಭವ , ಅರ್ಥ ಈ ಧಾರಾವಾಹಿಯನ್ನು ನೋಡಿದಾಗ ತಾನೇ ತಾನಾಗಿ ಆಗುತ್ತದೆ.&lt;br /&gt;&lt;br /&gt;ಈ ಧಾರಾವಾಹಿ ಪ್ರಸಾರವಾಗುವ ಚಾನೆಲ್ - ಕಲರ್ಸ್&lt;br /&gt;ಸಮಯ : ಸೋಮವಾರದಿಂದ ಶುಕ್ರವಾರ ರಾತ್ರಿ ೮ ಗಂಟೆಗೆ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8114402468197807042-1614626316181167477?l=battadatore.blogspot.com' alt='' /&gt;&lt;/div&gt;</content><link rel='replies' type='application/atom+xml' href='http://battadatore.blogspot.com/feeds/1614626316181167477/comments/default' title='Post Comments'/><link rel='replies' type='text/html' href='http://battadatore.blogspot.com/2008/11/blog-post.html#comment-form' title='18 Comments'/><link rel='edit' type='application/atom+xml' href='http://www.blogger.com/feeds/8114402468197807042/posts/default/1614626316181167477'/><link rel='self' type='application/atom+xml' href='http://www.blogger.com/feeds/8114402468197807042/posts/default/1614626316181167477'/><link rel='alternate' type='text/html' href='http://battadatore.blogspot.com/2008/11/blog-post.html' title='ಬಾಲಿಕಾವಧು'/><author><name>ಚಂದ್ರಕಾಂತ ಎಸ್</name><uri>http://www.blogger.com/profile/00490264860537389455</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='25' src='http://3.bp.blogspot.com/_4wQW2-q8XsA/SVIw-U299dI/AAAAAAAAADY/T9mtUHgBZhU/S220/blogfile12.jpg'/></author><thr:total>18</thr:total></entry><entry><id>tag:blogger.com,1999:blog-8114402468197807042.post-6547400016630598258</id><published>2008-10-25T18:49:00.000+05:30</published><updated>2009-01-21T16:18:05.621+05:30</updated><title type='text'>ಪ್ರೇಮ ಕುರುಡಾದದ್ದು ಏಕೆ !!!</title><content type='html'>&lt;span style="color: rgb(255, 0, 0);font-size:130%;" &gt;&lt;span style="font-weight: bold; font-style: italic;"&gt;&lt;br /&gt;ಪ್ರೇಮ ಕುರುಡಾದದ್ದು ಏಕೆ !!!&lt;/span&gt;&lt;/span&gt;&lt;br /&gt;&lt;br /&gt;ಬಹಳ ಹಿಂದೆ, ಈ ಭೂಮಿ ಮನುಷ್ಯ,, ಸೃಷ್ಟಿಯಾಗುವ ಮುಂಚೆ ನಡೆದ ಘಟನೆ ಇದು. ಮಾನವನನ್ನು ಸೃಷ್ಟಿ ಮಾಡುವ ಮುಂಚೆ ದೇವರು ಅವನಲ್ಲಿ ಸೇರಿಸಬೇಕಾದ ಗುಣಗಳನ್ನು- ಅಸೂಯೆ, ಆಲಸ್ಯ, ಕೋಪ, ಸುಳ್ಳು , ಫ್ರೀತಿ, ಚಾಡಿ,ಹುಚ್ಚು... ಮುಂತಾದ ಎಲ್ಲಾ ಗುಣಗಳನ್ನು ಬೇರೆ, ಬೇರೆ ಇರಿಸಿದ್ದ. ಒಮ್ಮೆ ಅವನು ತನ್ನ ಯಾವುದೋ ಕೆಲಸದಲ್ಲಿ ಮುಳುಗಿದ್ದಾಗ , ಸುಮ್ಮನೆ ತಮ್ಮಷ್ಟಕ್ಕೆ ಕುಳಿತು ಬೇಸರಗೊಂಡಿದ್ದ ಆ ಗುಣಗಳೆಲ್ಲಾ ಒಟ್ಟಾಗಿ ಸೇರಿ ಆಟ ಆಡಿ ಬೇಸರ ಕಳೆಯೋಣವೆಂದು ನಿರ್ಧರಿಸಿದವು. ಎಲ್ಲ ಗುಣಗಳೂ ಒಟ್ಟಾಗಿ ಸೇರಿ " ಕಣ್ಣಾಮುಚ್ಚಾಲೆ " ಆಡೋಣವೆಂದು ನಿರ್ಧರಿಸಿದವು.ಕೂಡಲೇ " ಹುಚ್ಚು " ಉನ್ಮಾದದಿಂದ " ಹುಡುಕುವ ಕೆಲಸ ನನಗೇ ಮೊದಲು" ಎಂದಿತು. ಅದರ ಅಬ್ಬರ, ಆರ್ಭಟ, ಮಿತಿಮೀರಿದ ಉತ್ಸಾಹ ನೋಡಿ ಇತರ ಗುಣಗಳೆಲ್ಲಾ ವಾದ ಮಾಡದೆ ಅದಕ್ಕೆ ಒಪ್ಪಿದವು.&lt;br /&gt;&lt;br /&gt;ಆಟ ಪ್ರಾರಂಭವಾಯಿತು.ಅಲ್ಲೇ ಇದ್ದ ಒಂದು ದೊಡ್ಡ ಮರದ ಬಳಿ ನಿಂತು ಕಣ್ಣುಮುಚ್ಚಿಕೊಂಡು " ಹುಚ್ಚು " ಒಂದು, ಎರಡು, ಮೂರು ...." ಎಂದು ಎಣಿಕೆ ಪ್ರಾರಂಭಿಸಿತು. ಎಲ್ಲಾ ಗುಣಗಳೂ ಅವಿತುಕೊಳ್ಳಲು ತೊಡಗಿದವು. ' ವಂಚನೆ ' ಅಲ್ಲೇ ಬಿದ್ದಿದ್ದ ತಿಪ್ಪೆಯ ರಾಶಿಯ ಮಧ್ಯೆ ಬಚ್ಚಿಟ್ಟುಕೊಂಡಿತು. ' ಸುಳ್ಳು ' ತಾನು ಒಂದು ಕಲ್ಲಿನ ಹಿಂದೆ ಬಚ್ಚಿಟ್ಟುಕೊಳ್ಳುವುದಾಗಿ ಹೇಳಿ ಕೊಳದ ತಳದಲ್ಲಿ ಮುಚ್ಚಿಟ್ಟುಕೊಂಡಿತು. ...೭೬, ೭೭ ೭೮ ಇಷ್ಟರಲ್ಲಾಗಲೇ ಬಹುಮಟ್ಟಿಗೆ ಎಲ್ಲಾ ಗುಣಗಳೂ ಅಡಗಿಕೊಂಡಿದ್ದವು. ಆದರೆ ಪ್ರೀತಿ ಮಾತ್ರ ಇನ್ನೂ ಅವಿತುಕೊಂಡಿರಲಿಲ್ಲ. ಪ್ರೀತಿಗೆ ಎಲ್ಲಿ ಮರೆಯಾಗಬೇಕೆಂದು ನಿರ್ಧರಿಸಲಾಗಲಿಲ್ಲ.ಇದರಲ್ಲಿ ಅಚ್ಚರಿಯೇನಿಲ್ಲ. ಪ್ರೀತಿ, ಪ್ರೇಮವನ್ನು ಯಾರಾದರೂ ಮುಚ್ಚಿಡಲು ಸಾಧ್ಯವೇ ? ...೯೫,೯೬,೯೭. ಅಷ್ಟರಲ್ಲಿ ಪ್ರೀತಿಗೆ ಒಂದು ಸುಂದರವಾದ ಗುಲಾಬಿ ಪೊದೆ ಕಾಣಿಸಿತು. ಕೋಡಲೇ ಆ ಪೊದೆಯ ಹಿಂದೆ ಪ್ರೀತಿ ಮರೆಯಾಯಿತು.&lt;br /&gt;&lt;br /&gt;ಎಣಿಕೆ ಮುಗಿಸಿ ಕಣ್ಣು ಬಿಟ್ಟಾಗ ಹುಚ್ಚಿನ ಕಣ್ಣಿಗೆ ಮೊದಲು ಬಿದ್ದಿದ್ದೇ' ಆಲಸ್ಯ'. ಎದ್ದು ಬಚ್ಚಿಟ್ಟುಕೊಳ್ಳಲು ಅದರ ಸೋಮಾರಿತನ ಅಡ್ಡವಾಗಿ ಅದು ಅಲ್ಲಿಯೇ ಬಿದ್ದುಕೊಂಡಿತ್ತು. ಅದನ್ನು ಹಿಡಿದ ಉತ್ಸಾಹದಿಂದ ಹುಚ್ಚು ನೇರವಾಗಿ ಕೊಳದ ಬಳಿ ಹೋಗಿ 'ಸುಳ್ಳನ್ನು' ಎಳೆ ತಂದಿತು. ಅದಕ್ಕೆ ಸುಳ್ಳಿನ ಸ್ವಭಾವ ಚೆನ್ನಾಗಿಯೇ ಗೊತ್ತಿತ್ತು. ಕೊಂಚ ಸಮಯದಲ್ಲಿಯೇ 'ಹುಚ್ಚು' ಎಲ್ಲಾ ಗುಣಗಳನ್ನೂ ಹುಡುಕಿತು, 'ಪ್ರೀತಿ'ಯೊಂದನ್ನು ಹೊರತು ಪಡಿಸಿ.ಪ್ರೀತಿ ಸಿಕ್ಕದ್ದಕ್ಕಾಗಿ ಹುಚ್ಚಿಗೆ ವಿಪರೀತ ಕೋಪ ಬಂದಿತು.ಅಷ್ಟರಲ್ಲಿ ಪ್ರೀತಿಯ ಬಗೆಗಿನ ಹೊಟ್ಟೆಕಿಚ್ಚಿನಿಂದ 'ಅಸೂಯೆ' 'ಚಾಡಿ'ಯ ಕಡೆ ನೋಡಿ ಅರ್ಥಪೂರ್ಣವಾಗಿ ನಕ್ಕಿತು. ಕೂಡಲೇ 'ಚಾಡಿ"ಯು ಪಿಸುಮಾತಿನಲ್ಲಿ ಹುಚ್ಚಿಗೆ " ನೀನು ಹುಡುಕುತ್ತಿರುವ "ಪ್ರೀತಿ" ಗುಲಾಬಿ ಪೊದೆಯ ಬಳಿ ಇದೆ' ಎಂದು ತಿಳಿಸಿತು. ಕೂಡಲೇ' ಹುಚ್ಚು' ಅಬ್ಬರ ಆರ್ಭಟದಿಂದ ಕೂಗುತ್ತಾ ರಭಸದಿಂದ ಗುಲಾಬಿಯ ಮೇಲೆ ಬಿದ್ದಿತು. ಮರುಕ್ಷಣವೇ ಕಿಠಾರನೆ ಯಾರೋ ನೋವಿನಿಂದ ಕಿರುಚಿದ ಧ್ವನಿ ಕೇಳಿಸಿತು. ನೋಡಿದರೆ ಗುಲಾಬಿಯ ಮುಳ್ಳುಗಳು ಪ್ರೀತಿಯ ಕಣ್ಣುಗಳನ್ನು ಚುಚ್ಚಿ ಕುರುಡು ಮಾಡಿತ್ತು.&lt;br /&gt;&lt;br /&gt;ಎಲ್ಲಾ' ಗುಣಗಳ' ಗಲಾಟೆಯ ಧ್ವನಿ ಕೇಳಿ ದೇವರು ಅಲ್ಲಿಗೆ ಬಂದು , ಕಣ್ಣು ಕುರುಡಾಗಿ ಗೋಳಾಡುತ್ತಿದ್ದ 'ಪ್ರೀತಿ'ಯನ್ನು ಕಂಡು ಕುಪಿತನಾಗಿ ಅದಕ್ಕೆ ಕಾರಣ ಯಾರೆಂದು ಪತ್ತೆ ಹಚ್ಚಿದನು.ನಂತರ ' ಹುಚ್ಚ'ನ್ನು ಕರೆದು " ಪ್ರೀತಿ ಕುರುಡಾದದ್ದು ನಿನ್ನಿಂದಲೇ . ಆದ್ದರಿಂದ ಇನ್ನು ಮುಂದೆ ಅದರೊಡನೆ ನೀನು ಇರಲೇ ಬೇಕು " ಎಂದು ಶಾಪಕೊಟ್ಟನು.&lt;br /&gt;&lt;br /&gt;ಆಂದಿನಿಂದ ಪ್ರೀತಿ ಕುರುಡಾಯಿತು.. ಮತ್ತು ಪ್ರೇಮಿಗಳೆಲ್ಲಾ ಹುಚ್ಚರಾದರು.....ಇಷ್ಟಲ್ಲದೆ .."&lt;span style="font-weight: bold; font-style: italic; color: rgb(204, 0, 0);"&gt; ಪ್ರೇಮಿ ಮತ್ತು ಹುಚ್ಚ ಒಂದೇ ದೋಣಿಯ ಪಯಣಿಗರು "&lt;/span&gt;ಎಂದು ಶೇಕ್ ಸ್ಪಿಯರ್ ಸುಮ್ಮನೆ ಹೇಳಿದ್ದಾನೆಯೇ ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8114402468197807042-6547400016630598258?l=battadatore.blogspot.com' alt='' /&gt;&lt;/div&gt;</content><link rel='replies' type='application/atom+xml' href='http://battadatore.blogspot.com/feeds/6547400016630598258/comments/default' title='Post Comments'/><link rel='replies' type='text/html' href='http://battadatore.blogspot.com/2008/09/blog-post_26.html#comment-form' title='33 Comments'/><link rel='edit' type='application/atom+xml' href='http://www.blogger.com/feeds/8114402468197807042/posts/default/6547400016630598258'/><link rel='self' type='application/atom+xml' href='http://www.blogger.com/feeds/8114402468197807042/posts/default/6547400016630598258'/><link rel='alternate' type='text/html' href='http://battadatore.blogspot.com/2008/09/blog-post_26.html' title='ಪ್ರೇಮ ಕುರುಡಾದದ್ದು ಏಕೆ !!!'/><author><name>ಚಂದ್ರಕಾಂತ ಎಸ್</name><uri>http://www.blogger.com/profile/00490264860537389455</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='25' src='http://3.bp.blogspot.com/_4wQW2-q8XsA/SVIw-U299dI/AAAAAAAAADY/T9mtUHgBZhU/S220/blogfile12.jpg'/></author><thr:total>33</thr:total></entry><entry><id>tag:blogger.com,1999:blog-8114402468197807042.post-5013469919597465639</id><published>2008-10-11T17:51:00.000+05:30</published><updated>2009-01-21T16:19:08.160+05:30</updated><category scheme='http://www.blogger.com/atom/ns#' term='ಹೆಣ್ಣು'/><title type='text'>ನಿನ್ನ ನೀನು ಮರೆತರೇನು ಸುಖವಿದೇ... ?</title><content type='html'>&lt;table class="PwUwPb XoqCub MMcQxe"&gt;&lt;tbody&gt;&lt;tr&gt;&lt;td class="eWTfhb"&gt;&lt;div class="XoqCub ice3Ad"&gt;&lt;div class="XoqCub"&gt;&lt;div class="XoqCub aWL81"&gt;&lt;div class="XoqCub"&gt;&lt;div class="XoqCub"&gt;&lt;div class="CNf1Cd InqsWb"&gt;&lt;div class="R7iiN c1norb"&gt;&lt;div class="R7iiN vHYYR" style="margin-left: 4px;"&gt;&lt;div class="wWwc8d" style="margin: -10px 0px 0px; padding: 0px;"&gt;&lt;div class="diLZtc"&gt;&lt;div class="XoqCub"&gt;&lt;div id=":1fg"&gt;&lt;div class="HprMsc" style=""&gt;&lt;div class="YrSjGe"&gt;&lt;div id=":1fh" class="ArwC7c ckChnd"&gt;&lt;div dir="ltr"&gt;&lt;br /&gt;&lt;br /&gt;ಸೀಮಾ  ಬ್ಯಾಂಕ್  ಉದ್ಯೋಗಿ. ಶಾಲಾ ದಿನಗಳಿಂದಲೂ  ಅತ್ಯಂತ  ಚುರುಕು ಸ್ವಭಾವದ  ಹುಡುಗಿ.  ಚಟುವಟಿಕೆಯ  ಚಿಲುಮೆ.  ಓದಿನಲ್ಲಿ, ಪಠ್ಯೇತರ  ಕಾರ್ಯಕ್ರಮಗಳಲ್ಲಿ,  ಒಳಾಂಗಣ, ಹೊರಾಂಗಣ  ಕ್ರೀಡೆಗಳಲ್ಲಿ  ಯಾವಾಗಲೂ  ಮುಂದು.  ತನ್ನ  ಕಾಲೇಜ್  ವಿದ್ಯಾಭ್ಯಾಸ  ಮುಗಿಯುವವರೆಗೂ  ಛಾಂಪಿಯನ್  ಪಟ್ಟ  ಅವಳದೇ.ಅವಳ  ಓದು,  ಜಾಣ್ಮೆ, ಕೆಲಸದಲ್ಲಿ  ಅವಳಿಗಿದ್ದ  ಆಸಕ್ತಿ,  ಹೊಸದನ್ನು  ಕಲಿಯಬೇಕೆಂಬ  ತುಡಿತ  ಇವೆಲ್ಲವನ್ನೂ  ನೋಡಿ  ಶ್ರೀನಾಥ್  ಅವಳನ್ನು  ಮದುವೆಯಾದ.ಒಟ್ಟಿನಲ್ಲಿ  ಅವರದು  ಸುಖೀ  ದಾಂಪತ್ಯ.  ಮಗ  ಅರ್ಜುನ್  ತಾಯಿಯದೇ  ಪಡಿಯಚ್ಚು..ಅದೇ  ಉತ್ಸಾಹ,  ಸೀಮಾ  ಅರ್ಜುನ್ ನ  ಜಾಣತನ,  ಚುರುಕು ಬುದ್ಧಿಯನ್ನು  ಆರಾಧನಾ  ಭಾವದಿಂದ  ನೋಡುತ್ತಾಳೆ.  ಅಷ್ಟೆ  ಆಗಿದ್ದಿದ್ದರೆ  ಯೋಚಿಸುವ  ಅಗತ್ಯ  ಇರುತ್ತಿರಲಿಲ್ಲ. ಆದರೆ  ಅವನ  ಜಾಣ್ಮೆ ಕಂಡು  ಬೆರಗುಗೊಳ್ಳುವುದರ  ಜೊತೆ  ತನಗೇ  ಅರಿವಿಲ್ಲದೆ  ತನ್ನ  ಬಗ್ಗೆ  ಕೀಳರಿಮೆ   ಬೆಳೆಸಿಕೊಂಡಿದ್ದಾಳೆ. ಮೊನ್ನೆ  ಅವಳ  ಮನೆಗೆ  ಹೋಗಿದ್ದಾಗ  ಅಲ್ಲೇ ಟಿ.ವಿ.  ನೋಡುತ್ತಿದ್ದ  ಮಗನನ್ನು  ಪರಿಚಯಿಸಿದಳು. ನಿಜಕ್ಕೂ   ಮುದ್ದಾದ  ಹುಡುಗ.  ಆರನೆಯ  ತರಗತಿ  ಓದುತ್ತಿದ್ದ  ಅರ್ಜುನ್  ಟಿ.ವಿ.ಯಲ್ಲಿ  ಟರ್ಮಿನೇಟರ್  ನೋಡುತ್ತಿದ್ದ. ಅವರ  ಅಮ್ಮ  ನನ್ನನ್ನು  ಪರಿಚಯಿಸಿದಾಗ  ಒಮ್ಮೆ  ನನ್ನತ್ತ  ತಿರುಗಿ " ಹಾಯ್  ಆಂಟಿ " ಎಂದು  ಹೇಳಿ  ಮತ್ತೆ  ಟಿ.ವಿ.  ನೋಡಲು  ಮುಂದುವರಿಸಿದ.  ಸೀಮಾ ಮಗನನ್ನೇ  ನೋಡುತ್ತಾ  ಹೆಮ್ಮೆಯಿಂದ  "  ನೋಡು,  ಅವನಿಗೆ  ಆ  ಇಂಗ್ಲೀಷ್  ಎಷ್ಟು  ಚೆನ್ನಾಗಿ  ಅರ್ಥವಾಗುತ್ತೆ !  ನನಗಂತೂ ಒಂದು  ವಾಕ್ಯಾನೂ  ಅರ್ಥವಾಗಲ್ಲ ".  ಅರ್ಜುನ್  ಮಖದಲ್ಲಿ  ಒಂದು  ರೀತಿಯ ಹೆಮ್ಮೆ ಕಂಡಂತಾಯಿತು.&lt;br /&gt;&lt;br /&gt;ನಾವಿಬ್ಬರೂ  ಮಾತನಾಡುತ್ತಿದ್ದಾಗ ನನ್ನ  ಮೊಬೈಲ್  ರಿಂಗಾಯಿತು.  ನಾನು  ಮಾತು  ಮುಗಿಸಿದ  ಕೂಡಲೇ  ಸೀಮಾ  "  ನಿನ್ನ  ಸೆಲ್  ನಂಬರ್  ಕೊಡು "  ಎಂದು  ಕೇಳಿದಳು.  ನಾನು  ಹೇಳುತ್ತಿದ್ದಂತೆಯೇ  " ಇರು  ಬಂದೆ "ಎಂದು   ಒಳಗೆ  ಹೋಗಿ  ಅವಳ  ಮೊಬೈಲ್  ತಂದು "ಅರ್ಜುನ್  ಆಂಟಿ ನಂಬರ್  ಇದರಲ್ಲಿ  ಸ್ಟೋರ್  ಮಾಡು "ಎಂದಳು.  ಅವನು  ಹೆಮ್ಮೆಯಿಂದ  "  ಹೇಳಿ  ಆಂಟಿ " ಎಂದ.  ನನಗೆ  ಆಶ್ಚರ್ಯವಾಯಿತು.  "  ಯಾಕೆ?  ನೀನೇ    ಎಂಟರ್  ಮಾಡಬಹುದಲ್ಲ.ಅವನನ್ನು   ಯಾಕೆ  ಕರೆದೆ ?" ಏಂದಾಗ  ಅರ್ಜುನ್  ನನ್ನ ಕಡೆ  ನೋಡುತ್ತಾ  "  ಆಂಟಿ  ಅಮ್ಮನಿಗೆ  ಅದೆಲ್ಲಾ  ಗೊತ್ತಾಗಲ್ಲ.  ನಾನೇ  ಅದೆಲ್ಲಾ ಮಾಡಿಕೊಡೋದು "  ಎಂದು  ನಗುತ್ತಾ  ಹೇಳಿದ. ನನಗೆ  ಆಶ್ಚರ್ಯವಾಯಿತು. ಕಾಲೇಜಿಗೇ  ಛಾಂಪಿಯನ್   ಆಗಿದ್ದ  ಸೀಮಾಗೆ  ಏನೂ  ಗೊತ್ತಾಗುವುದಿಲ್ಲ!!?  ಅವಳ  ಕಡೆ  ನೋಡಿದರೆ  ಮಗನನ್ನೇ  ಹೆಮ್ಮೆಯಿಂದ  ನೋಡುತ್ತಿದ್ದ  ಅವಳು  "  ಹೌದಪ್ಪಾ  ಅದೆಲ್ಲಾ  ಅರ್ಜುನ್  ಮಾಡಿಕೊಡುತ್ತಾನೆ ".&lt;br /&gt;&lt;br /&gt;ಇದು  ಸೀಮಾ  ಒಬ್ಬಳ  ಕತೆಯಲ್ಲ.  ಶಿಕ್ಷಕಿಯಾಗಿರುವ  ನಿರ್ಮಲಾ  ಇತ್ತೀಚೆಗೆ  ದ್ರೈವಿಂಗ್  ಕಲಿತು   ಹೊಸಾ  ಸ್ಕೂಟಿಯಲ್ಲಿ  ಶಾಲೆಗೆ  ಬಂದಾಗ  ,"ಅದು  ಎಷ್ಟು  ಮೈಲೇಜ್  ಕೊಡುತ್ತೇ? ಅದರ  fuel  ಟ್ಯಾಂಕ್  ಕೆಪಾಸಿಟಿ  ಎಷ್ಟು?"  ಮುಂತಾದ  ಸರಳ  ಪ್ರಶ್ನೆಗಳಿಗೂ ಅವಳ  ಉತ್ತರ  ಒಂದೇ.  "  ನನಗೇನೂ   ಗೊತ್ತಿಲ್ಲ.  ನಮ್ಮ  ಆದರ್ಶ್ ಗೆ  ಟ್ಯೂಶನ್ ಗೆ  ನನ್ನ  ಗಾಡಿ  ಕೊಡುವುದರಿಂದ  ನನ್ನ  ಗಾಡಿಯ  ಎಲ್ಲ  ವಿಚಾರವನ್ನೂ  ಅವನೇ  ನೋಡಿಕೊಳ್ತಾನೆ. ಟ್ಯಾಂಕ್  ಯಾವಾಗಾಲೂ  ತುಂಬಿರುವಂತೆ  ಗಮನಿಸಿಕೊಳ್ಳುತ್ತಾನೆ " ಯಥಾಪ್ರಕಾರ  ಇವಳ  ಮುಖದಲ್ಲೂ  ಮಗನ  ಬಗ್ಗೆ  ಹೆಮ್ಮೆ  ರಾರಾಜಿಸುತ್ತಿತ್ತು.ಅವಳ  ಮಗ  ಈಗ  ಎಂಟನೇ  ತರಗತಿಯಲ್ಲಿ  ಇದ್ದಾನೆ.ಅವನು  ಆರನೆಯ  ತರಗತಿಯಲ್ಲಿದ್ದಾಗಲೇ  ಅವರ  ಅಪ್ಪ  ಅವನಿಗೆ  ಗಾಡಿ  ಓಡಿಸುವುದನ್ನು ಕಲಿಸಿದ್ದರು.  ಆಗಲೇ  ಅವನು ಅವರಮ್ಮನನ್ನು ಡಬಲ್ ರೈಡ್  ಮಾಡುತ್ತಿದ್ದ.&lt;br /&gt;&lt;br /&gt;ಉಷಾ  ಒಂದು  ಎಂ.ಎನ್.ಸಿಯಲ್ಲಿ  ದುಡಿಯುತ್ತಿದ್ದವಳು  ಮಗಳು ಹುಟ್ಟಿದಾಗ  ಅವಳ  ಕಡೆ  ಫೂರ್ಣ ಗಮನ  ಹರಿಸಬೇಕೆಂದು  ಕೆಲಸ  ಬಿಟ್ಟಿದ್ದಳು.ಅವಳು  ಆರನೆಯ  ತರಗತಿ  ಮುಗಿಸುವವರೆಗೆ  ಅವಳೆಡೆ  ಪೂರ್ಣಗಮನ ಹರಿಸಿದ್ದು,  ಈ  ಕಾಲಕ್ಕೆ   ತಕ್ಕಂತೆ  ಸ್ವಿಮ್ಮಿಂಗ್,  ಸ್ಕೇಟಿಂಗ್, ಡ್ಯಾನ್ಸ್, ಸಂಗೀತ, ಕಂಪ್ಯೂಟರ್  -ಎಲ್ಲವನ್ನೂ   ಅನೂಷಾ  ಕರತಲಾಮಲಕ ಮಾಡಿಕೊಳ್ಳುತ್ತಿದ್ದಂತೆ ,ಅವಳಿಗೀಗ  ತನ್ನ   ಮೇಲ್ವಿಚಾರಣೆಯ  ಅಗತ್ಯ  ಅಷ್ಟಿಲ್ಲ ಎಂಬ  ಕಾರಣದಿಂದ  ತನ್ನ  ಹೆಚ್ಚಿನ  ಗಮನವನ್ನು  ಟಿ.ವಿ.ನೋಡುತ್ತಾ,  ನಿರಾಳವಾಗಿ ಕಾಲಕಳೆಯುವುದನ್ನು   ರೂಡಿಸಿಕೊಂಡಳು.ಹೀಗೇ  ಎರಡು  ವರ್ಷ  ಸರಿದಿದ್ದು ಅವಳ  ಗಮನಕ್ಕೇ   ಬರಲಿಲ್ಲ.ಗಮನಕ್ಕೆ  ಬರುವಷ್ಟರಲ್ಲಿ  ಮಗಳಿಗಿಂತ  ತಾನು  ಬಹಳ  ಹಿಂದುಳಿದಿರುವುದು  ಅರಿವಿಗೆ  ಬಂತು.  ಅನೂಷಳ  ಬಾಯಲ್ಲಿ  ಇತ್ತೀಚೆಗೆ  " ನಿನಗೆ  ಗೊತ್ತಾಗಲ್ಲ  ಬಿಡಮ್ಮ "  ಎಂಬ  ಮಾತು  ಮೇಲಿಂದ  ಮೇಲೆ  ಕೇಳಿ  ಬರುತ್ತಿದೆ.ಉಷಾಳೂ  ಸಹ  ತನಗೇನೂ  ಗೊತ್ತಿಲ್ಲ  ಎಂಬುದನ್ನೇ  ಸತ್ಯ  ಎಂದುಕೊಂಡಿದ್ದಾಳೆ.&lt;br /&gt;&lt;br /&gt;ಸುಮಾ ಕಾಲೇಜೊಂದರ ಉಪನ್ಯಾಸಕಿ. ಅವಳ ಮಗ ಇದೀಗ ತಾನೇ ಇಂಜಿನಿಯರಿಂಗ್ ಕಾಲೇಜಿನ ಮೆಟ್ಟಿಲು ಹತ್ತಿದ್ದಾನೆ. ಓದಿನಲ್ಲಿ ಪ್ರಚಂಡ. ಕಂಪ್ಯೂಟರ್ ಎಂದರೆ ಕರತಲಾಮಲಕ. ಕಂಪ್ಯೂಟರ್ ಮುಂದೆ  ಅವನ ಕೈಚಳಕ ನೋಡಿ ಸುಮಾ ದಂಗಾಗಿದ್ದಾಳೆ. ಅಷ್ಟೇ ಅಲ್ಲ. ಅವನೆದುರಿಗೇ ಯಾವಾಗಲೂ ಅವನ  ಕಂಪೂಟರ್ ಜ್ಞಾನವನ್ನು ಕೊಂಡಾಡಿದ್ದಾಳೆ. ನೀನೂ ಕಂಪ್ಯೂಟರ್ ಕಲಿ ಎಂದು ಪತಿ ಮೋಹನ ಅನೇಕ ಬಾರಿ ಹೇಳಿದ್ದಾನೆ. ಅವಳಿಗೆ ಮಾತ್ರ ಅದು ಅಲರ್ಜಿ. ಅದು ಬ್ರಹ್ಮ ವಿದ್ಯೆ ಎಂಬ ನಂಬಿಕೆ. ಆದರೀಗ ಕಾಲೇಜುಗಳಲ್ಲಿ ಉಪನ್ಯಾಸಕರೆಲ್ಲಾ ಕಂಪ್ಯೂಟರ್ ಬಳಸಿ ಪಾಠ ಮಾಡಿ ಎಂದು ಹೇಳುತ್ತಿದ್ದಾರೆ. ಮಗನ ಬಳಿ ಅದರ ಬಗ್ಗೆ ಕೇಳಿದರೆ ಅವಳಿಗೆ ಅರ್ಥವಾಗದಷ್ಟು ವೇಗವಾಗಿ ಹೇಳಿಕೊಡುತ್ತಾನೆ. ಸಹೋದ್ಯೋಗಿಗಳು  " ಪರವಾಗಿಲ್ಲಪ್ಪ ! ನಿಮಗೇನೂ ನಿಮ್ಮ ಮಗಾನೇ ಹೇಲಿಕೊಡುತ್ತಾನೆ " ಎಂದಾಗ ಪೆಚ್ಚು ನಗೆ ನಗುತ್ತಾಳೆ. ಕಂಪ್ಯೂತರ್ ತರಗತಿಗೆ ಹೋಗಿ ಕಲಿಯಲೂ ಅವಳಿಗೆ ಕೀಳರಿಮೆ ಕಾಡುತ್ತಿದೆ. ಇಂತಹ ಸಮಸ್ಯೆ ಬಹುಶಃ ಮೂವತ್ತು ಮೂವತೈದರ ಆಸುಪಾಸಿನ ಎಲ್ಲಾ ತಾಯಂದಿರ ಸಮಸ್ಯೆಯೂ ಆಗಿದೆ.&lt;br /&gt;&lt;br /&gt;ಸೀಮಾ, ಉಷಾ, ನಿರ್ಮಲಾ , ಸುಮಾ - ಇವರಲ್ಲಿ ಸಮಾನವಾಗಿರುವ ಒಂದು ಅಂಶವಿದೆ.  ಮಕ್ಕಳು  ಸ್ವಲ್ಪ  ದೊಡ್ದವರಾಗುತ್ತಲೇ ಅವರೆಲ್ಲರೂ ತಮಗೆ  ತಾವೇ  ಒಂದು  ರೀತಿಯ  ನಿವೃತ್ತ  ಜೀವನ  ಆಯ್ಕೆ  ಮಾಡಿಕೊಂಡು , ತಮಗಿಂತ  ಮಕ್ಕಳು  ತುಂಬ  ತಿಳಿದವರು ಬುದ್ಧಿವಂತರು  ಎಂಬ  ಭಾವದಿಂದಲೇ  ಕೃತಾರ್ಥತೆ  ಕಂಡುಕೊಳ್ಳುವ ಹಂತ ತಲುಪಿರುತ್ತಾರೆ. ಮಕ್ಕಳು  ಸ್ವಲ್ಪ  ದೊಡ್ಡವರಾಗುತ್ತಿದ್ದಂತೇ  ತಮ್ಮನ್ನು  ತಾವು  ಕೀಳು  ಎಂದು  ಭಾವಿಸುವ  ತಾಯಂದಿರ  ಪಟ್ಟಿ  ಬೆಳೆಯುತ್ತಾ  ಹೋಗುತ್ತದೆ. ತಂದೆಯರ  ವಿಷಯದಲ್ಲಿ  ಹೀಗಾಗುವುದು  ಅಪರೂಪ  ಎನ್ನಬಹುದು.ಹೀಗೇಕೆ ?  ಮೊದಮೊದಲು  ಮಕ್ಕಳು  ತಮಗಿಂತ  ಜಾಣರು  ಎಂಬ  ಭಾವದಿಂದ  ಪುಳಕಿತರಾಗುವ ತಾಯಂದಿರು  ಬಹುಬೇಗ ಸಂತೃಪ್ತಿಯ  ಹಂತಕ್ಕೆ  ತಲುಪಿ  ಮೈಮರೆತಿರುವಾಗಲೇ  ಇದ್ದಕ್ಕಿದ್ದಂತೆ  ತಮ್ಮ  ಹಾಗು  ತಮ್ಮ  ಮಕ್ಕಳ  ನಡುವಿನ  ಅಂತರ ಕಂದರವಾಗುವ  ಮಟ್ಟಕ್ಕೆ ತಲುಪಿರುವುದು ಅರಿವಿಗೆ ಬಂದು ತೀವ್ರ  ಖಿನ್ನತೆಗೆ ತುತ್ತಾಗುವ  ಸಾಧ್ಯತೆಯೇ  ಹೆಚ್ಚು.&lt;br /&gt;&lt;br /&gt;ಸಾಮಾನ್ಯವಾಗಿ  ಹೆಂಗಸರು  ಬಹುಬೇಗ ಭಾವನಾತ್ಮಕವಾಗಿ ಪರಾವಲಂಬಿಗಳಾಗಲು  ಇಚ್ಚಿಸುತ್ತಾರೆ.ಪತಿ ಹಾಗು  ಮಕ್ಕಳ  ಅಹಂ ನ್ನು  ತಣಿಸುತ್ತಾ  ತಮ್ಮನ್ನು  ತಾವು  ದಡ್ದರೆಂದು  ಬಿಂಬಿಸಿಕೊಳ್ಲುತ್ತಾ  ಅವರನ್ನು  ತೃಪ್ತಿಪಡಿಸುತ್ತಾ  ಕೃತಾರ್ಥರಾಗುತ್ತಾರೆ.ಇದರಿಂದ ತಮ್ಮ ತ್ಯಾಗಬುದ್ಧಿಗೆ   ಹೆಚ್ಚಿನ ಬೆಲೆ ಸಿಗುತ್ತದೆ ಎಂದುಕೊಳ್ಳುತ್ತಾರೆ. ಆದರೆ ಅದರ ಬದಲಿಗೆ ತಮ್ಮನ್ನು ಮಕ್ಕಳು ಅಸಡ್ಡೆಯಿಂದ ಕಂಡಾಗ ದುಃಖಿತರಾಗುತ್ತಾರೆ.ಮಕ್ಕಳು ಚೆನ್ನಾಗಿ ಓದಿ ಸಮಾಜದಲ್ಲಿ ಒಳ್ಳೆಯ ಸ್ಥಾನ ಪಡೆದುಕೊಳ್ಳಲೆಂಬುದು ಎಲ್ಲ ತಾಯ್ತಂದೆಯರ ಅಭಿಲಾಷೆಯಾಗಿರುತ್ತದೆ. ಮಕ್ಕಳಿಗೆ ಯಾವ ತೊಂದರೆಯೂ ಆಗಬಾರದೆಂದು ಅವರಿಗೆ ಯಾವ ರೀತಿ ಸಹಾಯ ಮಾಡುತ್ತಾರೆಂದರೆ ಅವರ ಎಲ್ಲ ಕೆಲಸಗಳನ್ನೂ ತಾವೇ ಮಾಡುತ್ತಾ , ತಾವಿರುವುದೇ ಅವರ ಸೇವೆಗಾಗಿ ಎಂಬ ಭಾವ ಮೂಡಿಸುತ್ತಾರೆ. ನನ್ನ ಗೆಳತಿಯೊಬ್ಬಳು ಕಾಲೇಜಿಗೆ ಹೋಗುವ ಮಗ ಸರಿಯಾಗಿ ತಿಂಡಿ ತಿನ್ನುವುದಿಲ್ಲವೆಂದು ಊಟದ ತಟ್ಟೆ ಹಿಡಿದುಕೊಂಡು ಅವನ ಬೆನ್ನ ಹಿಂದೆಯೇ ಓಡಾಡುತ್ತಾ ಅವನ ಬಾಯಿಗೆ ತುತ್ತಿಡುವುದನ್ನು ನೋಡಿ ದಂಗಾಗಿದ್ದೇನೆ. ಈ ರೀತಿಯ ಅತಿರೇಕದ ಪ್ರೀತಿಯಿಂದ ಅವನನ್ನು ನಿಷ್ಪ್ರಯೋಜಕನನ್ನಾಗಿಸಬಹುದೇ ಹೊರತು ಮತ್ತೇನಿಲ್ಲ.&lt;br /&gt;&lt;br /&gt;ತಾಯಂದಿರು ಮಕ್ಕಳ ದೃಷ್ಟಿಯಲ್ಲಿ ತಮ್ಮ ಘನತೆ ಉಳಿಸಿಕೊಂಡೂ ಪ್ರೀತಿಯನ್ನು ತೋರಿಸುವುದು ಹೇಗೆ ? ಕೀಳರಿಮೆಯ ಕವಚದಿಂದ ಹೊರಬರುವುದು ಹೇಗೆ ? ಸರಳ ಮಾತಿನ ಉತ್ತರವೆಂದರೆ ಮಕ್ಕಳೊಡನೆ ತಾವೂ ಬೆಳೆಯುವುದು !! ಅಂದರೆ ಮಕ್ಕಳು ಚಿಕ್ಕವರಿರುವಾಗ ಅವರಿಗೆ ಪಾಠ ಓದಿಸುವಾಗ ತಾವೂ ಅವರೊಂದಿಗೆ ಅದನ್ನು ಅರ್ಥಮಾಡಿಕೊಳ್ಳುತ್ತಾ ಬೆಳೆಯಬೇಕು. ತನಗಾಗಿ ದಿನದ ಸ್ವಲ್ಪ ಸಮಯವನ್ನು ಮೀಸಲಿಡಬೇಕು. ತನ್ನ ಬಗ್ಗೆ ತನಗೆ ಗೌರವವಿರಬೇಕು. ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಎಲ್ಲಕ್ಕಿಂತ ಮೊದಲು ಮನಸ್ಸು ಮಾಡಬೇಕಷ್ಟೆ. ಇದರೊಂದಿಗೆ ದೈನಂದಿನ ಆಗುಹೋಗುಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು.  ಇದು ಕಷ್ಟದ ಕೆಲಸವೇನಲ್ಲ. ಹೆಣ್ಣು ಯಾವುದೇ ವಿಷಯವನ್ನು ಬಹುಬೇಗ ಕಲಿಯುತ್ತಾಳೆ. ಇದೆಲ್ಲವನ್ನೂ ಬೆಳೆಸಿಕೊಂಡರೆ ಮಕ್ಕಳು ಇತರರೂ ಬೆಲೆ ಕೊಡುತ್ತಾರೆ. ಗೌರವಿಸುತ್ತಾರೆ. ಆದರೆ ಆತ್ಮವಿಶ್ವಾಸ ಅಹಂಕಾರದ ಗಡಿ ದಾಟುವುದು ಬೇಡ. ಏಕೆಂದರೆ ಅವೆರಡರ ನಡುವಿನ ಗೆರೆ ಬಹಳ ತೆಳುವಾಗಿದೆ.ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕೆಂದರೆ ಮಕ್ಕಳೋಡನೆ ಪ್ರೀತಿ ತೋರಿಸಬಾರದೆಂದಲ್ಲ. ಶಿಸ್ತು, ಪ್ರೀತಿ ಇವೆರಡನ್ನೂ ಬ್ಯಾಲೆನ್ಸ್ ಮಾಡಬೇಕು.&lt;br /&gt;&lt;br /&gt;&lt;br /&gt;&lt;/div&gt; &lt;/div&gt;&lt;div class="LYI6Sd ckChnd"&gt;&lt;div class="eNXyxd"&gt;&lt;table class="EWdQcf"&gt;&lt;tbody&gt;&lt;tr&gt;&lt;td&gt;&lt;br /&gt;&lt;/td&gt;&lt;td&gt;&lt;br /&gt;&lt;/td&gt;&lt;td&gt;&lt;br /&gt;&lt;/td&gt;&lt;td&gt;&lt;br /&gt;&lt;/td&gt;&lt;td&gt;&lt;br /&gt;&lt;/td&gt;&lt;td class="bEgJye"&gt;&lt;br /&gt;&lt;/td&gt;&lt;/tr&gt;&lt;/tbody&gt;&lt;/table&gt;&lt;div class="Gi6zqd ccqOyd"&gt;&lt;textarea id=":1ed" class="gV2Gwc"&gt;&lt;/textarea&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;/td&gt;&lt;td class="eWTfhb"&gt;&lt;br /&gt;&lt;/td&gt;&lt;td class="eWTfhb"&gt;&lt;br /&gt;&lt;/td&gt;&lt;/tr&gt;&lt;/tbody&gt;&lt;/table&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8114402468197807042-5013469919597465639?l=battadatore.blogspot.com' alt='' /&gt;&lt;/div&gt;</content><link rel='replies' type='application/atom+xml' href='http://battadatore.blogspot.com/feeds/5013469919597465639/comments/default' title='Post Comments'/><link rel='replies' type='text/html' href='http://battadatore.blogspot.com/2008/10/blog-post_11.html#comment-form' title='12 Comments'/><link rel='edit' type='application/atom+xml' href='http://www.blogger.com/feeds/8114402468197807042/posts/default/5013469919597465639'/><link rel='self' type='application/atom+xml' href='http://www.blogger.com/feeds/8114402468197807042/posts/default/5013469919597465639'/><link rel='alternate' type='text/html' href='http://battadatore.blogspot.com/2008/10/blog-post_11.html' title='ನಿನ್ನ ನೀನು ಮರೆತರೇನು ಸುಖವಿದೇ... ?'/><author><name>ಚಂದ್ರಕಾಂತ ಎಸ್</name><uri>http://www.blogger.com/profile/00490264860537389455</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='25' src='http://3.bp.blogspot.com/_4wQW2-q8XsA/SVIw-U299dI/AAAAAAAAADY/T9mtUHgBZhU/S220/blogfile12.jpg'/></author><thr:total>12</thr:total></entry><entry><id>tag:blogger.com,1999:blog-8114402468197807042.post-5335877814635075697</id><published>2008-09-27T14:52:00.000+05:30</published><updated>2009-01-21T16:20:10.257+05:30</updated><category scheme='http://www.blogger.com/atom/ns#' term='ಹೃದಯದ ಭಾವ'/><category scheme='http://www.blogger.com/atom/ns#' term='ಪ್ರೇಮದ ತೀವ್ರತೆ'/><title type='text'>ಹೃದಯದ ಭಾಷೆ</title><content type='html'>&lt;span style="font-style: italic; color: rgb(255, 0, 0);font-size:130%;" &gt;&lt;span style="font-weight: bold;"&gt;&lt;br /&gt;&lt;/span&gt;&lt;/span&gt;&lt;br /&gt;&lt;div id=":10a" class="ArwC7c ckChnd"&gt;&lt;br /&gt;ಆತ ಆಕೆ ಯುವಪ್ರೇಮಿಗಳು.ಅವರಿಬ್ಬರ ನಡುವಿನ ಸಂಭಾಷಣೆ ಹೀಗಿತ್ತು.&lt;/div&gt;&lt;br /&gt;&lt;b&gt; &lt;/b&gt;ಆಕೆ : ಕೃಷ್ಣ ನೀನು ನನ್ನಲ್ಲಿ ಏನನ್ನು ಕಂಡು ಇಷ್ಟಪಟ್ಟೆ ? ಏನನ್ನು ಕಂಡು ಪ್ರೇಮಿಸಿದೆ ?&lt;br /&gt;&lt;br /&gt;ಕೃಷ್ಣ : ರಾಧ ಕಾರಣವೇನೋ ತಿಳಿಯದು. ಆದರೆ ನಾನು ನಿನ್ನನ್ನು ಮನಸಾರೆ ಪ್ರೇಮಿಸುವೆ.&lt;br /&gt;&lt;br /&gt;ರಾಧ : ಏನಿದು ಕೃಷ್ಣ ?,  ಕಾರಣ ಹೇಳಲೂ ತಿಳಿಯದ ನೀನು ನನ್ನನ್ನು ಹೇಗೆ ತಾನೆ ಇಷ್ಟ ಪಡುವೆ? ಹೇಗೆ ತಾನೇ ಪ್ರೇಮಿಸುವೆ.?&lt;br /&gt;&lt;br /&gt;ಕೃ    : ರಾಧ, ನಿಜವಾಗಿಯೂ ನನಗೆ ಕಾರಣ ಗೊತ್ತಿಲ್ಲ. ಆದರೆ ನಾನು ನಿನ್ನನ್ನು ಪ್ರೀತಿಸುತ್ತಿರುವೆನೆಂಬುದನ್ನು ರುಜುವಾತು ಪಡಿಸುವೆ.&lt;br /&gt;&lt;br /&gt;ರಾಧ :( ಅಸಮಾಧಾನದಿಂದ)  ರುಜುವಾತು!  ಉಹೂ ನನಗೆ ಕಾರಣ ಬೇಕು. ಲೀಲಾಳ ಪ್ರೇಮಿ ಅವಳನ್ನು ಪ್ರೇಮಿಸುತ್ತಿರುವುದಕ್ಕೆ ಕಾರಣ ಕೊಟ್ಟಿರುವನಂತೆ. ನೀನು ಮಾತ್ರ ಕಾರಣ ಹೇಳುತ್ತಿಲ್ಲ.&lt;br /&gt;&lt;br /&gt;ಕೃ   : (ರಾಧಾಳ ಅಸಮಾಧಾನದ ಕಾರಣ ಅರಿತು ) ಆಯ್ತು. ಕಾರಣ ಹೇಳಲು ಪ್ರಯತ್ನಿಸುವೆ. ಮ್ ಮ್ ನಾನು ನಿನ್ನನ್ನು ಪ್ರೇಮಿಸುತ್ತಿರುವೆ. ಏಕೆಂದರೆ ನೀನು ತುಂಬಾ ಸುಂದರವಾಗಿರುವೆ.... ಏಕೆಂದರೆ ನಿನ್ನ ದನಿ  ಇಂಪಾಗಿದೆ.......ಏಕೆಂದರೆ ನಿನಗೆ ನನ್ನ ಬಗ್ಗೆ ತುಂಬಾ&lt;br /&gt;ಕಳಕಳಿಯಿದೆ ....ನೀನು ನನ್ನನ್ನು ತುಂಬಾ ಪ್ರೀತಿಸುವೆ.  ನಿನ್ನ ಆಲೋಚನಾಶಕ್ತಿ, ನಿನ್ನ ನಗೆ,  ಒಟ್ಟಾರೆಯಾಗಿ ನಿನ್ನ ಒಂದೊಂದು ನಡೆ ನುಡಿಯೂ  ಸುಂದರವಾಗಿದ್ದು ನನಗೆ ಸಂತಸ ನೀಡುತ್ತದೆ.    &lt;br /&gt;ಕೃಷ್ನನ ಉತ್ತರ ರಾಧಾಳಿಗೆ  ತೃಪ್ತಿ ತಂದಿತು.&lt;br /&gt;&lt;br /&gt;ಈ ಸಂಭಾಷಣೆ ನಡೆದ ಕೆಲವೇ ದಿನಗಳಲ್ಲಿ ದುರದೃಷ್ಟವಶಾತ್ ಅಪಘಾತಕ್ಕೆ ಸಿಲುಕಿ ರಾಧಾಳ ಸ್ಥಿತಿ ಚಿಂತಾಜನಕವಾಯಿತು. ಅವಳೀಗ ಉಸಿರಾಡುವ ಜೀವಚ್ಛವವಾದಳು.&lt;br /&gt;&lt;br /&gt;ರಾಧಾಳನ್ನು ನೋಡಲು ಬಂದ ಕೃಷ್ಣ ಅವಳ ಬಳಿಯಲ್ಲಿ ಒಂದು ಪತ್ರವನ್ನಿಟ್ಟ. ಅದರಲ್ಲಿ ಹೀಗಿತ್ತು.&lt;br /&gt;&lt;br /&gt;ಪ್ರಿಯ ರಾಧಾ&lt;br /&gt;ನಿನ್ನ ಇನಿದನಿಗಾಗಿ ನಾ ನಿನ್ನ ಪ್ರೀತಿಸಿದೆ. ನೀನೀಗ ಮಾತನಾಡಬಲ್ಲೆಯಾ ? ಇಲ್ಲ. ಆದ್ದರಿಂದ ನಾ ನಿನ್ನ ಪ್ರೇಮಿಸಲಾರೆ..... ನಿನ್ನ ನಿಜವಾದ ಕಳಕಳಿಗಾಗಿ ನಾ ನಿನ್ನ ಪ್ರೀತಿಸಿದೆ. ಈಗ ನೀನು ನನ್ನ ಬಗ್ಗೆ ಯಾವುದೇ  ಕಳಕಳಿ ತೋರಿಸಲಾರೆ. ಆದ್ದರಿಂದ ನಾ  ನಿನ್ನ ಪ್ರೇಮಿಸಲಾರೆ. ..ನಿನ್ನ ಸುಂದರ ನಗೆಗಾಗಿ , ನಿನ್ನ ಪ್ರತಿಯೊಂದು ನಡೆ ನುಡಿಗಾಗಿ ನಾ ನಿನ್ನ ಪ್ರೀತಿಸಿದೆ. ನೀನೀಗ ನಗಬಲ್ಲೆಯಾ ಗೆಳತಿ ?   ನಡೆಯಬಲ್ಲೆಯಾ ? ಇಲ್ಲ ಇಲ್ಲ.  ಆದ್ದರಿಂದ ನಾ ನಿನ್ನ ಪ್ರೇಮಿಸಲಾರೆ.ಪ್ರೇಮಕ್ಕೆ ಕಾರಣ ಇರಲೇಬೇಕೆನ್ನುವುದಾದರೆ ನಾನೀಗ ನಿನ್ನನ್ನು ಪ್ರೇಮಿಸಲು ಯಾವ ಕಾರಣವೂ ಇಲ್ಲ!!!!     ಆದರೆ ನಾನೀಗಲೂ ನಿನ್ನನ್ನು  ಪ್ರೇಮಿಸುವೆ.!!  ಏಕೆಂದರೆ ಪ್ರೇಮ ಕಾರಣಗಳಿಂದ ಹುಟ್ಟುವುದಿಲ್ಲ.!!!!&lt;br /&gt;&lt;br /&gt;&lt;br /&gt;&lt;span style="font-weight: bold;"&gt;    " ಪ್ರಪಂಚದಲ್ಲಿ  ಅತಿ ಶ್ರೇಷ್ಟವಾದದ್ದನ್ನು ಮತ್ತು ಅತಿ ಸುಂದರವಾದದ್ದನ್ನು ಕಣ್ಣಿನಿಂದ ನೋಡಲಾಗದು ಹಾಗೂ ಕೈ ಚಾಚಿ&lt;/span&gt; &lt;span style="font-weight: bold;"&gt;ಮುಟ್ಟಲಾಗದು.&lt;br /&gt;ಅದರ ಶ್ರೇಷ್ಟತೆ ಮತ್ತು ಸೌಂದರ್ಯ ಕೇವಲ ಹೃದಯಕ್ಕೆ ಮಾತ್ರ ಅರಿವಾಗುವುದು.&lt;br /&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;&lt;br /&gt;ಪ್ರೇಮ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹೃದಯದ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಭಾಷೆ&lt;/span&gt;&lt;span style="color: rgb(204, 0, 0);"&gt; "&lt;br /&gt;&lt;br /&gt;&lt;span style="color: rgb(102, 102, 102);"&gt;ಅಂತರ್ಜಾಲದಲ್ಲಿ ಓದಿದ ತುಣುಕೊಂದರ ಪ್ರೇರಣೆ&lt;/span&gt;&lt;br /&gt;&lt;/span&gt;&lt;/span&gt;&lt;span style="font-weight: bold;"&gt;    &lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8114402468197807042-5335877814635075697?l=battadatore.blogspot.com' alt='' /&gt;&lt;/div&gt;</content><link rel='replies' type='application/atom+xml' href='http://battadatore.blogspot.com/feeds/5335877814635075697/comments/default' title='Post Comments'/><link rel='replies' type='text/html' href='http://battadatore.blogspot.com/2008/09/blog-post_27.html#comment-form' title='8 Comments'/><link rel='edit' type='application/atom+xml' href='http://www.blogger.com/feeds/8114402468197807042/posts/default/5335877814635075697'/><link rel='self' type='application/atom+xml' href='http://www.blogger.com/feeds/8114402468197807042/posts/default/5335877814635075697'/><link rel='alternate' type='text/html' href='http://battadatore.blogspot.com/2008/09/blog-post_27.html' title='ಹೃದಯದ ಭಾಷೆ'/><author><name>ಚಂದ್ರಕಾಂತ ಎಸ್</name><uri>http://www.blogger.com/profile/00490264860537389455</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='25' src='http://3.bp.blogspot.com/_4wQW2-q8XsA/SVIw-U299dI/AAAAAAAAADY/T9mtUHgBZhU/S220/blogfile12.jpg'/></author><thr:total>8</thr:total></entry><entry><id>tag:blogger.com,1999:blog-8114402468197807042.post-3075481004339105151</id><published>2008-09-19T22:17:00.000+05:30</published><updated>2009-01-21T16:21:29.158+05:30</updated><title type='text'>ನಾನೂ ಗಾಡಿ ಓಡಿಸಿದೆ -೨</title><content type='html'>ಗಾಡಿಗೆ ಕೆಲವು ವರ್ಷಗಳಿಂದ &lt;span style="font-size:100%;"&gt;ಹೊಂದಿಕೊಂಡಿದ್ದ ನನಗೆ ಅದಿಲ್ಲದೆ ಇರಲಾಗದೆಂಬ ಸತ್ಯದ ಅರಿವಾಯಿತು. ಆದರೆ ಹಳೆಯ ಆ ಗಾಡಿಯನ್ನು ಮಾತ್ರ ಮುಟ್ಟುವುದಿಲ್ಲವೆಂಬ ನನ್ನ ನಿರ್ಧಾರ ಮಾತ್ರ ಅಚಲವಾಗಿತ್ತು.  ಅದರ ಫಲವಾಗಿ ಬಂದದ್ದೇ ಹೊಚ್ಚಹೊಸ, ಮಿರಮಿರ ಮಿಂಚುವ ಕೆಂಬಣ್ಣದ ಲೂನಾ ಮ್ಯಾಗ್ನಮ್. ಆ ಗಾಡಿಯನ್ನು ಆಯ್ಕೆ ಮಾಡಿದಾಗ , ಕೊಂಡುಕೊಂಡಾಗ ಇದ್ದ ಆನಂದ , ಸಂಭ್ರಮ ಗಾಡಿಯನ್ನು ಓಡಿಸಲು ಪ್ರಾರಂಭಿಸಿದ ಮೇಲೆ ಉಳಿಯಲಿಲ್ಲ!  &lt;/span&gt;ಇದರಲ್ಲಿ ಆ ಗಾಡಿಯ ತಪ್ಪೇನೂ ಇಲ್ಲ ಬಿಡಿ. ನನ್ನ ಎತ್ತರಕ್ಕೆ ಆ ಗಾಡಿ ಹೊಂದಿ ಬರಲಿಲ್ಲ ಅಷ್ಟೆ!ಸೀಟಿನ ಮೇಲೆ ಕುಳಿತರೆ ಸಿಂಹಾಸನದ  ಮೇಲೆ ಕುಳಿತಂತೆ ಭಾಸವಾಗುತ್ತಿತ್ತು. ಬ್ರೇಕ್ ಹಾಕುವಾಗ ಎರಡು ಕಾಲುಗಳು ನೆಲಕ್ಕೆ ತಾಗುತ್ತಿರಲಿಲ್ಲ. ಏನು ಮಾಡುವುದು ? ಇಷ್ಟಪಟ್ಟು ಕೊಂಡ ಗಾಡಿ. ಹಾಗೂ ಹೀಗೂ ಒಂದೆರಡು ವರ್ಷ ಕಳೆಯುವಷ್ಟರಲ್ಲಿ ಮಾರುಕಟ್ಟೆಗಿಳಿಯಿತು ಸ್ಕೂಟಿ .ಹೆಸರಿನಂತೆಯೇ ಮುದ್ದಾದ ಗಾಡಿ. ( ದಶಕದ ಹಿಂದೆ ಮೊಪೆಡ್ ಗಳಲ್ಲೇ ಹೊಸ ಸಂಚಲನ ಉಂಟು ಮಾಡಿದ ಗಾಡಿ " ಸ್ಕೂಟಿ ")&lt;br /&gt;&lt;br /&gt;ಅಂತೂ ನನ್ನ ಮನಸೆಳೆದ ಸ್ಕೂಟಿಯ ದೆಸೆಯಿಂದ ನನ್ನ ಮ್ಯಾಗ್ನಮ್ ಮತ್ತಷ್ಟು ಸುಮಾರಾಗಿ ಕಾಣತೊಡಗಿತು.ಕೊಳ್ಳಬೇಕೆಂಬ ನಿರ್ಧಾರ ಗಟ್ಟಿಯಾಯಿತು. ಈ ಬಾರಿ ಹಿಂದೆ ಮಾಡಿದ ತಪ್ಪು ಮಾಡಲಿಲ್ಲ.  ಶೋರೂಮ್ ಗೆ ಹೋಗಿ ಟ್ರಯಲ್ ಸವಾರಿ ಮಾಡಿದೆ. ಬಹಳ ಆರಾಮದಾಯಕ ಎನಿಸಿತು. ಸಾಮಾನಿಟ್ಟುಕೊಳ್ಳಲು ಇರುವ ಅನುಕೂಲ ಅತ್ಯಾಕರ್ಷಕವಾಗಿತ್ತು. ಪರಿಣಾಮ ಮ್ಯಾಗ್ನಮ್ ನ್ನು ಬೀಳ್ಕೊಟ್ಟು ಸ್ಕೂಟಿಯನ್ನು ಬರಮಾಡಿಕೊಂಡಾಯಿತು. ಅಷ್ಟೇ ಅಲ್ಲ ಬರಬರುತ್ತಾ ಅದು ನನ್ನ ಆಪ್ತ ಗೆಳತಿಯಾಯಿತು.&lt;br /&gt;&lt;br /&gt;ಅದೇ ಸಮಯದಲ್ಲಿ ಮನೆಗೆ  ಹೊಸ ಕಾರು ಬಂದಾಗ ಎಲ್ಲರೂ ಕಾರ್ ಡ್ರೈವಿಂಗ್ ಕಲಿಯುವಂತೆ ವರಾತ ಮಾಡಲಾರಂಬಿಸಿದರು. ಒಲ್ಲದ ಮನಸ್ಸಿನಿಂದಲೇ ಕಲಿಯಲಾರಂಭಿಸಿದೆ. ಯಾಕೋ ಆ ಕ್ಲಚ್ , ಗೇರು ,ಬ್ರೇಕು - ಇವುಗಳ ತಲೆಬುಡ ಅರ್ಥವಾಗಲಿಲ್ಲ. ನನಗೆ ಇಷ್ಟವಾಗಿದ್ದು ಸ್ಟಿಯರಿಂಗ್ ವೀಲ್ ಮಾತ್ರ. ಸಿನಿಮಾಗಳಲ್ಲಿ ತೋರಿಸುವಂತೆ ಸುಮ್ಮನೆ ಅದನ್ನು ತಿರುಗಿಸುತ್ತಾ ಹೋದರೆ ಎಷ್ಟು ಚೆನ್ನ ಅನಿಸಿತು. ಅಂತೂ ಕಾರ್ ಡ್ರೈವಿಂಗ್ ಪೂರ್ತಿ ಕಲಿಯದೆ  ದೊಡ್ಡ ನಮಸ್ಕಾರ ಹಾಕಿದೆ.&lt;br /&gt;&lt;br /&gt;ಸ್ಕೂಟಿಯೊಂದಿಗಿನ ನನ್ನ ಒಡನಾಟಕ್ಕೆ ಇದೀಗ ಹತ್ತು ವರ್ಷ ಸಂದಿದೆ.  ಚಿಕ್ಕಪುಟ್ಟ ಅವಘಡಗಳಾಗಿವೆ. ನನಗಿಂತ ಹೆಚ್ಚಾಗಿ ನನ್ನ ಗಾಡಿಗೇ ಹೆಚ್ಚು ಪೆಟ್ಟಾಗಿದೆ.ವಿಚಿತ್ರವೆಂದರೆ ಗಾಡಿ ಹಳೆಯದಾದಷ್ಟೂ ಅದರೊಂದಿಗೆ ನನ್ನ ಆತ್ಮೀಯತೆ ಆಳವಾಗಿ ಬೆಳೆಯುತ್ತಾ ಇದೆ. ಅದಕ್ಕೆ  ವಯಸ್ಸಾಗುತ್ತಾ ಆಗುತ್ತಾ ಮೆಕ್ಯಾನಿಕ್ ಬಳಿ ಕರೆದೊಯ್ಯುವುದೂ ಹೆಚ್ಚಾಗಿದೆ.ಆಶ್ಚರ್ಯವೆಂದರೆ ಮೊದಲಿನಂತೆ ಅದರ ಮೇಲೆ ನನಗೆ ಅಸಮಾಧಾನವಾಗುತ್ತಿಲ್ಲ. ಗಾಡಿ ಕೊಂಡುಕೊಂಡಾಗ ಹಾಕಿಕೊಂಡ ನಿಯಮಗಳಲ್ಲಿ ಹಿಂಬದಿ ಸೀಟಿನಲ್ಲಿ ಯಾರನ್ನೂ ಕೂರಿಸಿಕೊಳ್ಳುವುದಿಲ್ಲ  ಎಂಬ ನಿಯಮವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದೇನೆ. ವೃತ್ತಿಯಿಂದ ನಿವೃತ್ತಳಾಗುವವೆರಗೂ ನನ್ನ ಅದರ ಮಧುರ ಬಾಂಧವ್ಯ ಹೀಗೇ ಇರಲೆಂದು ಮನಸ್ಸಿನಲ್ಲಿಯೇ ಆಶಿಸಿದ್ದೇನೆ.&lt;br /&gt;&lt;br /&gt;ಆದರೆ ನನ್ನವರು ಮಾತ್ರ ಈ ಮಾತನ್ನು ಬಿಲ್ ಕುಲ್ ಒಪ್ಪುವುದಿಲ್ಲ. ಈಗಾಗಲೇ ಹತ್ತು ವರ್ಷ ಓಡಿದ ಗಾಡಿಗೆ ವಿದಾಯ ಹೇಳಿ ಹೊಸಗಾಡಿ ಕೊಳ್ಳಲು ಇದೇ ಸರಿಯಾದ ಸಮಯ ಅನ್ನುತ್ತಿದ್ದಾರೆ.ಈ ಮಾತಿಗೆ ಒತ್ತು ಕೊಡುವ ಹಾಗೆ ಮೆಕ್ಯಾನಿಕ್ ಬಳಿ ಪ್ರತಿ ಬಾರಿ ಹೋದಾಗಲೂ  " ಗಾಡಿ ಬದಲಿಸಬಾರದೇ" ?ಎಂಬ ಪಲ್ಲವಿ ಹಾಡುತ್ತಾನೆ. ಮಾರುಕಟ್ಟೆಯಲ್ಲಿ ವಿಧವಿಧವಾದ ಅತ್ಯಾಕರ್ಷಕ ಗಾಡಿಗಳು ಬಂದಿವೆ. ನೋವಾ,  ಆಕ್ಟಿವಾ ಹೊಂಡಾ, ಪ್ಲೆಶರ್ ಮುಂತಾದವು ಕೈಬೀಸಿ ಕರೆಯುತ್ತಿವೆ. ಎಲ್ಲಕ್ಕಿಂತ ಹೆಚ್ಚಾಗಿ ಸ್ಕೂಟಿಯ ಅತ್ಯಾಧುನಿಕ ರೂಪ"&lt;span style="font-style: italic; font-weight: bold; color: rgb(0, 102, 0);"&gt; ಸ್ಕೂಟಿ ಪೆಪ್ ಪ್ಲಸ್ " &lt;/span&gt; ಬೇರೆ ಬಂದಿದೆ. ಸೆಲ್ಫ್ ಸ್ಟಾರ್ಟರ್ ಎಂಬ ಆಮಿಷವನ್ನೂ ತಳ್ಳಿಹಾಕಲಾಗುತ್ತಿಲ್ಲ್ಲ.&lt;br /&gt;&lt;br /&gt;ಮನಸ್ಸು ಇತ್ತೀಚೆಗೆ ದ್ವಂದ್ವದಲ್ಲಿ ತೊಳಲಾಡುತ್ತಿದೆ. ಇತ್ತ ನನ್ನ ಹಳೆಯ ಸಖಿಯನ್ನೂ ಬಿಡಲಾರೆ, ಅತ್ತ ಅವಳ ಕಿರಿಯ ತಂಗಿಯ ಆಕರ್ಷಣೆಯಿಂದಲೂ ತಪ್ಪಿಸಿಕೊಳ್ಳಲಾರೆ.  ಮನಸ್ಸು ತೂಗುಯ್ಯಾಲೆಯಾಡುತ್ತಿದೆ. " ಟು ಬಯ್ ಆರ್ ನಾಟ್ ಟು ಬಯ್ " ಎಂಬಂತಾಗಿದೆ ನನ್ನ ಸ್ಥಿತಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8114402468197807042-3075481004339105151?l=battadatore.blogspot.com' alt='' /&gt;&lt;/div&gt;</content><link rel='replies' type='application/atom+xml' href='http://battadatore.blogspot.com/feeds/3075481004339105151/comments/default' title='Post Comments'/><link rel='replies' type='text/html' href='http://battadatore.blogspot.com/2008/09/blog-post_19.html#comment-form' title='8 Comments'/><link rel='edit' type='application/atom+xml' href='http://www.blogger.com/feeds/8114402468197807042/posts/default/3075481004339105151'/><link rel='self' type='application/atom+xml' href='http://www.blogger.com/feeds/8114402468197807042/posts/default/3075481004339105151'/><link rel='alternate' type='text/html' href='http://battadatore.blogspot.com/2008/09/blog-post_19.html' title='ನಾನೂ ಗಾಡಿ ಓಡಿಸಿದೆ -೨'/><author><name>ಚಂದ್ರಕಾಂತ ಎಸ್</name><uri>http://www.blogger.com/profile/00490264860537389455</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='25' src='http://3.bp.blogspot.com/_4wQW2-q8XsA/SVIw-U299dI/AAAAAAAAADY/T9mtUHgBZhU/S220/blogfile12.jpg'/></author><thr:total>8</thr:total></entry><entry><id>tag:blogger.com,1999:blog-8114402468197807042.post-3691732076437863676</id><published>2008-09-14T09:11:00.000+05:30</published><updated>2009-01-21T16:22:26.107+05:30</updated><category scheme='http://www.blogger.com/atom/ns#' term='ರಕ್ಷಾಬಂಧನ'/><category scheme='http://www.blogger.com/atom/ns#' term='ನೆನಪು'/><category scheme='http://www.blogger.com/atom/ns#' term='ಸೋದರ ವಾತ್ಸಲ್ಯ'/><title type='text'>ಅಣ್ಣ-ತಂಗಿಯರ ದಿನದ ನೆನಪಲ್ಲಿ</title><content type='html'>ಅಣ್ಣ ತಂಗಿಯರಿಗೊಂದು ದಿನ !!! ದಶಕಗಳ ಹಿಂದೆ ಯಾವುದೇ ದಿನವನ್ನು ಢಾಣಾ ಡಂಗೂರವಿಲ್ಲದೆ ಅವರವರ ಮನೆಗಳಲ್ಲಿ ಸಂಭ್ರಮದಿಂದ ಆಚರಿಸುತ್ತಿದ್ದರು. ಅದನ್ನು" ಇಂತಹ " ದಿನ ಎಂದೇನೂ ಲೇಬಲ್ ಹಚ್ಚುತ್ತಿರಲಿಲ್ಲ -ಆದರೆ. ಹಬ್ಬವೆಂದು ಆಚರಿಸುತ್ತಿದ್ದೆವು.ಶ್ರಾವಣ ಮಾಸದ  ಐದನೇ ದಿನವೇ ( ಗರುಡ ಪಂಚಮಿ)  ಅಣ್ಣ ತಂಗಿಯರ ಹಬ್ಬದ ದಿನ. ಇತ್ತೀಚೆಗೆ ಭಾರತದಾದ್ಯಂತ ರಾಖಿ ಹಬ್ಬ ಅಥವಾ ರಕ್ಷಾಬಂಧನವನ್ನೂ ಅಣ್ಣ ತಂಗಿಯರ ಹಬ್ಬವಾಗಿ ಆಚರಿಸುತ್ತಾರೆ.. ಇದು ಉತ್ತರ ಭಾರತದಿಂದ ಬಂದ ಆಚರಣೆ.&lt;br /&gt;&lt;br /&gt;ನಾಲ್ಕು ದಶಕಗಳ ಹಿಂದೆ ನಾವೆಲ್ಲಾ ಪುಟ್ಟವರಾಗಿದ್ದಾಗ ನಮ್ಮ ಅಣ್ಣಂದಿರೊಂದಿಗೆ ಒಡನಾಡಿದ ದಿನಗಳನ್ನು ಒಮ್ಮೆ ಸ್ಮೃತಿಪಟಲದ ಮುಂದೆ ತಂದುಕೊಂಡಾಗ..&lt;br /&gt;&lt;br /&gt;ಸರ್ಕಾರಿ ನೌಕರಿಯಲ್ಲಿದ್ದ ಅಪ್ಪ ಆ ಊರಿಗೆ ವರ್ಗವಾಗಿ ಬಂದಾಗ ನನಗೆ ಎಂಟು ಹಾಗೂ ನನ್ನಣ್ಣನಿಗೆ ಹತ್ತು ವರ್ಷ. ಹೊಸ ಶಾಲೆಗೆ ಮೊದಲಬಾರಿ ಹೋಗುವಾಗ ನನ್ನ ಅಣ್ಣ ನನಗೆ ಧೈರ್ಯ ತುಂಬಿದ ರೀತಿ ನೆನಸಿಕೊಂಡರೆ ಅಚ್ಚರಿ ಎನಿಸುತ್ತದೆ. ನಮ್ಮಿಬ್ಬರದೂ ಬೇರೆ ಬೇರೆ ಶಾಲೆಗಳು. ಎರಡು ಶಾಲೆಗಳ ನಡುವೆ ಹತ್ತು ಹದಿನೈದು ನಿಮಿಷದ ನಡಿಗೆಯ ಅಂತರ.ಮಧ್ಯಾನ್ಹ ಊಟದ ಬಿಡುವಿನಲ್ಲಿ ಯಾರೊಡನೆ ಊಟ ಮಾಡಲಿ? ಆ ಶಾಲೆಯಲ್ಲಿ ಯಾರೂ ಪರಿಚಿತರಿಲ್ಲವಲ್ಲ. ಎಂಬುದು ನನ್ನ ಚಿಂತೆ. ಅದಕ್ಕೆ ನನ್ನಣ್ಣ ಸೂಚಿಸಿದ ಪರಿಹಾರ- ಎರಡು ಶಾಲೆಗಳ ನಡುವಿರುವ ಒಂದು ದೊಡ್ಡ ಮರದ ಕಟ್ಟೆಯ ಮೇಲೆ ಕುಳಿತು ಊಟ ಮಾಡುವುದೆಂದು- ಇಬ್ಬರೂ ಮಧ್ಯಾನ್ಹದ ಬೆಲ್ ಆದ ಕೂಡಲೇ ಆ ಜಾಗದ ಬಳಿ ಬಂದು ಊಟ ಮುಗಿಸುತ್ತಿದ್ದೆವು. ಕಡೆಗೊಮ್ಮೆ ಇದನ್ನು ಪ್ರತಿದಿನ ಗಮನಿಸಿದ ನಮ್ಮ ಟೀಚರ್ ಕರೆದು ಹಾಗೆಲ್ಲಾ ಶಾಲೆಯಾಚೆ ಹೋಗಬಾರದೆಂದು ಹೇಳಿ ಇತರ ಮಕ್ಕಳೊಡನೆ ನಾನು ಬೆರೆಯುವಂತೆ ಮಾಡಿದ್ದರು. ಹೊಸ ಶಾಲೆ ನನಗೆಷ್ಟು ಭಯ ಹುಟ್ಟಿಸಿತ್ತೋ ಅವನಿಗೂ ಅವನ ಶಾಲೆ ಭಯ ಹುಟ್ಟಿಸಿತ್ತೆಂಬುವ ವಿಷಯ ದೊಡ್ಡವಳಾದ ಮೇಲೆಯೇ ನನಗೆ ನನಗೆ  ತಿಳಿದದ್ದು.!!&lt;br /&gt;&lt;br /&gt;ಎಂಟು ವರ್ಷಗಳ ನಂತರ  ವಿದ್ಯಾಭ್ಯಾಸ ಮುಂದುವರೆಸಲು ನಾನು ಬೆಂಗಳೂರಿಗೆ ಬಂದಾಗ ನನಗಿಂತ ಒಂದು ವರ್ಷ ಮುಂಚೆ ಬಂದಿದ್ದ ಅದೇ ಅಣ್ಣ ಮತ್ತೆ ನನಗೆ ಧೈರ್ಯ ತುಂಬಿ ಹಾಸ್ಟೆಲ್, ಕಾಲೇಜ್ ಎಲ್ಲವನ್ನೂ ತೋರಿಸಿ ಬಸ್ ಪಾಸ್ ಮಾಡಿಸಿಕೊಟ್ಟು ಕಾಲೇಜಿನ ಮೊದಲ ದಿನ  ತರಗತಿಯವರೆಗೂ ಕರೆದೊಯ್ದ.ಅಷ್ಟೇ ಅಲ್ಲ ಪ್ರತಿ ಬಾರಿಯೂ ಪರೀಕ್ಷೆ ಪ್ರಾರಂಭವಾಗುವ ಮೊದಲ ದಿನ  ಬೆಸ್ಟ್ ಆಫ್ ಲಕ್ ಹೇಳಲು ಪರೀಕ್ಷಾ ಕೊಠಡಿಯ ಬಳಿ ಬರುವಾಗ ತಪ್ಪದೆ ಬಾದಾಮಿ ಹಲ್ವ ತರುತ್ತಿದ್ದ. ಆದ್ದರಿಂದಲೇ ಪರೀಕ್ಷೆಯ ದಿನ ನನ್ನ ಸುತ್ತ ಗೆಳತಿಯರ ಗುಂಪೇ ಇರುತ್ತಿತ್ತು. !!! ಅಣ್ಣನ ಇಂತಹ  ವಾತ್ಸಲ್ಯ , ಪ್ರೋತ್ಸಾಹ ತಂಗಿಯರಿಗೆ ಎಷ್ಟೊಂದು ಹೆಮ್ಮೆ..&lt;br /&gt;&lt;br /&gt;ನಮ್ಮ ಬಾಲ್ಯದಲ್ಲಿ ಪಂಚಮಿ ಹಬ್ಬದಂದು ಮನೆಯಲ್ಲಿರುವ ಅಣ್ಣ ತಂಗಿಯರಿಗೆಲ್ಲಾ ಸಂಭ್ರಮ. ಬೆಳಿಗ್ಗೆ ಸ್ನಾನ ಮಾಡಿ ಪೂಜೆಯಾದ ಮೇಲೆ ಅಣ್ಣ ತಮ್ಮಂದಿರೆಲ್ಲಾ ಸಾಲಾಗಿ ಮಣೆಯ ಮೇಲೆ ಕುಳಿತರೆ ಅಕ್ಕ ತಂಗಿಯರು ಅವರ ಬೆನ್ನಿಗೆ ಹಾಲು ಸವರಿ ತಣ್ಣಗೆ ಮಾಡುವ ಆ ವಿಶಿಷ್ಟ ಹಬ್ಬವನ್ನು ಎಂದಿಗೂ ಮರೆಯುವಂತಿಲ್ಲ.ಸೋದರಿಯರು ಸೋದರರಿಗೆ ಅಕ್ಷತೆ ಕೊಟ್ಟು ನಮಸ್ಕರಿಸಿದಾಗ, ಅಣ್ಣ ತಮ್ಮಂದಿರ  ಕೈಯಿಂದ ಉಡುಗೊರೆ ಕೊಡಿಸುತ್ತಿದ್ದ ಸಂಪ್ರದಾಯ ಎಷ್ಟೊಂದು ಅರ್ಥಪೂರ್ಣ!! ಆ ರೀತಿ ಬೆಳೆದ ಸೋದರರಿಗೆ ತಮ್ಮ ಅಕ್ಕ ತಂಗಿಯರನ್ನು ನೋಡಿಕೊಳ್ಳಬೇಕಾದ್ದು ತಮ್ಮ ಜವಾಬ್ದಾರಿ ಎಂಬ ಅರ್ಥಪೂರ್ಣ ಸಂದೇಶ ಯಾವುದೇ ಅಬ್ಬರವಿಲ್ಲದೆ ರವಾನೆಯಾಗುತ್ತಿತ್ತು. ಹಾಗೆಯೇ ತಂದೆ ತಾಯಿಯರ ನಂತರ ಅಣ್ಣನ ಮನೆಯೇ ತವರು ಮನೆ ಎಂಬ ಭಾವ ಹೆಣ್ಣುಮಕ್ಕಳಲ್ಲಿ ಮೂಡುತ್ತಿತ್ತು.  ಆ ಕಾಲದ ಪುಟ್ಟ ಮಕ್ಕಳು ಈಗ ಹಿರಿಯ ನಾಗರಿಕರಾದರೂ ಈಗಲೂ ಪಂಚಮಿ ಹಬ್ಬದ ದಿನ ಅದನ್ನು ಪರಿಪಾಲಿಸಿಕೊಂಡು ಬರುತ್ತಿದ್ದರೆ ಅಚ್ಚರಿ ಇಲ್ಲ. ಈಗಲೂ ಸಹ ದೂರದೂರುಗಳಲ್ಲಿರುವ ನನ್ನ ಅಕ್ಕ ತಂಗಿಯರು ನಮ್ಮ ಸಹೋದರರಿಗೆಲ್ಲಾ ಈ ಹಬ್ಬಕ್ಕೆ ಅಕ್ಷತೆಯನ್ನು ಪೋಸ್ಟ್ ಮೂಲಕ ಕಳಿಸಿ ಆಶೀರ್ವಾದ ಪಡೆಯುವ  ಸಂಪ್ರದಾಯ ಉಳಿಸಿಕೊಂಡುಬಂದಿದ್ದಾರೆ.&lt;br /&gt;&lt;br /&gt;ಆಗಿನ ಮಕ್ಕಳು " ಅಣ್ಣಾ ನಿನ್ನ ಸೋದರಿಯನ್ನ ಮರೆಯದಿರೂ ಎಂದೆಂದೂ  ... " ಎಂದೋ " ಏಕ್ ದೋ ತೀನ್ ಚಾರ್ ಭೈಯ್ಯಾ ಭೈಯ್ಯ ಹೋಷಿಯಾರ್ ... " ಎಂದು ಹಾಡಿಕೊಳ್ಳುತ್ತಾ ಬೆಳೆದವರು. ಆದರೆ  ಈ ಕಾಲದ  ಮಕ್ಕಳಿಗೆ ಬಾಂಧವ್ಯಗಳ ಅರ್ಥ ಹೇಗೆ ತಾನೇ ಆಗಲು ಸಾಧ್ಯ ? ಮನೆಯಲ್ಲಿ ಒಂದೋ ಎರಡೋ ಮಕ್ಕಳು. ಮನೆಯಲ್ಲಿರುವ ತಾಯಿ ತಂದೆಯರಿಗೆ ಮಕ್ಕಳ ಭವಿಷ್ಯ ರೂಪಿಸುವ ಅಗಾಧ ಜವಾಬ್ದಾರಿ !!!? ಅದಕ್ಕಾಗಿಯೇ ಹಗಲಿರುಳು ದುಡಿಯುವ ಅವರಿಗೆ ಮಕ್ಕಳೊಡನೆ ಮಾತನಾಡಲೂ ಪುರುಸೊತ್ತಿರುವುದಿಲ್ಲ.!!! ಇನ್ನು ಮಕ್ಕಳಿಗೋ ಒಂದು ಹೊರೆ ಹೋಮ್ ವರ್ಕ್, !! ಪ್ರಾಜೆಕ್ಟ್‍ವರ್ಕ್  ಇದರ ಮಧ್ಯೆ ಪ್ರೀತಿ, ಬಾಂಧವ್ಯ ಎಂಬ ಸೆಂಟಿಮೆಂಟ್‍ಗಳಿಗೆಲ್ಲಾ  ಸಮಯವೆಲ್ಲಿ ? ಈಗ ಅನೇಕ ರೀತಿಯ ಬೆಲೆಬಾಳುವ ಆಟದ ಸಾಮಾನುಗಳಷ್ಟೇ ಏಕೆ ವಿದ್ಯುನ್ಮಾನ ಆಟಿಕೆಗಳನ್ನು ಹೊಂದಿದ್ದರೂ ಸೋದರ ಸೋದರಿಯ ಬಾಂಧವ್ಯ ನೀಡುವ ಸಂತೋಷವನ್ನು , ತಾಯಿತಂದೆಯರ ಟೆನ್ಷನ್‍ರಹಿತ ಪ್ರೀತಿಯ ಸಾಮೀಪ್ಯದ ಆನಂದವನ್ನೂ ಸವಿಯಲಾಗದ , ಪ್ರೀತಿಯ ಕೊರತೆಯಿಂದ ಬಳಲುತ್ತಿರುವ ಮಕ್ಕಳನ್ನು ಕಂಡರೆ ಅಯ್ಯೋ ಎನಿಸುತ್ತದೆ. ಬದುಕಿನ ದೊಡ್ಡ ದೊಡ್ಡ ಗುರಿಗಳ ಬೆನ್ನೇರಿ ಸವಾರಿ ಮಾಡುವವರಿಗೆ ,  ಉತ್ಕೃಷ್ಟವಾದ ಸಣ್ಣ ಸಣ್ಣ ಸಂತೋಷ ಕೊಡುವ ಗಳಿಗೆಗಳು ಮತ್ತೆಂದೂ ತಿರುಗಿ ಬರದಂತೆ ತಮ್ಮ ಕಾಲ ಬುಡದಲ್ಲಿಯೇ  ಜಾರಿಹೋಗುತ್ತಿದ್ದರೆ  ಅದರ ಪರಿವೆಯೇ ಇರುವುದಿಲ್ಲ.ಹಿಂದಿನ ತಲೆಮಾರಿನವರಿಗೆ ತಮ್ಮ ಇಳಿವಯಸ್ಸಿನಲ್ಲಿ ನೆನಪಿಸಿಕೊಳ್ಳಲು ಅನೇಕ ಸಿಹಿ ಕಹಿ ಘಟನೆಗಳಿವೆ. ಆದರೆ ಇಂದಿನ ಮಕ್ಕಳಿಗೆ  ಭವಿಷ್ಯದಲ್ಲಿ ಯಾವ ಸುಂದರ ನೆನಪುಗಳಿರಲು ಸಾಧ್ಯ ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8114402468197807042-3691732076437863676?l=battadatore.blogspot.com' alt='' /&gt;&lt;/div&gt;</content><link rel='replies' type='application/atom+xml' href='http://battadatore.blogspot.com/feeds/3691732076437863676/comments/default' title='Post Comments'/><link rel='replies' type='text/html' href='http://battadatore.blogspot.com/2008/09/blog-post.html#comment-form' title='9 Comments'/><link rel='edit' type='application/atom+xml' href='http://www.blogger.com/feeds/8114402468197807042/posts/default/3691732076437863676'/><link rel='self' type='application/atom+xml' href='http://www.blogger.com/feeds/8114402468197807042/posts/default/3691732076437863676'/><link rel='alternate' type='text/html' href='http://battadatore.blogspot.com/2008/09/blog-post.html' title='ಅಣ್ಣ-ತಂಗಿಯರ ದಿನದ ನೆನಪಲ್ಲಿ'/><author><name>ಚಂದ್ರಕಾಂತ ಎಸ್</name><uri>http://www.blogger.com/profile/00490264860537389455</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='25' src='http://3.bp.blogspot.com/_4wQW2-q8XsA/SVIw-U299dI/AAAAAAAAADY/T9mtUHgBZhU/S220/blogfile12.jpg'/></author><thr:total>9</thr:total></entry><entry><id>tag:blogger.com,1999:blog-8114402468197807042.post-4021237665615248195</id><published>2008-08-04T15:44:00.000+05:30</published><updated>2009-01-21T16:23:25.906+05:30</updated><category scheme='http://www.blogger.com/atom/ns#' term='ತಿಳಿಹಾಸ್ಯ'/><category scheme='http://www.blogger.com/atom/ns#' term='ಅನುಭವ'/><title type='text'>ನಾನೂ ಗಾಡಿ ಓಡಿಸಲು ಕಲಿತೆ.</title><content type='html'>ನಮ್ಮ ವೈವಾಹಿಕ ಜೀವನ ಪ್ರಾರಂಭವಾದದ್ದು ಒಂದು ಪುಟ್ಟ ಹಳ್ಳಿಯಲ್ಲಿ. ಅಲ್ಲಿನ ಪ್ರಶಾಂತ ವಾತಾವರಣ , ನಿಧಾನಗತಿಯ ಜೀವನ, ಮುದನೀಡುತಿತ್ತು. ಪುಟ್ಟ ಮಗನ ಆರೈಕೆ, ಮನಮೆಚ್ಚಿದ ವೃತ್ತಿ, ಮನೆಕೆಲಸ - ಇವೆಲ್ಲವನ್ನೂ ಯಾವುದೇ ಆತಂಕವಿಲ್ಲದೆ ನಿರಾಳವಾಗಿ ತೂಗಿಸಿಕೊಂಡು ಹೋಗುತ್ತಿದ್ದೆ. ಕಾರಣಾಂತರಗಳಿಂದ ಎರಡು ದಶಕಗಳ  ಹಿಂದೆ ನಾವು ಬೆಂಗಳೂರಿಗೆ ಬಂದಾಗ ಗಾಡಿ ಓಡಿಸುವುದನ್ನು ಕಲಿಯಲೇ ಬೇಕಾದ ಪ್ರಸಂಗ ಬಂದೊದಗಿತು.ಇಲ್ಲಿಗೆ ಬಂದ ಮೇಲೆ ಅಲ್ಲಿನ ನಿರಾಳ ಜೀವನದ ಮಹತ್ವ ಅರ್ಥವಾಗುತ್ತಾ ಹೋಯಿತು.ಅಲ್ಲಿ ನಾನು ಕೆಲಸಕ್ಕೆ ಹೋಗುತ್ತಿದ್ದರೂ ಹೊರೆ ಎನಿಸುತ್ತಿರಲಿಲ್ಲ.ಕೆಲಸದ ಸ್ಥಳಕ್ಕೂ ಮನೆಗೂ ಇದ್ದ ದೂರ " ನಡೆದು ಹೋಗಲು ದೂರ, ಬಸ್ಸಿನಲ್ಲಿ ಹೋದರೂ ಸಮಯ ಉಳಿತಾಯ ಸಾಧ್ಯವಿಲ್ಲ" ಎಂಬಂತಿತ್ತು. ಆಟೋಗೆ ದುಡ್ಡು ಸುರಿಯಲು ಇಷ್ಟವಿಲ್ಲ. ನನ್ನ ಒದ್ದಾಟ ನೋಡಲಾಗದೆ ನನ್ನವರು ಟೂ ವೀಲರ್ ಕಲಿಯುವಂತೆ ಸಲಹೆ ಕೊಟ್ಟರು. ಈ ಕಾಲದಲ್ಲಿ ಗಾಡಿ ಓಡಿಸುವುದು ತೀರಾ ಸಾಮಾನ್ಯ ವಿಚಾರವಾದರೂ ಎರಡು ದಶಕಗಳ ಹಿಂದೆ ಇದು ಕ್ರಾಂತಿಕಾರಕ ವಿಚಾರವೇ ಆಗಿತ್ತು. ನನಗಂತೂ  ಇವರ ಸಲಹೆ ನಂಬಲಸಾಧ್ಯವಾದ ದಿಗ್ಭ್ರಾಂತಿ  ಹುಟ್ಟಿಸಿತು . ಎಂದೋ ಬಾಲ್ಯದಲ್ಲಿ ಸೈಕಲ್ ಕಲಿತಿದ್ದ ನನಗೆ ಇವರೊಡನೆ ಸ್ಕೂಟರ್ನಲ್ಲಿ ಹಿಂಬದಿ ಸವಾರಳಾಗಿ ಕುಳಿತ ಅನುಭವವಷ್ಟೇ ಇದ್ದಿದ್ದು. ಆದ್ದರಿಂದ ಅವರ ಸಲಹೆಯನ್ನು ಸಾರಾಸಗಟಾಗಿ ತಳ್ಳಿಹಾಕಿದೆ. ಆದರೆ ಕ್ರಮೇಣ ಬೇರೆ ದಾರಿಯೇ ಇಲ್ಲವೆಂಬ ಅರಿವಾದ ನಂತರ ಕೆಲವು ಷರತ್ತುಗಳನ್ನು ಮುಂದಿಟ್ಟು , ಗಾಡಿ ಓಡಿಸುವುದನ್ನು ಕಲಿತೆ.!!!&lt;br /&gt;&lt;br /&gt;೧. ಕೇವಲ ಕಾಲೇಜಿಗೆ ಹೋಗಿ ಬರುವುದಕ್ಕಾಗಿ ಮಾತ್ರ ಅದರ ಉಪಯೋಗ. ನಂತರ ಗಾಡಿಯನ್ನು ಮುಟ್ಟುವುದಿಲ್ಲ.&lt;br /&gt;೨. ಯಾವುದೇ ಸಂದರ್ಭದಲ್ಲಿ ಯಾರನ್ನೂ ಹಿಂಬದಿ ಸೀ‍ಟಲ್ಲಿ ಕೂರಲು ಬಿಡುವುದಿಲ್ಲ. ಅರ್ಥಾತ್ ಡಬಲ್ ರೈಡ್ ಮಾಡುವುದಿಲ್ಲ.&lt;br /&gt;೩.ಅಕಸ್ಮಾತ್ ದಾರಿಯಲ್ಲಿ ಗಾಡಿಗೇನಾದರೂ ಎಡವಟ್ಟಾದರೆ , ಅಲ್ಲಿಯೇ ಎಲ್ಲಾದರೂ ಬಿಟ್ಟುಬರುವೆ. ಅದನ್ನು ಮನೆಗೆ ತರುವ ಜವಾಬ್ದಾರಿ ಅವರದು&lt;br /&gt;೪. ಪೆಟ್ರೋಲ್ ಹಾಕಿಸುವುದು, ಸರ್ವೀಸ್‍ಗೆ ಕೊಡುವುದು ಅವರ ಜವಾಬ್ದಾರಿ&lt;br /&gt;&lt;br /&gt;ವಾದ ಮಾಡಿದರೆ ಎಲ್ಲಿ ನಾನು ಗಾಡಿ ಓಡಿಸಲು ಕಲಿಯುವುದಿಲ್ಲವೋ ಎಂದು ನಮ್ಮವರು ನಾನು ಹೇಳಿದ ಷರತ್ತುಗಳನ್ನೂ ಒಪ್ಪಿದರು.&lt;br /&gt;&lt;br /&gt;ಅಂತೂ ಮೂವತ್ತರ ಹರಯದಲ್ಲಿ ದ್ವಿಚಕ್ರವಾಹನ ( ಸೈಕಲ್ ಅಲ್ಲ ) ಕಲಿಯುವ ಯೋಗ ನನಗೆ ಒದಗಿ ಬಂದಿತ್ತು.ಅದನ್ನು ಕಲಿತದ್ದೇ ಒಂದು ಸಾಧನೆ. ನನ್ನ ಭಯವನ್ನು ನೋಡಿ ನನ್ನವರು  ಮೊದಲು ಒಂದು ಸೆಕೆಂಡ್ ಹ್ಯಾಂಡ್ ಲೂನಾ ಕೊಡಿಸಿದರು. ಅದನ್ನು ಚೆನ್ನಾಗಿ ಓಡಿಸುವುದನ್ನು ( ಎದ್ದು ಬಿದ್ದು ಮಾಡಿ ) ಕಲಿತಮೇಲೆ ಹೊಸ ಗಾಡಿ ತರುವುದೆಂದು ತೀರ್ಮಾನಿಸಿದರು. ಗಾಡಿ ಓಡಿಸಲು ಪ್ರಾರಂಭಿಸಿದ ಮೇಲೆ ತಿಳಿಯಿತು. ಇದು ಖಂಡಿತ ಸೆಕೆಂಡ್ ಹ್ಯಾಂಡ್ ಗಾಡಿಯಲ್ಲ. ಥರ್ಡೋ ಫ಼ೋರ್ಥೋ ಹ್ಯಾಂಡ್ ಇರಬಹುದೆಂದು. ಈ ಗಾಡಿಗಿದ್ದ ಒಂದು ದುರಭ್ಯಾಸವೆಂದರೆ ಅದರ ಪೆಡಲ್ ನಿಂತಲ್ಲಿ ನಿಲ್ಲದೆ ಇಷ್ಟ ಬಂದಾಗೊಮ್ಮೆ ಒಂದು ಸುತ್ತು ಸುತ್ತುತ್ತಿತ್ತು. ಗ್ಯಾರೇಜ್‍ನವನನ್ನು ಕೇಳಿದರೆ ಅವನು ಗಾಡಿಯನ್ನೊಮ್ಮೆ ನೋಡಿ , ತಣ್ಣಗೆ ’ ಇದೇನು ಸಮಸ್ಯೆಯೇ ಅಲ್ಲ . ಕಾಲುಗಳನ್ನು ಪೆಡಲ್ ಮೇಲಿಟ್ಟು ಗಾಡಿ ಓಡಿಸಿ ’ ಎಂದು ಉಚಿತ ಸಲಹೆ ನೀಡಿದ. ಕೆಲವು ವರ್ಷಗಳು ಅಂತಹ ದೊಡ್ಡ ಕಿರಿಕಿರಿ ಇಲ್ಲದೆ ಎಲ್ಲವೂ ಸರಿಯಾಗಿತ್ತು. ಆದರೆ ಆ ದಿನ ನಡೆದ ಘಟನೆ ನನ್ನ ಗಾಡಿಯನ್ನೇ ಬದಲಿಸುವಂತೆ ಮಾಡಿತು.&lt;br /&gt;&lt;br /&gt;ಆ ದಿನ ಎಂದಿನಂತೆ ಕಾಲೇಜಿನಿಂದ ಮನೆಗೆ ಹಿಂತಿರುಗುತ್ತಿದ್ದಾಗ ಬಸವನಗುಡಿ ಪೋಲೀಸ್ ಸ್ಟೇಷನ್ ಎದುರಿಗೆ ಸರಿಯಾಗಿ ಅದ್ಯಾವ ಮಾಯೆಯಲ್ಲಿಯೋ ಪೆಡಲ್ ನನ್ನ ಕಾಲ ಹಿಡಿತದಿಂದ ಬಿಡಿಸಿಕೊಂಡು ಸ್ವತಂತ್ರ ಪಕ್ಷಿಯಂತೆ ಗಿರ್ರನೆ ತಿರುಗಲಾರಂಬಿಸಿತು. ಕಕ್ಕಾಬಿಕ್ಕಿಯಾಗಿ ಗಾಬರಿಗೊಂಡ ನಾನು ಕಾಲನ್ನು ಅದರ ಮೇಲಿಡಲು ಸರ್ಕಸ್ ಮಾಡುತ್ತಿರುವಾಗಲೇ ಅನಾಹುತ ಸಂಭವಿಸಿಬಿಟ್ಟಿತು.ಒಂದೇ ಕ್ಷಣದಲ್ಲಿ ನನ್ನ ಸೀರೆ ಪೆಡಲ್‍ಗೆ ಸಿಕ್ಕಿ ಸುತ್ತಲಾರಂಭಿಸಿ ಏನಾಯಿತು ಎಂದು ಅರ್ಥಮಾಡಿಕೊಳ್ಳುವಷ್ಟರಲ್ಲಿ ಗಾಡಿಯೊಡನೆ ಧೊಪ್ಪೆಂದು ನೆಲಕ್ಕೆ ಬಿದ್ದೆ. ನೋಡನೋಡುತ್ತಿದ್ದಂತೆಯೇ ಅನೇಕ ಜನ ಸೇರಿದರು. ಯಾರೋ ಎಂಜಿನ್ ಆಫ್ ಮಾಡಿದರು.ಮತ್ತೊಬ್ಬರು ಗಾಡಿಯನ್ನು ನೆಟ್ಟಗೆ ನಿಲ್ಲಿಸಲು ಮುಂದಾದರು. ಆದರೆ ನನಗೆ ಮಾತ್ರ ನಿಲ್ಲಲು ಸಾಧ್ಯವಾಗಲಿಲ್ಲ. ನೋಡಿದರೆ ಪೆಡಲ್ನೊಂದಿಗೆ ಸೀರೆ ಹೇಗೆಂದರೆ ಹಾಗೆ ಸಿಕ್ಕಿಕೊಂಡಿದೆ. ಜನರು ತಮ್ಮ ತಮ್ಮಲ್ಲಿಯೇ ಮಾತನಾಡಿಕೊಂಡು ಸೀರೆಯನ್ನು ಕತ್ತರಿಸದಿದ್ದರೆ ಚಕ್ರವ್ಯೂಹದಿಂದ ಹೊರಬರಲು ಸಾಧ್ಯವಿಲ್ಲವೆನ್ನುವ ಅಭಿಪ್ರಾಯಕ್ಕೆ ಬಂದರು. ನನಗೋ ನಾಚಿಕೆ, ಅವಮಾನ. ಮನೆ ಸೇರಿದರೆ ಸಾಕಾಗಿತ್ತು.ಅಂತೂ ಹೇಗೋ ಗಾಡಿಯಿಂದ ಸೀರೆಯನ್ನು ಬಿಡಿಸಿಕೊಂಡು ಆ Lunatic ಲೂನಾವನ್ನು ಸಮೀಪದಲ್ಲಿದ್ದ ಮನೆಯೊಳಕ್ಕೆ ತಳ್ಳಿ ( ಮನೆಯವರ ಒಪ್ಪಿಗೆ ಪಡೆದು ), ಆಟೋ ಹತ್ತಿ ಮನೆಗೆ ಬಂದೆ. ಅಲ್ಲಿಗೆ ಆ ಗಾಡಿಯ ಸಂಬಂಧ ಕೊನೆಗೊಂಡಿತು. ಇನ್ನೆಂದೂ ಆ ಗಾಡಿಯನ್ನು ಮುಟ್ಟುವುದಿಲ್ಲವೆಂದು ಘೋಷಿಸಿದೆ.&lt;br /&gt;&lt;br /&gt;ಆದರೆ ಗಾಡಿಯೊಡನೆ ನನ್ನ ಸಂಬಂಧ ಕೊನೆಗೊಂಡಿತೆ ? ಮುಂದೊಮ್ಮೆ ತಿಳಿಸುವೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8114402468197807042-4021237665615248195?l=battadatore.blogspot.com' alt='' /&gt;&lt;/div&gt;</content><link rel='replies' type='application/atom+xml' href='http://battadatore.blogspot.com/feeds/4021237665615248195/comments/default' title='Post Comments'/><link rel='replies' type='text/html' href='http://battadatore.blogspot.com/2008/08/blog-post.html#comment-form' title='2 Comments'/><link rel='edit' type='application/atom+xml' href='http://www.blogger.com/feeds/8114402468197807042/posts/default/4021237665615248195'/><link rel='self' type='application/atom+xml' href='http://www.blogger.com/feeds/8114402468197807042/posts/default/4021237665615248195'/><link rel='alternate' type='text/html' href='http://battadatore.blogspot.com/2008/08/blog-post.html' title='ನಾನೂ ಗಾಡಿ ಓಡಿಸಲು ಕಲಿತೆ.'/><author><name>ಚಂದ್ರಕಾಂತ ಎಸ್</name><uri>http://www.blogger.com/profile/00490264860537389455</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='25' src='http://3.bp.blogspot.com/_4wQW2-q8XsA/SVIw-U299dI/AAAAAAAAADY/T9mtUHgBZhU/S220/blogfile12.jpg'/></author><thr:total>2</thr:total></entry><entry><id>tag:blogger.com,1999:blog-8114402468197807042.post-3128443637817115279</id><published>2008-04-13T14:18:00.000+05:30</published><updated>2008-04-13T14:27:43.468+05:30</updated><title type='text'>ನಮಸ್ಕಾರ</title><content type='html'>ಈ ದಿನ ನನ್ನ ಬ್ಲಾಗ್ ನಲ್ಲಿ ನನ್ನ ಮೊದಲಹೆಜ್ಜೆ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/8114402468197807042-3128443637817115279?l=battadatore.blogspot.com' alt='' /&gt;&lt;/div&gt;</content><link rel='replies' type='application/atom+xml' href='http://battadatore.blogspot.com/feeds/3128443637817115279/comments/default' title='Post Comments'/><link rel='replies' type='text/html' href='http://battadatore.blogspot.com/2008/04/blog-post.html#comment-form' title='2 Comments'/><link rel='edit' type='application/atom+xml' href='http://www.blogger.com/feeds/8114402468197807042/posts/default/3128443637817115279'/><link rel='self' type='application/atom+xml' href='http://www.blogger.com/feeds/8114402468197807042/posts/default/3128443637817115279'/><link rel='alternate' type='text/html' href='http://battadatore.blogspot.com/2008/04/blog-post.html' title='ನಮಸ್ಕಾರ'/><author><name>ಚಂದ್ರಕಾಂತ ಎಸ್</name><uri>http://www.blogger.com/profile/00490264860537389455</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='25' src='http://3.bp.blogspot.com/_4wQW2-q8XsA/SVIw-U299dI/AAAAAAAAADY/T9mtUHgBZhU/S220/blogfile12.jpg'/></author><thr:total>2</thr:total></entry></feed>
